<p><strong>ಬಳ್ಳಾರಿ:</strong> ಬುಧವಾರ ಮಧ್ಯಾಹ್ನ ಸಿಡಿಲು ಗುಡುಗಿನ ಅಬ್ಬರದ ನಡುವೆ ಭಾರಿ ಮಳೆ ಸುರಿಯಿತು. ಮಧ್ಯಾಹ್ನ 1.45ಕ್ಕೆ ಆರಂಭವಾದ ಮಳೆ 45 ನಿಮಿಷಗಳ ಕಾಲ ಸುರಿಯಿತು. ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆಯಾಯಿತು. ನಗರದಲ್ಲಿ ಒಟ್ಟು 30 ಮಿ.ಮೀ. ಮಳೆ ಸುರಿದಿರುವುದು ವರದಿಯಾಗಿದೆ.<br /> <br /> ನಗರದ ಕೊಳೆಗೇರಿಗಳಲ್ಲಿರುವ ಗುಡಿಸಲುಗಳೊಳಗೆ ನೀರು ನುಗ್ಗಿ ನಿವಾಸಿಗಳು ತೀವ್ರ ಪರದಾಡಿದರೆ, ತಹಶೀಲ್ದಾರ್ ಕಚೇರಿಯ ಆವರಣ ಕೆಲ ಕಾಲ ಜಲಾವೃತ ಆಗಿದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಜನರು ಹೊರ ಹೋಗುವುದಕ್ಕೆ ಅಡಚಣೆ ಉಂಟಾಯಿತು.<br /> <br /> ಮಳೆ ಸುರಿಯಿತೆಂದರೆ ಸಂಪೂರ್ಣ ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಹಳೆ ಬಸ್ ನಿಲ್ದಾಣ, ಕನಿದುರ್ಗಮ್ಮ ರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯಲ್ಲಿ ವಾಹಗಳ ಸಂಚಾರಕ್ಕೆ ತೊಂದರೆಯಾಯಿತು.<br /> ಅನೇಕ ವರ್ಷಗಳಿಂದ ಈ ತೊಂದರೆ ಇದ್ದರೂ ಸಂಬಂಧಿಸಿದರು ಸಮಸ್ಯೆಯ ಪರಿಹಾರೋಪಾಯ ಕಂಡುಕೊಳ್ಳದಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗೆ ಈಡು ಮಾಡಿದೆ ಎಂದು ಅನೇಕರು ಗೊಣಗಿದರು.<br /> <br /> ಒಂದು ಗಂಟೆಗೂ ಅಧಿಕ ಕಾಲ ಸಿಡಿಲು ಗುಡುಗುಗಳ ಆರ್ಭಟದಿಂದಾಗಿ ಜನತೆ ಭಯಭೀತರಾದರು. ನಗರದ ಬಸವ ಭವನದ ಹಿಂಭಾಗದಲ್ಲಿರುವ ಗುಡಿಸಲೊಂದು ಸಿಡಿಲು ಬಡಿದು ಅರ್ಧ ಭಾಗ ಸುಟ್ಟು ಕರಕಲಾಗಿದೆ.<br /> ಗುಡಿಸಲಿಲ್ಲಿ ಯಾರೂ ವಾಸವಿಲ್ಲದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿಕೊಂಡ ಬೆಂಕಿ ನಂತರ ಗುಡಿಸಲಿಗೂ ವ್ಯಾಪಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬಳ್ಳಾರಿ:</strong> ಬುಧವಾರ ಮಧ್ಯಾಹ್ನ ಸಿಡಿಲು ಗುಡುಗಿನ ಅಬ್ಬರದ ನಡುವೆ ಭಾರಿ ಮಳೆ ಸುರಿಯಿತು. ಮಧ್ಯಾಹ್ನ 1.45ಕ್ಕೆ ಆರಂಭವಾದ ಮಳೆ 45 ನಿಮಿಷಗಳ ಕಾಲ ಸುರಿಯಿತು. ತೆಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ತೊಂದರೆಯಾಯಿತು. ನಗರದಲ್ಲಿ ಒಟ್ಟು 30 ಮಿ.ಮೀ. ಮಳೆ ಸುರಿದಿರುವುದು ವರದಿಯಾಗಿದೆ.<br /> <br /> ನಗರದ ಕೊಳೆಗೇರಿಗಳಲ್ಲಿರುವ ಗುಡಿಸಲುಗಳೊಳಗೆ ನೀರು ನುಗ್ಗಿ ನಿವಾಸಿಗಳು ತೀವ್ರ ಪರದಾಡಿದರೆ, ತಹಶೀಲ್ದಾರ್ ಕಚೇರಿಯ ಆವರಣ ಕೆಲ ಕಾಲ ಜಲಾವೃತ ಆಗಿದ್ದರಿಂದ ಕಚೇರಿ ಕೆಲಸಕ್ಕೆ ಆಗಮಿಸಿದ್ದ ಜನರು ಹೊರ ಹೋಗುವುದಕ್ಕೆ ಅಡಚಣೆ ಉಂಟಾಯಿತು.<br /> <br /> ಮಳೆ ಸುರಿಯಿತೆಂದರೆ ಸಂಪೂರ್ಣ ಜಲಾವೃತವಾಗಿ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟುಮಾಡುವ ಹಳೆ ಬಸ್ ನಿಲ್ದಾಣ, ಕನಿದುರ್ಗಮ್ಮ ರಸ್ತೆಯಲ್ಲಿನ ರೈಲ್ವೆ ಕೆಳ ಸೇತುವೆಯಲ್ಲಿ ವಾಹಗಳ ಸಂಚಾರಕ್ಕೆ ತೊಂದರೆಯಾಯಿತು.<br /> ಅನೇಕ ವರ್ಷಗಳಿಂದ ಈ ತೊಂದರೆ ಇದ್ದರೂ ಸಂಬಂಧಿಸಿದರು ಸಮಸ್ಯೆಯ ಪರಿಹಾರೋಪಾಯ ಕಂಡುಕೊಳ್ಳದಿರುವುದು ಸಾರ್ವಜನಿಕರಿಗೆ ಸಾಕಷ್ಟು ತೊಂದರೆಗೆ ಈಡು ಮಾಡಿದೆ ಎಂದು ಅನೇಕರು ಗೊಣಗಿದರು.<br /> <br /> ಒಂದು ಗಂಟೆಗೂ ಅಧಿಕ ಕಾಲ ಸಿಡಿಲು ಗುಡುಗುಗಳ ಆರ್ಭಟದಿಂದಾಗಿ ಜನತೆ ಭಯಭೀತರಾದರು. ನಗರದ ಬಸವ ಭವನದ ಹಿಂಭಾಗದಲ್ಲಿರುವ ಗುಡಿಸಲೊಂದು ಸಿಡಿಲು ಬಡಿದು ಅರ್ಧ ಭಾಗ ಸುಟ್ಟು ಕರಕಲಾಗಿದೆ.<br /> ಗುಡಿಸಲಿಲ್ಲಿ ಯಾರೂ ವಾಸವಿಲ್ಲದ ಕಾರಣ ಹೆಚ್ಚಿನ ಅಪಾಯ ಸಂಭವಿಸಿಲ್ಲ. ತೆಂಗಿನ ಮರವೊಂದಕ್ಕೆ ಸಿಡಿಲು ಬಡಿದು ಹೊತ್ತಿಕೊಂಡ ಬೆಂಕಿ ನಂತರ ಗುಡಿಸಲಿಗೂ ವ್ಯಾಪಿಸಿದೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>