<p><strong>ಬೆಂಗಳೂರು: </strong>`ಚಲನಚಿತ್ರ ಕಲಾವಿದರನ್ನೂ ನಾಚಿಸುವಂತಹ ರಾಜಕಾರಣಿಗಳಿದ್ದಾರೆ. ಇಂತಹ ರಾಜಕಾರಣಿಗಳ ಮುಂದೆ ಕಲಾವಿದರು ತುಸು ಸಪ್ಪೆ ಎನಿಸುತ್ತಾರೆ~ ಎಂದು ವಿಧಾನ ಪರಿಷತ್ ಸದಸ್ಯ ಸಾಹಿತಿ ಡಾ. ದೊಡ್ಡರಂಗೇಗೌಡ ನುಡಿದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ ಪತ್ನಿ ಡಾ.ರಾಜೇಶ್ವರಿ ಗೌಡ ಅವರೊಂದಿಗೆ ಡಾ.ಎಸ್.ಎಂ. ವೃಷ ಭೇಂದ್ರಸ್ವಾಮಿ ಮತ್ತು ಪ್ರೊ.ಲಲಿತಾಂಬ `ಸಾಹಿತ್ಯ ದಂಪತಿ~ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.<br /> <br /> `ಸತ್ಯದ ತಲೆಯ ಮೇಲೆ ಹೊಡೆದಂತೆ ನಟನೆ ಮಾಡುವ ರಾಜಕಾರಣಿಗಳೇ ಹೆಚ್ಚು. ಈ ರೀತಿಯ ರಾಜಕಾರಣಿ ಗಳನ್ನು ಮೀರಿಸುವಂತಹ ಸಾಹಿತಿಗಳಿದ್ದಾರೆ. ಈ ಸಾಹಿತಿಗಳಿಗೆ ಯಾವ ರಾಜಕಾರಣಿಗಳು ಸಾಟಿಯಿಲ್ಲ~ ಎಂದರು.<br /> `ಕೆಲ ಸಾಹಿತಿಗಳು ಇತರರನ್ನು ತುಳಿಯಲು ನಿರಂತರವಾಗಿ ಷಡ್ಯಂತ್ರ ನಡೆಸುತ್ತಾರೆ. <br /> <br /> ಮತ್ತೆ ಬರವಣಿಗೆಯಲ್ಲಿ ತೊಡಗದಂತೆ ಮಾಡುವಷ್ಟರ ಮಟ್ಟಿಗೆ ದೌರ್ಜನ್ಯ ನಡೆಸುತ್ತಾರೆ. ಇಂತಹವರ ಬಗ್ಗೆ ಅಸಹ್ಯವೆನಿಸಿ ಬರೆಯಲೇ ಬಾರದೆನಿಸುತ್ತದೆ. ಆದರೂ ಬರವಣಿಗೆಯ ಗೀಳು ಹೋಗುತ್ತಿಲ್ಲ~ ಎಂದರು.<br /> <br /> `ನನ್ನನ್ನು ಇಂದಿಗೂ ವಿಮರ್ಶಕರು ಕವಿ ಎಂದು ಪರಿಗಣಿಸಿಯೇ ಇಲ್ಲ. ನನಗೆ ಕಿರುಕುಳ ನೀಡಿದ ಸಾಹಿತ್ಯ ಲೋಕದ ಗೋಸುಂಬೆ, ಊಸರವಳ್ಳಿ, ಹಂದಿ, ತಿಮಿಂಗಲ, ಹುಲಿ, ಚಿರತೆ, ನರಿ ಬುದ್ದಿಯವರ ಬಗ್ಗೆ ನನ್ನ ಆತ್ಮಕಥನದಲ್ಲಿ ಅನಾವರಣಗೊಳಿಸುತ್ತೇನೆ~ ಎಂದರು.<br /> <br /> `ಜನರಲ್ಲಿ ಜಾಗೃತಿ ಮೂಡಿಸದವನು ಸಾಹಿತಿಯೇ ಅಲ್ಲ. ಸಾಹಿತಿ ಎಂದರೆ ಸಮಾಜ ವಿಜ್ಞಾನಿ ಇದ್ದಂತೆ. ಸಮಾಜದಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರ, ಅನೀತಿಯ ಬಗ್ಗೆ ತಿಳಿಸುವುದು ಸಾಹಿತಿಯ ಹೊಣೆ~ ಎಂದರು.<br /> ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, `ದೊಡ್ಡರಂಗೇಗೌಡರು ಪರಿಸ್ಥಿತಿಗೆ ರಾಜಿಯಾಗದೇ ಸಾಮಾಜಿಕ ಬದಲಾವಣೆಗೆ ತಮ್ಮದೇ ಆದ ಪ್ರಯತ್ನ ನಡೆಸಿ ಮಾದರಿಯಾದರು~ ಎಂದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ` ನಿಮ್ಮನ್ನು ಓದುಗರು ಒಪ್ಪಿದರೆ ಸಾಕು. ವಿಮರ್ಶಕರು ಒಪ್ಪದಿದ್ದರೆ ನಷ್ಟವಿಲ್ಲ. ಆದರೆ ಈ ಕಲುಷಿತ ವಾತಾವರಣ ಆದಷ್ಟು ಬೇಗ ಅಂತ್ಯವಾಗಲಿದೆ~ ಎಂದು ಹೇಳಿದರು. ಸಾಹಿತಿಗಳಾದ ಪ್ರೇಮಾಭಟ್, ಡಾ.ಬೈರಮಂಗಲ ರಾಮೇಗೌಡ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>`ಚಲನಚಿತ್ರ ಕಲಾವಿದರನ್ನೂ ನಾಚಿಸುವಂತಹ ರಾಜಕಾರಣಿಗಳಿದ್ದಾರೆ. ಇಂತಹ ರಾಜಕಾರಣಿಗಳ ಮುಂದೆ ಕಲಾವಿದರು ತುಸು ಸಪ್ಪೆ ಎನಿಸುತ್ತಾರೆ~ ಎಂದು ವಿಧಾನ ಪರಿಷತ್ ಸದಸ್ಯ ಸಾಹಿತಿ ಡಾ. ದೊಡ್ಡರಂಗೇಗೌಡ ನುಡಿದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಮಾ ರಂಭದಲ್ಲಿ ಪತ್ನಿ ಡಾ.ರಾಜೇಶ್ವರಿ ಗೌಡ ಅವರೊಂದಿಗೆ ಡಾ.ಎಸ್.ಎಂ. ವೃಷ ಭೇಂದ್ರಸ್ವಾಮಿ ಮತ್ತು ಪ್ರೊ.ಲಲಿತಾಂಬ `ಸಾಹಿತ್ಯ ದಂಪತಿ~ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.<br /> <br /> `ಸತ್ಯದ ತಲೆಯ ಮೇಲೆ ಹೊಡೆದಂತೆ ನಟನೆ ಮಾಡುವ ರಾಜಕಾರಣಿಗಳೇ ಹೆಚ್ಚು. ಈ ರೀತಿಯ ರಾಜಕಾರಣಿ ಗಳನ್ನು ಮೀರಿಸುವಂತಹ ಸಾಹಿತಿಗಳಿದ್ದಾರೆ. ಈ ಸಾಹಿತಿಗಳಿಗೆ ಯಾವ ರಾಜಕಾರಣಿಗಳು ಸಾಟಿಯಿಲ್ಲ~ ಎಂದರು.<br /> `ಕೆಲ ಸಾಹಿತಿಗಳು ಇತರರನ್ನು ತುಳಿಯಲು ನಿರಂತರವಾಗಿ ಷಡ್ಯಂತ್ರ ನಡೆಸುತ್ತಾರೆ. <br /> <br /> ಮತ್ತೆ ಬರವಣಿಗೆಯಲ್ಲಿ ತೊಡಗದಂತೆ ಮಾಡುವಷ್ಟರ ಮಟ್ಟಿಗೆ ದೌರ್ಜನ್ಯ ನಡೆಸುತ್ತಾರೆ. ಇಂತಹವರ ಬಗ್ಗೆ ಅಸಹ್ಯವೆನಿಸಿ ಬರೆಯಲೇ ಬಾರದೆನಿಸುತ್ತದೆ. ಆದರೂ ಬರವಣಿಗೆಯ ಗೀಳು ಹೋಗುತ್ತಿಲ್ಲ~ ಎಂದರು.<br /> <br /> `ನನ್ನನ್ನು ಇಂದಿಗೂ ವಿಮರ್ಶಕರು ಕವಿ ಎಂದು ಪರಿಗಣಿಸಿಯೇ ಇಲ್ಲ. ನನಗೆ ಕಿರುಕುಳ ನೀಡಿದ ಸಾಹಿತ್ಯ ಲೋಕದ ಗೋಸುಂಬೆ, ಊಸರವಳ್ಳಿ, ಹಂದಿ, ತಿಮಿಂಗಲ, ಹುಲಿ, ಚಿರತೆ, ನರಿ ಬುದ್ದಿಯವರ ಬಗ್ಗೆ ನನ್ನ ಆತ್ಮಕಥನದಲ್ಲಿ ಅನಾವರಣಗೊಳಿಸುತ್ತೇನೆ~ ಎಂದರು.<br /> <br /> `ಜನರಲ್ಲಿ ಜಾಗೃತಿ ಮೂಡಿಸದವನು ಸಾಹಿತಿಯೇ ಅಲ್ಲ. ಸಾಹಿತಿ ಎಂದರೆ ಸಮಾಜ ವಿಜ್ಞಾನಿ ಇದ್ದಂತೆ. ಸಮಾಜದಲ್ಲಿ ನಡೆಯುವ ಅಕ್ರಮ, ಭ್ರಷ್ಟಾಚಾರ, ಅನೀತಿಯ ಬಗ್ಗೆ ತಿಳಿಸುವುದು ಸಾಹಿತಿಯ ಹೊಣೆ~ ಎಂದರು.<br /> ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ `ಮುಖ್ಯಮಂತ್ರಿ~ ಚಂದ್ರು, `ದೊಡ್ಡರಂಗೇಗೌಡರು ಪರಿಸ್ಥಿತಿಗೆ ರಾಜಿಯಾಗದೇ ಸಾಮಾಜಿಕ ಬದಲಾವಣೆಗೆ ತಮ್ಮದೇ ಆದ ಪ್ರಯತ್ನ ನಡೆಸಿ ಮಾದರಿಯಾದರು~ ಎಂದರು.<br /> <br /> ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಆರ್.ಕೆ. ನಲ್ಲೂರು ಪ್ರಸಾದ್, ` ನಿಮ್ಮನ್ನು ಓದುಗರು ಒಪ್ಪಿದರೆ ಸಾಕು. ವಿಮರ್ಶಕರು ಒಪ್ಪದಿದ್ದರೆ ನಷ್ಟವಿಲ್ಲ. ಆದರೆ ಈ ಕಲುಷಿತ ವಾತಾವರಣ ಆದಷ್ಟು ಬೇಗ ಅಂತ್ಯವಾಗಲಿದೆ~ ಎಂದು ಹೇಳಿದರು. ಸಾಹಿತಿಗಳಾದ ಪ್ರೇಮಾಭಟ್, ಡಾ.ಬೈರಮಂಗಲ ರಾಮೇಗೌಡ ಇತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>