<p><strong>ನರಗುಂದ: </strong>ಪಟ್ಟಣದ ಪುರಸಭೆಯ ಎಸ್ಎಫ್ಸಿ ಶೇ 22ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಗೃಹೋಪಯೋಗಿ ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ಆಟದ ಸಾಮಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವಿತರಿಸಿದರು. <br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.22ರಷ್ಟು ಎಸ್ಎಫ್ಸಿ ಅನುದಾನದಲ್ಲಿ 55 ಫಲಾನುಭವಿಗಳಿಗೆ ರೂ.3 ಲಕ್ಷದಲ್ಲಿ ಹೊಲಿಗೆ ಯಂತ್ರ, 4 ಫಲಾನುಭವಿಗಳಿಗೆ 1 ಲಕ್ಷರೂ ವೆಚ್ಚದಲ್ಲಿ ಚರ್ಮಕುಟೀರ, 300 ಫಲಾನುಭವಿಗಳಿಗೆ 5 ಲಕ್ಷದಲ್ಲಿ ಗೃಹೋಪಯೋಗಿ ಸಾಮಗ್ರಿ ವಿತರಣೆ ಹಾಗೂ 36 ಲಕ್ಷರೂ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. <br /> <br /> ಮತಕ್ಷೇತ್ರದ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಆರು ಕೋಟಿ ರೂಪಾಯಿಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಪಟ್ಟಣದ ಸೋಮಾಪುರ ಕೆರೆಗೆ ರೂ.40 ಲಕ್ಷ, ಪಡುವನಗೊಂಡ ಕೆರೆಗೆ ರೂ. 65 ಲಕ್ಷ ಬಳಕೆ ಮಾಡಲಾಗುವುದು. ಮತಕ್ಷೇತ್ರದ ಕೆರೆಗಳನ್ನು ಈ ಅನುದಾನದ ಮೂಲಕ ಸುಸಜ್ಜಿತವಾಗಿ ನಿರ್ಮಿಸಲಾಗುವುದೆಂದರು. ಪಟ್ಟಣದ ಹಾಳಾದ ರಸ್ತೆಗಳಿಗೆ ಪುನರ್ ನಿರ್ಮಿಸಿ ಡಾಂಬರೀಕರಣ ಮಾಡಲು ಸರಕಾರ 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದರು. <br /> <br /> ಪುರಸಭೆ ಅಧ್ಯಕ್ಷೆ ಮಹಬೂಬಿ ಮಟಗೇರ ಅಧ್ಯಕ್ಷೆತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯರಾದ ವಸಂತ ಜೋಗಣ್ಣವರ, ಪ್ರಕಾಶ ಪಟ್ಟಣಶೆಟ್ಟಿ, ವಿಠ್ಠಲ ಮುಧೋಳೆ, ಚಂದ್ರಶೇಖರ ಕೋಟಿ, ಮಲ್ಲವ್ವ ಗುಂಜಳ, ಶೈಲಾ ನರಗುಂದ, ಉಮೇಶ ಯಮೋಜಿ, ದೇವರಡ್ಡಿ ವೆಂಕರೆಡ್ಡಿಯವರ, ಹಸನಸಾಬ ಮಟಗೇರ ಇತರರು ಹಾಜರಿದ್ದರು.<br /> ಮುಖ್ಯಾಧಿಕಾರಿ ಅಶೋಕ ಪಾಲನಕರ ಸ್ವಾಗತಿಸಿದರು. ವಿಠ್ಠಲ ಹಡಗಲಿ ನಿರೂಪಿಸಿದರು. ಎಂ.ಬಿ. ಪಿಡ್ಡನಾಯ್ಕರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ: </strong>ಪಟ್ಟಣದ ಪುರಸಭೆಯ ಎಸ್ಎಫ್ಸಿ ಶೇ 22ರ ಅನುದಾನದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಗೃಹೋಪಯೋಗಿ ಹಾಗೂ ಮಕ್ಕಳಿಗೆ ಸಮವಸ್ತ್ರ ಹಾಗೂ ಆಟದ ಸಾಮಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ವಿತರಿಸಿದರು. <br /> <br /> ಈ ಸಂದರ್ಭದಲ್ಲಿ ಮಾತನಾಡಿದ ಅವರು ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಶೇ.22ರಷ್ಟು ಎಸ್ಎಫ್ಸಿ ಅನುದಾನದಲ್ಲಿ 55 ಫಲಾನುಭವಿಗಳಿಗೆ ರೂ.3 ಲಕ್ಷದಲ್ಲಿ ಹೊಲಿಗೆ ಯಂತ್ರ, 4 ಫಲಾನುಭವಿಗಳಿಗೆ 1 ಲಕ್ಷರೂ ವೆಚ್ಚದಲ್ಲಿ ಚರ್ಮಕುಟೀರ, 300 ಫಲಾನುಭವಿಗಳಿಗೆ 5 ಲಕ್ಷದಲ್ಲಿ ಗೃಹೋಪಯೋಗಿ ಸಾಮಗ್ರಿ ವಿತರಣೆ ಹಾಗೂ 36 ಲಕ್ಷರೂ ವೆಚ್ಚದಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಕಾಲೋನಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲಾಗುತ್ತಿದೆ ಎಂದರು. <br /> <br /> ಮತಕ್ಷೇತ್ರದ ವ್ಯಾಪ್ತಿಯ ಕೆರೆಗಳ ಅಭಿವೃದ್ಧಿಗೆ ಆರು ಕೋಟಿ ರೂಪಾಯಿಗಳನ್ನು ಸರಕಾರ ಬಿಡುಗಡೆ ಮಾಡಿದೆ. ಇದರಲ್ಲಿ ಪಟ್ಟಣದ ಸೋಮಾಪುರ ಕೆರೆಗೆ ರೂ.40 ಲಕ್ಷ, ಪಡುವನಗೊಂಡ ಕೆರೆಗೆ ರೂ. 65 ಲಕ್ಷ ಬಳಕೆ ಮಾಡಲಾಗುವುದು. ಮತಕ್ಷೇತ್ರದ ಕೆರೆಗಳನ್ನು ಈ ಅನುದಾನದ ಮೂಲಕ ಸುಸಜ್ಜಿತವಾಗಿ ನಿರ್ಮಿಸಲಾಗುವುದೆಂದರು. ಪಟ್ಟಣದ ಹಾಳಾದ ರಸ್ತೆಗಳಿಗೆ ಪುನರ್ ನಿರ್ಮಿಸಿ ಡಾಂಬರೀಕರಣ ಮಾಡಲು ಸರಕಾರ 5 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದರು. <br /> <br /> ಪುರಸಭೆ ಅಧ್ಯಕ್ಷೆ ಮಹಬೂಬಿ ಮಟಗೇರ ಅಧ್ಯಕ್ಷೆತೆ ವಹಿಸಿದ್ದರು. ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯರಾದ ವಸಂತ ಜೋಗಣ್ಣವರ, ಪ್ರಕಾಶ ಪಟ್ಟಣಶೆಟ್ಟಿ, ವಿಠ್ಠಲ ಮುಧೋಳೆ, ಚಂದ್ರಶೇಖರ ಕೋಟಿ, ಮಲ್ಲವ್ವ ಗುಂಜಳ, ಶೈಲಾ ನರಗುಂದ, ಉಮೇಶ ಯಮೋಜಿ, ದೇವರಡ್ಡಿ ವೆಂಕರೆಡ್ಡಿಯವರ, ಹಸನಸಾಬ ಮಟಗೇರ ಇತರರು ಹಾಜರಿದ್ದರು.<br /> ಮುಖ್ಯಾಧಿಕಾರಿ ಅಶೋಕ ಪಾಲನಕರ ಸ್ವಾಗತಿಸಿದರು. ವಿಠ್ಠಲ ಹಡಗಲಿ ನಿರೂಪಿಸಿದರು. ಎಂ.ಬಿ. ಪಿಡ್ಡನಾಯ್ಕರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>