<p><br /> ‘ಮನಸು ತಣ್ಣಗೆ ಆಗಬೇಕಾದರೆ ಹೃದಯ ಬಿಸಿ ಆಗಬೇಕು’.<br /> <br /> ಹಾಗೆಂದದ್ದು ಕೆ.ಕಲ್ಯಾಣ್. ‘ಗನ್’ ಚಿತ್ರದ ಧ್ವನಿತಟ್ಟೆ ಬಿಡುಗಡೆ ಸಮಾರಂಭ ಅವರ ಹುಟ್ಟುಹಬ್ಬಕ್ಕೂ ಸಾಕ್ಷಿಯಾಗಿತ್ತು. ಗೀತಗುಚ್ಛದ ಬಿಡುಗಡೆ ನಂತರ ಕೇಕ್ ಕತ್ತರಿಸಿದ ಕಲ್ಯಾಣ್ ಮಾತನಾಡಿದ್ದು ಭಾವನೆಗಳ ಬಿಸಿ-ಕಾವು ಕುರಿತು.<br /> <br /> ‘ಗನ್’ ಹರೀಶ್ ರಾಜ್ ನಿರ್ದೇಶನದ ಎರಡನೇ ಚಿತ್ರ. ‘ಕಲಾಕಾರ್’ ಚಿತ್ರದ ನಂತರ ಸೈಲೆಂಟಾಗಿದ್ದ ಹರೀಶ್ ಕೈಯಲ್ಲಿ ಈಗ ‘ಗನ್’!. ಮುರಳಿ ಎನ್ನುವ ಗೆಳೆಯರೊಬ್ಬರು ಚಿತ್ರದ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.<br /> <br /> ಆರಂಭದಲ್ಲಿ ಹರೀಶ್ ಗೊತ್ತುಪಡಿಸಿದ ಬಜೆಟ್ ಕೋಟಿಯೊಳಗೇ ಇತ್ತು. ಸಿನಿಮಾ ಮುಗಿಯುವ ವೇಳೆಗೆ ಬಜೆಟ್ 1.8 ಕೋಟಿ ಮುಟ್ಟಿದೆ. ಇದರಿಂದ ಮುರಳಿ ಅವರಿಗೇನೂ ಬೇಸರವಾಗಿಲ್ಲ. ಸಿನಿಮಾ ಚೆನ್ನಾಗಿ ಬಂದಿರುವುದೇ ಸಮಾಧಾನ ಎನ್ನುವ ತತ್ವಜ್ಞಾನ ಅವರದ್ದು. ಸಿನಿಮಾ ಪ್ರಚಾರವನ್ನು ಈಗಾಗಲೇ ಆರಂಭಿಸಿರುವ ಅವರು, ತೆಲುಗು-ತಮಿಳು ಪತ್ರಿಕೆಗಳಲ್ಲೂ ಜಾಹಿರಾತು ನೀಡುತ್ತಾರಂತೆ. <br /> <br /> ಬಜೆಟ್ ಮಿತಿಮೀರಿರುವುದರಲ್ಲಿ ತಮ್ಮ ತಪ್ಪೇನೂ ಇಲ್ಲ ಎನ್ನುವುದು ಹರೀಶ್ ಸ್ಪಷ್ಟನೆ. ನಾಯಕಿಯರ ಡೇಟ್ಸ್ಗಳಲ್ಲಿ ಉಂಟಾದ ವ್ಯತ್ಯಯ ಸೇರಿದಂತೆ ಕೈಮೀರಿದ ಹಲವು ಕಾರಣಗಳಿಂದ ನಿರ್ಮಾಣ ವೆಚ್ಚ ಹೆಚ್ಚಾಗಿದೆಯಂತೆ.<br /> <br /> ನಿರ್ದೇಶನದೊಂದಿಗೆ ನಾಯಕನಾಗಿ ನಟಿಸಿರುವ ಹರೀಶ್ ರಾಜ್ ಗೀತೆಯೊಂದನ್ನು ಗುನುಗುನಿಸುತ್ತಿದ್ದರು. ‘ಎಣ್ಣೆ ಯಾರು ಕಂಡುಹಿಡಿದ್ರು..’ ಎನ್ನುವ ಯೋಗರಾಜ ಭಟ್ ಬರೆದಿರುವ ಹಾಡು ಅವರಿಗೆ ಸಖತ್ ಕಿಕ್ ಕೊಟ್ಟಿದೆ. ಈ ಗೀತೆಯ ಚಿತ್ರೀಕರಣದಲ್ಲಿ ಆನೆಯೊಂದನ್ನು ಬಳಸಿಕೊಳ್ಳಲಾಗಿದೆಯಂತೆ. ಪ್ರತ್ಯೇಕ ಗೀತೆಗಳಲ್ಲಿ ರಚನಾ ಮೌರ್ಯ ಹಾಗೂ ಕಿರಣ್ ರಾಥೋಡ್ ಕಾಣಿಸಿಕೊಂಡಿದ್ದಾರಂತೆ.<br /> <br /> ನಿಖಿತಾ ಹಾಗೂ ಮಲ್ಲಿಕಾ ಕಪೂರ್ ಚಿತ್ರದ ನಾಯಕಿಯರು. ಒಬ್ಬಾಕೆ ಕಾಲೇಜು ವಿದ್ಯಾರ್ಥಿನಿ ಮತ್ತೊಬ್ಬಳು ಕಿರುತೆರೆಯಲ್ಲಿ ಮಾತಿನಮಲ್ಲಿ. ಇಬ್ಬರ ನಡುವೆ ಹರೀಶ್ ಹುಡುಗಾಟ, ಹುಡುಕಾಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><br /> ‘ಮನಸು ತಣ್ಣಗೆ ಆಗಬೇಕಾದರೆ ಹೃದಯ ಬಿಸಿ ಆಗಬೇಕು’.<br /> <br /> ಹಾಗೆಂದದ್ದು ಕೆ.ಕಲ್ಯಾಣ್. ‘ಗನ್’ ಚಿತ್ರದ ಧ್ವನಿತಟ್ಟೆ ಬಿಡುಗಡೆ ಸಮಾರಂಭ ಅವರ ಹುಟ್ಟುಹಬ್ಬಕ್ಕೂ ಸಾಕ್ಷಿಯಾಗಿತ್ತು. ಗೀತಗುಚ್ಛದ ಬಿಡುಗಡೆ ನಂತರ ಕೇಕ್ ಕತ್ತರಿಸಿದ ಕಲ್ಯಾಣ್ ಮಾತನಾಡಿದ್ದು ಭಾವನೆಗಳ ಬಿಸಿ-ಕಾವು ಕುರಿತು.<br /> <br /> ‘ಗನ್’ ಹರೀಶ್ ರಾಜ್ ನಿರ್ದೇಶನದ ಎರಡನೇ ಚಿತ್ರ. ‘ಕಲಾಕಾರ್’ ಚಿತ್ರದ ನಂತರ ಸೈಲೆಂಟಾಗಿದ್ದ ಹರೀಶ್ ಕೈಯಲ್ಲಿ ಈಗ ‘ಗನ್’!. ಮುರಳಿ ಎನ್ನುವ ಗೆಳೆಯರೊಬ್ಬರು ಚಿತ್ರದ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.<br /> <br /> ಆರಂಭದಲ್ಲಿ ಹರೀಶ್ ಗೊತ್ತುಪಡಿಸಿದ ಬಜೆಟ್ ಕೋಟಿಯೊಳಗೇ ಇತ್ತು. ಸಿನಿಮಾ ಮುಗಿಯುವ ವೇಳೆಗೆ ಬಜೆಟ್ 1.8 ಕೋಟಿ ಮುಟ್ಟಿದೆ. ಇದರಿಂದ ಮುರಳಿ ಅವರಿಗೇನೂ ಬೇಸರವಾಗಿಲ್ಲ. ಸಿನಿಮಾ ಚೆನ್ನಾಗಿ ಬಂದಿರುವುದೇ ಸಮಾಧಾನ ಎನ್ನುವ ತತ್ವಜ್ಞಾನ ಅವರದ್ದು. ಸಿನಿಮಾ ಪ್ರಚಾರವನ್ನು ಈಗಾಗಲೇ ಆರಂಭಿಸಿರುವ ಅವರು, ತೆಲುಗು-ತಮಿಳು ಪತ್ರಿಕೆಗಳಲ್ಲೂ ಜಾಹಿರಾತು ನೀಡುತ್ತಾರಂತೆ. <br /> <br /> ಬಜೆಟ್ ಮಿತಿಮೀರಿರುವುದರಲ್ಲಿ ತಮ್ಮ ತಪ್ಪೇನೂ ಇಲ್ಲ ಎನ್ನುವುದು ಹರೀಶ್ ಸ್ಪಷ್ಟನೆ. ನಾಯಕಿಯರ ಡೇಟ್ಸ್ಗಳಲ್ಲಿ ಉಂಟಾದ ವ್ಯತ್ಯಯ ಸೇರಿದಂತೆ ಕೈಮೀರಿದ ಹಲವು ಕಾರಣಗಳಿಂದ ನಿರ್ಮಾಣ ವೆಚ್ಚ ಹೆಚ್ಚಾಗಿದೆಯಂತೆ.<br /> <br /> ನಿರ್ದೇಶನದೊಂದಿಗೆ ನಾಯಕನಾಗಿ ನಟಿಸಿರುವ ಹರೀಶ್ ರಾಜ್ ಗೀತೆಯೊಂದನ್ನು ಗುನುಗುನಿಸುತ್ತಿದ್ದರು. ‘ಎಣ್ಣೆ ಯಾರು ಕಂಡುಹಿಡಿದ್ರು..’ ಎನ್ನುವ ಯೋಗರಾಜ ಭಟ್ ಬರೆದಿರುವ ಹಾಡು ಅವರಿಗೆ ಸಖತ್ ಕಿಕ್ ಕೊಟ್ಟಿದೆ. ಈ ಗೀತೆಯ ಚಿತ್ರೀಕರಣದಲ್ಲಿ ಆನೆಯೊಂದನ್ನು ಬಳಸಿಕೊಳ್ಳಲಾಗಿದೆಯಂತೆ. ಪ್ರತ್ಯೇಕ ಗೀತೆಗಳಲ್ಲಿ ರಚನಾ ಮೌರ್ಯ ಹಾಗೂ ಕಿರಣ್ ರಾಥೋಡ್ ಕಾಣಿಸಿಕೊಂಡಿದ್ದಾರಂತೆ.<br /> <br /> ನಿಖಿತಾ ಹಾಗೂ ಮಲ್ಲಿಕಾ ಕಪೂರ್ ಚಿತ್ರದ ನಾಯಕಿಯರು. ಒಬ್ಬಾಕೆ ಕಾಲೇಜು ವಿದ್ಯಾರ್ಥಿನಿ ಮತ್ತೊಬ್ಬಳು ಕಿರುತೆರೆಯಲ್ಲಿ ಮಾತಿನಮಲ್ಲಿ. ಇಬ್ಬರ ನಡುವೆ ಹರೀಶ್ ಹುಡುಗಾಟ, ಹುಡುಕಾಟ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>