<p>ಸುಳ್ಯ: ಚೆನ್ನಕೇಶವ ದೇವಸ್ಥಾನದ ಎದುರಿನ ಅಂಗಳದಲ್ಲಿ ಇಂಟರ್ಲಾಕ್ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಕಳೆದ ವಾರ ಹೊಂಡ ತೆಗೆದಿದ್ದು, ಅದನ್ನು ಸ್ಥಳೀಯ ಪಟ್ಟಣ ಪಂಚಾಯಿತಿಯವರು ಮಣ್ಣು ತುಂಬಿಸಿ ಮುಚ್ಚಿಸಿದ ಘಟನೆ ಬುಧವಾರ ನಡೆದಿದೆ.<br /> <br /> ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಮುಖ್ಯಮಂತ್ರಿ ನಿಧಿಯಿಂದ ದೇವಸ್ಥಾನದ ಅಂಗಳಕ್ಕೆ ಇಂಟರ್ಲಾಕ್ ಹಾಕುವ ಉದ್ದೇಶದಿಂದ ರೂ. 25 ಲಕ್ಷ ಮಂಜೂರಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿತ್ತು. <br /> <br /> ಸುಮಾರು 80 ಮೀಟರ್ ಡಾಂಬರು ಹಾಕಿದ್ದ ಅಂಗಳವನ್ನು ನಿರ್ಮಿತಿ ಕೇಂದ್ರದವರು ಸಂಪೂರ್ಣ ಅಗೆದು ಹಾಕಿದ್ದು, ಸುಮಾರು ಎಂಟು ಅಡಿಯಷ್ಟಷ್ಟು ಹೊಂಡ ಮಾಡಿದ್ದರು. ಈ ಜಮೀನು ಧರ್ಮಸ್ಥಳ ಕ್ಷೇತ್ರದ ಒಡೆತನದಲ್ಲಿದ್ದು, ಅವರ ಗಮನಕ್ಕೆ ಬಾರದೆ ಜಿಲ್ಲಾಡಳಿತ ಹೊಂಡ ಮಾಡಿದ ಕ್ರಮಕ್ಕೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.<br /> <br /> ಅಲ್ಲಿ ತೆಗೆದ ಮಣ್ಣಿನಲ್ಲಿ ಸ್ಥಳೀಯರೊಬ್ಬರ ಮನೆಗೆ ಹೋಗುವ ಖಾಸಗಿ ರಸ್ತೆ ಅಭಿವೃದ್ಧಿಗೆ ಕೆಲವು ಲೋಡ್ ಮಣ್ಣು ಸುರಿಯಲಾಗಿತ್ತು. ಇದರಿಂದ ರಥಬೀದಿಯಲ್ಲಿ ಮಳೆ ನೀರು ನಿಂತು ಸ್ಥಳೀಯರು ಆ ಮಣ್ಣನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರು. ಮಣ್ಣು ಎಲ್ಲಿಂದ ತೆಗೆದಿದ್ದಾರೋ ಅಲ್ಲಿಗೆ ಹಾಕುವಂತೆ ಪಟ್ಟಣ ಪಂಚಾಯತಿ ಆಡಳಿತ ಸೂಚಿಸಿದ ಮೇರಗೆ ಟಿಪ್ಪರ್ ಮೂಲಕ ಮಣ್ಣನ್ನು ತಂದು ಅದೇ ಹೊಂಡಕ್ಕೆ ತುಂಬಿಸಲಾಗಿದೆ. <br /> <br /> <strong>ಅರ್ಥ್ವರ್ಕ್ನಲ್ಲಿ ಕಮಿಷನ್</strong><br /> ಸರ್ಕಾರದ ಯಾವುದೇ ಕಾಮಗಾರಿ ನಡೆದರೂ ಡಾಂಬರು, ಕಾಂಕ್ರಿಟ್ ಕೆಲಸಕ್ಕಿಂತ ಹೆಚ್ಚು ಕಮಿಶನ್ ಅರ್ತ್ವರ್ಕ್ನಲ್ಲಿ ಸಿಗುತ್ತದೆ. ಹಾಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಜನಪ್ರತಿನಿಧಿಗಳೂ ಅರ್ತ್ವರ್ಕ್ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.<br /> <br /> ಇಲ್ಲೂ ಆಗಿರುವುದು ಅದೇ. ವಾಸ್ತವವಾಗಿ ಇಲ್ಲಿ ಇಂಟರ್ಲಾಕ್ ಅಳವಡಿಕೆಗೆ ಕೇವಲ ಅರ್ಧ ಅಡಿ ಮಾತ್ರ ಸಮತಟ್ಟು ಮಾಡಿದ್ದರೆ ಸಾಕಿತ್ತು. ಆದರೆ ಹೆಚ್ಚು ಬಿಲ್ ಮಾಡುವ ಉದ್ದೇಶದಿಂದ 7ರಿಂದ 8 ಅಡಿ ತಗ್ಗು ತೋಡಿ ಹಣ ಪೋಲು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸುಳ್ಯ: ಚೆನ್ನಕೇಶವ ದೇವಸ್ಥಾನದ ಎದುರಿನ ಅಂಗಳದಲ್ಲಿ ಇಂಟರ್ಲಾಕ್ ಹಾಕುವ ಉದ್ದೇಶದಿಂದ ಜಿಲ್ಲಾಡಳಿತ ಕಳೆದ ವಾರ ಹೊಂಡ ತೆಗೆದಿದ್ದು, ಅದನ್ನು ಸ್ಥಳೀಯ ಪಟ್ಟಣ ಪಂಚಾಯಿತಿಯವರು ಮಣ್ಣು ತುಂಬಿಸಿ ಮುಚ್ಚಿಸಿದ ಘಟನೆ ಬುಧವಾರ ನಡೆದಿದೆ.<br /> <br /> ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆಯಡಿ ಮುಖ್ಯಮಂತ್ರಿ ನಿಧಿಯಿಂದ ದೇವಸ್ಥಾನದ ಅಂಗಳಕ್ಕೆ ಇಂಟರ್ಲಾಕ್ ಹಾಕುವ ಉದ್ದೇಶದಿಂದ ರೂ. 25 ಲಕ್ಷ ಮಂಜೂರಾಗಿತ್ತು. ನಿರ್ಮಿತಿ ಕೇಂದ್ರಕ್ಕೆ ಗುತ್ತಿಗೆ ನೀಡಲಾಗಿತ್ತು. <br /> <br /> ಸುಮಾರು 80 ಮೀಟರ್ ಡಾಂಬರು ಹಾಕಿದ್ದ ಅಂಗಳವನ್ನು ನಿರ್ಮಿತಿ ಕೇಂದ್ರದವರು ಸಂಪೂರ್ಣ ಅಗೆದು ಹಾಕಿದ್ದು, ಸುಮಾರು ಎಂಟು ಅಡಿಯಷ್ಟಷ್ಟು ಹೊಂಡ ಮಾಡಿದ್ದರು. ಈ ಜಮೀನು ಧರ್ಮಸ್ಥಳ ಕ್ಷೇತ್ರದ ಒಡೆತನದಲ್ಲಿದ್ದು, ಅವರ ಗಮನಕ್ಕೆ ಬಾರದೆ ಜಿಲ್ಲಾಡಳಿತ ಹೊಂಡ ಮಾಡಿದ ಕ್ರಮಕ್ಕೆ ಆಕ್ಷೇಪಣೆ ಬಂದ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತಗೊಳಿಸಲಾಗಿತ್ತು.<br /> <br /> ಅಲ್ಲಿ ತೆಗೆದ ಮಣ್ಣಿನಲ್ಲಿ ಸ್ಥಳೀಯರೊಬ್ಬರ ಮನೆಗೆ ಹೋಗುವ ಖಾಸಗಿ ರಸ್ತೆ ಅಭಿವೃದ್ಧಿಗೆ ಕೆಲವು ಲೋಡ್ ಮಣ್ಣು ಸುರಿಯಲಾಗಿತ್ತು. ಇದರಿಂದ ರಥಬೀದಿಯಲ್ಲಿ ಮಳೆ ನೀರು ನಿಂತು ಸ್ಥಳೀಯರು ಆ ಮಣ್ಣನ್ನು ಅಲ್ಲಿಂದ ತೆರವುಗೊಳಿಸಬೇಕೆಂದು ಪಟ್ಟಣ ಪಂಚಾಯಿತಿಗೆ ದೂರು ನೀಡಿದ್ದರು. ಮಣ್ಣು ಎಲ್ಲಿಂದ ತೆಗೆದಿದ್ದಾರೋ ಅಲ್ಲಿಗೆ ಹಾಕುವಂತೆ ಪಟ್ಟಣ ಪಂಚಾಯತಿ ಆಡಳಿತ ಸೂಚಿಸಿದ ಮೇರಗೆ ಟಿಪ್ಪರ್ ಮೂಲಕ ಮಣ್ಣನ್ನು ತಂದು ಅದೇ ಹೊಂಡಕ್ಕೆ ತುಂಬಿಸಲಾಗಿದೆ. <br /> <br /> <strong>ಅರ್ಥ್ವರ್ಕ್ನಲ್ಲಿ ಕಮಿಷನ್</strong><br /> ಸರ್ಕಾರದ ಯಾವುದೇ ಕಾಮಗಾರಿ ನಡೆದರೂ ಡಾಂಬರು, ಕಾಂಕ್ರಿಟ್ ಕೆಲಸಕ್ಕಿಂತ ಹೆಚ್ಚು ಕಮಿಶನ್ ಅರ್ತ್ವರ್ಕ್ನಲ್ಲಿ ಸಿಗುತ್ತದೆ. ಹಾಗಾಗಿ ಅಧಿಕಾರಿಗಳು, ಗುತ್ತಿಗೆದಾರರು ಜನಪ್ರತಿನಿಧಿಗಳೂ ಅರ್ತ್ವರ್ಕ್ಗೆ ಹೆಚ್ಚಿನ ಮಹತ್ವ ನೀಡುತ್ತಾರೆ.<br /> <br /> ಇಲ್ಲೂ ಆಗಿರುವುದು ಅದೇ. ವಾಸ್ತವವಾಗಿ ಇಲ್ಲಿ ಇಂಟರ್ಲಾಕ್ ಅಳವಡಿಕೆಗೆ ಕೇವಲ ಅರ್ಧ ಅಡಿ ಮಾತ್ರ ಸಮತಟ್ಟು ಮಾಡಿದ್ದರೆ ಸಾಕಿತ್ತು. ಆದರೆ ಹೆಚ್ಚು ಬಿಲ್ ಮಾಡುವ ಉದ್ದೇಶದಿಂದ 7ರಿಂದ 8 ಅಡಿ ತಗ್ಗು ತೋಡಿ ಹಣ ಪೋಲು ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>