<p><strong>ಬೀದರ್:</strong> `ಈಶ್ವರಪ್ಪ ಅವರು ನಮ್ಮ ಪಕ್ಷದ ಅಧ್ಯಕ್ಷ, ಸದಾನಂದಗೌಡರು ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರು ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ದೊಡ್ಡ ನಾಯಕ~ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ರಾಜನಾಥ್ಸಿಂಗ್ ಹೇಳಿದರು.<br /> <br /> `ಈಗ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯ ಸರ್ಕಾರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಸದ್ಯ ಅವರನ್ನು ಬದಲಾಯಿಸುವ ಪ್ರಶ್ನೆ ಉದ್ಭವಿಸಿಲ್ಲ~ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.<br /> <br /> ರಾಜ್ಯದಲ್ಲಿ ಇರುವ ಗೊಂದಲದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಸಲಹೆ ಏನು? ಎಂಬ ಪ್ರಶ್ನೆಗೆ `ಸಲಹೆ ಕೇಳಿದಾಗ ಮಾತ್ರ ನೀಡಲಾಗುತ್ತದೆ. ಕೇಳದೇ ಸಲಹೆ ನೀಡಲು ಬರುವುದಿಲ್ಲ~ ಎಂದು ಹೇಳಿದ ರಾಜನಾಥ್ಸಿಂಗ್ ಅವರು `ಇದುವರೆಗೆ ಯಾಕೆ ಸಲಹೆ ಕೇಳಿಲ್ಲ? ಸ್ನೇಹಿತರೇ~ ಎಂದು ತಮ್ಮ ಪಕ್ಕ ಕುಳಿತಿದ್ದ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಗೋವಿಂದ ಕಾರಜೋಳ ಅವರತ್ತ ನೋಡಿದರು. ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. <br /> <br /> ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ಕುರಿತು ಕೇಳಲಾದ ಪ್ರಶ್ನೆಗೆ `ನೀಡಲು ನಮ್ಮ ಬಳಿ ಯಾವುದೇ ಸ್ಥಾನಮಾನ ಇಲ್ಲ~ ಎಂದು ಮುಗುಮ್ಮಾಗಿ ಹೇಳಿದರು. <br /> <br /> `ಯಡಿಯೂರಪ್ಪ ಕೂಡ ನನ್ನ ಹಾಗೆ ಹಿರಿಯ ನಾಯಕರೇ ಇದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಸಮುದಾಯಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಕೂಡ ಸರ್ಕಾರ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ~ ಎಂದು ಹೇಳಿದರು.<br /> <br /> `ಸದಾನಂದಗೌಡರು ಸದ್ಯ ಮುಖ್ಯಮಂತ್ರಿ ಇದ್ದಾರೆ. ಪಾರ್ಟಿ ನಡೆಯುತ್ತಿದೆ. ನಿಂತಿಲ್ಲ ಮತ್ತು ಕುಳಿತಿಲ್ಲ. ಎಲ್ಲವೂ ಚೆನ್ನಾಗಿದೆ. ಬದಲಾವಣೆ ಮಾಡುವ ಪ್ರಶ್ನೆ ಎದುರಾಗಿಲ್ಲ. ಪ್ರಶ್ನೆ ಬಂದಾಗ ನೋಡಿದರಾಯಿತು. ಈಗೇಕೆ ಆ ಬಗ್ಗೆ ಚರ್ಚೆ?~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೀದರ್:</strong> `ಈಶ್ವರಪ್ಪ ಅವರು ನಮ್ಮ ಪಕ್ಷದ ಅಧ್ಯಕ್ಷ, ಸದಾನಂದಗೌಡರು ಮುಖ್ಯಮಂತ್ರಿ ಹಾಗೂ ಯಡಿಯೂರಪ್ಪ ಅವರು ಕರ್ನಾಟಕದ ಅತ್ಯಂತ ಜನಪ್ರಿಯ ಮತ್ತು ದೊಡ್ಡ ನಾಯಕ~ ಎಂದು ಬಿಜೆಪಿ ರಾಷ್ಟ್ರೀಯ ನಾಯಕ ರಾಜನಾಥ್ಸಿಂಗ್ ಹೇಳಿದರು.<br /> <br /> `ಈಗ ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾರೆ. ರಾಜ್ಯ ಸರ್ಕಾರ ಚೆನ್ನಾಗಿಯೇ ಕೆಲಸ ಮಾಡುತ್ತಿದೆ. ಸದ್ಯ ಅವರನ್ನು ಬದಲಾಯಿಸುವ ಪ್ರಶ್ನೆ ಉದ್ಭವಿಸಿಲ್ಲ~ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.<br /> <br /> ರಾಜ್ಯದಲ್ಲಿ ಇರುವ ಗೊಂದಲದ ಬಗ್ಗೆ ನಿಮ್ಮ ಅಭಿಪ್ರಾಯ ಮತ್ತು ಸಲಹೆ ಏನು? ಎಂಬ ಪ್ರಶ್ನೆಗೆ `ಸಲಹೆ ಕೇಳಿದಾಗ ಮಾತ್ರ ನೀಡಲಾಗುತ್ತದೆ. ಕೇಳದೇ ಸಲಹೆ ನೀಡಲು ಬರುವುದಿಲ್ಲ~ ಎಂದು ಹೇಳಿದ ರಾಜನಾಥ್ಸಿಂಗ್ ಅವರು `ಇದುವರೆಗೆ ಯಾಕೆ ಸಲಹೆ ಕೇಳಿಲ್ಲ? ಸ್ನೇಹಿತರೇ~ ಎಂದು ತಮ್ಮ ಪಕ್ಕ ಕುಳಿತಿದ್ದ ಸಚಿವರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಿ.ಎಂ. ಉದಾಸಿ, ಗೋವಿಂದ ಕಾರಜೋಳ ಅವರತ್ತ ನೋಡಿದರು. ಸಚಿವರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಲಿಲ್ಲ. <br /> <br /> ಯಡಿಯೂರಪ್ಪ ಅವರಿಗೆ ಸ್ಥಾನಮಾನ ನೀಡುವ ಕುರಿತು ಕೇಳಲಾದ ಪ್ರಶ್ನೆಗೆ `ನೀಡಲು ನಮ್ಮ ಬಳಿ ಯಾವುದೇ ಸ್ಥಾನಮಾನ ಇಲ್ಲ~ ಎಂದು ಮುಗುಮ್ಮಾಗಿ ಹೇಳಿದರು. <br /> <br /> `ಯಡಿಯೂರಪ್ಪ ಕೂಡ ನನ್ನ ಹಾಗೆ ಹಿರಿಯ ನಾಯಕರೇ ಇದ್ದಾರೆ. ಅವರು ಅಧಿಕಾರದಲ್ಲಿ ಇದ್ದಾಗ ಸಮುದಾಯಕ್ಕಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಕೂಡ ಸರ್ಕಾರ ಒಳ್ಳೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ~ ಎಂದು ಹೇಳಿದರು.<br /> <br /> `ಸದಾನಂದಗೌಡರು ಸದ್ಯ ಮುಖ್ಯಮಂತ್ರಿ ಇದ್ದಾರೆ. ಪಾರ್ಟಿ ನಡೆಯುತ್ತಿದೆ. ನಿಂತಿಲ್ಲ ಮತ್ತು ಕುಳಿತಿಲ್ಲ. ಎಲ್ಲವೂ ಚೆನ್ನಾಗಿದೆ. ಬದಲಾವಣೆ ಮಾಡುವ ಪ್ರಶ್ನೆ ಎದುರಾಗಿಲ್ಲ. ಪ್ರಶ್ನೆ ಬಂದಾಗ ನೋಡಿದರಾಯಿತು. ಈಗೇಕೆ ಆ ಬಗ್ಗೆ ಚರ್ಚೆ?~ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>