<p><strong>ತುಮಕೂರು: </strong>ಸಮರ್ಪಕ ಸಿಲಿಂಡರ್ ವಿತರಣೆಗೆ ಒತ್ತಾಯಿಸಿ ಗ್ರಾಹಕರು ನಗರದ ಬಿ.ಎಚ್.ರಸ್ತೆಯ ಗ್ಯಾಸ್ ವಿತರಣಾ ಕೇಂದ್ರದ ಎದುರು ಬುಧವಾರ ಪ್ರತಿಭಟಿಸಿದರು.<br /> <br /> `ಬ್ಲಾಕ್ನಲ್ಲಿ ಕೊಳ್ಳಲೂ ಸೀಮೆಎಣ್ಣೆ ಸಿಗುತ್ತಿಲ್ಲ. ಹೊಸ ಕಾಲದ ಮನೆಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಲೂ ಆಗುವುದಿಲ್ಲ. ಸಿಲಿಂಡರ್ಗಳನ್ನೂ ಕೊಡದಿದ್ದರೆ ಅಡುಗೆ ಮಾಡುವುದು ಹೇಗೆ? ಕಳೆದ ಒಂದು ವಾರದಿಂದ ಪ್ರತಿದಿನ ಹೋಟೆಲ್ನಿಂದ ಊಟ ತಂದು ತಿಂದು ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಗ್ರಾಹಕ ಸುಂದರ್ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿ ಮಾಲೀಕರ ಮುಷ್ಕರದ ಸಮಸ್ಯೆ ಈಗ್ಗೆ ಒಂದು ತಿಂಗಳಿಂದ ಕಂಡು ಬಂದಿದೆ. ಆದರೆ ಒಂದು ವರ್ಷದಿಂದ ಇವರು ನಮಗೆ ಸಿಲಿಂಡರ್ ಸರಿಯಾಗಿ ವಿತರಿಸದೆ ಸತಾಯಿಸುತ್ತಿದ್ದಾರೆ. ಹೋಟೆಲ್, ಫುಟ್ಪಾತ್ಗಳಲ್ಲಿ ಬಜ್ಜಿ- ಬೋಂಡಾ ಮಾರುವರಿಗೆ ಬ್ಲಾಕ್ನಲ್ಲಿ ಮಾರಿಕೊಂಡು ನಮಗೆ ಆಟ ಆಡಿಸುತ್ತಿದ್ದಾರೆ~ ಎಂದು ಮತ್ತೊಬ್ಬ ಗ್ರಾಹಕ ಆರಾಧ್ಯ ದೂರಿದರು.<br /> <br /> `ಬುಕ್ ಮಾಡಿ ಒಂದು ತಿಂಗಳಾದರು ಮನೆಗೆ ಸಿಲಿಂಡರ್ ಬಂದಿಲ್ಲ. ನಾವು ಮಕ್ಕಳು- ಮರಿಗಳನ್ನು ಹೇಗೆ ಸಾಕಬೇಕು~ ಎಂದು ಗ್ರಾಹಕರಾದ ಸೈಯದಾ ಬಾನು ಕಷ್ಟ ತೋಡಿಕೊಂಡರು.<br /> <br /> ಗ್ರಾಹಕರನ್ನು ಸಂತೈಸಲು ಯತ್ನಿಸಿದ ಏಜೆನ್ಸಿ ಸಿಬ್ಬಂದಿ, ಅನಿಲ ಪೂರೈಕೆ ಕಂಪೆನಿಗಳು ಮತ್ತು ಸಾಗಣೆದಾರರ ನಡುವಣ ಸಂಘರ್ಷದಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಏಜೆನ್ಸಿಗಳಿಗೆ ನಿಗದಿತ ಅಂತರದಲ್ಲಿ ಸಿಲಿಂಡರ್ಗಳು ದೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.<br /> <br /> <strong>ದೇವರಾಯನದುರ್ಗ ಜಾತ್ರೆ ಇಂದಿನಿಂದ</strong></p>.<p>ತುಮಕೂರು: ದೇವರಾಯನದುರ್ಗ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಮಾ. 1ರಿಂದ 13ರ ವರೆಗೆ ನಡೆಯಲಿದೆ. ಮಾ. 8ರಂದು ಬ್ರಹ್ಮರಥೋತ್ಸವ ಜರುಗಲಿದೆ.<br /> <br /> ಬ್ರಹ್ಮರಥೋತ್ಸವಕ್ಕೆ ಬೇಕಾದ ಸಿದ್ಧತೆ ಮಾಡಲಾಗಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದ್ದು, ದೇವರ ದರ್ಶನ, ಪ್ರಸಾದ ಪಡೆಯಲು ಬ್ಯಾರಿಕೇಡ್ ನಿರ್ಮಿಸಲಾಗಿದೆ. ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದ್ದಾರೆ.<br /> <br /> <strong>ಮದ್ಯ ಮಾರಾಟ ನಿಷೇಧ<br /> </strong><br /> ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ಮಾರ್ಚ್ 1ರಿಂದ 13ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಗುಲ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟನ್ನು ಡಿಸಿ ಆರ್.ಕೆ.ರಾಜು ನಿಷೇಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>ಸಮರ್ಪಕ ಸಿಲಿಂಡರ್ ವಿತರಣೆಗೆ ಒತ್ತಾಯಿಸಿ ಗ್ರಾಹಕರು ನಗರದ ಬಿ.ಎಚ್.ರಸ್ತೆಯ ಗ್ಯಾಸ್ ವಿತರಣಾ ಕೇಂದ್ರದ ಎದುರು ಬುಧವಾರ ಪ್ರತಿಭಟಿಸಿದರು.<br /> <br /> `ಬ್ಲಾಕ್ನಲ್ಲಿ ಕೊಳ್ಳಲೂ ಸೀಮೆಎಣ್ಣೆ ಸಿಗುತ್ತಿಲ್ಲ. ಹೊಸ ಕಾಲದ ಮನೆಗಳಲ್ಲಿ ಸೌದೆ ಒಲೆಯಲ್ಲಿ ಅಡುಗೆ ಮಾಡಲೂ ಆಗುವುದಿಲ್ಲ. ಸಿಲಿಂಡರ್ಗಳನ್ನೂ ಕೊಡದಿದ್ದರೆ ಅಡುಗೆ ಮಾಡುವುದು ಹೇಗೆ? ಕಳೆದ ಒಂದು ವಾರದಿಂದ ಪ್ರತಿದಿನ ಹೋಟೆಲ್ನಿಂದ ಊಟ ತಂದು ತಿಂದು ಬದುಕು ಸಾಗಿಸುವ ಸ್ಥಿತಿ ನಿರ್ಮಾಣವಾಗಿದೆ~ ಎಂದು ಗ್ರಾಹಕ ಸುಂದರ್ ಆಕ್ರೋಶ ವ್ಯಕ್ತಪಡಿಸಿದರು.<br /> <br /> `ಗ್ಯಾಸ್ ಸಿಲಿಂಡರ್ ಸಾಗಿಸುವ ಲಾರಿ ಮಾಲೀಕರ ಮುಷ್ಕರದ ಸಮಸ್ಯೆ ಈಗ್ಗೆ ಒಂದು ತಿಂಗಳಿಂದ ಕಂಡು ಬಂದಿದೆ. ಆದರೆ ಒಂದು ವರ್ಷದಿಂದ ಇವರು ನಮಗೆ ಸಿಲಿಂಡರ್ ಸರಿಯಾಗಿ ವಿತರಿಸದೆ ಸತಾಯಿಸುತ್ತಿದ್ದಾರೆ. ಹೋಟೆಲ್, ಫುಟ್ಪಾತ್ಗಳಲ್ಲಿ ಬಜ್ಜಿ- ಬೋಂಡಾ ಮಾರುವರಿಗೆ ಬ್ಲಾಕ್ನಲ್ಲಿ ಮಾರಿಕೊಂಡು ನಮಗೆ ಆಟ ಆಡಿಸುತ್ತಿದ್ದಾರೆ~ ಎಂದು ಮತ್ತೊಬ್ಬ ಗ್ರಾಹಕ ಆರಾಧ್ಯ ದೂರಿದರು.<br /> <br /> `ಬುಕ್ ಮಾಡಿ ಒಂದು ತಿಂಗಳಾದರು ಮನೆಗೆ ಸಿಲಿಂಡರ್ ಬಂದಿಲ್ಲ. ನಾವು ಮಕ್ಕಳು- ಮರಿಗಳನ್ನು ಹೇಗೆ ಸಾಕಬೇಕು~ ಎಂದು ಗ್ರಾಹಕರಾದ ಸೈಯದಾ ಬಾನು ಕಷ್ಟ ತೋಡಿಕೊಂಡರು.<br /> <br /> ಗ್ರಾಹಕರನ್ನು ಸಂತೈಸಲು ಯತ್ನಿಸಿದ ಏಜೆನ್ಸಿ ಸಿಬ್ಬಂದಿ, ಅನಿಲ ಪೂರೈಕೆ ಕಂಪೆನಿಗಳು ಮತ್ತು ಸಾಗಣೆದಾರರ ನಡುವಣ ಸಂಘರ್ಷದಿಂದಾಗಿ ಗ್ರಾಹಕರಿಗೆ ತೊಂದರೆಯಾಗಿದೆ. ಏಜೆನ್ಸಿಗಳಿಗೆ ನಿಗದಿತ ಅಂತರದಲ್ಲಿ ಸಿಲಿಂಡರ್ಗಳು ದೊರೆಯುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.<br /> <br /> <strong>ದೇವರಾಯನದುರ್ಗ ಜಾತ್ರೆ ಇಂದಿನಿಂದ</strong></p>.<p>ತುಮಕೂರು: ದೇವರಾಯನದುರ್ಗ ಲಕ್ಷ್ಮೀ ನರಸಿಂಹಸ್ವಾಮಿ ರಥೋತ್ಸವ ಮಾ. 1ರಿಂದ 13ರ ವರೆಗೆ ನಡೆಯಲಿದೆ. ಮಾ. 8ರಂದು ಬ್ರಹ್ಮರಥೋತ್ಸವ ಜರುಗಲಿದೆ.<br /> <br /> ಬ್ರಹ್ಮರಥೋತ್ಸವಕ್ಕೆ ಬೇಕಾದ ಸಿದ್ಧತೆ ಮಾಡಲಾಗಿದೆ. ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆಯಿದ್ದು, ದೇವರ ದರ್ಶನ, ಪ್ರಸಾದ ಪಡೆಯಲು ಬ್ಯಾರಿಕೇಡ್ ನಿರ್ಮಿಸಲಾಗಿದೆ. ವಿಶೇಷ ದರ್ಶನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಕೆ.ರಾಜು ತಿಳಿಸಿದ್ದಾರೆ.<br /> <br /> <strong>ಮದ್ಯ ಮಾರಾಟ ನಿಷೇಧ<br /> </strong><br /> ದೇವರಾಯನದುರ್ಗ ಲಕ್ಷ್ಮೀನರಸಿಂಹಸ್ವಾಮಿ ಜಾತ್ರೆ ಮಾರ್ಚ್ 1ರಿಂದ 13ರ ವರೆಗೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಗುಲ ಸುತ್ತಮುತ್ತಲಿನ 5 ಕಿ.ಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟನ್ನು ಡಿಸಿ ಆರ್.ಕೆ.ರಾಜು ನಿಷೇಧಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>