<p><strong>ಬೆಂಗಳೂರು: </strong>ಬ್ರೆಜಿಲ್ ದೇಶದ ಮೀನಸ್ ಜೆರಾಯ್ಸ ರಾಜ್ಯದ ಗವರ್ನರ್ ಅಂಟೊನಿಯೊ ಅಗಸ್ಟೊ ಅನಸ್ಟಾಸಿಯಾ ನೇತೃತ್ವದ ನಿಯೋಗ ಗುರುವಾರ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದ ಜತೆ ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಮಾಡಿತು.<br /> <br /> ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಮೀನಸ್ ರಾಜ್ಯದ ಅಧಿಕಾರಿಗಳು ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಹಾಕಿದರು.<br /> <br /> ರಾಜ್ಯದ ಪರವಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಜರಿದ್ದರು. ನಂತರ ಅವರು ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಅನಸ್ಟೇಸಿಯಾ ಅವರನ್ನು ಪ್ರಾರಂಭದಲ್ಲಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.<br /> <br /> ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ಅದರ ಉಪಯೋಗ ಪಡೆದುಕೊಳ್ಳಬೇಕೆಂದು ನಿರಾಣಿ ಕರೆ ನೀಡಿದರು. 2012ರ ಜೂನ್ ತಿಂಗಳಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದ್ದು, ಅದರಲ್ಲಿ ಭಾಗವಹಿಸುವಂತೆಯೂ ಆಹ್ವಾನ ನೀಡಿದರು.<br /> <br /> <strong>ಕತ್ತಲು ಸವಿದ ವಿದೇಶಿ ನಿಯೋಗ<br /> ಬೆಂಗಳೂರು: </strong>ರಾಜ್ಯಕ್ಕೆ ಬಂಡವಾಳ ಹೂಡಲು ಬನ್ನಿ ಎಂದು ವಿದೇಶಿ ನಿಯೋಗದ ಜತೆ ಮಾತುಕತೆ ನಡೆಸುವ ವೇಳೆಯೇ ಎರಡು ಬಾರಿ ವಿದ್ಯುತ್ ಕೈಕೊಟ್ಟ ಘಟನೆ ಗುರುವಾರ ವಿಧಾನಸೌಧದಲ್ಲಿ ನಡೆಯಿತು.<br /> <br /> ಬ್ರೆಜಿಲ್ ನಿಯೋಗ ರಾಜ್ಯಕ್ಕೆ ಬಂದಿದ್ದು, ಅದರ ಜತೆ ಸಚಿವ ಮುರುಗೇಶ ನಿರಾಣಿ ಮಾತುಕತೆ ನಡೆಸುತ್ತಿದ್ದರು. ರಾಜ್ಯದಲ್ಲಿ ಬಂಡವಾಳ ಹೂಡಲು ವಿಪುಲ ಅವಕಾಶ ಇದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಹೀಗೆ ಹೇಳುವಾಗಲೇ ವಿದ್ಯುತ್ ಕೈಕೊಟ್ಟಿತು. <br /> <br /> ಸಮ್ಮೇಳನ ಸಭಾಂಗಣ ಕತ್ತಲಲ್ಲಿ ಮುಳುಗಿತು. 3-4 ನಿಮಿಷದ ನಂತರ ವಿದ್ಯುತ್ ಮತ್ತೆ ಬಂತು. ಆಗ ನಿಯೋಗದಲ್ಲಿದ್ದ ವಿದೇಶಿ ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಿಟ್ಟುಸಿರೂ ಬಿಟ್ಟರು. ಹೀಗೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿದ್ದು, ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪ್ರತಿಬಿಂಬಿಸುವಂತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ಬ್ರೆಜಿಲ್ ದೇಶದ ಮೀನಸ್ ಜೆರಾಯ್ಸ ರಾಜ್ಯದ ಗವರ್ನರ್ ಅಂಟೊನಿಯೊ ಅಗಸ್ಟೊ ಅನಸ್ಟಾಸಿಯಾ ನೇತೃತ್ವದ ನಿಯೋಗ ಗುರುವಾರ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರದ ಜತೆ ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಮಾಡಿತು.<br /> <br /> ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಮೀನಸ್ ರಾಜ್ಯದ ಅಧಿಕಾರಿಗಳು ಪರಸ್ಪರ ಸಹಕಾರ ನೀಡುವ ಒಪ್ಪಂದಕ್ಕೆ ಸಹಿ ಹಾಕಿದರು.<br /> <br /> ರಾಜ್ಯದ ಪರವಾಗಿ ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ಹಾಜರಿದ್ದರು. ನಂತರ ಅವರು ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿರುವ ಅವಕಾಶಗಳ ಬಗ್ಗೆ ಬೆಳಕು ಚೆಲ್ಲಿದರು. ಅನಸ್ಟೇಸಿಯಾ ಅವರನ್ನು ಪ್ರಾರಂಭದಲ್ಲಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.<br /> <br /> ಬಂಡವಾಳ ಹೂಡಿಕೆಗೆ ರಾಜ್ಯದಲ್ಲಿ ವಿಫುಲ ಅವಕಾಶಗಳಿದ್ದು, ಅದರ ಉಪಯೋಗ ಪಡೆದುಕೊಳ್ಳಬೇಕೆಂದು ನಿರಾಣಿ ಕರೆ ನೀಡಿದರು. 2012ರ ಜೂನ್ ತಿಂಗಳಲ್ಲಿ ವಿಶ್ವ ಹೂಡಿಕೆದಾರರ ಸಮಾವೇಶ ಹಮ್ಮಿಕೊಂಡಿದ್ದು, ಅದರಲ್ಲಿ ಭಾಗವಹಿಸುವಂತೆಯೂ ಆಹ್ವಾನ ನೀಡಿದರು.<br /> <br /> <strong>ಕತ್ತಲು ಸವಿದ ವಿದೇಶಿ ನಿಯೋಗ<br /> ಬೆಂಗಳೂರು: </strong>ರಾಜ್ಯಕ್ಕೆ ಬಂಡವಾಳ ಹೂಡಲು ಬನ್ನಿ ಎಂದು ವಿದೇಶಿ ನಿಯೋಗದ ಜತೆ ಮಾತುಕತೆ ನಡೆಸುವ ವೇಳೆಯೇ ಎರಡು ಬಾರಿ ವಿದ್ಯುತ್ ಕೈಕೊಟ್ಟ ಘಟನೆ ಗುರುವಾರ ವಿಧಾನಸೌಧದಲ್ಲಿ ನಡೆಯಿತು.<br /> <br /> ಬ್ರೆಜಿಲ್ ನಿಯೋಗ ರಾಜ್ಯಕ್ಕೆ ಬಂದಿದ್ದು, ಅದರ ಜತೆ ಸಚಿವ ಮುರುಗೇಶ ನಿರಾಣಿ ಮಾತುಕತೆ ನಡೆಸುತ್ತಿದ್ದರು. ರಾಜ್ಯದಲ್ಲಿ ಬಂಡವಾಳ ಹೂಡಲು ವಿಪುಲ ಅವಕಾಶ ಇದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದರು. ಹೀಗೆ ಹೇಳುವಾಗಲೇ ವಿದ್ಯುತ್ ಕೈಕೊಟ್ಟಿತು. <br /> <br /> ಸಮ್ಮೇಳನ ಸಭಾಂಗಣ ಕತ್ತಲಲ್ಲಿ ಮುಳುಗಿತು. 3-4 ನಿಮಿಷದ ನಂತರ ವಿದ್ಯುತ್ ಮತ್ತೆ ಬಂತು. ಆಗ ನಿಯೋಗದಲ್ಲಿದ್ದ ವಿದೇಶಿ ಪ್ರತಿನಿಧಿಗಳು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಿಟ್ಟುಸಿರೂ ಬಿಟ್ಟರು. ಹೀಗೆ ಎರಡು ಬಾರಿ ವಿದ್ಯುತ್ ಕೈಕೊಟ್ಟಿದ್ದು, ರಾಜ್ಯದಲ್ಲಿನ ವಿದ್ಯುತ್ ಸಮಸ್ಯೆಯನ್ನು ಪ್ರತಿಬಿಂಬಿಸುವಂತಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>