<p>ನವದೆಹಲಿ (ಐಎಎನ್ಎಸ್/ ಪಿಟಿಐ): ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಪ್ರತಿಭಟಿಸಿ ಸಂಸತ್ತಿಗೆ ಮೆರವಣಿಗೆಯಲ್ಲಿ ಹೊರಟ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಸಹಸ್ರಾರು ಬೆಂಬಲಿಗರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ಬಂಧಿಸಿದ್ದಾರೆ.<br /> <br /> ಮಧ್ಯಾಹ್ನ 1.15ಕ್ಕೆ ರಾಮದೇವ್ ಕರೆಯ ಮೇರೆಗೆ ಮೆರವಣಿಗೆ ಆರಂಭವಾಗಿತ್ತು. ಕೇಂದ್ರ ದೆಹಲಿಯ ರಣಜಿತ್ ಸಿಂಗ್ ಮೇಲ್ಸೇತುವೆಯಲ್ಲಿ ರಾಮ ದೇವ್ ಅವರನ್ನು ತಡೆ ಹಿಡಿದು ಬಂಧಿಸಲಾಯಿತು.<br /> <br /> ಸ್ಥಾನಬದ್ಧತೆಗೆ ಒಳಗಾಗಿರುವ ಪ್ರತಿಭಟನಕಾರರನ್ನು ಬಸ್ಸುಗಳ ಮೂಲಕ ರಾಜೇಂದ್ರ ಪ್ರಸಾದ್ ಕ್ರೀಡಾಂಗಣಕ್ಕೆ ಒಯ್ಯಲಾಗಿದ್ದು, ಅವರನ್ನು ಕ್ರೀಡಾಂಗಣದಲ್ಲಿಯೇ ಬಂಧನದಲ್ಲಿ ಇಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.</p>.<p>ಇದಕ್ಕೆ ಮುನ್ನ ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಸೋಮವಾರ ಇಲ್ಲಿ ಘೋಷಿಸಿದ ಯೋಗ ಗುರು ಬಾಬಾ ರಾಮದೇವ್ ಅವರು ~ಭ್ರಷ್ಟ ಸಂಸತ್ ಸದಸ್ಯರು ನಮ್ಮ ಮಾತುಗಳನ್ನು ಆಲಿಸಬೇಕು. ಅದಕ್ಕಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ತೆರಳಲು ನನಗೆ ಅವಕಾಶ ನೀಡಬೇಕು~ ಎಂದು ಹೇಳಿದರು. ಆದರೆ ಹಾಗೆ ಮಾಡಲು ಅವರಿಗೆ ಅನುಮತಿ ಸಿಗದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.<br /> <br /> ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಂದಿನ ಹಂತಕ್ಕೆ ಸಜ್ಜಾಗಿ ಎಂದು ರಾಮಲೀಲಾ ಮೈದಾನದಲ್ಲಿ ತಮ್ಮ ಬೆಂಬಲಿಗರಿಗೆ ಕರೆ ನೀಡಿದ ಯೋಗ ಗುರು ~ಶಾಂತಿಯುತವಾಗಿ ಸಂಸತ್ತಿನಡೆಗೆ ಮೆರವಣಿಗೆ ನಡೆಸುತ್ತೇವೆ. ಮುಂದಿನ ಸಲ ಒಬ್ಬನೇ ಒಬ್ಬ ಭ್ರಷ್ಟ ನಾಯಕನೂ ಚುನಾಯಿತನಾಗಲು ನಾವು ಬಯಸುವುದಿಲ್ಲ. ಆದ್ದರಿಂದ ನಮ್ಮನ್ನು ತಡೆಯಬೇಡಿ. ನಮ್ಮ ಮಾತುಗಳನ್ನು ಆಲಿಸಬೇಕು ಎಂದಷ್ಟೇ ನಾವು ಬಯಸುತ್ತಿದ್ದೇವೆ~ ಎಂದು ನುಡಿದರು.<br /> <br /> ~ಅಹಿಂಸೆ ಮತ್ತು ಶಾಂತರಾಗಿರಿ~ ಎಂದು ಬೆಂಬಲಿಗರಿಗೆ ಸೂಚಿಸಿದ ಅವರು, ಇದೇ ಸ್ಥಳದಲ್ಲಿ 2011ರ ಚಳವಳಿಯನ್ನು ನೆನಪಿಸಿದರು. ~ದೆಹಲಿ ಪೊಲೀಸರೂ ಕಳೆದ ಬಾರಿ ಮಾಡಿದಂತೆ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ~ ಎಂದು ರಾಮದೇವ್ ಹೇಳಿದರು.<br /> <br /> 2011ರ ಜೂನ್ ನಲ್ಲಿ ಇದೇ ರಾಮಲೀಲಾ ಮೈದಾನದಲ್ಲಿ ಯೋಗಗುರು ಇಂತಹುದೇ ಪ್ರತಿಭಟನೆ ಸಂಘಟಿಸಿದ್ದರು. ಆದರೆ ದೆಹಲಿ ಪೊಲೀಸರು ನಡೆಸಿದ ನಡುರಾತ್ರಿಯ ಕಾರ್ಯಾಚರಣೆಯಿಂದಾಗಿ ತೀವ್ರ ಗೊಂದಲ ಉಂಟಾಗಿ ಒಬ್ಬ ಮಹಿಳೆ ಮೃತರಾಗಿದ್ದರು. ರಾಮದೇವ್ ಅವರನ್ನು ದೆಹಲಿ ಬಿಟ್ಟು ಹೋಗುವಂತೆ ಬಲಾತ್ಕರಿಸಲಾಗಿತ್ತು.<br /> <br /> ~ರಾಷ್ಟ ವಿರೋಧಿ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಸಮಾಜವಿರೋಧಿ ಶಕ್ತಿಗಳು ಇಲ್ಲಿ ಇರಬಹುದು. ಅವರು ಕಿಡಿಗೇಡಿತನ ಮಾಡಬಹುದು. ಪೊಲೀಸರು ಅಂತಹವರನ್ನು ತತ್ ಕ್ಷಣವೇ ಬಂಧಿಸಬೇಕು~ ಎಂದು ರಾಮದೇವ್ ಹೇಳಿದರು.<br /> <br /> ~ಶೀಘ್ರದಲ್ಲೇ ಆಂದೋಲನದ ಮುಂದಿನ ಹಂತಕ್ಕೆ ಸಿದ್ದರಾಗಲು ಸೂಚನೆ ನೀಡುತ್ತೇನೆ. ಯುವಕರು ಸಂಸತ್ತಿನೆಡೆಗೆ ಸಾಗುವ ಮೆರವಣಿಗೆಯ ನೇತೃತ್ವ ವಹಿಸುವರು~ ಎಂದು ಬೆಂಬಲಿಗರ ಹರ್ಷೋದ್ಘಾರಗಳ ಮಧ್ಯೆ ರಾಮದೇವ್ ಪ್ರಕಟಿಸಿದರು.<br /> <br /> ಸಂಸತ್ ಭವನದ ಸುತ್ತ ಈದಿನ ಮುಂಜಾನೆಯಿಂದಲೇ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಮಲೀಲಾ ಮೈದಾನದ ಒಳಗೂ ಭಾರಿ ಸಂಖ್ಯೆಯಲ್ಲಿ ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ.<br /> <br /> <strong>ಗಡ್ಕರಿ, ಶರದ್ ಯಾದವ್ ವೇದಿಕೆಗೆ:</strong> ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಜೆಡಿ (ಯು) ಮುಖ್ಯಸ್ಥ ಶರದ್ ಯಾದವ್ ಈದಿನ 11.30ರ ವೇಳೆಗೆ ಪ್ರತಿಭಟನಾ ತಾಣಕ್ಕೆ ಬಂದು ಬಾಬಾ ರಾಮದೇವ್ ಅವರ ಜೊತೆಗೆ ವೇದಿಕೆ ಹಂಚಿಕೊಂಡರು.<br /> <br /> ಕಾಂಗ್ರೆಸ್ಸನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಉಭಯ ನಾಯಕರೂ ~ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲಾಗದ ಯುಪಿಎ ಸರ್ಕಾರವನ್ನು ಕಿತ್ತೊಗೆಯಿರಿ~ ಎಂದು ಜನತೆಗೆ ಕರೆ ನೀಡಿದರು.<br /> <br /> ಟಿಡಿಪಿ ನಾಯಕ ನಾಮ ನಾಗೇಶ್ವರ ರಾವ್, ಬಿಜೆಪಿ ಸಂಸತ್ ಸದಸ್ಯ ವಿಜಯ ಗೋಯೆಲ್ ಮತ್ತು ಅಕಾಲಿ ದಳ ಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಎನ್ ಡಿಎ ಧುರೀಣರೂ ಸೋಮವಾರ ರಾಮದೇವ್ ಜೊತೆಗೆ ವೇದಿಕೆಯಲ್ಲಿ ಕುಳಿತು ಆಂದೋಳನಕ್ಕೆ ಬೆಂಬಲ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನವದೆಹಲಿ (ಐಎಎನ್ಎಸ್/ ಪಿಟಿಐ): ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಪ್ರತಿಭಟಿಸಿ ಸಂಸತ್ತಿಗೆ ಮೆರವಣಿಗೆಯಲ್ಲಿ ಹೊರಟ ಯೋಗ ಗುರು ಬಾಬಾ ರಾಮದೇವ್ ಮತ್ತು ಅವರ ಸಹಸ್ರಾರು ಬೆಂಬಲಿಗರನ್ನು ಪೊಲೀಸರು ಮಾರ್ಗಮಧ್ಯದಲ್ಲೇ ತಡೆದು ಬಂಧಿಸಿದ್ದಾರೆ.<br /> <br /> ಮಧ್ಯಾಹ್ನ 1.15ಕ್ಕೆ ರಾಮದೇವ್ ಕರೆಯ ಮೇರೆಗೆ ಮೆರವಣಿಗೆ ಆರಂಭವಾಗಿತ್ತು. ಕೇಂದ್ರ ದೆಹಲಿಯ ರಣಜಿತ್ ಸಿಂಗ್ ಮೇಲ್ಸೇತುವೆಯಲ್ಲಿ ರಾಮ ದೇವ್ ಅವರನ್ನು ತಡೆ ಹಿಡಿದು ಬಂಧಿಸಲಾಯಿತು.<br /> <br /> ಸ್ಥಾನಬದ್ಧತೆಗೆ ಒಳಗಾಗಿರುವ ಪ್ರತಿಭಟನಕಾರರನ್ನು ಬಸ್ಸುಗಳ ಮೂಲಕ ರಾಜೇಂದ್ರ ಪ್ರಸಾದ್ ಕ್ರೀಡಾಂಗಣಕ್ಕೆ ಒಯ್ಯಲಾಗಿದ್ದು, ಅವರನ್ನು ಕ್ರೀಡಾಂಗಣದಲ್ಲಿಯೇ ಬಂಧನದಲ್ಲಿ ಇಡಲಾಗುವುದು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.</p>.<p>ಇದಕ್ಕೆ ಮುನ್ನ ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸುವುದಾಗಿ ಸೋಮವಾರ ಇಲ್ಲಿ ಘೋಷಿಸಿದ ಯೋಗ ಗುರು ಬಾಬಾ ರಾಮದೇವ್ ಅವರು ~ಭ್ರಷ್ಟ ಸಂಸತ್ ಸದಸ್ಯರು ನಮ್ಮ ಮಾತುಗಳನ್ನು ಆಲಿಸಬೇಕು. ಅದಕ್ಕಾಗಿ ಮೆರವಣಿಗೆಯ ಮುಂಚೂಣಿಯಲ್ಲಿ ತೆರಳಲು ನನಗೆ ಅವಕಾಶ ನೀಡಬೇಕು~ ಎಂದು ಹೇಳಿದರು. ಆದರೆ ಹಾಗೆ ಮಾಡಲು ಅವರಿಗೆ ಅನುಮತಿ ಸಿಗದು ಎಂದು ದೆಹಲಿ ಪೊಲೀಸರು ಹೇಳಿದ್ದಾರೆ.<br /> <br /> ಕಪ್ಪು ಹಣ ಮತ್ತು ಭ್ರಷ್ಟಾಚಾರ ವಿರೋಧಿ ಆಂದೋಲನದ ಮುಂದಿನ ಹಂತಕ್ಕೆ ಸಜ್ಜಾಗಿ ಎಂದು ರಾಮಲೀಲಾ ಮೈದಾನದಲ್ಲಿ ತಮ್ಮ ಬೆಂಬಲಿಗರಿಗೆ ಕರೆ ನೀಡಿದ ಯೋಗ ಗುರು ~ಶಾಂತಿಯುತವಾಗಿ ಸಂಸತ್ತಿನಡೆಗೆ ಮೆರವಣಿಗೆ ನಡೆಸುತ್ತೇವೆ. ಮುಂದಿನ ಸಲ ಒಬ್ಬನೇ ಒಬ್ಬ ಭ್ರಷ್ಟ ನಾಯಕನೂ ಚುನಾಯಿತನಾಗಲು ನಾವು ಬಯಸುವುದಿಲ್ಲ. ಆದ್ದರಿಂದ ನಮ್ಮನ್ನು ತಡೆಯಬೇಡಿ. ನಮ್ಮ ಮಾತುಗಳನ್ನು ಆಲಿಸಬೇಕು ಎಂದಷ್ಟೇ ನಾವು ಬಯಸುತ್ತಿದ್ದೇವೆ~ ಎಂದು ನುಡಿದರು.<br /> <br /> ~ಅಹಿಂಸೆ ಮತ್ತು ಶಾಂತರಾಗಿರಿ~ ಎಂದು ಬೆಂಬಲಿಗರಿಗೆ ಸೂಚಿಸಿದ ಅವರು, ಇದೇ ಸ್ಥಳದಲ್ಲಿ 2011ರ ಚಳವಳಿಯನ್ನು ನೆನಪಿಸಿದರು. ~ದೆಹಲಿ ಪೊಲೀಸರೂ ಕಳೆದ ಬಾರಿ ಮಾಡಿದಂತೆ ಕಾನೂನು ಕೈಗೆತ್ತಿಕೊಳ್ಳುವುದಿಲ್ಲ ಎಂದು ನಾವು ನಿರೀಕ್ಷಿಸುತ್ತೇವೆ~ ಎಂದು ರಾಮದೇವ್ ಹೇಳಿದರು.<br /> <br /> 2011ರ ಜೂನ್ ನಲ್ಲಿ ಇದೇ ರಾಮಲೀಲಾ ಮೈದಾನದಲ್ಲಿ ಯೋಗಗುರು ಇಂತಹುದೇ ಪ್ರತಿಭಟನೆ ಸಂಘಟಿಸಿದ್ದರು. ಆದರೆ ದೆಹಲಿ ಪೊಲೀಸರು ನಡೆಸಿದ ನಡುರಾತ್ರಿಯ ಕಾರ್ಯಾಚರಣೆಯಿಂದಾಗಿ ತೀವ್ರ ಗೊಂದಲ ಉಂಟಾಗಿ ಒಬ್ಬ ಮಹಿಳೆ ಮೃತರಾಗಿದ್ದರು. ರಾಮದೇವ್ ಅವರನ್ನು ದೆಹಲಿ ಬಿಟ್ಟು ಹೋಗುವಂತೆ ಬಲಾತ್ಕರಿಸಲಾಗಿತ್ತು.<br /> <br /> ~ರಾಷ್ಟ ವಿರೋಧಿ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುವ ಸಮಾಜವಿರೋಧಿ ಶಕ್ತಿಗಳು ಇಲ್ಲಿ ಇರಬಹುದು. ಅವರು ಕಿಡಿಗೇಡಿತನ ಮಾಡಬಹುದು. ಪೊಲೀಸರು ಅಂತಹವರನ್ನು ತತ್ ಕ್ಷಣವೇ ಬಂಧಿಸಬೇಕು~ ಎಂದು ರಾಮದೇವ್ ಹೇಳಿದರು.<br /> <br /> ~ಶೀಘ್ರದಲ್ಲೇ ಆಂದೋಲನದ ಮುಂದಿನ ಹಂತಕ್ಕೆ ಸಿದ್ದರಾಗಲು ಸೂಚನೆ ನೀಡುತ್ತೇನೆ. ಯುವಕರು ಸಂಸತ್ತಿನೆಡೆಗೆ ಸಾಗುವ ಮೆರವಣಿಗೆಯ ನೇತೃತ್ವ ವಹಿಸುವರು~ ಎಂದು ಬೆಂಬಲಿಗರ ಹರ್ಷೋದ್ಘಾರಗಳ ಮಧ್ಯೆ ರಾಮದೇವ್ ಪ್ರಕಟಿಸಿದರು.<br /> <br /> ಸಂಸತ್ ಭವನದ ಸುತ್ತ ಈದಿನ ಮುಂಜಾನೆಯಿಂದಲೇ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಮಲೀಲಾ ಮೈದಾನದ ಒಳಗೂ ಭಾರಿ ಸಂಖ್ಯೆಯಲ್ಲಿ ದೆಹಲಿ ಪೊಲೀಸರನ್ನು ನಿಯೋಜಿಸಲಾಗಿದೆ.<br /> <br /> <strong>ಗಡ್ಕರಿ, ಶರದ್ ಯಾದವ್ ವೇದಿಕೆಗೆ:</strong> ಈ ಮಧ್ಯೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಮತ್ತು ಜೆಡಿ (ಯು) ಮುಖ್ಯಸ್ಥ ಶರದ್ ಯಾದವ್ ಈದಿನ 11.30ರ ವೇಳೆಗೆ ಪ್ರತಿಭಟನಾ ತಾಣಕ್ಕೆ ಬಂದು ಬಾಬಾ ರಾಮದೇವ್ ಅವರ ಜೊತೆಗೆ ವೇದಿಕೆ ಹಂಚಿಕೊಂಡರು.<br /> <br /> ಕಾಂಗ್ರೆಸ್ಸನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಉಭಯ ನಾಯಕರೂ ~ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮ ಕೈಗೊಳ್ಳಲಾಗದ ಯುಪಿಎ ಸರ್ಕಾರವನ್ನು ಕಿತ್ತೊಗೆಯಿರಿ~ ಎಂದು ಜನತೆಗೆ ಕರೆ ನೀಡಿದರು.<br /> <br /> ಟಿಡಿಪಿ ನಾಯಕ ನಾಮ ನಾಗೇಶ್ವರ ರಾವ್, ಬಿಜೆಪಿ ಸಂಸತ್ ಸದಸ್ಯ ವಿಜಯ ಗೋಯೆಲ್ ಮತ್ತು ಅಕಾಲಿ ದಳ ಪ್ರತಿನಿಧಿಗಳು ಸೇರಿದಂತೆ ಹಲವಾರು ಮಂದಿ ಎನ್ ಡಿಎ ಧುರೀಣರೂ ಸೋಮವಾರ ರಾಮದೇವ್ ಜೊತೆಗೆ ವೇದಿಕೆಯಲ್ಲಿ ಕುಳಿತು ಆಂದೋಳನಕ್ಕೆ ಬೆಂಬಲ ನೀಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>