<p>ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲು, ಊದಲು, ಜೋಳದಂತಹ ಪೌಷ್ಟಿಕಾಂಶಭರಿತ ಸಿರಿಧಾನ್ಯಗಳಿಗೆ ಇತರ ಯಾವ ಧಾನ್ಯಗಳೂ ಸಾಟಿಯಾಗಲಾರವು. ಆಹಾರ ತಜ್ಞರ ಪ್ರಕಾರ ಸಿರಿಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್ ಹಾಗೂ ಖನಿಜಾಂಶ ಹೊಂದಿವೆ. ಹಲವು ರೋಗಗಳಿಗೆ ಈ ಧಾನ್ಯಗಳು ಔಷಧವಾಗುತ್ತವೆ. ಮಧುಮೇಹ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯಗಳಂತೂ ಉತ್ತಮ ಆಹಾರ.<br /> <br /> ಮರೆಯಾಗುತ್ತಿರುವ ಕಿರುಧಾನ್ಯಗಳನ್ನು ಮರಳಿ ಮಾರುಕಟ್ಟೆಗೆ ತರಲು ಇದೇ ೨೮ರಿಂದ ೩೦ರವರೆಗೆ ದಾವಣಗೆರೆಯ ತೋಗಟವೀರ ಸಮುದಾಯ ಭವನದಲ್ಲಿ ‘ಸಿರಿಧಾನ್ಯ ಮೇಳ’ ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಿರಿಧಾನ್ಯ ಸಂರಕ್ಷಕರು, ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಲಿದ್ದಾರೆ.<br /> <br /> ಅಪರೂಪದ ಸಿರಿಧಾನ್ಯ ತಳಿಗಳ ಪ್ರದರ್ಶನ, ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ (ರಾಗಿ ಬಿಸ್ಕೆಟ್, ನವಣೆ ಅಪ್ಪಳ, ನವಣೆ ಉಂಡೆ ಮತ್ತು ವಿವಿಧ ತಿನಿಸುಗಳ) ಮಾರಾಟವಿರುತ್ತದೆ. ಆಹಾರ ತಜ್ಞರಿಂದ ವಿಶೇಷ ಉಪನ್ಯಾಸ, ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಮಾಹಿತಿಗೆ: ೯೯೭೨೦೮೮೯೨೯ / ೯೯೪೫೩೮೨೨೦೯.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಗಿ, ನವಣೆ, ಸಾಮೆ, ಸಜ್ಜೆ, ಹಾರಕ, ಕೊರಲು, ಊದಲು, ಜೋಳದಂತಹ ಪೌಷ್ಟಿಕಾಂಶಭರಿತ ಸಿರಿಧಾನ್ಯಗಳಿಗೆ ಇತರ ಯಾವ ಧಾನ್ಯಗಳೂ ಸಾಟಿಯಾಗಲಾರವು. ಆಹಾರ ತಜ್ಞರ ಪ್ರಕಾರ ಸಿರಿಧಾನ್ಯಗಳು, ಅಕ್ಕಿ ಮತ್ತು ಗೋಧಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಪ್ರೋಟಿನ್, ವಿಟಮಿನ್ ಹಾಗೂ ಖನಿಜಾಂಶ ಹೊಂದಿವೆ. ಹಲವು ರೋಗಗಳಿಗೆ ಈ ಧಾನ್ಯಗಳು ಔಷಧವಾಗುತ್ತವೆ. ಮಧುಮೇಹ ಹಾಗೂ ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸಿರಿಧಾನ್ಯಗಳಂತೂ ಉತ್ತಮ ಆಹಾರ.<br /> <br /> ಮರೆಯಾಗುತ್ತಿರುವ ಕಿರುಧಾನ್ಯಗಳನ್ನು ಮರಳಿ ಮಾರುಕಟ್ಟೆಗೆ ತರಲು ಇದೇ ೨೮ರಿಂದ ೩೦ರವರೆಗೆ ದಾವಣಗೆರೆಯ ತೋಗಟವೀರ ಸಮುದಾಯ ಭವನದಲ್ಲಿ ‘ಸಿರಿಧಾನ್ಯ ಮೇಳ’ ಏರ್ಪಡಿಸಲಾಗಿದೆ. ಈ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸಿರಿಧಾನ್ಯ ಸಂರಕ್ಷಕರು, ಸ್ವಸಹಾಯ ಗುಂಪುಗಳ ಸದಸ್ಯರು ಭಾಗವಹಿಸಲಿದ್ದಾರೆ.<br /> <br /> ಅಪರೂಪದ ಸಿರಿಧಾನ್ಯ ತಳಿಗಳ ಪ್ರದರ್ಶನ, ಅವುಗಳಿಂದ ತಯಾರಿಸಿದ ಆಹಾರ ಪದಾರ್ಥಗಳ (ರಾಗಿ ಬಿಸ್ಕೆಟ್, ನವಣೆ ಅಪ್ಪಳ, ನವಣೆ ಉಂಡೆ ಮತ್ತು ವಿವಿಧ ತಿನಿಸುಗಳ) ಮಾರಾಟವಿರುತ್ತದೆ. ಆಹಾರ ತಜ್ಞರಿಂದ ವಿಶೇಷ ಉಪನ್ಯಾಸ, ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳು ನಡೆಯಲಿವೆ. ಮಾಹಿತಿಗೆ: ೯೯೭೨೦೮೮೯೨೯ / ೯೯೪೫೩೮೨೨೦೯.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>