<p>ಕೆಜಿಎಫ್: ಪೊಂಗಲ್ (ಸಂಕ್ರಾಂತಿ) ಹಬ್ಬದ ಮಾರನೇ ದಿನ ನಗರದಲ್ಲಿ ನಡೆಯುವ ಮಾಟ್ಟು ಪೊಂಗಲ್ (ರಾಸುಗಳ ಪೊಂಗಲ್) ಕೆಎನ್ಜೆಎಸ್ ಬ್ಲಾಕ್ನ ದಿನಗೂಲಿ ನೌಕರ ವೇಲು (40) ಕುಟುಂಬಕ್ಕೆ ಸಡಗರ ತರುವ ಬದಲು ಸಂಕಟ ತಂದಿದೆ. ಸಾವಿನ ಸೂತಕ ಮೂಡಿಸಿದೆ. <br /> <br /> ಕಾಲೋನಿಯಲ್ಲಿ ನಡೆಯುತ್ತಿದ್ದ ಎತ್ತುಗಳ ಓಟದ ಸ್ಪರ್ಧೆಯನ್ನು ನೋಡಲು ಹೋಗಿದ್ದ ವೇಲು ಎತ್ತುಗಳ ಆರ್ಭಟಕ್ಕೆ ಸಿಕ್ಕಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಟುಂಬದ ಏಕೈಕ ಆಧಾರವಾಗಿದ್ದ ಅವರ ಸಾವಿನಿಂದ ಮೂರು ಮಕ್ಕಳಿರುವ ಕುಟುಂಬ ಅನಾಥವಾಗಿದೆ.<br /> <br /> ಎತ್ತುಗಳ ಓಟದ ಸ್ಪರ್ಧೆ ಮೊದಲಿನಿಂದಲೂ ಕೆಜಿಎಫ್ನಲ್ಲಿ ಜನಪ್ರಿಯ ಕ್ರೀಡೆ. ಮೊದಮೊದಲು ಸಾಧಾರಣವಾಗಿ ನಡೆಯುತ್ತಿದ್ದ ಸ್ಪರ್ಧೆ ನಂತರ ಕಾಲೋನಿಗಳ ನಡುವಿನ ಪ್ರತಿಷ್ಠೆಯಾಗಿ ಪರಿಣಮಿಸಿತು. <br /> <br /> ರಾಜಕೀಯ ವ್ಯಕ್ತಿಗಳು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಸಹಾಯ ಮಾಡತೊಡಗಿದರು. ಆದರೆ ಸ್ಪರ್ಧೆಯ ಜನಪ್ರಿಯತೆ ಹೆಚ್ಚಿದಷ್ಟು ಸುರಕ್ಷತೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. <br /> <br /> ಕೆಎನ್ಜೆಎಸ್ ಬ್ಲಾಕ್ ಮತ್ತು ಎಸ್ಟಿ ಬ್ಲಾಕ್ನಲ್ಲಿ ಸುರಕ್ಷಿತ ಪ್ರದೇಶವಲ್ಲದ ಸ್ಥಳದಲ್ಲಿ ಜನರು ನಿಂತು ವೀಕ್ಷಣೆ ಮಾಡಿದ್ದರಿಂದ ಹಲವಾರು ಮಂದಿ ಗಾಯಗೊಂಡು ಒಬ್ಬರು ಮೃತರಾಗಲು ಕಾರಣವಾಯಿತು.<br /> <br /> ಸಂಘಟಕರ ನಿರ್ಲಕ್ಷ್ಯ ಮತ್ತು ಪೊಲೀಸರ ಕರ್ತವ್ಯ ಲೋಪ ಈ ನಿಟ್ಟಿನಲ್ಲಿ ಎದ್ದು ಕಾಣುತ್ತಿದೆ. ಸ್ಪರ್ಧೆಗಳನ್ನು ನಡೆಸುವ ಆಯೋಜಕರು ಯಾವುದೇ ಪೂರ್ವ ಸಿದ್ಧತೆ ಹಾಗೂ ಅಪಾಯದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಇರುವ ಕಡೆಗೆ ಈ ಅವಘಡ ಬೆರಳು ತೋರಿದೆ ಎಂಬ ಚರ್ಚೆ ನಗರದಲ್ಲಿ ನಡೆಯುತ್ತಿದೆ.<br /> <br /> ಎರಡೂ ಕಾಲೋನಿಗಳಲ್ಲಿ ರಾಸುಗಳ ಓಟವನ್ನು ಸುರಕ್ಷಿತವಾಗಿ ನೋಡಲು ಸಯನೈಡ್ ದಿಬ್ಬಗಳು ಇವೆ. ಅವುಗಳ ಮೇಲೆ ನಿಂತು ಎತ್ತುಗಳ ಓಟವನ್ನು ಸುರಕ್ಷಿತವಾಗಿ ನೋಡಬಹುದು. ಎತ್ತುಗಳು ಓಡಲು ಶುರುಮಾಡಿದಾಗ ಶಬ್ದ ಮತ್ತಿತರ ಕಾರಣದಿಂದ ಯರ್ರಾಬಿರ್ರಿಯಾಗಿ ಓಡಲು ಶುರು ಮಾಡುತ್ತದೆ. <br /> <br /> ಆದ್ದರಿಂದ ಪ್ರಾರಂಭ ಸ್ಥಳದಿಂದ ಇಂಗ್ಲಿಷ್ನ ವಿ ಆಕಾರದಲ್ಲಿ ಕಟಕಟೆ ನಿರ್ಮಿಸಬೇಕು. ಅದರಿಂದಾಗಿ ಎತ್ತುಗಳು ಶಬ್ದ ಮತ್ತು ಜನರ ಕೇಕೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಸಾಧ್ಯವಾಗುತ್ತದೆ ಎಂಬುದು ಹಲವರ ಅಭಿಮತ.<br /> <br /> ಆದರೆ ಎರಡೂ ಬ್ಲಾಕ್ಗಳಲ್ಲಿ ಸುಮಾರು ಹದಿನೈದು ಅಡಿ ಅಗಲದ ಕಟಕಟೆಗಳನ್ನು ಸುಮಾರು ಇನ್ನೂರು ಮೀಟರ್ಗಳಷ್ಟು ದೂರ ಸಮಾನಾಂತರವಾಗಿ ನಿರ್ಮಿಸಲಾಗಿತ್ತು. ಅಲ್ಲದೆ ಕಟಕಟೆಗಳನ್ನು ದಾಟಿ ಒಳಬಂದ ಉತ್ಸಾಹಿಗಳು ಓಡಿಬರುತ್ತಿದ್ದ ಎತ್ತುಗಳನ್ನು ಮತ್ತಷ್ಟು ಬೆದರಿಸುವ ಕೆಲಸ ಮಾಡುತ್ತಿದ್ದರು. <br /> <br /> ಅಂತಹ ಅತ್ಯುತ್ಸಾಹಿಗಳನ್ನು ತಡೆಯಲು ಪೊಲೀಸರಾಗಲಿ, ಸಂಘಟಕರಾಗಲಿ ವ್ಯವಸ್ಥಿತವಾಗಿ ಪ್ರಯತ್ನಪಡದಿರುವುದು ಕಂಡು ಬಂದಿತ್ತು. ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ದುರ್ಘಟನೆ ನಡೆದಿದೆ ಎಂಬುದು ಸ್ಥಳದಲ್ಲಿದ್ದ ಕೆಲವರ ಅಭಿಪ್ರಾಯ.<br /> <br /> `ಪೊಲೀಸರ ಕೆಲಸ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರ. ಬಂದೋಬಸ್ತ್ ಮಾಡುವುದು ಸಂಘಟಕರ ಜವಾಬ್ದಾರಿ. ಇಂತಹ ಕಾರ್ಯಕ್ರಮ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮುನ್ನೆಚ್ಚರಿಕೆ ಸಲುವಾಗಿ ಪೊಲೀಸರಿಂದ ಯಾರೂ ವರದಿ ಪಡೆಯುತ್ತಿಲ್ಲ~ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ ಆಕ್ಷೇಪದ ನುಡಿ.<br /> <br /> `ಸಾಮಾನ್ಯವಾಗಿ ಹಳ್ಳಿಕಾರ್ ಎತ್ತುಗಳನ್ನು ಓಟಕ್ಕೆ ಬಳಸುತ್ತಾರೆ. ನೋಡಲು ದಷ್ಟಪುಷ್ಟವಾಗಿರದಿದ್ದರೂ ಬಲಿಷ್ಠವಾಗಿರುತ್ತವೆ. ಅವುಗಳಿಗೆ ಖಾರದ ಪುಡಿ ಅಥವಾ ಕತ್ತಾಳೆ ರಸ ಕುಡಿಸುತ್ತಾರೆ. ಅದರಿಂದ ಗಾಬರಿ, ಸಂಕಟಕ್ಕೆ ಈಡಾಗುವ ಅವು ಎಲ್ಲೆಂದರಲ್ಲಿ ಓಡಲಾರಂಭಿಸುತ್ತವೆ. <br /> <br /> ಕೆಲವು ಸಂದರ್ಭದಲ್ಲಿ ಮತ್ತು ಬರುವ ಪಾನೀಯಗಳನ್ನು ಸಹ ಎತ್ತುಗಳಿಗೆ ಕುಡಿಸುತ್ತಾರೆ~ ಎಂದು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯರಾಂ ವಿವರಣೆ ನೀಡುತ್ತಾರೆ.<br /> <br /> ದುರ್ಘಟನೆ ನಡೆದ ಬಳಿಕ ಈಗ ಪೊಲೀಸರು, ವೇಲು ಸಾವಿಗೆ ಕಾರಣನಾದ ಎತ್ತಿನ ಮಾಲೀಕ ಮತ್ತು ಸಂಘಟಕರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಮುನ್ನೆಚ್ಚರಿಕೆ ಪಾಠಗಳು ಮಾತ್ರ ದೂರವೇ ಉಳಿದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕೆಜಿಎಫ್: ಪೊಂಗಲ್ (ಸಂಕ್ರಾಂತಿ) ಹಬ್ಬದ ಮಾರನೇ ದಿನ ನಗರದಲ್ಲಿ ನಡೆಯುವ ಮಾಟ್ಟು ಪೊಂಗಲ್ (ರಾಸುಗಳ ಪೊಂಗಲ್) ಕೆಎನ್ಜೆಎಸ್ ಬ್ಲಾಕ್ನ ದಿನಗೂಲಿ ನೌಕರ ವೇಲು (40) ಕುಟುಂಬಕ್ಕೆ ಸಡಗರ ತರುವ ಬದಲು ಸಂಕಟ ತಂದಿದೆ. ಸಾವಿನ ಸೂತಕ ಮೂಡಿಸಿದೆ. <br /> <br /> ಕಾಲೋನಿಯಲ್ಲಿ ನಡೆಯುತ್ತಿದ್ದ ಎತ್ತುಗಳ ಓಟದ ಸ್ಪರ್ಧೆಯನ್ನು ನೋಡಲು ಹೋಗಿದ್ದ ವೇಲು ಎತ್ತುಗಳ ಆರ್ಭಟಕ್ಕೆ ಸಿಕ್ಕಿ ಗಾಯಗೊಂಡು ನಂತರ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಕುಟುಂಬದ ಏಕೈಕ ಆಧಾರವಾಗಿದ್ದ ಅವರ ಸಾವಿನಿಂದ ಮೂರು ಮಕ್ಕಳಿರುವ ಕುಟುಂಬ ಅನಾಥವಾಗಿದೆ.<br /> <br /> ಎತ್ತುಗಳ ಓಟದ ಸ್ಪರ್ಧೆ ಮೊದಲಿನಿಂದಲೂ ಕೆಜಿಎಫ್ನಲ್ಲಿ ಜನಪ್ರಿಯ ಕ್ರೀಡೆ. ಮೊದಮೊದಲು ಸಾಧಾರಣವಾಗಿ ನಡೆಯುತ್ತಿದ್ದ ಸ್ಪರ್ಧೆ ನಂತರ ಕಾಲೋನಿಗಳ ನಡುವಿನ ಪ್ರತಿಷ್ಠೆಯಾಗಿ ಪರಿಣಮಿಸಿತು. <br /> <br /> ರಾಜಕೀಯ ವ್ಯಕ್ತಿಗಳು ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ವಿವಿಧ ರೀತಿಯ ಸಹಾಯ ಮಾಡತೊಡಗಿದರು. ಆದರೆ ಸ್ಪರ್ಧೆಯ ಜನಪ್ರಿಯತೆ ಹೆಚ್ಚಿದಷ್ಟು ಸುರಕ್ಷತೆ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳಲಿಲ್ಲ. <br /> <br /> ಕೆಎನ್ಜೆಎಸ್ ಬ್ಲಾಕ್ ಮತ್ತು ಎಸ್ಟಿ ಬ್ಲಾಕ್ನಲ್ಲಿ ಸುರಕ್ಷಿತ ಪ್ರದೇಶವಲ್ಲದ ಸ್ಥಳದಲ್ಲಿ ಜನರು ನಿಂತು ವೀಕ್ಷಣೆ ಮಾಡಿದ್ದರಿಂದ ಹಲವಾರು ಮಂದಿ ಗಾಯಗೊಂಡು ಒಬ್ಬರು ಮೃತರಾಗಲು ಕಾರಣವಾಯಿತು.<br /> <br /> ಸಂಘಟಕರ ನಿರ್ಲಕ್ಷ್ಯ ಮತ್ತು ಪೊಲೀಸರ ಕರ್ತವ್ಯ ಲೋಪ ಈ ನಿಟ್ಟಿನಲ್ಲಿ ಎದ್ದು ಕಾಣುತ್ತಿದೆ. ಸ್ಪರ್ಧೆಗಳನ್ನು ನಡೆಸುವ ಆಯೋಜಕರು ಯಾವುದೇ ಪೂರ್ವ ಸಿದ್ಧತೆ ಹಾಗೂ ಅಪಾಯದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದೆ ಇರುವ ಕಡೆಗೆ ಈ ಅವಘಡ ಬೆರಳು ತೋರಿದೆ ಎಂಬ ಚರ್ಚೆ ನಗರದಲ್ಲಿ ನಡೆಯುತ್ತಿದೆ.<br /> <br /> ಎರಡೂ ಕಾಲೋನಿಗಳಲ್ಲಿ ರಾಸುಗಳ ಓಟವನ್ನು ಸುರಕ್ಷಿತವಾಗಿ ನೋಡಲು ಸಯನೈಡ್ ದಿಬ್ಬಗಳು ಇವೆ. ಅವುಗಳ ಮೇಲೆ ನಿಂತು ಎತ್ತುಗಳ ಓಟವನ್ನು ಸುರಕ್ಷಿತವಾಗಿ ನೋಡಬಹುದು. ಎತ್ತುಗಳು ಓಡಲು ಶುರುಮಾಡಿದಾಗ ಶಬ್ದ ಮತ್ತಿತರ ಕಾರಣದಿಂದ ಯರ್ರಾಬಿರ್ರಿಯಾಗಿ ಓಡಲು ಶುರು ಮಾಡುತ್ತದೆ. <br /> <br /> ಆದ್ದರಿಂದ ಪ್ರಾರಂಭ ಸ್ಥಳದಿಂದ ಇಂಗ್ಲಿಷ್ನ ವಿ ಆಕಾರದಲ್ಲಿ ಕಟಕಟೆ ನಿರ್ಮಿಸಬೇಕು. ಅದರಿಂದಾಗಿ ಎತ್ತುಗಳು ಶಬ್ದ ಮತ್ತು ಜನರ ಕೇಕೆಯಿಂದ ತಪ್ಪಿಸಿಕೊಂಡು ಪರಾರಿಯಾಗಲು ಸಾಧ್ಯವಾಗುತ್ತದೆ ಎಂಬುದು ಹಲವರ ಅಭಿಮತ.<br /> <br /> ಆದರೆ ಎರಡೂ ಬ್ಲಾಕ್ಗಳಲ್ಲಿ ಸುಮಾರು ಹದಿನೈದು ಅಡಿ ಅಗಲದ ಕಟಕಟೆಗಳನ್ನು ಸುಮಾರು ಇನ್ನೂರು ಮೀಟರ್ಗಳಷ್ಟು ದೂರ ಸಮಾನಾಂತರವಾಗಿ ನಿರ್ಮಿಸಲಾಗಿತ್ತು. ಅಲ್ಲದೆ ಕಟಕಟೆಗಳನ್ನು ದಾಟಿ ಒಳಬಂದ ಉತ್ಸಾಹಿಗಳು ಓಡಿಬರುತ್ತಿದ್ದ ಎತ್ತುಗಳನ್ನು ಮತ್ತಷ್ಟು ಬೆದರಿಸುವ ಕೆಲಸ ಮಾಡುತ್ತಿದ್ದರು. <br /> <br /> ಅಂತಹ ಅತ್ಯುತ್ಸಾಹಿಗಳನ್ನು ತಡೆಯಲು ಪೊಲೀಸರಾಗಲಿ, ಸಂಘಟಕರಾಗಲಿ ವ್ಯವಸ್ಥಿತವಾಗಿ ಪ್ರಯತ್ನಪಡದಿರುವುದು ಕಂಡು ಬಂದಿತ್ತು. ಸಾಕಷ್ಟು ಪೊಲೀಸ್ ಸಿಬ್ಬಂದಿ ಇದ್ದರೂ ದುರ್ಘಟನೆ ನಡೆದಿದೆ ಎಂಬುದು ಸ್ಥಳದಲ್ಲಿದ್ದ ಕೆಲವರ ಅಭಿಪ್ರಾಯ.<br /> <br /> `ಪೊಲೀಸರ ಕೆಲಸ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರ. ಬಂದೋಬಸ್ತ್ ಮಾಡುವುದು ಸಂಘಟಕರ ಜವಾಬ್ದಾರಿ. ಇಂತಹ ಕಾರ್ಯಕ್ರಮ ನಡೆಸಬೇಕೇ ಬೇಡವೇ ಎಂಬ ಬಗ್ಗೆ ಮುನ್ನೆಚ್ಚರಿಕೆ ಸಲುವಾಗಿ ಪೊಲೀಸರಿಂದ ಯಾರೂ ವರದಿ ಪಡೆಯುತ್ತಿಲ್ಲ~ ಎಂಬುದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೇವಜ್ಯೋತಿ ರೇ ಆಕ್ಷೇಪದ ನುಡಿ.<br /> <br /> `ಸಾಮಾನ್ಯವಾಗಿ ಹಳ್ಳಿಕಾರ್ ಎತ್ತುಗಳನ್ನು ಓಟಕ್ಕೆ ಬಳಸುತ್ತಾರೆ. ನೋಡಲು ದಷ್ಟಪುಷ್ಟವಾಗಿರದಿದ್ದರೂ ಬಲಿಷ್ಠವಾಗಿರುತ್ತವೆ. ಅವುಗಳಿಗೆ ಖಾರದ ಪುಡಿ ಅಥವಾ ಕತ್ತಾಳೆ ರಸ ಕುಡಿಸುತ್ತಾರೆ. ಅದರಿಂದ ಗಾಬರಿ, ಸಂಕಟಕ್ಕೆ ಈಡಾಗುವ ಅವು ಎಲ್ಲೆಂದರಲ್ಲಿ ಓಡಲಾರಂಭಿಸುತ್ತವೆ. <br /> <br /> ಕೆಲವು ಸಂದರ್ಭದಲ್ಲಿ ಮತ್ತು ಬರುವ ಪಾನೀಯಗಳನ್ನು ಸಹ ಎತ್ತುಗಳಿಗೆ ಕುಡಿಸುತ್ತಾರೆ~ ಎಂದು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಜಯರಾಂ ವಿವರಣೆ ನೀಡುತ್ತಾರೆ.<br /> <br /> ದುರ್ಘಟನೆ ನಡೆದ ಬಳಿಕ ಈಗ ಪೊಲೀಸರು, ವೇಲು ಸಾವಿಗೆ ಕಾರಣನಾದ ಎತ್ತಿನ ಮಾಲೀಕ ಮತ್ತು ಸಂಘಟಕರ ಮೇಲೆ ಮೊಕದ್ದಮೆ ಹೂಡಿದ್ದಾರೆ. ಮುನ್ನೆಚ್ಚರಿಕೆ ಪಾಠಗಳು ಮಾತ್ರ ದೂರವೇ ಉಳಿದಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>