<p>ಚಾಮರಾಜನಗರ: ಗೋಮಾಳ, ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ. ಸುಪ್ರೀಂ ಕೋರ್ಟ್ ಕೂಡ ಇವುಗಳ ಒತ್ತುವರಿ ತಡೆಗಟ್ಟಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಈ ನಡುವೆಯೂ ನಗರಸಭೆ ವ್ಯಾಪ್ತಿ ಸಾರ್ವಜನಿಕ ಸ್ವತ್ತುಗಳ ಒತ್ತುವರಿಗೆ ಕಡಿವಾಣ ಹಾಕಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿಲ್ಲ.<br /> <br /> ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಕಂಚಗಾರನಕಟ್ಟೆ ಇದಕ್ಕೆ ಸೂಕ್ತ ಉದಾಹರಣೆ. ಕರಿವರದರಾಜನಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಈ ಕಟ್ಟೆ ಸಿಗುತ್ತದೆ. ಸುಮಾರು ಒಂದು ಕಾಲು ಎಕರೆಗೂ ಹೆಚ್ಚು ವಿಸ್ತೀರ್ಣವಿದೆ. ಈ ಹಿಂದೆ ಸೋಮವಾರಪೇಟೆ, ಮಲ್ಲಯ್ಯಪುರ, ಗಾಳಿಪುರದ ಜಾನುವಾರುಗಳಿಗೆ ಕುಡಿಯುವ ನೀರಿಗೆ ಈ ಕಟ್ಟೆ ಆಸರೆಯಾಗಿತ್ತು. ಹಲವು ದಶಕದ ಹಿಂದೆ ಕಂಚಗಾರನಕಟ್ಟೆಯಿಂದಲೇ ಕುಡಿಯುವ ನೀರು ಸಂಗ್ರಹಿಸಲಾಗುತ್ತಿತ್ತು ಎಂದು ಸೋಮವಾರಪೇಟೆಯ ಜನರು ಇಂದಿಗೂ ಸ್ಮರಿಸುತ್ತಾರೆ.<br /> <br /> ಆದರೆ, ಈ ಸಾರ್ವಜನಿಕ ಸ್ವತ್ತಿನ ಮೇಲೆ ಕೆಲವು ಪಟ್ಟಭದ್ರರ ಕಣ್ಣುಬಿದ್ದಿದೆ. ಕರಿಕಲ್ಲುಗಳನ್ನು ಗ್ರಾನೈಟ್ ಆಗಿ ಪರಿವರ್ತಿಸಿದ ನಂತರ ಉಳಿಯುವ ಕಲ್ಲಿನ ಚೂರುಗಳನ್ನು ಹಾಕಲು ಈ ಕಟ್ಟೆಯ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ನಗರಸಭೆ ಆಡಳಿತ ಮಾತ್ರ ಕ್ರಮಕೈಗೊಂಡಿಲ್ಲ ಎನ್ನುವುದು ಈ ಭಾಗದ ಜನರ ಆರೋಪ.<br /> <br /> ಈ ಕಟ್ಟೆಯ ಪುನರುಜ್ಜೀವನಕ್ಕೂ ನಗರ ಸ್ಥಳೀಯ ಆಡಳಿತ ಮುಂದಾಗಿಲ್ಲ. ಕಟ್ಟೆಯಲ್ಲಿ ಸಂಗ್ರಹಗೊಂಡಿರುವ ಹೂಳು ತೆಗೆಸಬೇಕು. ಮಳೆನೀರು ಸಂಗ್ರಹಗೊಂಡರೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂಬ ಜನರ ಒತ್ತಾಯಕ್ಕೆ ಇಂದಿಗೂ ಬೆಲೆ ಸಿಕ್ಕಿಲ್ಲ.<br /> ನಗರಸಭೆಯ ವಾರ್ಡ್ 28 ಮತ್ತು 29ರ ವ್ಯಾಪ್ತಿಯಲ್ಲಿ ಸುಬೇದಾರ್ ಕಟ್ಟೆ ಇದೆ. 27ನೇ ವಾರ್ಡ್ನಲ್ಲಿ ತಿಬ್ಬಳ್ಳಿ ಕಟ್ಟೆ ಇದೆ. ಇವುಗಳನ್ನು ಅಭಿವೃದ್ಧಪಡಿಸಿದರೆ ಅಂತರ್ಜಲಮಟ್ಟ ಹೆಚ್ಚಲಿದೆ. ಬೇಸಿಗೆ ವೇಳೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎನ್ನುವುದು ಈ ಭಾಗದ<br /> ಜನರ ಒತ್ತಾಯ.<br /> <br /> ಆದರೆ, ಈ ಎರಡು ಕಟ್ಟೆಗಳ ಅಭಿವೃದ್ಧಿಗೆ ನಗರಸಭೆಯಿಂದ ಈ ಹಿಂದೆ ರೂ 1 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದಿಂದ ಅನುದಾನ ಮಾತ್ರ ಲಭಿಸಲಿಲ್ಲ. ಹೀಗಾಗಿ, ಈ ಕಟ್ಟೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ.<br /> <br /> `ಕೆರೆ-ಕಟ್ಟೆ ಅಭಿವೃದ್ಧಿಪಡಿಸುವುದು ಸರ್ಕಾರದ ಹೊಣೆ. ಜತೆಗೆ, ನಗರ ಸ್ಥಳೀಯ ಆಡಳಿತ ಕೂಡ ಇವುಗಳ ಸಂರಕ್ಷಣೆಗೆ ಮುಂದಾಗಬೇಕು. ಕಂಚಗಾರನಕಟ್ಟೆಯು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಚೂರಾದ ಕರಿಕಲ್ಲುಗಳನ್ನು ಕಟ್ಟೆಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿ ತೆರವುಗೊಳಿಸಬೇಕು. ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸುತ್ತಾರೆ ಸೋಮವಾರಪೇಟೆಯ ಎಸ್. ಮಹದೇವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಚಾಮರಾಜನಗರ: ಗೋಮಾಳ, ಕೆರೆ-ಕಟ್ಟೆಗಳನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಹೊಣೆ. ಸುಪ್ರೀಂ ಕೋರ್ಟ್ ಕೂಡ ಇವುಗಳ ಒತ್ತುವರಿ ತಡೆಗಟ್ಟಬೇಕು ಎಂದು ಸ್ಪಷ್ಟವಾಗಿ ಸೂಚಿಸಿದೆ. ಈ ನಡುವೆಯೂ ನಗರಸಭೆ ವ್ಯಾಪ್ತಿ ಸಾರ್ವಜನಿಕ ಸ್ವತ್ತುಗಳ ಒತ್ತುವರಿಗೆ ಕಡಿವಾಣ ಹಾಕಲು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುಂದಾಗಿಲ್ಲ.<br /> <br /> ಜಿಲ್ಲಾ ಕೇಂದ್ರದ ಹೊರವಲಯದಲ್ಲಿರುವ ಕಂಚಗಾರನಕಟ್ಟೆ ಇದಕ್ಕೆ ಸೂಕ್ತ ಉದಾಹರಣೆ. ಕರಿವರದರಾಜನಬೆಟ್ಟಕ್ಕೆ ತೆರಳುವ ಮಾರ್ಗದಲ್ಲಿ ಈ ಕಟ್ಟೆ ಸಿಗುತ್ತದೆ. ಸುಮಾರು ಒಂದು ಕಾಲು ಎಕರೆಗೂ ಹೆಚ್ಚು ವಿಸ್ತೀರ್ಣವಿದೆ. ಈ ಹಿಂದೆ ಸೋಮವಾರಪೇಟೆ, ಮಲ್ಲಯ್ಯಪುರ, ಗಾಳಿಪುರದ ಜಾನುವಾರುಗಳಿಗೆ ಕುಡಿಯುವ ನೀರಿಗೆ ಈ ಕಟ್ಟೆ ಆಸರೆಯಾಗಿತ್ತು. ಹಲವು ದಶಕದ ಹಿಂದೆ ಕಂಚಗಾರನಕಟ್ಟೆಯಿಂದಲೇ ಕುಡಿಯುವ ನೀರು ಸಂಗ್ರಹಿಸಲಾಗುತ್ತಿತ್ತು ಎಂದು ಸೋಮವಾರಪೇಟೆಯ ಜನರು ಇಂದಿಗೂ ಸ್ಮರಿಸುತ್ತಾರೆ.<br /> <br /> ಆದರೆ, ಈ ಸಾರ್ವಜನಿಕ ಸ್ವತ್ತಿನ ಮೇಲೆ ಕೆಲವು ಪಟ್ಟಭದ್ರರ ಕಣ್ಣುಬಿದ್ದಿದೆ. ಕರಿಕಲ್ಲುಗಳನ್ನು ಗ್ರಾನೈಟ್ ಆಗಿ ಪರಿವರ್ತಿಸಿದ ನಂತರ ಉಳಿಯುವ ಕಲ್ಲಿನ ಚೂರುಗಳನ್ನು ಹಾಕಲು ಈ ಕಟ್ಟೆಯ ಪ್ರದೇಶವನ್ನು ಬಳಸಿಕೊಳ್ಳಲಾಗುತ್ತಿದೆ. ಆದರೆ, ನಗರಸಭೆ ಆಡಳಿತ ಮಾತ್ರ ಕ್ರಮಕೈಗೊಂಡಿಲ್ಲ ಎನ್ನುವುದು ಈ ಭಾಗದ ಜನರ ಆರೋಪ.<br /> <br /> ಈ ಕಟ್ಟೆಯ ಪುನರುಜ್ಜೀವನಕ್ಕೂ ನಗರ ಸ್ಥಳೀಯ ಆಡಳಿತ ಮುಂದಾಗಿಲ್ಲ. ಕಟ್ಟೆಯಲ್ಲಿ ಸಂಗ್ರಹಗೊಂಡಿರುವ ಹೂಳು ತೆಗೆಸಬೇಕು. ಮಳೆನೀರು ಸಂಗ್ರಹಗೊಂಡರೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎಂಬ ಜನರ ಒತ್ತಾಯಕ್ಕೆ ಇಂದಿಗೂ ಬೆಲೆ ಸಿಕ್ಕಿಲ್ಲ.<br /> ನಗರಸಭೆಯ ವಾರ್ಡ್ 28 ಮತ್ತು 29ರ ವ್ಯಾಪ್ತಿಯಲ್ಲಿ ಸುಬೇದಾರ್ ಕಟ್ಟೆ ಇದೆ. 27ನೇ ವಾರ್ಡ್ನಲ್ಲಿ ತಿಬ್ಬಳ್ಳಿ ಕಟ್ಟೆ ಇದೆ. ಇವುಗಳನ್ನು ಅಭಿವೃದ್ಧಪಡಿಸಿದರೆ ಅಂತರ್ಜಲಮಟ್ಟ ಹೆಚ್ಚಲಿದೆ. ಬೇಸಿಗೆ ವೇಳೆ ಜಾನುವಾರುಗಳಿಗೆ ಅನುಕೂಲವಾಗಲಿದೆ ಎನ್ನುವುದು ಈ ಭಾಗದ<br /> ಜನರ ಒತ್ತಾಯ.<br /> <br /> ಆದರೆ, ಈ ಎರಡು ಕಟ್ಟೆಗಳ ಅಭಿವೃದ್ಧಿಗೆ ನಗರಸಭೆಯಿಂದ ಈ ಹಿಂದೆ ರೂ 1 ಕೋಟಿ ಮೊತ್ತದ ಪ್ರಸ್ತಾವ ಸಿದ್ಧಪಡಿಸಲಾಗಿತ್ತು. ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಸ್ತಾವ ಮಂಡಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರದಿಂದ ಅನುದಾನ ಮಾತ್ರ ಲಭಿಸಲಿಲ್ಲ. ಹೀಗಾಗಿ, ಈ ಕಟ್ಟೆಗಳ ಅಭಿವೃದ್ಧಿ ನೆನೆಗುದಿಗೆ ಬಿದ್ದಿದೆ.<br /> <br /> `ಕೆರೆ-ಕಟ್ಟೆ ಅಭಿವೃದ್ಧಿಪಡಿಸುವುದು ಸರ್ಕಾರದ ಹೊಣೆ. ಜತೆಗೆ, ನಗರ ಸ್ಥಳೀಯ ಆಡಳಿತ ಕೂಡ ಇವುಗಳ ಸಂರಕ್ಷಣೆಗೆ ಮುಂದಾಗಬೇಕು. ಕಂಚಗಾರನಕಟ್ಟೆಯು ತ್ಯಾಜ್ಯ ವಿಲೇವಾರಿ ಮಾಡುವ ಸ್ಥಳವಾಗಿ ಮಾರ್ಪಾಡಾಗುತ್ತಿದೆ. ಚೂರಾದ ಕರಿಕಲ್ಲುಗಳನ್ನು ಕಟ್ಟೆಯಲ್ಲಿ ವಿಲೇವಾರಿ ಮಾಡಲಾಗುತ್ತಿದೆ. ಈ ಬಗ್ಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಪರಿಶೀಲನೆ ನಡೆಸಿ ತೆರವುಗೊಳಿಸಬೇಕು. ಕಟ್ಟೆಗಳನ್ನು ಅಭಿವೃದ್ಧಿಪಡಿಸಿ ಅಂತರ್ಜಲಮಟ್ಟ ಹೆಚ್ಚಿಸಲು ಅಗತ್ಯ ಕ್ರಮಕೈಗೊಳ್ಳಬೇಕು' ಎಂದು ಒತ್ತಾಯಿಸುತ್ತಾರೆ ಸೋಮವಾರಪೇಟೆಯ ಎಸ್. ಮಹದೇವ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>