<p><strong>ಸಿದ್ದಾಪುರ</strong>: ಬೇಸಿಗೆಯ ಕೊನೆಯಲ್ಲಿ ಸಂಪೂರ್ಣ ಬರಿದಾಗಿದ್ದ ತಾಲ್ಲೂಕಿನ ಅರೆಂದೂರು ಹೊಳೆ ಮುಂಗಾರು ಆರಂಭವಾಗಿ ಹತ್ತು ದಿನಗಳ ಅವಧಿಯಲ್ಲಿಯೇ ತುಂಬಿ ಹರಿಯತೊಡಗಿದೆ. ಇದರಿಂದ ಪಟ್ಟಣಕ್ಕೆ ನೀರು ಪೂರೈಕೆ ಸರಾಗಗೊಂಡಿದೆ.<br /> <br /> ಅರೆಂದೂರು ಹೊಳೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಹೊಳೆಯಲ್ಲಿ ಈಗಾಗಲೇ ಸಾಕಷ್ಟು ನೀರು ಹರಿಯತೊಡಗಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣದಿಂದ ಈ ವರ್ಷದ ಮೇ ಕೊನೆಯ ವಾರದಲ್ಲಿ ಅರೆಂದೂರು ಹೊಳೆ ಬತ್ತಿ, ಈ ಯೋಜನೆಯ ಚೆಕ್ಡ್ಯಾಮ್ ಬರಿದಾಯಿತು. ಇದರಿಂದ ಕೆಲವು ದಿನಗಳ ಕಾಲ ಪಟ್ಟಣದ ನೀರು ಸರಬರಾಜು ಸ್ಥಗಿತಗೊಂಡಿತು.<br /> <br /> ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಸಂದರ್ಭ ಬಂದೀತು ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು.<br /> <br /> ಆದರೆ ಈ ಆತಂಕ ಮಂಜಿನಂತೆ ಕರಗಿಹೋಗಲು ಸಕಾಲದಲ್ಲಿ ಆರಂಭವಾದ ಮಳೆ ಕಾರಣವಾಯಿತು. ಈ ಬಾರಿಯ ಮುಂಗಾರು ನಿರೀಕ್ಷೆಗಿಂತ ಹೆಚ್ಚಾಗಿಯೇ ಸುರಿದಿದ್ದರಿಂದ ಹೊಳೆ-ಹಳ್ಳಗಳು ಮೈತುಂಬಿಕೊಂಡವು. ಈ ಹೊಳೆಯ ಸಮೀಪದಲ್ಲಿರುವ ಅರೆಂದೂರಿನಲ್ಲಿ ಮಳೆಮಾಪಕ ಕೂಡ ಇದ್ದು, ಅಲ್ಲಿ ಈವರೆಗೆ ಉತ್ತಮ ಮಳೆ ಬಿದ್ದಿದೆ. ಇದುವರೆಗೆ ಒಟ್ಟು 579 ಮಿ.ಮೀ. ಮಳೆ ಅಲ್ಲಿ ದಾಖಲಾಗಿದೆ.<br /> <br /> ಪ್ರಸ್ತುತ 14,213ರಷ್ಟು ಪಟ್ಟಣದ ಜನಸಂಖ್ಯೆಯಾಗಿದ್ದು, 80 ಸಾರ್ವಜನಿಕ ನಳಗಳು ಮತ್ತು ಒಂದೂವರೆ ಸಾವಿರಕ್ಕೂ ಅಧಿಕ ವೈಯಕ್ತಿಕ ನಳಗಳಿವೆ. ಈ ಎಲ್ಲ ನಳಗಳಲ್ಲಿಯೂ ನೀರು ಬರಬೇಕಾದರೆ ಅರೆಂದೂರು ಹೊಳೆಯಲ್ಲಿ ಸಾಕಷ್ಟು ನೀರಿರಬೇಕಾಗುತ್ತದೆ ಎನ್ನುವುದು ಕಟುಸತ್ಯ. ಈಗಿನ ಪರಿಸ್ಥಿತಿ ಗಮನಿಸಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, `ಸದ್ಯ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದು' ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿದ್ದಾಪುರ</strong>: ಬೇಸಿಗೆಯ ಕೊನೆಯಲ್ಲಿ ಸಂಪೂರ್ಣ ಬರಿದಾಗಿದ್ದ ತಾಲ್ಲೂಕಿನ ಅರೆಂದೂರು ಹೊಳೆ ಮುಂಗಾರು ಆರಂಭವಾಗಿ ಹತ್ತು ದಿನಗಳ ಅವಧಿಯಲ್ಲಿಯೇ ತುಂಬಿ ಹರಿಯತೊಡಗಿದೆ. ಇದರಿಂದ ಪಟ್ಟಣಕ್ಕೆ ನೀರು ಪೂರೈಕೆ ಸರಾಗಗೊಂಡಿದೆ.<br /> <br /> ಅರೆಂದೂರು ಹೊಳೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ಈ ಹೊಳೆಯಲ್ಲಿ ಈಗಾಗಲೇ ಸಾಕಷ್ಟು ನೀರು ಹರಿಯತೊಡಗಿದೆ. ಕಳೆದ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದ್ದ ಕಾರಣದಿಂದ ಈ ವರ್ಷದ ಮೇ ಕೊನೆಯ ವಾರದಲ್ಲಿ ಅರೆಂದೂರು ಹೊಳೆ ಬತ್ತಿ, ಈ ಯೋಜನೆಯ ಚೆಕ್ಡ್ಯಾಮ್ ಬರಿದಾಯಿತು. ಇದರಿಂದ ಕೆಲವು ದಿನಗಳ ಕಾಲ ಪಟ್ಟಣದ ನೀರು ಸರಬರಾಜು ಸ್ಥಗಿತಗೊಂಡಿತು.<br /> <br /> ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡುವ ಸಂದರ್ಭ ಬಂದೀತು ಎಂದು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಆತಂಕಕ್ಕೆ ಒಳಗಾಗಿದ್ದರು.<br /> <br /> ಆದರೆ ಈ ಆತಂಕ ಮಂಜಿನಂತೆ ಕರಗಿಹೋಗಲು ಸಕಾಲದಲ್ಲಿ ಆರಂಭವಾದ ಮಳೆ ಕಾರಣವಾಯಿತು. ಈ ಬಾರಿಯ ಮುಂಗಾರು ನಿರೀಕ್ಷೆಗಿಂತ ಹೆಚ್ಚಾಗಿಯೇ ಸುರಿದಿದ್ದರಿಂದ ಹೊಳೆ-ಹಳ್ಳಗಳು ಮೈತುಂಬಿಕೊಂಡವು. ಈ ಹೊಳೆಯ ಸಮೀಪದಲ್ಲಿರುವ ಅರೆಂದೂರಿನಲ್ಲಿ ಮಳೆಮಾಪಕ ಕೂಡ ಇದ್ದು, ಅಲ್ಲಿ ಈವರೆಗೆ ಉತ್ತಮ ಮಳೆ ಬಿದ್ದಿದೆ. ಇದುವರೆಗೆ ಒಟ್ಟು 579 ಮಿ.ಮೀ. ಮಳೆ ಅಲ್ಲಿ ದಾಖಲಾಗಿದೆ.<br /> <br /> ಪ್ರಸ್ತುತ 14,213ರಷ್ಟು ಪಟ್ಟಣದ ಜನಸಂಖ್ಯೆಯಾಗಿದ್ದು, 80 ಸಾರ್ವಜನಿಕ ನಳಗಳು ಮತ್ತು ಒಂದೂವರೆ ಸಾವಿರಕ್ಕೂ ಅಧಿಕ ವೈಯಕ್ತಿಕ ನಳಗಳಿವೆ. ಈ ಎಲ್ಲ ನಳಗಳಲ್ಲಿಯೂ ನೀರು ಬರಬೇಕಾದರೆ ಅರೆಂದೂರು ಹೊಳೆಯಲ್ಲಿ ಸಾಕಷ್ಟು ನೀರಿರಬೇಕಾಗುತ್ತದೆ ಎನ್ನುವುದು ಕಟುಸತ್ಯ. ಈಗಿನ ಪರಿಸ್ಥಿತಿ ಗಮನಿಸಿರುವ ಪಟ್ಟಣ ಪಂಚಾಯ್ತಿ ಅಧಿಕಾರಿಗಳು, `ಸದ್ಯ ಪಟ್ಟಣಕ್ಕೆ ಕುಡಿಯುವ ನೀರಿನ ಸಮಸ್ಯೆ ಉಂಟಾಗದು' ಎಂದು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>