<p><strong>ಬೆಂಗಳೂರು: </strong>`ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.</p>.<p>ಶಾ.ಮಂ.ಕೃಷ್ಣರಾಯರ ಅಭಿನಂದನಾ ಸಮಿತಿಯು ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಗ್ರಂಥ `ಪದಪಥಿಕ~ ಬಿಡುಗಡೆ ಹಾಗೂ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>`ಸರೋಜಿನಿ ಮಹಿಷಿ ವರದಿ ಸಲ್ಲಿಸಿದ ಸಂದರ್ಭಕ್ಕೂ ಇಂದಿನ ಸಂದರ್ಭಕ್ಕೂ ತುಂಬಾ ವ್ಯತ್ಯಾಸವಿದೆ. ಆ ವರದಿಯನ್ನು ಹಾಗೆಯೇ ಅನುಷ್ಠಾನಕ್ಕೆ ತರುವುದರಿಂದ ಶೇ 20 ರಷ್ಟು ಮಾತ್ರ ಅನ್ವಯವಾಗುತ್ತದೆ. ಆದ್ದರಿಂದ ಪರಿಷ್ಕರಿಸಬೇಕಾದ ಅವಶ್ಯಕತೆಯಿದೆ~ ಎಂದರು.</p>.<p>`ಕೇಂದ್ರ ಸರ್ಕಾರ ರಾಜ್ಯಕ್ಕೆ ಆದ್ಯತೆ ನೀಡಬೇಕು. ಉದ್ಯೋಗದ ಎಲ್ಲ ಇಲಾಖೆಗಳಲ್ಲಿ ಸ್ಥಳೀಯರಿಗೆ ಮೊದಲು ಆದ್ಯತೆ ನೀಡಬೇಕು. ಶಿಕ್ಷಣ ರಾಷ್ಟ್ರೀಕೃತವಾಗಬೇಕು. ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಬಾರದು. ಆಗಲೇ ಶಿಕ್ಷಣ ಎಲ್ಲರಿಗೆ ದೊರೆಯಲು ಸಾಧ್ಯ~ ಎಂದು ಒತ್ತಾಯಿಸಿದರು.</p>.<p>`ಒಂದರಿಂದ ಐದನೇ ತರಗತಿಯವರೆಗೆ ಮಾತೃ ಭಾಷೆ ಕಡ್ಡಾಯವಾಗಿರಬೇಕು. ನಂತರ ಇಂಗ್ಲಿಷ್ ಭಾಷೆ. ಹೀಗಾದರೆ, ರಾಜ್ಯ-ರಾಜ್ಯಗಳ ನಡುವೆ ಭಾಷೆಗಳ ಕಂದಕ ನಿರ್ಮಾಣವಾಗುವುದಿಲ್ಲ~ ಎಂದು ಹೇಳಿದರು.</p>.<p>`ಶಾ.ಮಂ.ಕೃಷ್ಣರಾಯರು ಭಾಷಾ ಭಾವೈಕ್ಯ ಸಮಾವೇಶದಿಂದ ಭಾಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಿದರು. ನಮ್ಮ ಮಾತೃಭಾಷೆಗೆ ನಾವು ಗೌರವ ಸಲ್ಲಿಸಬೇಕು. ಅದರ ಜತೆಗೆ ನಮ್ಮ ಬದುಕು ಮತ್ತು ಭವಿಷ್ಯಕ್ಕೆ ಅಡಿಪಾಯ ಹಾಕಿಕೊಟ್ಟಂತಹ ನಾವು ಈಗಿರುವ ಭಾಷೆಗೂ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ~ ಎಂದರು.</p>.<p>ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಅವರು ಮಾತನಾಡಿ, `ಸ್ನಾತಕೋತ್ತರ ಪದವಿ ಪಡೆದು ಬರುವ ಇಂದಿನ ವಿದ್ಯಾರ್ಥಿಗಳು ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಬೇಕು. ಆಗಲೇ ವಿಧಾನ ಸೌಧದಲ್ಲಿರುವ ರಾಜಕಾರಣಿಗಳು ಜನತೆಯ ಹಿತದ ಬಗ್ಗೆ ಯೋಚಿಸಲು ಸಾಧ್ಯ~ ಎಂದರು.</p>.<p>`ಕನ್ನಡ ಚಳವಳಿಗಾರರು ಯಾವುದೇ ಒಂದು ನಿರ್ದಿಷ್ಟ ವಿಷಯವನ್ನು ಇಟ್ಟುಕೊಂಡು ಹೋರಾಟ ನಡೆಸಬೇಕು. ಆಗಲೇ ಹೋರಾಟಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಭಾಷಾಂತರದಿಂದ ಭಾಷೆ ಬೆಳೆಯಲು ಸಾಧ್ಯ. ಬೇರೆ ಭಾಷೆಗಳ ಉತ್ತಮವಾದ ಅನೇಕ ಕೃತಿಗಳನ್ನು ಭಾಷಾಂತರ ಮಾಡುವ ಅವಶ್ಯಕತೆ ಇಂದು ಒದಗಿ ಬಂದಿದೆ~ ಎಂದು ನುಡಿದರು.</p>.<p>ಬಹುಮಾನ ಅಥವಾ ಯಾವುದೇ ಪ್ರಶಸ್ತಿಗಳಿಗಾಗಿ ಸರ್ಕಾರವು ಲಾಬಿ ನಡೆಸುತ್ತದೆ. ಆದರೆ, ಶಾ.ಮಂ.ಕೃಷ್ಣರಾಯರು ಯಾವುದೇ ಲಾಬಿ ನಡೆಸಿಲ್ಲ. ಅದಕ್ಕೆ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿಲ್ಲ~ ಎಂದು ಹೇಳಿದರು.</p>.<p>ರಂಗ ಕಲಾವಿದ ಡಾ.ಮಾ.ಹಿರಣ್ಣಯ್ಯ ಮಾತನಾಡಿ, `ಮಾತೃ ಭಾಷೆ ಬೇರೆಯಿರುವ ಕವಿಗಳೂ ಸಹ ಕನ್ನಡಕ್ಕೆ ಉತ್ತಮವಾದ ಕೊಡುಗೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಲೆಳೆಯುವ ಜನರು ಬಹಳಷ್ಟಿದ್ದಾರೆ. ಅವರಿಗೆ ಅಂಜದೆ, ಮುನ್ನಡೆದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ~ ಎಂದು ಹೇಳಿದರು.</p>.<p>`ಜಾತಿ ತಕ್ಕಡಿಯಲ್ಲಿ ಪ್ರಶಸ್ತಿಯನ್ನು ತೂಗಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ ಲೋಕಾಯುಕ್ತ ನೇಮಕವಾಗಿಲ್ಲ ಇದು ನಾಚಿಕೆಗೇಡಿನ ಸಂಗತಿ~ ಎಂದರು.</p>.<p>ಕಾರ್ಯಕ್ರಮದಲ್ಲಿ ಶಾ.ಮಂ.ಕೃಷ್ಣರಾಯ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಸರೋಜಿನಿ ಮಹಿಷಿ ವರದಿಯನ್ನು ಪರಿಷ್ಕರಿಸಿ ಅನುಷ್ಠಾನಕ್ಕೆ ತರಬೇಕಾದ ಅಗತ್ಯವಿದೆ~ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು ಹೇಳಿದರು.</p>.<p>ಶಾ.ಮಂ.ಕೃಷ್ಣರಾಯರ ಅಭಿನಂದನಾ ಸಮಿತಿಯು ಬಸವನಗುಡಿಯ ನ್ಯಾಷನಲ್ ಕಾಲೇಜು ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಅಭಿನಂದನಾ ಗ್ರಂಥ `ಪದಪಥಿಕ~ ಬಿಡುಗಡೆ ಹಾಗೂ ಗೌರವಾರ್ಪಣೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>`ಸರೋಜಿನಿ ಮಹಿಷಿ ವರದಿ ಸಲ್ಲಿಸಿದ ಸಂದರ್ಭಕ್ಕೂ ಇಂದಿನ ಸಂದರ್ಭಕ್ಕೂ ತುಂಬಾ ವ್ಯತ್ಯಾಸವಿದೆ. ಆ ವರದಿಯನ್ನು ಹಾಗೆಯೇ ಅನುಷ್ಠಾನಕ್ಕೆ ತರುವುದರಿಂದ ಶೇ 20 ರಷ್ಟು ಮಾತ್ರ ಅನ್ವಯವಾಗುತ್ತದೆ. ಆದ್ದರಿಂದ ಪರಿಷ್ಕರಿಸಬೇಕಾದ ಅವಶ್ಯಕತೆಯಿದೆ~ ಎಂದರು.</p>.<p>`ಕೇಂದ್ರ ಸರ್ಕಾರ ರಾಜ್ಯಕ್ಕೆ ಆದ್ಯತೆ ನೀಡಬೇಕು. ಉದ್ಯೋಗದ ಎಲ್ಲ ಇಲಾಖೆಗಳಲ್ಲಿ ಸ್ಥಳೀಯರಿಗೆ ಮೊದಲು ಆದ್ಯತೆ ನೀಡಬೇಕು. ಶಿಕ್ಷಣ ರಾಷ್ಟ್ರೀಕೃತವಾಗಬೇಕು. ಖಾಸಗಿ ಸಂಸ್ಥೆಗಳಿಗೆ ಅವಕಾಶ ನೀಡಬಾರದು. ಆಗಲೇ ಶಿಕ್ಷಣ ಎಲ್ಲರಿಗೆ ದೊರೆಯಲು ಸಾಧ್ಯ~ ಎಂದು ಒತ್ತಾಯಿಸಿದರು.</p>.<p>`ಒಂದರಿಂದ ಐದನೇ ತರಗತಿಯವರೆಗೆ ಮಾತೃ ಭಾಷೆ ಕಡ್ಡಾಯವಾಗಿರಬೇಕು. ನಂತರ ಇಂಗ್ಲಿಷ್ ಭಾಷೆ. ಹೀಗಾದರೆ, ರಾಜ್ಯ-ರಾಜ್ಯಗಳ ನಡುವೆ ಭಾಷೆಗಳ ಕಂದಕ ನಿರ್ಮಾಣವಾಗುವುದಿಲ್ಲ~ ಎಂದು ಹೇಳಿದರು.</p>.<p>`ಶಾ.ಮಂ.ಕೃಷ್ಣರಾಯರು ಭಾಷಾ ಭಾವೈಕ್ಯ ಸಮಾವೇಶದಿಂದ ಭಾಷೆಗಳ ನಡುವಿನ ಅಂತರವನ್ನು ಕಡಿಮೆ ಮಾಡಲು ಶ್ರಮಿಸಿದರು. ನಮ್ಮ ಮಾತೃಭಾಷೆಗೆ ನಾವು ಗೌರವ ಸಲ್ಲಿಸಬೇಕು. ಅದರ ಜತೆಗೆ ನಮ್ಮ ಬದುಕು ಮತ್ತು ಭವಿಷ್ಯಕ್ಕೆ ಅಡಿಪಾಯ ಹಾಕಿಕೊಟ್ಟಂತಹ ನಾವು ಈಗಿರುವ ಭಾಷೆಗೂ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯವಾಗಿದೆ~ ಎಂದರು.</p>.<p>ಹಿರಿಯ ಸಾಹಿತಿ ಡಾ.ದೇ.ಜವರೇಗೌಡ ಅವರು ಮಾತನಾಡಿ, `ಸ್ನಾತಕೋತ್ತರ ಪದವಿ ಪಡೆದು ಬರುವ ಇಂದಿನ ವಿದ್ಯಾರ್ಥಿಗಳು ವಿಧಾನ ಸೌಧದ ಮುಂದೆ ಪ್ರತಿಭಟನೆ ನಡೆಸಬೇಕು. ಆಗಲೇ ವಿಧಾನ ಸೌಧದಲ್ಲಿರುವ ರಾಜಕಾರಣಿಗಳು ಜನತೆಯ ಹಿತದ ಬಗ್ಗೆ ಯೋಚಿಸಲು ಸಾಧ್ಯ~ ಎಂದರು.</p>.<p>`ಕನ್ನಡ ಚಳವಳಿಗಾರರು ಯಾವುದೇ ಒಂದು ನಿರ್ದಿಷ್ಟ ವಿಷಯವನ್ನು ಇಟ್ಟುಕೊಂಡು ಹೋರಾಟ ನಡೆಸಬೇಕು. ಆಗಲೇ ಹೋರಾಟಗಳು ಯಶಸ್ವಿಯಾಗಲು ಸಾಧ್ಯವಾಗುತ್ತದೆ. ಭಾಷಾಂತರದಿಂದ ಭಾಷೆ ಬೆಳೆಯಲು ಸಾಧ್ಯ. ಬೇರೆ ಭಾಷೆಗಳ ಉತ್ತಮವಾದ ಅನೇಕ ಕೃತಿಗಳನ್ನು ಭಾಷಾಂತರ ಮಾಡುವ ಅವಶ್ಯಕತೆ ಇಂದು ಒದಗಿ ಬಂದಿದೆ~ ಎಂದು ನುಡಿದರು.</p>.<p>ಬಹುಮಾನ ಅಥವಾ ಯಾವುದೇ ಪ್ರಶಸ್ತಿಗಳಿಗಾಗಿ ಸರ್ಕಾರವು ಲಾಬಿ ನಡೆಸುತ್ತದೆ. ಆದರೆ, ಶಾ.ಮಂ.ಕೃಷ್ಣರಾಯರು ಯಾವುದೇ ಲಾಬಿ ನಡೆಸಿಲ್ಲ. ಅದಕ್ಕೆ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿಲ್ಲ~ ಎಂದು ಹೇಳಿದರು.</p>.<p>ರಂಗ ಕಲಾವಿದ ಡಾ.ಮಾ.ಹಿರಣ್ಣಯ್ಯ ಮಾತನಾಡಿ, `ಮಾತೃ ಭಾಷೆ ಬೇರೆಯಿರುವ ಕವಿಗಳೂ ಸಹ ಕನ್ನಡಕ್ಕೆ ಉತ್ತಮವಾದ ಕೊಡುಗೆಗಳನ್ನು ನೀಡಿದ್ದಾರೆ. ಕರ್ನಾಟಕದಲ್ಲಿ ಕಾಲೆಳೆಯುವ ಜನರು ಬಹಳಷ್ಟಿದ್ದಾರೆ. ಅವರಿಗೆ ಅಂಜದೆ, ಮುನ್ನಡೆದರೆ ಮಾತ್ರ ಏನನ್ನಾದರೂ ಸಾಧಿಸಲು ಸಾಧ್ಯ~ ಎಂದು ಹೇಳಿದರು.</p>.<p>`ಜಾತಿ ತಕ್ಕಡಿಯಲ್ಲಿ ಪ್ರಶಸ್ತಿಯನ್ನು ತೂಗಲಾಗುತ್ತಿದೆ. ಇದುವರೆಗೂ ರಾಜ್ಯದಲ್ಲಿ ಲೋಕಾಯುಕ್ತ ನೇಮಕವಾಗಿಲ್ಲ ಇದು ನಾಚಿಕೆಗೇಡಿನ ಸಂಗತಿ~ ಎಂದರು.</p>.<p>ಕಾರ್ಯಕ್ರಮದಲ್ಲಿ ಶಾ.ಮಂ.ಕೃಷ್ಣರಾಯ ದಂಪತಿಯನ್ನು ಸನ್ಮಾನಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ.ಎಂ.ಎಚ್. ಕೃಷ್ಣಯ್ಯ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>