<p><strong>ಬೆಂಗಳೂರು:</strong> ‘ಅದ್ವೈತ ವಿಚಾರಗಳು ಸಂಕೀರ್ಣವಾದದ್ದು, ಜನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಗುರು ಮುಖೇನ ಕಲಿಯಬಹುದಾದ ಈ ಅಂಶಗಳನ್ನು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಿಳಿಸಿರುವುದು ಲೇಖಕರ ವೈಶಿಷ್ಠ್ಯ’ ಎಂದು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು. <br /> <br /> ಅಭಿನಯ ಭಾರತಿ ಸಂಸ್ಥೆಯು ಆರ್.ವಿ. ದಂತವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಬಿ.ಜಿ.ಶ್ರೀಲಕ್ಷ್ಮೀ ಅವರ ‘ಅದ್ವೈತ ಆಚಾರ್ಯರು’ ಪುಸ್ತಕ ಮತ್ತು ಡಾ. ಎಸ್.ಆರ್. ಲೀಲಾ ನಿರ್ದೇಶನದ ‘ಬಾಲಚರಿತಂ’ ಸಂಸ್ಕೃತ ನಾಟಕ ಸಿ.ಡಿ ಬಿಡುಗಡೆಗೊಳಿಸಿ ಮಾತನಾಡಿದರು. <br /> <br /> ‘ತಾತ್ವಿಕ ನೆಲೆಯಲ್ಲಿ ಯೋಚಿಸುವವರ ಪಾಲಿಗೆ ಈ ಕೃತಿಯು ದೊಡ್ಡ ಸಂಪತ್ತು. ಸಾಂದರ್ಭಿಕಪೂರ್ವಕವಾಗಿರುವ ಈ ಕೃತಿ ಅತ್ಯುತ್ತಮವಾಗಿದ್ದು, ಒಂದೊಮ್ಮೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದಿದ್ದರೆ ಈ ಸಾಲಿನ ಅಕಾಡೆಮಿ ಪ್ರಶಸ್ತಿಯನ್ನು ನೀಡುತ್ತಿದೆ’ ಎಂದು ತಿಳಿಸಿದರು. <br /> <br /> ‘ರಾಮಾಯಣವನ್ನು ವಿಷಯವಸ್ತುವನ್ನಾಗಿಸಿಕೊಂಡ ಸಂಸ್ಕೃತ ನಾಟಕಗಳೇ ಹೆಚ್ಚಿದ್ದು ಅವುಗಳಲ್ಲಿ ಸಮಕಾಲೀನ ವಿಚಾರಧಾರೆಗಳು ಸೇರ್ಪಡೆಯಾಗಬೇಕು. ಸಂಸ್ಕೃತದಲ್ಲಿರುವ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಕರಿಸಬೇಕಿದೆ’ ಎಂದರು.</p>.<p>ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, ‘ವೈಜ್ಞಾನಿಕ ವಿಚಾರಗಳ ಆಧಾರದ ಮೇಲೆ ರೂಪುಗೊಂಡ ಏಕೈಕ ಧರ್ಮ ಹಿಂದೂ ಧರ್ಮ. ಈ ಧರ್ಮವು ಅದ್ವೈತ ಸಿದ್ದಾಂತದ ವಿಚಾರಧಾರೆಯನ್ನು ಹೆಚ್ಚು ಆಳವಡಿಸಿಕೊಂಡಿದೆ’ ಎಂದು ಅಭಿಪ್ರಾಯಪಟ್ಟರು. ‘ಆಧುನಿಕ ಯುಗದ ಮನುಷ್ಯ ಸಂಸ್ಕೃತಿ ಆಳವಡಿಸಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲದನ್ನು ಬಹುಬೇಗ ಮೆಚ್ಚಿಕೊಂಡಿದ್ದಾನೆ. ಪರಿಣಾಮ ಮಾನವೀಯ ಸಂಬಂಧಗಳಿಗೆ ಮೌಲ್ಯವಿಲ್ಲದಂತಾಗಿದೆ’ ಎಂದು ತಿಳಿಸಿದರು. <br /> <br /> ಶತಾವಧಾನಿ ಆರ್.ಗಣೇಶ್ ಮಾತನಾಡಿ, ‘ಅದ್ವೈತ ಎಂದರೆ ಶಂಕರಾಚಾರ್ಯರು ಎಂದು ಭಾವಿಸುವವರಿಗೆ ಶಂಕರಾಚಾರ್ಯರ ಮೊದಲು ಅದ್ವೈತ ಸಿದ್ದಾಂತವನ್ನು ರೂಪುಗೊಳಿಸಿದ ಹಲವು ಆಚಾರ್ಯರನ್ನು ಪರಿಚಯಿಸುತ್ತದೆ ಎಂದರು. ಜೈನ್ ಸಮೂಹ ಸಂಸ್ಥೆಯ ಮಾರ್ಗದರ್ಶಿ ಪ್ರೊ.ಕೆ.ಎಸ್. ಶಾಂತಮಣಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ‘ಅದ್ವೈತ ವಿಚಾರಗಳು ಸಂಕೀರ್ಣವಾದದ್ದು, ಜನ ಸಾಮಾನ್ಯರಿಗೆ ಅರ್ಥವಾಗುವುದಿಲ್ಲ. ಗುರು ಮುಖೇನ ಕಲಿಯಬಹುದಾದ ಈ ಅಂಶಗಳನ್ನು ಸರಳ ಭಾಷೆಯಲ್ಲಿ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತಿಳಿಸಿರುವುದು ಲೇಖಕರ ವೈಶಿಷ್ಠ್ಯ’ ಎಂದು ನಿಘಂಟುತಜ್ಞ ಪ್ರೊ.ಜಿ.ವೆಂಕಟಸುಬ್ಬಯ್ಯ ಹೇಳಿದರು. <br /> <br /> ಅಭಿನಯ ಭಾರತಿ ಸಂಸ್ಥೆಯು ಆರ್.ವಿ. ದಂತವೈದ್ಯಕೀಯ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಪ್ರೊ.ಬಿ.ಜಿ.ಶ್ರೀಲಕ್ಷ್ಮೀ ಅವರ ‘ಅದ್ವೈತ ಆಚಾರ್ಯರು’ ಪುಸ್ತಕ ಮತ್ತು ಡಾ. ಎಸ್.ಆರ್. ಲೀಲಾ ನಿರ್ದೇಶನದ ‘ಬಾಲಚರಿತಂ’ ಸಂಸ್ಕೃತ ನಾಟಕ ಸಿ.ಡಿ ಬಿಡುಗಡೆಗೊಳಿಸಿ ಮಾತನಾಡಿದರು. <br /> <br /> ‘ತಾತ್ವಿಕ ನೆಲೆಯಲ್ಲಿ ಯೋಚಿಸುವವರ ಪಾಲಿಗೆ ಈ ಕೃತಿಯು ದೊಡ್ಡ ಸಂಪತ್ತು. ಸಾಂದರ್ಭಿಕಪೂರ್ವಕವಾಗಿರುವ ಈ ಕೃತಿ ಅತ್ಯುತ್ತಮವಾಗಿದ್ದು, ಒಂದೊಮ್ಮೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷನಾಗಿದಿದ್ದರೆ ಈ ಸಾಲಿನ ಅಕಾಡೆಮಿ ಪ್ರಶಸ್ತಿಯನ್ನು ನೀಡುತ್ತಿದೆ’ ಎಂದು ತಿಳಿಸಿದರು. <br /> <br /> ‘ರಾಮಾಯಣವನ್ನು ವಿಷಯವಸ್ತುವನ್ನಾಗಿಸಿಕೊಂಡ ಸಂಸ್ಕೃತ ನಾಟಕಗಳೇ ಹೆಚ್ಚಿದ್ದು ಅವುಗಳಲ್ಲಿ ಸಮಕಾಲೀನ ವಿಚಾರಧಾರೆಗಳು ಸೇರ್ಪಡೆಯಾಗಬೇಕು. ಸಂಸ್ಕೃತದಲ್ಲಿರುವ ನಾಟಕಗಳನ್ನು ಕನ್ನಡಕ್ಕೆ ಅನುವಾದ ಮಾಡುವ ಅಗತ್ಯವಿದ್ದು ಈ ನಿಟ್ಟಿನಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸಹಕರಿಸಬೇಕಿದೆ’ ಎಂದರು.</p>.<p>ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ ಮಾತನಾಡಿ, ‘ವೈಜ್ಞಾನಿಕ ವಿಚಾರಗಳ ಆಧಾರದ ಮೇಲೆ ರೂಪುಗೊಂಡ ಏಕೈಕ ಧರ್ಮ ಹಿಂದೂ ಧರ್ಮ. ಈ ಧರ್ಮವು ಅದ್ವೈತ ಸಿದ್ದಾಂತದ ವಿಚಾರಧಾರೆಯನ್ನು ಹೆಚ್ಚು ಆಳವಡಿಸಿಕೊಂಡಿದೆ’ ಎಂದು ಅಭಿಪ್ರಾಯಪಟ್ಟರು. ‘ಆಧುನಿಕ ಯುಗದ ಮನುಷ್ಯ ಸಂಸ್ಕೃತಿ ಆಳವಡಿಸಿಕೊಳ್ಳುವುದನ್ನು ಬಿಟ್ಟು ಉಳಿದೆಲ್ಲದನ್ನು ಬಹುಬೇಗ ಮೆಚ್ಚಿಕೊಂಡಿದ್ದಾನೆ. ಪರಿಣಾಮ ಮಾನವೀಯ ಸಂಬಂಧಗಳಿಗೆ ಮೌಲ್ಯವಿಲ್ಲದಂತಾಗಿದೆ’ ಎಂದು ತಿಳಿಸಿದರು. <br /> <br /> ಶತಾವಧಾನಿ ಆರ್.ಗಣೇಶ್ ಮಾತನಾಡಿ, ‘ಅದ್ವೈತ ಎಂದರೆ ಶಂಕರಾಚಾರ್ಯರು ಎಂದು ಭಾವಿಸುವವರಿಗೆ ಶಂಕರಾಚಾರ್ಯರ ಮೊದಲು ಅದ್ವೈತ ಸಿದ್ದಾಂತವನ್ನು ರೂಪುಗೊಳಿಸಿದ ಹಲವು ಆಚಾರ್ಯರನ್ನು ಪರಿಚಯಿಸುತ್ತದೆ ಎಂದರು. ಜೈನ್ ಸಮೂಹ ಸಂಸ್ಥೆಯ ಮಾರ್ಗದರ್ಶಿ ಪ್ರೊ.ಕೆ.ಎಸ್. ಶಾಂತಮಣಿ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>