<p><strong>ನವದೆಹಲಿ (ಪಿಟಿಐ):</strong> ರಾಜ್ಯಸಭೆಯಲ್ಲಿ ಮಂಗಳವಾರ ಲೋಕಪಾಲ ಮಸೂದೆಯ ಚರ್ಚೆ ನಿಗದಿಯಾಗಿದೆ. ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಹುತೇಕ ಸರ್ವಾನುಮತ ರೂಪುಗೊಂಡಿದೆ. ಆದರೆ ಯುಪಿಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷ (ಎಸ್ಪಿ) ಮಸೂದೆಯನ್ನು ವಿರೋಧಿಸುತ್ತಿದ್ದು, ಅಂಗೀಕಾರಕ್ಕೆ ತೊಡಕಾಗಿ ಕಾಡುವ ಸಾಧ್ಯತೆಯೇ ಹೆಚ್ಚಾಗಿದೆ. <br /> <br /> ಕೇಂದ್ರ ಸಚಿವ ಸಿಸ್ರಾಮ್ ಓಲಾ ನಿಧನದಿಂದಾಗಿ ಸೋಮವಾರ ಸದನವನ್ನು ಮುಂದೂಡಲಾಯಿತು. ಹೀಗಾಗಿ ಸೋಮವಾರ ಚರ್ಚೆಗೆ ಬರಬೇಕಿದ್ದ ಮಸೂದೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಾಗುವುದು.<br /> <br /> ಮಸೂದೆಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ತುರ್ತಾಗಿ ಕರೆದ ಸರ್ವಪಕ್ಷ ಸಭೆಯನ್ನು ಸಮಾಜವಾದಿ ಪಕ್ಷ ಬಹಿಷ್ಕರಿಸಿತ್ತು. ಲೋಕಪಾಲ ಮಸೂದೆಯಿಂದಾಗಿ ಇಡೀ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಭೀತಿ ಸಮಾಜವಾದಿ ಪಕ್ಷ ಮಸೂದೆಯನ್ನು ವಿರೋಧಿಸುವುದಕ್ಕೆ ಕಾರಣವಾಗಿದೆ.<br /> <br /> ಬಿಎಸ್ಪಿ ಮತ್ತು ಡಿಎಂಕೆ ಕೂಡ ಸಭೆಗೆ ಹಾಜರಾಗಿರಲಿಲ್ಲ. ಆದರೆ ಬಿಎಸ್ಪಿ ಮಸೂದೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.<br /> ಸಭೆಗೆ ಹಾಜರಾಗಿದ್ದ ಎಲ್ಲ ಪಕ್ಷಗಳೂ ಮಸೂದೆ ಅಂಗೀಕಾರದ ಬಗ್ಗೆ ಸಹಮತ ಹೊಂದಿದ್ದವು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದರು.<br /> <br /> ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವಂತೆ ಮತ್ತು ಸದನದಲ್ಲಿ ಗದ್ದಲ ಉಂಟು ಮಾಡದಂತೆ ಎಲ್ಲ ಪಕ್ಷಗಳೂ ಸಮಾಜವಾದಿ ಪಕ್ಷದ ಮನವೊಲಿಸಲಿವೆ ಎಂದೂ ಕಮಲ್ನಾಥ್ ತಿಳಿಸಿದ್ದಾರೆ.<br /> <br /> <a href="http://www.prajavani.net/article/%E0%B2%B6%E0%B2%BF%E0%B2%B7%E0%B3%8D%E0%B2%AF%E0%B2%A8%E0%B2%BF%E0%B2%97%E0%B3%86-%E0%B2%85%E0%B2%A3%E0%B3%8D%E0%B2%A3%E0%B2%BE-%E0%B2%A4%E0%B2%BF%E0%B2%B0%E0%B3%81%C2%AD%E0%B2%97%E0%B3%87%E0%B2%9F%E0%B3%81">*ಶಿಷ್ಯನಿಗೆ ಅಣ್ಣಾ ತಿರುಗೇಟು</a><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ (ಪಿಟಿಐ):</strong> ರಾಜ್ಯಸಭೆಯಲ್ಲಿ ಮಂಗಳವಾರ ಲೋಕಪಾಲ ಮಸೂದೆಯ ಚರ್ಚೆ ನಿಗದಿಯಾಗಿದೆ. ಸೋಮವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಬಹುತೇಕ ಸರ್ವಾನುಮತ ರೂಪುಗೊಂಡಿದೆ. ಆದರೆ ಯುಪಿಎಗೆ ಬಾಹ್ಯ ಬೆಂಬಲ ನೀಡುತ್ತಿರುವ ಸಮಾಜವಾದಿ ಪಕ್ಷ (ಎಸ್ಪಿ) ಮಸೂದೆಯನ್ನು ವಿರೋಧಿಸುತ್ತಿದ್ದು, ಅಂಗೀಕಾರಕ್ಕೆ ತೊಡಕಾಗಿ ಕಾಡುವ ಸಾಧ್ಯತೆಯೇ ಹೆಚ್ಚಾಗಿದೆ. <br /> <br /> ಕೇಂದ್ರ ಸಚಿವ ಸಿಸ್ರಾಮ್ ಓಲಾ ನಿಧನದಿಂದಾಗಿ ಸೋಮವಾರ ಸದನವನ್ನು ಮುಂದೂಡಲಾಯಿತು. ಹೀಗಾಗಿ ಸೋಮವಾರ ಚರ್ಚೆಗೆ ಬರಬೇಕಿದ್ದ ಮಸೂದೆಯನ್ನು ಮಂಗಳವಾರ ಕೈಗೆತ್ತಿಕೊಳ್ಳಲಾಗುವುದು.<br /> <br /> ಮಸೂದೆಗೆ ಸಂಬಂಧಿಸಿದ ಬಿಕ್ಕಟ್ಟು ಪರಿಹಾರಕ್ಕೆ ರಾಜ್ಯಸಭಾಧ್ಯಕ್ಷ ಹಮೀದ್ ಅನ್ಸಾರಿ ತುರ್ತಾಗಿ ಕರೆದ ಸರ್ವಪಕ್ಷ ಸಭೆಯನ್ನು ಸಮಾಜವಾದಿ ಪಕ್ಷ ಬಹಿಷ್ಕರಿಸಿತ್ತು. ಲೋಕಪಾಲ ಮಸೂದೆಯಿಂದಾಗಿ ಇಡೀ ನಿರ್ಧಾರ ಕೈಗೊಳ್ಳುವಿಕೆ ಪ್ರಕ್ರಿಯೆ ಸ್ಥಗಿತಗೊಳ್ಳಲಿದೆ ಎಂಬ ಭೀತಿ ಸಮಾಜವಾದಿ ಪಕ್ಷ ಮಸೂದೆಯನ್ನು ವಿರೋಧಿಸುವುದಕ್ಕೆ ಕಾರಣವಾಗಿದೆ.<br /> <br /> ಬಿಎಸ್ಪಿ ಮತ್ತು ಡಿಎಂಕೆ ಕೂಡ ಸಭೆಗೆ ಹಾಜರಾಗಿರಲಿಲ್ಲ. ಆದರೆ ಬಿಎಸ್ಪಿ ಮಸೂದೆಗೆ ಬಹಿರಂಗವಾಗಿ ಬೆಂಬಲ ಘೋಷಿಸಿದೆ.<br /> ಸಭೆಗೆ ಹಾಜರಾಗಿದ್ದ ಎಲ್ಲ ಪಕ್ಷಗಳೂ ಮಸೂದೆ ಅಂಗೀಕಾರದ ಬಗ್ಗೆ ಸಹಮತ ಹೊಂದಿದ್ದವು ಎಂದು ಸಭೆಯ ನಂತರ ಸಂಸದೀಯ ವ್ಯವಹಾರಗಳ ಸಚಿವ ಕಮಲ್ನಾಥ್ ಹೇಳಿದರು.<br /> <br /> ಮಸೂದೆ ಅಂಗೀಕಾರಕ್ಕೆ ಬೆಂಬಲ ನೀಡುವಂತೆ ಮತ್ತು ಸದನದಲ್ಲಿ ಗದ್ದಲ ಉಂಟು ಮಾಡದಂತೆ ಎಲ್ಲ ಪಕ್ಷಗಳೂ ಸಮಾಜವಾದಿ ಪಕ್ಷದ ಮನವೊಲಿಸಲಿವೆ ಎಂದೂ ಕಮಲ್ನಾಥ್ ತಿಳಿಸಿದ್ದಾರೆ.<br /> <br /> <a href="http://www.prajavani.net/article/%E0%B2%B6%E0%B2%BF%E0%B2%B7%E0%B3%8D%E0%B2%AF%E0%B2%A8%E0%B2%BF%E0%B2%97%E0%B3%86-%E0%B2%85%E0%B2%A3%E0%B3%8D%E0%B2%A3%E0%B2%BE-%E0%B2%A4%E0%B2%BF%E0%B2%B0%E0%B3%81%C2%AD%E0%B2%97%E0%B3%87%E0%B2%9F%E0%B3%81">*ಶಿಷ್ಯನಿಗೆ ಅಣ್ಣಾ ತಿರುಗೇಟು</a><br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>