<p><strong>ನರಗುಂದ:</strong> ವಿಳಂಬವಾದರೂ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಶ್ಲಾಘನಾರ್ಹ. ಆದರೆ ಆ ಕಾಮಗಾರಿಗಳು ಯಾವುವು, ಎಷ್ಟು ಹಣ ವ್ಯಯಿಸಲಾಗುತ್ತಿದೆ. ಅದನ್ನು ಯಾರು ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗವಾಗಿ ದಾಖಲೆ ಮೂಲಕ ಅಥವಾ ಮಾಧ್ಯಮಗಳ ಮೂಲಕ ಪ್ರಕಟಿಸುವಂತೆ ಮಾಜಿ ಸಚಿವ ಬಿ.ಆರ್. ಯಾವಗಲ್ ಹಾಲಿ ಸಚಿವ ಸಿ.ಸಿ. ಪಾಟೀಲರಿಗೆ ಆಗ್ರಹಿಸಿದ್ದಾರೆ. <br /> <br /> ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 7 ವರ್ಷದ ನಂತರ ಈಗ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಿದ್ದು ನೋಡಿದರೆ ಇದೊಂದು ರೀತಿಯಲ್ಲಿ ಚುನಾವಣಾ ಸ್ಟಂಟ್ ಆಗಿದೆ ಎಂದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಸೋರಿಕೆ ಕಂಡು ಬರುತ್ತಿದೆ. ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕು ಎಂದರು. <br /> <br /> ಏತ ನೀರಾವರಿ ಯೋಜನೆಗಳು ಇನ್ನು ಆರಂಭಗೊಂಡಿಲ್ಲ. ಗ್ರಾಮೀಣ ರಸ್ತೆಗಳು ಹಾಗೆ ಉಳಿದಿವೆ. ಕಾಲುವೆಗಳಿಗೆ ಸರಿಯಾಗಿ ನೀರು ತಲುಪದೇ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಸಚಿವರು ಇದರ ಬಗ್ಗೆ ಗಮನ ಹರಿಸುವಂತೆ ಯಾವಗಲ್ ಒತ್ತಾಯಿಸಿದರು. <br /> <br /> ಈ ಸಂದರ್ಭದಲ್ಲಿ ದ್ಯಾಮಣ್ಣ ಸವದತ್ತಿ, ವಿಠ್ಠಲ ಶಿಂಧೆ, ರಾಜು ಕಲಾಲ, ಮಹಾಂತೇಶ ತಳವಾರ, ವೈ.ಎಫ್. ಸಂಗ್ರೇಶಿ, ಗುರುಪಾದಪ್ಪ ಕುರಹಟ್ಟಿ ಹಾಜರಿದ್ದರು. <br /> <br /> <strong>ಸಿಂಡಿಕೇಟ್ ಬ್ಯಾಂಕ್; ಗ್ರಾಹಕರ ಸಮಾವೇಶ</strong><br /> <strong>ಗದಗ: </strong>ಸಮೀಪದ ಹುಲಕೋಟಿಯಲ್ಲಿ ಇತ್ತೀಚೆಗೆ ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ಗ್ರಾಹಕರ ಸಮಾವೇಶ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸತೀಶ್ ಹೊಂಬಾಳಿ ವಹಿಸಿದ್ದರು. ಅತಿಥಿಗಳಾಗಿ ಗ್ರಾಮದ ಹಿರಿಯ ನಾಗರಿಕರಾದ ಚಂದ್ರಗೌಡ ಮರಿಯಪ್ಪಗೌಡರ ಡಾ.ಶಿವಪ್ಪ ಚವಡಿ ಮತ್ತಿತರರು ಹಾಜರಿದ್ದರು.<br /> ಬ್ಯಾಂಕಿನ ವ್ಯವಸ್ಥಾಪಕ ಡಿ.ಜಿ.ಹೆಗಡೆ ಮಾತನಾಡಿದರು. ಕೆ. ಪ್ರಭಾಕರ ನಿರೂಪಿಸಿದರು. <br /> <br /> <strong>ಖೋ-ಖೋ ಸಾಧನೆ<br /> ಗದಗ: </strong>ಇಲ್ಲಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತಿಚೆಗೆ ಧಾರವಾಡದಲಿ ್ಲನಡೆದ ಕವಿವಿ ಮಹಿಳೆಯರ ಖೋ-ಖೋ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಿರ್ಮಲಾ ಬಾರಕೇರ ಕವಿವಿ ತಂಡಕ್ಕೆ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ವಿಳಂಬವಾದರೂ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ಶ್ಲಾಘನಾರ್ಹ. ಆದರೆ ಆ ಕಾಮಗಾರಿಗಳು ಯಾವುವು, ಎಷ್ಟು ಹಣ ವ್ಯಯಿಸಲಾಗುತ್ತಿದೆ. ಅದನ್ನು ಯಾರು ಕೈಗೊಂಡಿದ್ದಾರೆ ಎಂಬುದನ್ನು ಬಹಿರಂಗವಾಗಿ ದಾಖಲೆ ಮೂಲಕ ಅಥವಾ ಮಾಧ್ಯಮಗಳ ಮೂಲಕ ಪ್ರಕಟಿಸುವಂತೆ ಮಾಜಿ ಸಚಿವ ಬಿ.ಆರ್. ಯಾವಗಲ್ ಹಾಲಿ ಸಚಿವ ಸಿ.ಸಿ. ಪಾಟೀಲರಿಗೆ ಆಗ್ರಹಿಸಿದ್ದಾರೆ. <br /> <br /> ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಅಧಿಕಾರಕ್ಕೆ ಬಂದ 7 ವರ್ಷದ ನಂತರ ಈಗ ಅಭಿವೃದ್ಧಿ ಕಾಮಗಾರಿ ಆರಂಭ ಮಾಡಿದ್ದು ನೋಡಿದರೆ ಇದೊಂದು ರೀತಿಯಲ್ಲಿ ಚುನಾವಣಾ ಸ್ಟಂಟ್ ಆಗಿದೆ ಎಂದರು. ಅಭಿವೃದ್ಧಿ ಕಾಮಗಾರಿಗಳಲ್ಲಿ ಭಾರಿ ಪ್ರಮಾಣದ ಸೋರಿಕೆ ಕಂಡು ಬರುತ್ತಿದೆ. ಕಾಮಗಾರಿಗಳು ಪಾರದರ್ಶಕವಾಗಿ ನಡೆಯಬೇಕು ಎಂದರು. <br /> <br /> ಏತ ನೀರಾವರಿ ಯೋಜನೆಗಳು ಇನ್ನು ಆರಂಭಗೊಂಡಿಲ್ಲ. ಗ್ರಾಮೀಣ ರಸ್ತೆಗಳು ಹಾಗೆ ಉಳಿದಿವೆ. ಕಾಲುವೆಗಳಿಗೆ ಸರಿಯಾಗಿ ನೀರು ತಲುಪದೇ ರೈತರು ಸಂಕಷ್ಟ ಅನುಭವಿಸುವಂತಾಗಿದೆ ಸಚಿವರು ಇದರ ಬಗ್ಗೆ ಗಮನ ಹರಿಸುವಂತೆ ಯಾವಗಲ್ ಒತ್ತಾಯಿಸಿದರು. <br /> <br /> ಈ ಸಂದರ್ಭದಲ್ಲಿ ದ್ಯಾಮಣ್ಣ ಸವದತ್ತಿ, ವಿಠ್ಠಲ ಶಿಂಧೆ, ರಾಜು ಕಲಾಲ, ಮಹಾಂತೇಶ ತಳವಾರ, ವೈ.ಎಫ್. ಸಂಗ್ರೇಶಿ, ಗುರುಪಾದಪ್ಪ ಕುರಹಟ್ಟಿ ಹಾಜರಿದ್ದರು. <br /> <br /> <strong>ಸಿಂಡಿಕೇಟ್ ಬ್ಯಾಂಕ್; ಗ್ರಾಹಕರ ಸಮಾವೇಶ</strong><br /> <strong>ಗದಗ: </strong>ಸಮೀಪದ ಹುಲಕೋಟಿಯಲ್ಲಿ ಇತ್ತೀಚೆಗೆ ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ಗ್ರಾಹಕರ ಸಮಾವೇಶ ನಡೆಯಿತು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸತೀಶ್ ಹೊಂಬಾಳಿ ವಹಿಸಿದ್ದರು. ಅತಿಥಿಗಳಾಗಿ ಗ್ರಾಮದ ಹಿರಿಯ ನಾಗರಿಕರಾದ ಚಂದ್ರಗೌಡ ಮರಿಯಪ್ಪಗೌಡರ ಡಾ.ಶಿವಪ್ಪ ಚವಡಿ ಮತ್ತಿತರರು ಹಾಜರಿದ್ದರು.<br /> ಬ್ಯಾಂಕಿನ ವ್ಯವಸ್ಥಾಪಕ ಡಿ.ಜಿ.ಹೆಗಡೆ ಮಾತನಾಡಿದರು. ಕೆ. ಪ್ರಭಾಕರ ನಿರೂಪಿಸಿದರು. <br /> <br /> <strong>ಖೋ-ಖೋ ಸಾಧನೆ<br /> ಗದಗ: </strong>ಇಲ್ಲಿನ ಹುಲಕೋಟಿ ಸಹಕಾರಿ ಶಿಕ್ಷಣ ಸಂಸ್ಥೆಯ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತಿಚೆಗೆ ಧಾರವಾಡದಲಿ ್ಲನಡೆದ ಕವಿವಿ ಮಹಿಳೆಯರ ಖೋ-ಖೋ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಮಹಿಳೆಯರ ಖೋ ಖೋ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ನಿರ್ಮಲಾ ಬಾರಕೇರ ಕವಿವಿ ತಂಡಕ್ಕೆ ಆಯ್ಕೆಯಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>