<p>ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟದಲ್ಲಿ ಬರುವ ಮಧುರ ಬಂಧನ. ಇಂತಹ ಅಮೃತ ಘಳಿಗೆಯನ್ನು ಹೊಲಸಾಗಿ ಮಾಡಿಕೊಂಡು ಬೀಗುವ ಮನುಷ್ಯನ ವರ್ತನೆ, `ವಿನಾಶಕಾಲೆ ವಿಪರೀತ ಬುದ್ಧಿ' ಎಂಬಂತಾಗಿದೆ.</p>.<p>ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಸಾಮೂಹಿಕ ವಿವಾಹವೊಂದರಲ್ಲಿ ಹಣದಾಸೆಗೆ ಮಾತೆ ಸ್ವರೂಪಿಣಿ ಅತ್ತಿಗೆಯನ್ನೇ ವರಿಸಿದ ಮತಿಹೀನ ಭೂಪ, ಮಾತೆಯ ಸ್ಥಾನವನ್ನೇ ಮಾರಿಕೊಂಡ ಅತ್ತಿಗೆ ಅನ್ನಿಸಿಕೊಂಡವಳ ಸಾಹಸ ಸಮಾಜಕ್ಕೇ ಒಂದು ಕಂಟಕ.<br /> ಅದೆಷ್ಟೋ ಸಂಬಂಧಗಳು ಇಂದು ಕೇವಲ ಹಣಕ್ಕಾಗಿ ಮಾರಿಹೋಗುತ್ತಿವೆ.</p>.<p>ಬಹುದಿನಗಳ ಬಾಂಧವ್ಯ, ಮದುವೆಯ ಸಂಬಂಧಗಳು ವ್ಯಾಪಾರೀಕರಣಕ್ಕೆ ಒಳಪಟ್ಟು ಹಣದ ವ್ಯವಹಾರಗಳಾಗಿ ಮಾರ್ಪಡುತ್ತಿವೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ.<br /> <br /> ಮನುಷ್ಯ ತನ್ನ ಬದುಕಿನ ಅರ್ಥವನ್ನೇ ಕಳೆದುಕೊಂಡು ಹೀಗೆ ವರ್ತಿಸುತ್ತಿರುವುದು ಇಂದು ಸಮಾಜದಲ್ಲಿ ಎಗ್ಗಿಲ್ಲದೆ ಕಂಡುಬರುತ್ತಿದೆ. ಅವನ ಈ ವಿಕೃತ ಮನಸ್ಸಿಗೆ ಕಡಿವಾಣವಾದರೂ ಹೇಗೆ? ಅದು ಯಾರಿಂದ? ಇದರಿಂದ ಸಮಾಜಕ್ಕೆ ಅವನ ಸಂದೇಶವಾದರು ಏನು? ಇಂಥವರಿರುವ ತನಕ ಕುಟುಂಬಕ್ಕೆ, ಉತ್ತಮ ಸಮಾಜಕ್ಕೆ ಶಾಂತಿ, ನೆಮ್ಮದಿಯಾದರು ಎಲ್ಲಿಂದ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟದಲ್ಲಿ ಬರುವ ಮಧುರ ಬಂಧನ. ಇಂತಹ ಅಮೃತ ಘಳಿಗೆಯನ್ನು ಹೊಲಸಾಗಿ ಮಾಡಿಕೊಂಡು ಬೀಗುವ ಮನುಷ್ಯನ ವರ್ತನೆ, `ವಿನಾಶಕಾಲೆ ವಿಪರೀತ ಬುದ್ಧಿ' ಎಂಬಂತಾಗಿದೆ.</p>.<p>ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ಸಾಮೂಹಿಕ ವಿವಾಹವೊಂದರಲ್ಲಿ ಹಣದಾಸೆಗೆ ಮಾತೆ ಸ್ವರೂಪಿಣಿ ಅತ್ತಿಗೆಯನ್ನೇ ವರಿಸಿದ ಮತಿಹೀನ ಭೂಪ, ಮಾತೆಯ ಸ್ಥಾನವನ್ನೇ ಮಾರಿಕೊಂಡ ಅತ್ತಿಗೆ ಅನ್ನಿಸಿಕೊಂಡವಳ ಸಾಹಸ ಸಮಾಜಕ್ಕೇ ಒಂದು ಕಂಟಕ.<br /> ಅದೆಷ್ಟೋ ಸಂಬಂಧಗಳು ಇಂದು ಕೇವಲ ಹಣಕ್ಕಾಗಿ ಮಾರಿಹೋಗುತ್ತಿವೆ.</p>.<p>ಬಹುದಿನಗಳ ಬಾಂಧವ್ಯ, ಮದುವೆಯ ಸಂಬಂಧಗಳು ವ್ಯಾಪಾರೀಕರಣಕ್ಕೆ ಒಳಪಟ್ಟು ಹಣದ ವ್ಯವಹಾರಗಳಾಗಿ ಮಾರ್ಪಡುತ್ತಿವೆ ಎಂಬುದಕ್ಕೆ ಇಂತಹ ಘಟನೆಗಳೇ ಸಾಕ್ಷಿ.<br /> <br /> ಮನುಷ್ಯ ತನ್ನ ಬದುಕಿನ ಅರ್ಥವನ್ನೇ ಕಳೆದುಕೊಂಡು ಹೀಗೆ ವರ್ತಿಸುತ್ತಿರುವುದು ಇಂದು ಸಮಾಜದಲ್ಲಿ ಎಗ್ಗಿಲ್ಲದೆ ಕಂಡುಬರುತ್ತಿದೆ. ಅವನ ಈ ವಿಕೃತ ಮನಸ್ಸಿಗೆ ಕಡಿವಾಣವಾದರೂ ಹೇಗೆ? ಅದು ಯಾರಿಂದ? ಇದರಿಂದ ಸಮಾಜಕ್ಕೆ ಅವನ ಸಂದೇಶವಾದರು ಏನು? ಇಂಥವರಿರುವ ತನಕ ಕುಟುಂಬಕ್ಕೆ, ಉತ್ತಮ ಸಮಾಜಕ್ಕೆ ಶಾಂತಿ, ನೆಮ್ಮದಿಯಾದರು ಎಲ್ಲಿಂದ?</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>