<p><strong>ಬೆಂಗಳೂರು: </strong>ಹಬ್ಬದ ವಾತಾವರಣ ಮನೆಮಾಡಿದ್ದ ಆ ಇಡೀ ಪರಿಸರವೇ ಶೃಂಗಾರಗೊಂಡಂತೆ ಇತ್ತು. ಅಲ್ಲಿ ಗಂಗೆ, ಗೋಮಾತೆಗೆ ಪೂಜೆ ಸಲ್ಲಿಸಿದ ಮುತ್ತೈದೆಯರು ಕೆರೆಗೆ ಬಾಗಿನ ಅರ್ಪಿಸಿದರೆ, ಚಿಣ್ಣರು ‘ಪರಿಸರ ಉಳಿಸಿ, ಕೆರೆ ಸಂರಕ್ಷಿಸಿ’ ಸಾರುವ ಮೂಲಕ ಕಾಳಜಿ ಮೆರೆದರು.<br /> <br /> ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆಯ ಆವರಣದಲ್ಲಿ ‘ಪರಿಸರ ಹಿತ ಸಂರಕ್ಷಣಾ ಸಮಿತಿ’ ಭಾನುವಾರ ಆಯೋಜಿಸಿದ್ದ ಕೆರೆ ಹಬ್ಬದ ಚಿತ್ರಣಗಳಿವು.<br /> <br /> ಹಬ್ಬದಲ್ಲಿ ಮಹಿಳೆಯರು ಪೂಜೆ, ಬಾಗಿನ ಅರ್ಪಣೆಯಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಕೊಂಡಿದ್ದರು. ವಿವಿಧ ಶಾಲೆಗಳ ಮಕ್ಕಳು ಮರ, ಗಿಡ, ಭೂಮಿ, ನವಿಲು, ಮೊಲದ ವೇಷ ತೊಟ್ಟು ಕೆರೆಯ ಸುತ್ತ ಪ್ರಕೃತಿ ರಕ್ಷಣೆಯ ಸಂದೇಶ ಸಾರಿದರು.<br /> <br /> ಹಿಂದೊಮ್ಮೆ ಪಾಳುಬಿದ್ದು ಪುನಶ್ಚೇತನಗೊಂಡಿರುವ ಕೆರೆಯನ್ನು ಉತ್ತಮ ವಾಯು ವಿಹಾರ ತಾಣವನ್ನಾಗಿ ಸಂರಕ್ಷಿಸಬೇಕೆಂಬ ಉದ್ದೇಶದಿಂದ ಆಯೋಜಿಸಿದ್ದ ಈ ಹಬ್ಬದಲ್ಲಿ ಪಾಲಿಕೆ ಸದಸ್ಯೆ ನಳಿನಿ ಮಂಜು ಭಾಗವಹಿಸಿದ್ದರು.<br /> <br /> ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಿದ್ದಪ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬೆಂಗಳೂರು ಉಳಿಯಬೇಕಾದರೆ ಕೆರೆಗಳ ರಕ್ಷಣೆ ಮತ್ತು ಪೋಷಣೆ ಅಗತ್ಯ. ಬದುಕಲು ನೀರು, ಗಿಡ–ಮರಗಳು ಅವಶ್ಯಕ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.<br /> <br /> ‘ಶಾಲೆಯಲ್ಲಿ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಪರಿಸರ ನಾಶದ ದುಷ್ಪರಿಣಾಮ ಮತ್ತು ರಕ್ಷಣೆಯ ಪ್ರಯೋಜನಗಳ ಕುರಿತಂತೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.<br /> <br /> ‘ಈ ಕೆರೆಗೆ ಒಳಚರಂಡಿ ನೀರು ಸೇರಿ ಪರಿಸರವನ್ನು ಮಾಲಿನ್ಯ ಮಾಡುತ್ತಿದೆ. ಅದನ್ನು ತಡೆಗಟ್ಟಲು ಶೀಘ್ರವೇ ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣ ಮಾಡಲು ನಳಿನಿ ಅವರು ಕ್ರಮಕೈಗೊಳ್ಳಬೇಕು’ ಎಂದರು.<br /> <br /> ಕಾಂಗ್ರೆಸ್ ಮುಖಂಡ ಎಂ. ರಾಜ್ಕುಮಾರ್ ಮಾತನಾಡಿ, ‘ಪರಿಸರ ಮಾಲಿನ್ಯದೊಂದಿಗೆ ಬದುಕುತ್ತಿರುವ ನಾವೆಲ್ಲಾ ಪರಿಸರ ರಕ್ಷಣೆ ಮಾಡುವ ಪಣ ತೊಡಬೇಕು. ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.<br /> <br /> ‘ಕೆರೆ ಕರಗುವ ಸಮಯ ’ ಪುಸ್ತಕದ ಲೇಖಕ ಕೆರೆ ಮಂಜುನಾಥ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಹಬ್ಬದ ವಾತಾವರಣ ಮನೆಮಾಡಿದ್ದ ಆ ಇಡೀ ಪರಿಸರವೇ ಶೃಂಗಾರಗೊಂಡಂತೆ ಇತ್ತು. ಅಲ್ಲಿ ಗಂಗೆ, ಗೋಮಾತೆಗೆ ಪೂಜೆ ಸಲ್ಲಿಸಿದ ಮುತ್ತೈದೆಯರು ಕೆರೆಗೆ ಬಾಗಿನ ಅರ್ಪಿಸಿದರೆ, ಚಿಣ್ಣರು ‘ಪರಿಸರ ಉಳಿಸಿ, ಕೆರೆ ಸಂರಕ್ಷಿಸಿ’ ಸಾರುವ ಮೂಲಕ ಕಾಳಜಿ ಮೆರೆದರು.<br /> <br /> ರಾಜರಾಜೇಶ್ವರಿನಗರದ ಹಲಗೆವಡೇರಹಳ್ಳಿ ಕೆರೆಯ ಆವರಣದಲ್ಲಿ ‘ಪರಿಸರ ಹಿತ ಸಂರಕ್ಷಣಾ ಸಮಿತಿ’ ಭಾನುವಾರ ಆಯೋಜಿಸಿದ್ದ ಕೆರೆ ಹಬ್ಬದ ಚಿತ್ರಣಗಳಿವು.<br /> <br /> ಹಬ್ಬದಲ್ಲಿ ಮಹಿಳೆಯರು ಪೂಜೆ, ಬಾಗಿನ ಅರ್ಪಣೆಯಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ತೊಡಗಿಕೊಂಡಿದ್ದರು. ವಿವಿಧ ಶಾಲೆಗಳ ಮಕ್ಕಳು ಮರ, ಗಿಡ, ಭೂಮಿ, ನವಿಲು, ಮೊಲದ ವೇಷ ತೊಟ್ಟು ಕೆರೆಯ ಸುತ್ತ ಪ್ರಕೃತಿ ರಕ್ಷಣೆಯ ಸಂದೇಶ ಸಾರಿದರು.<br /> <br /> ಹಿಂದೊಮ್ಮೆ ಪಾಳುಬಿದ್ದು ಪುನಶ್ಚೇತನಗೊಂಡಿರುವ ಕೆರೆಯನ್ನು ಉತ್ತಮ ವಾಯು ವಿಹಾರ ತಾಣವನ್ನಾಗಿ ಸಂರಕ್ಷಿಸಬೇಕೆಂಬ ಉದ್ದೇಶದಿಂದ ಆಯೋಜಿಸಿದ್ದ ಈ ಹಬ್ಬದಲ್ಲಿ ಪಾಲಿಕೆ ಸದಸ್ಯೆ ನಳಿನಿ ಮಂಜು ಭಾಗವಹಿಸಿದ್ದರು.<br /> <br /> ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಸಿದ್ದಪ್ಪ ಕಾರ್ಯಕ್ರಮದಲ್ಲಿ ಮಾತನಾಡಿ, ‘ಬೆಂಗಳೂರು ಉಳಿಯಬೇಕಾದರೆ ಕೆರೆಗಳ ರಕ್ಷಣೆ ಮತ್ತು ಪೋಷಣೆ ಅಗತ್ಯ. ಬದುಕಲು ನೀರು, ಗಿಡ–ಮರಗಳು ಅವಶ್ಯಕ ಎನ್ನುವ ಅರಿವು ಮಕ್ಕಳಲ್ಲಿ ಮೂಡಿಸಿದಾಗ ಮಾತ್ರ ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನಿರ್ಮಾಣವಾಗಲಿದೆ’ ಎಂದು ತಿಳಿಸಿದರು.<br /> <br /> ‘ಶಾಲೆಯಲ್ಲಿ ಶಿಕ್ಷಕರು ಸಹ ವಿದ್ಯಾರ್ಥಿಗಳಿಗೆ ಪರಿಸರ ನಾಶದ ದುಷ್ಪರಿಣಾಮ ಮತ್ತು ರಕ್ಷಣೆಯ ಪ್ರಯೋಜನಗಳ ಕುರಿತಂತೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಕೆಲಸ ಮಾಡಬೇಕು’ ಎಂದು ಹೇಳಿದರು.<br /> <br /> ‘ಈ ಕೆರೆಗೆ ಒಳಚರಂಡಿ ನೀರು ಸೇರಿ ಪರಿಸರವನ್ನು ಮಾಲಿನ್ಯ ಮಾಡುತ್ತಿದೆ. ಅದನ್ನು ತಡೆಗಟ್ಟಲು ಶೀಘ್ರವೇ ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಾಣ ಮಾಡಲು ನಳಿನಿ ಅವರು ಕ್ರಮಕೈಗೊಳ್ಳಬೇಕು’ ಎಂದರು.<br /> <br /> ಕಾಂಗ್ರೆಸ್ ಮುಖಂಡ ಎಂ. ರಾಜ್ಕುಮಾರ್ ಮಾತನಾಡಿ, ‘ಪರಿಸರ ಮಾಲಿನ್ಯದೊಂದಿಗೆ ಬದುಕುತ್ತಿರುವ ನಾವೆಲ್ಲಾ ಪರಿಸರ ರಕ್ಷಣೆ ಮಾಡುವ ಪಣ ತೊಡಬೇಕು. ಇಂತಹ ಕಾರ್ಯಕ್ರಮಗಳು ಎಲ್ಲರಿಗೂ ಪ್ರೇರಣೆಯಾಗಬೇಕು’ ಎಂದು ತಿಳಿಸಿದರು.<br /> <br /> ‘ಕೆರೆ ಕರಗುವ ಸಮಯ ’ ಪುಸ್ತಕದ ಲೇಖಕ ಕೆರೆ ಮಂಜುನಾಥ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>