<p>ಎಚ್.ಡಿ.ಕೋಟೆ: ಕೊರತೆ ಇರುವ ಕಡೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸಿದ್ಧವಿದೆ. ಆದರೆ, ಖಾಸಗಿ ಆಸ್ಪತ್ರೆಗಳ ಭರಾಟೆಯಿಂದಾಗಿ ವೈದ್ಯರು ಸರ್ಕಾರಿ ಕೆಲಸಕ್ಕೆ ಬರುತ್ತ್ಲ್ಲಿಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಲೇಗೌಡ ಬೇಸರ ವ್ಯಕ್ತಪಡಿಸಿದರು.<br /> <br /> ಇಲ್ಲಿನ ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಮೈಸೂರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ಅವರನ್ನು ನೇಮಕ ಮಾಡಿಕೊಳ್ಳಲು ಹೊಸ ನೀತಿ ರೂಪಿಸುವ ಅಗತ್ಯವಿದೆ. ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಸೇರಿದಂತೆ ಇನ್ನಿತರ ಹುದ್ದೆಗಳು ಖಾಲಿ ಇದ್ದು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.<br /> <br /> ತಾಲ್ಲೂಕಿನ ಸರಗೂರಿನಲ್ಲಿ ರೂ. 3.20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಇಷ್ಟರಲ್ಲಿಯೇ ನಿರ್ಮಾಣವಾಗಲಿದೆ. ಡಿ.ಬಿ. ಕುಪ್ಪೆ ವ್ಯಾಪ್ತಿಯ ಸೇವೆಗಾಗಿ ತುರ್ತು ವಾಹನವೊಂದನ್ನು ಸಂಸದ ಆರ್.ಧ್ರುವನಾರಾಯಣ ಕೊಡಿಸಲಿದ್ದಾರೆ ಎಂದು ತಿಳಿಸಿದರು.<br /> <br /> ಜನರ ದನಿ: ಇದಕ್ಕೂ ಮುನ್ನ ಸುಮಾರು 19 ಜನ ಕರೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಂಡರು.<br /> <br /> `ನಮ್ಮೂರಿನ ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ವಸತಿಗೃಹ ಇದ್ದರೂ ಇಲ್ಲಿ ವೈದ್ಯರು ವಾಸಿಸುತ್ತಿಲ್ಲ~ ಎಂದು ಗಂಡತ್ತೂರು ಗ್ರಾಮದ ಮಂಜು ದೂರಿದರು.<br /> <br /> `ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಇನ್ನಿತರ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಬಡವರೂ ಖಾಸಗಿ ಆಸ್ಪತ್ರೆಗೆ ಹಣ ಸುರಿಯಬೇಕಾಗಿದೆ~ ಎಂದು ಕೆ.ಯಡತೊರೆ ಮಹೇಶ್ ಅಳಲು ತೋಡಿಕೊಂಡರು.<br /> <br /> `ರಾತ್ರಿ ಹೆರಿಗೆಗಾಗಿ ಮಹಿಳೆಯರನ್ನು ಆಸ್ಪತ್ರೆಗೆ ಕರೆತರುವ ಆಶಾ ಕಾರ್ಯಕರ್ತೆಯರಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ಕಲ್ಪಿಸಬೇಕು~ ಎಂದು ಹ್ಯಾಂಡ್ಪೋಸ್ಟ್ನ ಶೈಲಾ ಸುಧಾಮಣಿ ಮನವಿ ಮಾಡಿದರು.<br /> <br /> `ಈಚೆಗೆ ಸರಗೂರಿನಲ್ಲಿ ಆಸ್ಪತ್ರೆಯ ಮುಂಭಾಗದಲ್ಲೇ ಹೆರಿಗೆಯಾದ ಸುದ್ದಿ ಕಳವಳಕಾರಿಯಾದುದು. ವೈದ್ಯರ ನಿರ್ಲಕ್ಷ್ಯಕ್ಕೆ ಇದು ಕೈಗನ್ನಡಿ~ ಎಂದು ಮಹೇಶ್ ಮತ್ತು ಎಚ್.ಕೆ. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.<br /> <br /> ಗುರುಸ್ವಾಮಿ, ಮೇಟಿಕುಪ್ಪೆ, ಇಟ್ನರಾಜಣ್ಣ, ಗಾಯತ್ರಿ, ಮಟಕೆರೆ, ಈಶ್ವರ್,ಕೆ.ಯಡತೊರೆ, ಪುಟ್ಟಯ್ಯ, ಹೆಬ್ಬಲಗುಪ್ಪೆ, ರಾಜು, ಕೆ.ಜಿ.ಹಳ್ಳಿ, ರವಿ, ತುಂಬಸೋಗೆ, ಶಿವಕುಮಾರ್, ನಂಜೀಪುರ ಮತ್ತಿತರರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಉತ್ತರ ನೀಡಿದರು.<br /> <br /> ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಎಲ್.ರವಿ, ಮಂಜುಕೋಟೆ, ಕನ್ನಡ ಪ್ರಮೋದ್, ಅಂಕಪ್ಪ, ಎಂ.ಎಲ್.ರವಿಕುಮಾರ್, ಶ್ರೀನಿಧಿ, ರಘು, ಬಸವರಾಜು, ಸತೀಶ್ ಆರಾಧ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಎಚ್.ಡಿ.ಕೋಟೆ: ಕೊರತೆ ಇರುವ ಕಡೆ ವೈದ್ಯರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಸಿದ್ಧವಿದೆ. ಆದರೆ, ಖಾಸಗಿ ಆಸ್ಪತ್ರೆಗಳ ಭರಾಟೆಯಿಂದಾಗಿ ವೈದ್ಯರು ಸರ್ಕಾರಿ ಕೆಲಸಕ್ಕೆ ಬರುತ್ತ್ಲ್ಲಿಲ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಕರ್ತವ್ಯ ನಿರ್ವಹಿಸಲು ವೈದ್ಯರು ಹಿಂದೇಟು ಹಾಕುತ್ತಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಲೇಗೌಡ ಬೇಸರ ವ್ಯಕ್ತಪಡಿಸಿದರು.<br /> <br /> ಇಲ್ಲಿನ ತಾಲ್ಲೂಕು ಪತ್ರಕರ್ತರ ಸಂಘದ ಕಚೇರಿಯಲ್ಲಿ ಬುಧವಾರ ನಡೆದ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ಮೈಸೂರು ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದ್ದು, ಅವರನ್ನು ನೇಮಕ ಮಾಡಿಕೊಳ್ಳಲು ಹೊಸ ನೀತಿ ರೂಪಿಸುವ ಅಗತ್ಯವಿದೆ. ಪಟ್ಟಣದ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು, ದಾದಿಯರು ಸೇರಿದಂತೆ ಇನ್ನಿತರ ಹುದ್ದೆಗಳು ಖಾಲಿ ಇದ್ದು ಶೀಘ್ರದಲ್ಲಿಯೇ ನೇಮಕ ಮಾಡಲಾಗುವುದು ಎಂದು ಭರವಸೆ ನೀಡಿದರು.<br /> <br /> ತಾಲ್ಲೂಕಿನ ಸರಗೂರಿನಲ್ಲಿ ರೂ. 3.20 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಸಮುದಾಯ ಆರೋಗ್ಯ ಕೇಂದ್ರ ಇಷ್ಟರಲ್ಲಿಯೇ ನಿರ್ಮಾಣವಾಗಲಿದೆ. ಡಿ.ಬಿ. ಕುಪ್ಪೆ ವ್ಯಾಪ್ತಿಯ ಸೇವೆಗಾಗಿ ತುರ್ತು ವಾಹನವೊಂದನ್ನು ಸಂಸದ ಆರ್.ಧ್ರುವನಾರಾಯಣ ಕೊಡಿಸಲಿದ್ದಾರೆ ಎಂದು ತಿಳಿಸಿದರು.<br /> <br /> ಜನರ ದನಿ: ಇದಕ್ಕೂ ಮುನ್ನ ಸುಮಾರು 19 ಜನ ಕರೆ ಮಾಡಿ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಮ್ಮ ಸಮಸ್ಯೆ ಹೇಳಿಕೊಂಡರು.<br /> <br /> `ನಮ್ಮೂರಿನ ಆಸ್ಪತ್ರೆಯಲ್ಲಿ ಕುಡಿಯಲು ನೀರಿಲ್ಲ, ವಸತಿಗೃಹ ಇದ್ದರೂ ಇಲ್ಲಿ ವೈದ್ಯರು ವಾಸಿಸುತ್ತಿಲ್ಲ~ ಎಂದು ಗಂಡತ್ತೂರು ಗ್ರಾಮದ ಮಂಜು ದೂರಿದರು.<br /> <br /> `ಎಚ್.ಡಿ.ಕೋಟೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಸೇರಿದಂತೆ ಇನ್ನಿತರ ಕೊರತೆಯಿಂದಾಗಿ ರೋಗಿಗಳಿಗೆ ತೊಂದರೆಯಾಗುತ್ತಿದೆ. ಇದರಿಂದ ಬಡವರೂ ಖಾಸಗಿ ಆಸ್ಪತ್ರೆಗೆ ಹಣ ಸುರಿಯಬೇಕಾಗಿದೆ~ ಎಂದು ಕೆ.ಯಡತೊರೆ ಮಹೇಶ್ ಅಳಲು ತೋಡಿಕೊಂಡರು.<br /> <br /> `ರಾತ್ರಿ ಹೆರಿಗೆಗಾಗಿ ಮಹಿಳೆಯರನ್ನು ಆಸ್ಪತ್ರೆಗೆ ಕರೆತರುವ ಆಶಾ ಕಾರ್ಯಕರ್ತೆಯರಿಗೆ ಉಳಿದುಕೊಳ್ಳಲು ಕೊಠಡಿಗಳನ್ನು ಕಲ್ಪಿಸಬೇಕು~ ಎಂದು ಹ್ಯಾಂಡ್ಪೋಸ್ಟ್ನ ಶೈಲಾ ಸುಧಾಮಣಿ ಮನವಿ ಮಾಡಿದರು.<br /> <br /> `ಈಚೆಗೆ ಸರಗೂರಿನಲ್ಲಿ ಆಸ್ಪತ್ರೆಯ ಮುಂಭಾಗದಲ್ಲೇ ಹೆರಿಗೆಯಾದ ಸುದ್ದಿ ಕಳವಳಕಾರಿಯಾದುದು. ವೈದ್ಯರ ನಿರ್ಲಕ್ಷ್ಯಕ್ಕೆ ಇದು ಕೈಗನ್ನಡಿ~ ಎಂದು ಮಹೇಶ್ ಮತ್ತು ಎಚ್.ಕೆ. ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.<br /> <br /> ಗುರುಸ್ವಾಮಿ, ಮೇಟಿಕುಪ್ಪೆ, ಇಟ್ನರಾಜಣ್ಣ, ಗಾಯತ್ರಿ, ಮಟಕೆರೆ, ಈಶ್ವರ್,ಕೆ.ಯಡತೊರೆ, ಪುಟ್ಟಯ್ಯ, ಹೆಬ್ಬಲಗುಪ್ಪೆ, ರಾಜು, ಕೆ.ಜಿ.ಹಳ್ಳಿ, ರವಿ, ತುಂಬಸೋಗೆ, ಶಿವಕುಮಾರ್, ನಂಜೀಪುರ ಮತ್ತಿತರರು ಕರೆ ಮಾಡಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಇದಕ್ಕೆ ಜಿಲ್ಲಾ ಆರೋಗ್ಯಾಧಿಕಾರಿ ಉತ್ತರ ನೀಡಿದರು.<br /> <br /> ಈ ವೇಳೆ ತಾಲ್ಲೂಕು ಆರೋಗ್ಯಾಧಿಕಾರಿ ಎಲ್.ರವಿ, ಮಂಜುಕೋಟೆ, ಕನ್ನಡ ಪ್ರಮೋದ್, ಅಂಕಪ್ಪ, ಎಂ.ಎಲ್.ರವಿಕುಮಾರ್, ಶ್ರೀನಿಧಿ, ರಘು, ಬಸವರಾಜು, ಸತೀಶ್ ಆರಾಧ್ಯ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>