<p>ಹಿರಿಯೂರು: ಪ್ರತೀ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಮಳೆ-ಬೆಳೆ ಮುನ್ಸೂಚನೆ ನೀಡುವ ನಗರದ ಇತಿಹಾಸ ಪ್ರಸಿದ್ಧವಾದ ಮೈಲಾರಲಿಂಗೇಶ್ವರಸ್ವಾಮಿಯ ಸರಪಳಿ ಇಡುವಂತಹ ಮಾಳಿಗೆ ಮನೆ ಸಂಪೂರ್ಣ ಶಿಥಿಲವಾಗಿದ್ದು, ತಕ್ಷಣ ಕಾಯಕಲ್ಪ ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವಿ.ಎಚ್.ರಾಜು ಒತ್ತಾಯ ಮಾಡಿದ್ದಾರೆ.<br /> <br /> ದಶಕಗಳ ಹಿಂದೆ ಸ್ವಾಮಿಯ ಭಕ್ತರು ಸರಪಳಿ ಇಡಲು 16ಗಿ16 ಅಳತೆಯ ಜಾಗದಲ್ಲಿ ಮಾಳಿಗೆ ಮನೆಯೊಂದನ್ನು ನಿರ್ಮಿಸಿ, ಸರಪಳಿ ಪವಾಡದ ನಂತರ ಮನೆಯಲ್ಲಿ ಸುರಕ್ಷಿತವಾಗಿ ಇಡಲಾಗುತ್ತಿತ್ತು. ಈಗ ಮನೆ ಬಿದ್ದು ಹೋಗಿದ್ದು ಸರಪಳಿ ಸಂರಕ್ಷಿಸಿಡಲು ಸೂಕ್ತ ಜಾಗ ಇಲ್ಲವಾಗಿದೆ. ಕೆಲವು ಭಕ್ತರು ಸರಪಳಿ ಮನೆ ನಿರ್ಮಿಸಿ ಕೊಡಲು ಮುಂದೆ ಬಂದಿದ್ದು, ಮೈಲಾರಲಿಂಗೇಶ್ವರ ಮನೆ ದೈವವಾಗಿರುವ ಭಕ್ತರೊಬ್ಬರು ಸರಪಳಿ ಮನೆ ತಮ್ಮದೆಂದು, ಹೊಸ ಮನೆ ನಿರ್ಮಿಸಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.<br /> <br /> ನೂತನ ಮನೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ತಹಶೀಲ್ದಾರ್ಗೆ, ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸದರಿ ಜಾಗ ದೇವಸ್ಥಾನಕ್ಕೆ ಸೇರಿದ್ದಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿ, ಸರಪಳಿ ಮನೆ ಕಟ್ಟಲು ಅನುಕೂಲ ಮಾಡಿಕೊಡಬೇಕು ಎಂದು ರಾಜು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಿರಿಯೂರು: ಪ್ರತೀ ವರ್ಷ ದಸರಾ ಹಬ್ಬದ ಸಂದರ್ಭದಲ್ಲಿ ಮಳೆ-ಬೆಳೆ ಮುನ್ಸೂಚನೆ ನೀಡುವ ನಗರದ ಇತಿಹಾಸ ಪ್ರಸಿದ್ಧವಾದ ಮೈಲಾರಲಿಂಗೇಶ್ವರಸ್ವಾಮಿಯ ಸರಪಳಿ ಇಡುವಂತಹ ಮಾಳಿಗೆ ಮನೆ ಸಂಪೂರ್ಣ ಶಿಥಿಲವಾಗಿದ್ದು, ತಕ್ಷಣ ಕಾಯಕಲ್ಪ ಕಲ್ಪಿಸಬೇಕು ಎಂದು ಪುರಸಭೆ ಮಾಜಿ ಅಧ್ಯಕ್ಷ ವಿ.ಎಚ್.ರಾಜು ಒತ್ತಾಯ ಮಾಡಿದ್ದಾರೆ.<br /> <br /> ದಶಕಗಳ ಹಿಂದೆ ಸ್ವಾಮಿಯ ಭಕ್ತರು ಸರಪಳಿ ಇಡಲು 16ಗಿ16 ಅಳತೆಯ ಜಾಗದಲ್ಲಿ ಮಾಳಿಗೆ ಮನೆಯೊಂದನ್ನು ನಿರ್ಮಿಸಿ, ಸರಪಳಿ ಪವಾಡದ ನಂತರ ಮನೆಯಲ್ಲಿ ಸುರಕ್ಷಿತವಾಗಿ ಇಡಲಾಗುತ್ತಿತ್ತು. ಈಗ ಮನೆ ಬಿದ್ದು ಹೋಗಿದ್ದು ಸರಪಳಿ ಸಂರಕ್ಷಿಸಿಡಲು ಸೂಕ್ತ ಜಾಗ ಇಲ್ಲವಾಗಿದೆ. ಕೆಲವು ಭಕ್ತರು ಸರಪಳಿ ಮನೆ ನಿರ್ಮಿಸಿ ಕೊಡಲು ಮುಂದೆ ಬಂದಿದ್ದು, ಮೈಲಾರಲಿಂಗೇಶ್ವರ ಮನೆ ದೈವವಾಗಿರುವ ಭಕ್ತರೊಬ್ಬರು ಸರಪಳಿ ಮನೆ ತಮ್ಮದೆಂದು, ಹೊಸ ಮನೆ ನಿರ್ಮಿಸಲು ಅಡ್ಡಿ ಪಡಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.<br /> <br /> ನೂತನ ಮನೆ ನಿರ್ಮಾಣಕ್ಕೆ ಅನುಮತಿ ನೀಡುವಂತೆ ತಹಶೀಲ್ದಾರ್ಗೆ, ಪುರಸಭೆಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಸದರಿ ಜಾಗ ದೇವಸ್ಥಾನಕ್ಕೆ ಸೇರಿದ್ದಾಗಿದ್ದು, ಜಿಲ್ಲಾಧಿಕಾರಿಗಳು ಸ್ಥಳ ತನಿಖೆ ಮಾಡಿ, ಸರಪಳಿ ಮನೆ ಕಟ್ಟಲು ಅನುಕೂಲ ಮಾಡಿಕೊಡಬೇಕು ಎಂದು ರಾಜು ಒತ್ತಾಯಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>