<p><strong>ವೇಗ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? </strong></p>.<p>ಆದರೆ ಆ ವೇಗದಲ್ಲಿರುವ ರೋಚಕತೆಯ ಸವಾಲು ಮಾತ್ರ ಜೀವಕ್ಕೆ ಕುತ್ತು ತರುವಂಥದ್ದು. ಹಾಗಾಗಿ ಸಾವು ಹಾಗೂ ಮೋಟಾರ್ ರೇಸ್ ಜೊತೆಜೊತೆಯಾಗಿಯೇ ಸಾಗುತ್ತಿರುತ್ತವೆ ಎನ್ನುವ ಮಾತಿದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮಕೈಗೊಂಡರೂ ವಿಧಿ ಎಲ್ಲಿಂದಲೋ ಬಂದು ಅಪ್ಪಳಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ರೇಸ್ ಭಾಷೆಯಲ್ಲಿ ವೇಗ ಹಾಗೂ ಅಪಾಯವನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ.</p>.<p>ಇಷ್ಟು ಹೇಳಲು ಕಾರಣ ಜಮ್ಮು ಮತ್ತು ಕಾಶ್ಮೀರದ ಮುಘಲ್ ಕಾರು ರ್ಯಾಲಿಯಲ್ಲಿ ಸಂಭವಿಸಿದ ದುರಂತ. ಅನಂತನಾಗ್ ಇಲ್ಲೆಯ ಸಿಮ್ತಾನ್ ಬಳಿ ನಡೆದ ದುರ್ಘಟನೆಯಲ್ಲಿ ಬೆಂಗಳೂರು ಮೂಲದ ಚಾಲಕ ಜಿತೇಂದ್ರ ಶುಕ್ಲಾ ಹಾಗೂ ನೇವಿಗೇಟರ್ ಆಶಿಶ್ ಮಹಾಜನ್ ಮೃತಪಟ್ಟಿದ್ದಾರೆ. ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಆಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ರೇಸಿಂಗ್ ವಲಯವಂತೂ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ.</p>.<p>`ರೇಸ್ಗಳು ರೋಚಕತೆಯಿಂದಲೂ ಕೂಡಿರಬೇಕು. ರಕ್ಷಣಾತ್ಮಕವಾಗಿಯೂ ಇರಬೇಕು ಎಂದರೆ ಹೇಗೆ?~ ಎಂದು ಪ್ರಶ್ನಿಸುತ್ತಾರೆ ರ್ಯಾಲಿಯ ಸಂಘಟಕರೊಬ್ಬರು. `ಆದರೆ ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ರೋಚಕತೆಯನ್ನು ಉಳಿಸಿಕೊಂಡು ಜೀವವನ್ನೂ ರಕ್ಷಿಸಿಕೊಳ್ಳಬಹುದು~ ಎಂಬುದು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಯೊಬ್ಬರ ತಿರುಗೇಟು. ಕೆಲ ರ್ಯಾಲಿಗಳಲ್ಲಿ ಸರಿಯಾದ ಸುರಕ್ಷಿತ ವಿಧಾನ ಪಾಲಿಸುವುದಿಲ್ಲ ಎನ್ನುವುದು ಮತ್ತೊಬ್ಬ ಚಾಲಕನ ಆರೋಪ. ತುರ್ತು ಸಮಯದಲ್ಲಿ ಕಾರಿನ ಹಾದಿಯನ್ನು ಗುರುತಿಸುವ ಜಿಪಿಎಸ್ ಪದ್ಧತಿಯನ್ನು ಕೆಲವೆಡೆ ಬಳಸುವುದಿಲ್ಲ ಎನ್ನಲಾಗುತ್ತಿದೆ. ಮುಂದಿನ ರೇಸ್ಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡುತ್ತಾರೆ ಭಾರತ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಫೆಡರೇಷನ್ನ ಮುಖ್ಯಸ್ಥ ವಿಕಿ ಚಾಂಧೋಕ್.</p>.<p>ಮೃತಪಟ್ಟ ಶುಕ್ಲಾ ಹಾಗೂ ಮಹಾಜನ್ ಎಂಡ್ಯುರೊ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅವರು ಗುರಿ ತಲುಪುವ ಸನಿಹದಲ್ಲಿದ್ದಾಗ ಈ ದುರಂತಕ್ಕೆ ಬಲಿಯಾಗಿದ್ದಾರೆ. 600 ಕಿ.ಮೀ. ದೂರದ ರೇಸ್ ಅವರ ದಣಿವಿಗೆ ಕಾರಣವಾಗಿರಬಹುದು ಎಂಬುದು ರೇಸಿಂಗ್ ವಲಯದ ಅಭಿಪ್ರಾಯ. ಏಕೆಂದರೆ ಸುಮಾರು 20 ಗಂಟೆಯ ಈ ರೇಸ್ ಹುಡುಗಾಟದ ವಿಷಯವಲ್ಲ.</p>.<p>ರೇಸಿಂಗ್ ವೇಳೆ ಕೆಲವೆಡೆ ಅಪಾಯಕಾರಿ ತಿರುವುಗಳು, ಪ್ರಪಾತಗಳು ಎದುರಾಗುತ್ತವೆ. ಮಳೆ, ಇಬ್ಬನಿ, ದಟ್ಟ ಕಾಡಿನಿಂದ ಕತ್ತಲು ಆವರಿಸಿಬಿಡುತ್ತದೆ. ರಾತ್ರಿ ವೇಳೆ ನಡೆಯುವ ಸ್ಪರ್ಧೆಗಳು ಹಾಗೂ ದೀರ್ಘ ದೂರದ ರೇಸ್ಗಳು ಇಂತಹ ಅಪಘಾತಕ್ಕೆ ಕಾರಣವಾಗುತ್ತವೆ. `ಟೈಮ್ ಸ್ಪೀಡ್ ಡಿಸ್ಟೆನ್ಸ್~ (ಟಿಡಿಎಸ್) ವಿಭಾಗದ ಸ್ಪರ್ಧೆಗಳು ಇನ್ನೂ ಅಪಾಯಕಾರಿ. ಈ ಮುನ್ನ `ರೇಡ್ ಡಿ ಹಿಮಾಲಯ ರೇಸ್~ನಲ್ಲೂ ಮೂವರು ಸಾವನ್ನಪ್ಪಿದ್ದ ಉದಾಹರಣೆ ಇದೆ. ಮೊಘಲ್ ರ್ಯಾಲಿ ವೇಳೆ ಬೆಂಗಳೂರಿನವರೇ ಆದ ಸನ್ನಿ ಸಿದ್ಧು ಹಾಗೂ ಪಿ.ವಿ.ಎಸ್.ಮೂರ್ತಿ ಕೂಡ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವೇಗ ಎಂದರೆ ಯಾರಿಗೆ ಇಷ್ಟವಿಲ್ಲ ಹೇಳಿ? </strong></p>.<p>ಆದರೆ ಆ ವೇಗದಲ್ಲಿರುವ ರೋಚಕತೆಯ ಸವಾಲು ಮಾತ್ರ ಜೀವಕ್ಕೆ ಕುತ್ತು ತರುವಂಥದ್ದು. ಹಾಗಾಗಿ ಸಾವು ಹಾಗೂ ಮೋಟಾರ್ ರೇಸ್ ಜೊತೆಜೊತೆಯಾಗಿಯೇ ಸಾಗುತ್ತಿರುತ್ತವೆ ಎನ್ನುವ ಮಾತಿದೆ. ಎಷ್ಟೇ ಮುನ್ನೆಚ್ಚರಿಕೆ ಕ್ರಮಕೈಗೊಂಡರೂ ವಿಧಿ ಎಲ್ಲಿಂದಲೋ ಬಂದು ಅಪ್ಪಳಿಸಿಬಿಡುತ್ತದೆ. ಈ ಕಾರಣಕ್ಕಾಗಿಯೇ ರೇಸ್ ಭಾಷೆಯಲ್ಲಿ ವೇಗ ಹಾಗೂ ಅಪಾಯವನ್ನು ಒಂದೇ ನಾಣ್ಯದ ಎರಡು ಮುಖಗಳು ಎನ್ನುತ್ತಾರೆ.</p>.<p>ಇಷ್ಟು ಹೇಳಲು ಕಾರಣ ಜಮ್ಮು ಮತ್ತು ಕಾಶ್ಮೀರದ ಮುಘಲ್ ಕಾರು ರ್ಯಾಲಿಯಲ್ಲಿ ಸಂಭವಿಸಿದ ದುರಂತ. ಅನಂತನಾಗ್ ಇಲ್ಲೆಯ ಸಿಮ್ತಾನ್ ಬಳಿ ನಡೆದ ದುರ್ಘಟನೆಯಲ್ಲಿ ಬೆಂಗಳೂರು ಮೂಲದ ಚಾಲಕ ಜಿತೇಂದ್ರ ಶುಕ್ಲಾ ಹಾಗೂ ನೇವಿಗೇಟರ್ ಆಶಿಶ್ ಮಹಾಜನ್ ಮೃತಪಟ್ಟಿದ್ದಾರೆ. ತಿರುವಿನಲ್ಲಿ ನಿಯಂತ್ರಣ ಕಳೆದುಕೊಂಡಿದ್ದರಿಂದ ಈ ಆಘಾತ ಸಂಭವಿಸಿದೆ ಎನ್ನಲಾಗುತ್ತಿದೆ. ರೇಸಿಂಗ್ ವಲಯವಂತೂ ಈ ಘಟನೆಯಿಂದ ಆಘಾತಕ್ಕೆ ಒಳಗಾಗಿದೆ.</p>.<p>`ರೇಸ್ಗಳು ರೋಚಕತೆಯಿಂದಲೂ ಕೂಡಿರಬೇಕು. ರಕ್ಷಣಾತ್ಮಕವಾಗಿಯೂ ಇರಬೇಕು ಎಂದರೆ ಹೇಗೆ?~ ಎಂದು ಪ್ರಶ್ನಿಸುತ್ತಾರೆ ರ್ಯಾಲಿಯ ಸಂಘಟಕರೊಬ್ಬರು. `ಆದರೆ ಸರಿಯಾದ ಮುನ್ನೆಚ್ಚರಿಕೆ ಕ್ರಮ ಕೈಗೊಂಡರೆ ರೋಚಕತೆಯನ್ನು ಉಳಿಸಿಕೊಂಡು ಜೀವವನ್ನೂ ರಕ್ಷಿಸಿಕೊಳ್ಳಬಹುದು~ ಎಂಬುದು ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸ್ಪರ್ಧಿಯೊಬ್ಬರ ತಿರುಗೇಟು. ಕೆಲ ರ್ಯಾಲಿಗಳಲ್ಲಿ ಸರಿಯಾದ ಸುರಕ್ಷಿತ ವಿಧಾನ ಪಾಲಿಸುವುದಿಲ್ಲ ಎನ್ನುವುದು ಮತ್ತೊಬ್ಬ ಚಾಲಕನ ಆರೋಪ. ತುರ್ತು ಸಮಯದಲ್ಲಿ ಕಾರಿನ ಹಾದಿಯನ್ನು ಗುರುತಿಸುವ ಜಿಪಿಎಸ್ ಪದ್ಧತಿಯನ್ನು ಕೆಲವೆಡೆ ಬಳಸುವುದಿಲ್ಲ ಎನ್ನಲಾಗುತ್ತಿದೆ. ಮುಂದಿನ ರೇಸ್ಗಳಲ್ಲಿ ಈ ರೀತಿ ಆಗದಂತೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡುತ್ತಾರೆ ಭಾರತ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಫೆಡರೇಷನ್ನ ಮುಖ್ಯಸ್ಥ ವಿಕಿ ಚಾಂಧೋಕ್.</p>.<p>ಮೃತಪಟ್ಟ ಶುಕ್ಲಾ ಹಾಗೂ ಮಹಾಜನ್ ಎಂಡ್ಯುರೊ ವಿಭಾಗದಲ್ಲಿ ಸ್ಪರ್ಧಿಸಿದ್ದರು. ಅವರು ಗುರಿ ತಲುಪುವ ಸನಿಹದಲ್ಲಿದ್ದಾಗ ಈ ದುರಂತಕ್ಕೆ ಬಲಿಯಾಗಿದ್ದಾರೆ. 600 ಕಿ.ಮೀ. ದೂರದ ರೇಸ್ ಅವರ ದಣಿವಿಗೆ ಕಾರಣವಾಗಿರಬಹುದು ಎಂಬುದು ರೇಸಿಂಗ್ ವಲಯದ ಅಭಿಪ್ರಾಯ. ಏಕೆಂದರೆ ಸುಮಾರು 20 ಗಂಟೆಯ ಈ ರೇಸ್ ಹುಡುಗಾಟದ ವಿಷಯವಲ್ಲ.</p>.<p>ರೇಸಿಂಗ್ ವೇಳೆ ಕೆಲವೆಡೆ ಅಪಾಯಕಾರಿ ತಿರುವುಗಳು, ಪ್ರಪಾತಗಳು ಎದುರಾಗುತ್ತವೆ. ಮಳೆ, ಇಬ್ಬನಿ, ದಟ್ಟ ಕಾಡಿನಿಂದ ಕತ್ತಲು ಆವರಿಸಿಬಿಡುತ್ತದೆ. ರಾತ್ರಿ ವೇಳೆ ನಡೆಯುವ ಸ್ಪರ್ಧೆಗಳು ಹಾಗೂ ದೀರ್ಘ ದೂರದ ರೇಸ್ಗಳು ಇಂತಹ ಅಪಘಾತಕ್ಕೆ ಕಾರಣವಾಗುತ್ತವೆ. `ಟೈಮ್ ಸ್ಪೀಡ್ ಡಿಸ್ಟೆನ್ಸ್~ (ಟಿಡಿಎಸ್) ವಿಭಾಗದ ಸ್ಪರ್ಧೆಗಳು ಇನ್ನೂ ಅಪಾಯಕಾರಿ. ಈ ಮುನ್ನ `ರೇಡ್ ಡಿ ಹಿಮಾಲಯ ರೇಸ್~ನಲ್ಲೂ ಮೂವರು ಸಾವನ್ನಪ್ಪಿದ್ದ ಉದಾಹರಣೆ ಇದೆ. ಮೊಘಲ್ ರ್ಯಾಲಿ ವೇಳೆ ಬೆಂಗಳೂರಿನವರೇ ಆದ ಸನ್ನಿ ಸಿದ್ಧು ಹಾಗೂ ಪಿ.ವಿ.ಎಸ್.ಮೂರ್ತಿ ಕೂಡ ಕಾರಿನ ಮೇಲೆ ನಿಯಂತ್ರಣ ಕಳೆದುಕೊಂಡಿದ್ದರು. ಆದರೆ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>