<p><br /> ‘ಸರ್ಕಾರಿ ಆಸ್ಪತ್ರೆ ನಿರ್ವಹಣೆಗೆ ರಾಜ್ಯದ ಯಾವುದೇ ಮಠ-ಮಂದಿರಗಳು ಮುಂದೆ ಬಂದರೆ, ಅವುಗಳಿಗೆ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಬಿ.ಎಸ್. ಯಡಿಯೂರಪ್ಪನವರು ತಿಳಿಸಿದರು. (ಪ್ರ.ವಾ. ಫೆ. 7) ‘ಸರ್ಕಾರ ಎಷ್ಟೇ ಹಣ ನೀಡಿದರೂ, ಬಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿಲ್ಲ’ ಎಂಬ ಮಾತಿನಲ್ಲಿ ಭ್ರಷ್ಟರನ್ನು ಶಿಕ್ಷಿಸಿ, ಆಡಳಿತವನ್ನು ಸ್ವಚ್ಛ ಮಾಡುವಲ್ಲಿ, ಸರ್ಕಾರ ಸೋತಿದೆ ಎಂಬುದನ್ನು ಪರೋಕ್ಷವಾಗಿ ಇಲ್ಲಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ.<br /> <br /> ಸಂಕಟ ಪ್ರಸಂಗಗಳು ಎದುರಾದಾಗ, ಗುಡಿ-ಗುಂಡಾರಗಳನ್ನು ಸುತ್ತುವುದು, ಮಠಾಧೀಶರ ಕಾಲಿಗಳಿಗೆರಗಿ, ಆಶೀರ್ವಾದ ಪಡೆಯುವುದನ್ನು ಜನತೆ ಕಂಡಿದ್ದಾರೆ. ಇದು ಯಡಿಯೂರಪ್ಪನವರ ಆತ್ಮವಿಶ್ವಾಸದ ಕೊರತೆಯನ್ನು ಪ್ರದರ್ಶಿಸುತ್ತದೆ. ಕೋಟಿಗಟ್ಟಲೆ ಹಣವನ್ನು, ಆಸ್ಪತ್ರೆ ನಿರ್ವಹಣೆಗೆ ಕೊಟ್ಟರೆ, ಯಾವ ಮಠಾಧೀಶರು ಬಿಟ್ಟಾರು?!.<br /> <br /> ಕಾವೀಧಾರಿಗಳ ನೇತೃತ್ವದ ಉಪ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತದೆ!. ‘ರಾಜ್ಯವು ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ’ ಎಂಬ ವಿರೋಧ ಪಕ್ಷಗಳ ತೆಗಳಿಕೆಗೆ ಈಡಾಗಿರುವ, ಯಡಿಯೂರಪ್ಪನವರು, ತಮ್ಮ ಬೆಂಬಲಕ್ಕೆ ಬೀದಿಗಿಳಿದು ಹೋರಾಟ ಮಾಡುವ ಕಾವೀಧಾರಿಗಳ ಗುಂಪನ್ನು ಸಬಲೀಕರಿಸುವ ಹುನ್ನಾರ ನಡೆಸಿದ್ದಾರೆಂಬುದನ್ನು ತಿಳಿದುಕೊಳ್ಳಲಾರದಷ್ಟು ದಡ್ಡರಲ್ಲ ರಾಜ್ಯದ ಜನತೆ. ಇದನ್ನು ಯಡಿಯೂರಪ್ಪನವರು ಸೂಕ್ಷ್ಮವಾಗಿ ಆಲೋಚಿಸಿ, ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ‘ಸರ್ಕಾರಿ ಆಸ್ಪತ್ರೆ ನಿರ್ವಹಣೆಗೆ ರಾಜ್ಯದ ಯಾವುದೇ ಮಠ-ಮಂದಿರಗಳು ಮುಂದೆ ಬಂದರೆ, ಅವುಗಳಿಗೆ ನೆರವು ನೀಡಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ಬಿ.ಎಸ್. ಯಡಿಯೂರಪ್ಪನವರು ತಿಳಿಸಿದರು. (ಪ್ರ.ವಾ. ಫೆ. 7) ‘ಸರ್ಕಾರ ಎಷ್ಟೇ ಹಣ ನೀಡಿದರೂ, ಬಡವರಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿಲ್ಲ’ ಎಂಬ ಮಾತಿನಲ್ಲಿ ಭ್ರಷ್ಟರನ್ನು ಶಿಕ್ಷಿಸಿ, ಆಡಳಿತವನ್ನು ಸ್ವಚ್ಛ ಮಾಡುವಲ್ಲಿ, ಸರ್ಕಾರ ಸೋತಿದೆ ಎಂಬುದನ್ನು ಪರೋಕ್ಷವಾಗಿ ಇಲ್ಲಿ ಮುಖ್ಯಮಂತ್ರಿಗಳು ಒಪ್ಪಿಕೊಂಡಿದ್ದಾರೆ.<br /> <br /> ಸಂಕಟ ಪ್ರಸಂಗಗಳು ಎದುರಾದಾಗ, ಗುಡಿ-ಗುಂಡಾರಗಳನ್ನು ಸುತ್ತುವುದು, ಮಠಾಧೀಶರ ಕಾಲಿಗಳಿಗೆರಗಿ, ಆಶೀರ್ವಾದ ಪಡೆಯುವುದನ್ನು ಜನತೆ ಕಂಡಿದ್ದಾರೆ. ಇದು ಯಡಿಯೂರಪ್ಪನವರ ಆತ್ಮವಿಶ್ವಾಸದ ಕೊರತೆಯನ್ನು ಪ್ರದರ್ಶಿಸುತ್ತದೆ. ಕೋಟಿಗಟ್ಟಲೆ ಹಣವನ್ನು, ಆಸ್ಪತ್ರೆ ನಿರ್ವಹಣೆಗೆ ಕೊಟ್ಟರೆ, ಯಾವ ಮಠಾಧೀಶರು ಬಿಟ್ಟಾರು?!.<br /> <br /> ಕಾವೀಧಾರಿಗಳ ನೇತೃತ್ವದ ಉಪ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬರುತ್ತದೆ!. ‘ರಾಜ್ಯವು ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ’ ಎಂಬ ವಿರೋಧ ಪಕ್ಷಗಳ ತೆಗಳಿಕೆಗೆ ಈಡಾಗಿರುವ, ಯಡಿಯೂರಪ್ಪನವರು, ತಮ್ಮ ಬೆಂಬಲಕ್ಕೆ ಬೀದಿಗಿಳಿದು ಹೋರಾಟ ಮಾಡುವ ಕಾವೀಧಾರಿಗಳ ಗುಂಪನ್ನು ಸಬಲೀಕರಿಸುವ ಹುನ್ನಾರ ನಡೆಸಿದ್ದಾರೆಂಬುದನ್ನು ತಿಳಿದುಕೊಳ್ಳಲಾರದಷ್ಟು ದಡ್ಡರಲ್ಲ ರಾಜ್ಯದ ಜನತೆ. ಇದನ್ನು ಯಡಿಯೂರಪ್ಪನವರು ಸೂಕ್ಷ್ಮವಾಗಿ ಆಲೋಚಿಸಿ, ತೀರ್ಮಾನ ತೆಗೆದುಕೊಳ್ಳುವುದು ಸೂಕ್ತ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>