<p>ಬೆಂಗಳೂರು: ‘ಸವಕಲು ಕಥಾಹಂದರವುಳ್ಳ ಸಿನಿಮಾಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯಾಧಾರಿತ ಸದಭಿರುಚಿ ಚಿತ್ರಗಳು ನಿರ್ಮಾಣವಾಗಬೇಕಿದೆ’ ಎಂದು ಹಿರಿಯ ನಟ ರಾಜೇಶ್ ಅಭಿಪ್ರಾಯಪಟ್ಟರು.<br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಕನ್ನಡ ಚಿತ್ರರಂಗವು 50 ಮತ್ತು 60ರ ದಶಕದಲ್ಲಿ ಕನ್ನಡ ಸಾಹಿತ್ಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿತ್ತು. ಹಾಗಾಗಿ ಅತ್ಯುತ್ತಮ ಚಿತ್ರಗಳು ತೆರೆಕಂಡವು. <br /> ಆ ದಿನದ ಸಿನಿಮಾಗಳಲ್ಲಿ ಕಾದಂಬರಿ ಗಳ ಕಥಾಹಂದರವು ಮಿಳಿತ ಗೊಂಡಿದ್ದರಿಂದ ಯಶಸ್ವಿಯಾದವು’ ಎಂದರು.<br /> <br /> ‘ಚಿಕ್ಕಂದಿನಿಂದಲೇ ನಾಟಕದ ಗೀಳು ಬಹುವಾಗಿ ಕಾಡುತ್ತಿತ್ತು. ಇದರಿಂದ ಸ್ಫೂರ್ತಿ ಪಡೆದು ‘ಶಕ್ತಿ ನಾಟಕ ಮಂಡಳಿ’ ಸ್ಥಾಪಿಸಿದೆ. ನಂತರ ದಿನಗಳಲ್ಲಿ ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ತಮ್ಮ ‘ವೀರಸಂಕಲ್ಪ’ ಚಿತ್ರದಲ್ಲಿ ಅವಕಾಶ ನೀಡಿದರು’ ಎಂದು ತಿಳಿಸಿದರು.<br /> <br /> ‘ರಾಜಕೀಯದಲ್ಲಿರುವಂತೆ ಚಿತ್ರರಂಗದಲ್ಲೂ ಏಳಿಗೆಯನ್ನು ಸಹಿಸದವರಿಂದ ಆರಂಭದ ದಿನಗಳಲ್ಲೇ ನೋವನ್ನು ಅನುಭವಿಸಿದೆ. ಆ ಕಾರಣಕ್ಕಾಗಿ ಚಿತ್ರರಂಗದಿಂದ 2 ವರ್ಷ ಕಾಲ ದೂರ ಉಳಿದೆ. ಆಗ ಗುರುಗಳಾಗಿ ನಿರ್ದೇಶಕರಾದ ಬಿ.ಎಸ್.ನಾರಾಯಣ್ ಮತ್ತು ಸಿ.ವಿ.ಶಿವಶಂಕರ್ ನನಗೆ ಮಾರ್ಗದರ್ಶನ ನೀಡಿದರು. ‘ನಮ್ಮ ಊರು ‘ ಚಿತ್ರದಲ್ಲಿ ಅವಕಾಶ ನೀಡಿದರು’ ಎಂದು ಗತಕಾಲದ ದಿನಗಳನ್ನು ಸ್ಮರಿಸಿಕೊಂಡರು. <br /> <br /> ‘ನಮ್ಮ ಊರು’ ಚಿತ್ರದ ಅಭೂತಪೂರ್ವ ಯಶಸ್ಸಿನಿಂದಾಗಿ ತಮಿಳು ಚಿತ್ರೋದ್ಯಮಲ್ಲಿ ಹಲವು ಅವಕಾಶಗಳು ಬೆನ್ನತ್ತಿ ಬಂದವು. ನಟ ಶಿವಾಜಿ ಗಣೇಶನ್ಗೆ ಪರ್ಯಾಯ ನಾಯಕನಾಗಿ ನಟಿಸುವಂತೆ ನಿರ್ದೇಶಕ ವೆಳ್ಳಂಪಳ್ಳಿ ಸೋಮನಾಥ್ ಆಹ್ವಾನವಿತ್ತರು. ಆದರೆ ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಅಭಿನಯದಲ್ಲಿ ವ್ಯಕ್ತಪಡಿಸುವ ಅಭಿಲಾಷೆ ಹೊಂದಿದ್ದರಿಂದ ಎಲ್ಲಾ ಅವಕಾಶಗಳನ್ನು ನಯವಾಗಿ ತಿರಸ್ಕರಿಸಿದೆ’ ಎಂದು ತಿಳಿಸಿದರು. <br /> <br /> ‘ನಿರ್ಮಾಪಕರು ಸಬ್ಸಿಡಿಗಾಗಿ ಚಿತ್ರ ನಿರ್ಮಿಸುತ್ತಿದ್ದಾರೆ. ಈ ದಿಸೆಯಲ್ಲಿ ಪಾತ್ರಗಳ ಆಯ್ಕೆಯಲ್ಲಿ ಆದಷ್ಟು ಜಾಗ್ರತೆ ವಹಿಸು’ ಎಂದು ಸಾಹಿತಿ ತ.ರಾ.ಸು ಅವರ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದೆ. ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾದೆ’ ಎಂದರು. <br /> <br /> ‘ಭಾವ ಶುದ್ದಿ ಮತ್ತು ಭಾಷಾ ಶುದ್ದಿ ಗೊತ್ತಿಲ್ಲದ ಯುವಕರು ನಾಯಕರಾಗುತ್ತಿರುವುದು ವಿಪರ್ಯಾಸ. ಪಾತ್ರದ ಪರಕಾಯ ಪ್ರವೇಶ ಮಾಡದ ಹೊರತು ನಟನೆ ಕರಗತವಾಗುವುದಿಲ್ಲ. ಆ ದಿನಗಳಲ್ಲಿ ನಟರಲ್ಲಿ ಪ್ರತಿಭೆಯಿತ್ತು. ಆದರೆ ದುಡ್ಡಿರಲಿಲ್ಲ’ ಎಂದು ಹೇಳಿದರು. <br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: ‘ಸವಕಲು ಕಥಾಹಂದರವುಳ್ಳ ಸಿನಿಮಾಗಳೇ ಹೆಚ್ಚಿನ ಸಂಖ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಾಹಿತ್ಯಾಧಾರಿತ ಸದಭಿರುಚಿ ಚಿತ್ರಗಳು ನಿರ್ಮಾಣವಾಗಬೇಕಿದೆ’ ಎಂದು ಹಿರಿಯ ನಟ ರಾಜೇಶ್ ಅಭಿಪ್ರಾಯಪಟ್ಟರು.<br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿಯು ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಬೆಳ್ಳಿ ಹೆಜ್ಜೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.<br /> <br /> ‘ಕನ್ನಡ ಚಿತ್ರರಂಗವು 50 ಮತ್ತು 60ರ ದಶಕದಲ್ಲಿ ಕನ್ನಡ ಸಾಹಿತ್ಯವನ್ನೇ ಹೆಚ್ಚಾಗಿ ನೆಚ್ಚಿಕೊಂಡಿತ್ತು. ಹಾಗಾಗಿ ಅತ್ಯುತ್ತಮ ಚಿತ್ರಗಳು ತೆರೆಕಂಡವು. <br /> ಆ ದಿನದ ಸಿನಿಮಾಗಳಲ್ಲಿ ಕಾದಂಬರಿ ಗಳ ಕಥಾಹಂದರವು ಮಿಳಿತ ಗೊಂಡಿದ್ದರಿಂದ ಯಶಸ್ವಿಯಾದವು’ ಎಂದರು.<br /> <br /> ‘ಚಿಕ್ಕಂದಿನಿಂದಲೇ ನಾಟಕದ ಗೀಳು ಬಹುವಾಗಿ ಕಾಡುತ್ತಿತ್ತು. ಇದರಿಂದ ಸ್ಫೂರ್ತಿ ಪಡೆದು ‘ಶಕ್ತಿ ನಾಟಕ ಮಂಡಳಿ’ ಸ್ಥಾಪಿಸಿದೆ. ನಂತರ ದಿನಗಳಲ್ಲಿ ಚಿತ್ರ ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರು ತಮ್ಮ ‘ವೀರಸಂಕಲ್ಪ’ ಚಿತ್ರದಲ್ಲಿ ಅವಕಾಶ ನೀಡಿದರು’ ಎಂದು ತಿಳಿಸಿದರು.<br /> <br /> ‘ರಾಜಕೀಯದಲ್ಲಿರುವಂತೆ ಚಿತ್ರರಂಗದಲ್ಲೂ ಏಳಿಗೆಯನ್ನು ಸಹಿಸದವರಿಂದ ಆರಂಭದ ದಿನಗಳಲ್ಲೇ ನೋವನ್ನು ಅನುಭವಿಸಿದೆ. ಆ ಕಾರಣಕ್ಕಾಗಿ ಚಿತ್ರರಂಗದಿಂದ 2 ವರ್ಷ ಕಾಲ ದೂರ ಉಳಿದೆ. ಆಗ ಗುರುಗಳಾಗಿ ನಿರ್ದೇಶಕರಾದ ಬಿ.ಎಸ್.ನಾರಾಯಣ್ ಮತ್ತು ಸಿ.ವಿ.ಶಿವಶಂಕರ್ ನನಗೆ ಮಾರ್ಗದರ್ಶನ ನೀಡಿದರು. ‘ನಮ್ಮ ಊರು ‘ ಚಿತ್ರದಲ್ಲಿ ಅವಕಾಶ ನೀಡಿದರು’ ಎಂದು ಗತಕಾಲದ ದಿನಗಳನ್ನು ಸ್ಮರಿಸಿಕೊಂಡರು. <br /> <br /> ‘ನಮ್ಮ ಊರು’ ಚಿತ್ರದ ಅಭೂತಪೂರ್ವ ಯಶಸ್ಸಿನಿಂದಾಗಿ ತಮಿಳು ಚಿತ್ರೋದ್ಯಮಲ್ಲಿ ಹಲವು ಅವಕಾಶಗಳು ಬೆನ್ನತ್ತಿ ಬಂದವು. ನಟ ಶಿವಾಜಿ ಗಣೇಶನ್ಗೆ ಪರ್ಯಾಯ ನಾಯಕನಾಗಿ ನಟಿಸುವಂತೆ ನಿರ್ದೇಶಕ ವೆಳ್ಳಂಪಳ್ಳಿ ಸೋಮನಾಥ್ ಆಹ್ವಾನವಿತ್ತರು. ಆದರೆ ಈ ನೆಲದ ಸಂಸ್ಕೃತಿ ಮತ್ತು ಭಾಷೆಯನ್ನು ಅಭಿನಯದಲ್ಲಿ ವ್ಯಕ್ತಪಡಿಸುವ ಅಭಿಲಾಷೆ ಹೊಂದಿದ್ದರಿಂದ ಎಲ್ಲಾ ಅವಕಾಶಗಳನ್ನು ನಯವಾಗಿ ತಿರಸ್ಕರಿಸಿದೆ’ ಎಂದು ತಿಳಿಸಿದರು. <br /> <br /> ‘ನಿರ್ಮಾಪಕರು ಸಬ್ಸಿಡಿಗಾಗಿ ಚಿತ್ರ ನಿರ್ಮಿಸುತ್ತಿದ್ದಾರೆ. ಈ ದಿಸೆಯಲ್ಲಿ ಪಾತ್ರಗಳ ಆಯ್ಕೆಯಲ್ಲಿ ಆದಷ್ಟು ಜಾಗ್ರತೆ ವಹಿಸು’ ಎಂದು ಸಾಹಿತಿ ತ.ರಾ.ಸು ಅವರ ಸಲಹೆಯನ್ನು ಗಂಭೀರವಾಗಿ ಸ್ವೀಕರಿಸಿದೆ. ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾದೆ’ ಎಂದರು. <br /> <br /> ‘ಭಾವ ಶುದ್ದಿ ಮತ್ತು ಭಾಷಾ ಶುದ್ದಿ ಗೊತ್ತಿಲ್ಲದ ಯುವಕರು ನಾಯಕರಾಗುತ್ತಿರುವುದು ವಿಪರ್ಯಾಸ. ಪಾತ್ರದ ಪರಕಾಯ ಪ್ರವೇಶ ಮಾಡದ ಹೊರತು ನಟನೆ ಕರಗತವಾಗುವುದಿಲ್ಲ. ಆ ದಿನಗಳಲ್ಲಿ ನಟರಲ್ಲಿ ಪ್ರತಿಭೆಯಿತ್ತು. ಆದರೆ ದುಡ್ಡಿರಲಿಲ್ಲ’ ಎಂದು ಹೇಳಿದರು. <br /> <br /> ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್.ನಾಗಾಭರಣ ಉಪಸ್ಥಿತರಿದ್ದರು. <br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>