<p><strong>ಜನತಾ ಕಾರು: ಕೇಂದ್ರ ನಿರ್ಧಾರ<br /> </strong>ಮದ್ರಾಸ್, ಜೂನ್ 17- ಸಣ್ಣ ಕಾರು ತಯಾರಿಕೆ ಯೋಜನೆ ಕೇಂದ್ರದ ಪರಿಶೀಲನೆಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ `ಜನತಾ ಕಾರು~ಗಳ ತಯಾರಿಬೇಕೆ, ಬೇಡವೆ ಎಂಬದು ಜಾಗ್ರತೆ ನಿರ್ಧರಿಸಲಾಗುವುದು ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಸಿ. ಸುಬ್ರಮಣ್ಯಂ ಇಂದು ಇಲ್ಲಿ ತಿಳಿಸಿದರು.<br /> <br /> <strong>ಮಹಾರಾಜರಿಗೆ ಡಾಕ್ಟರೇಟ್ </strong><br /> ಮೈಸೂರು, ಜೂನ್ 17- ಜುಲೈ 12 ರಂದು ನಡೆಯುವ ಮೈಸೂರು ವಿವಿಯ ವಿಶೇಷ ಘಟಿಕೋತ್ಸವ ಸಮಾರಂಭವೊಂದರಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ವಿಶೇಷ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗುವುದೆಂದು ಇಲ್ಲಿ ತಿಳಿದುಬಂದಿದೆ.<br /> <br /> <strong>ಸ್ಟುಡಿಯೋ ಸ್ಥಾಪನೆ: ಸಿಎಂ ಸಲಹೆ<br /> </strong>ಬೆಂಗಳೂರು, ಜೂನ್, 17- ನಗರದಲ್ಲಿ ಸ್ಟುಡಿಯೋ ಸ್ಥಾಪನೆ ಸರ್ಕಾರ ಮತ್ತು ಖಾಸಗಿಯವರ ಸಂಯುಕ್ತ ಯೋಜನೆಯಾಗಿ ರೂಪುಗೊಳ್ಳಲೆಂದು ಮುಖ್ಯಮಂತ್ರಿ ಶ್ರೀ ಎಸ್.ಆರ್. ಕಂಠಿಸಲಹೆ ಮಾಡಿದರು.<br /> <br /> ಅದು ಪೂರ್ಣವಾಗಿ ಸರ್ಕಾರದ ಸ್ಟುಡಿಯೋ ಆದಲ್ಲಿ ಒಂದು ಇಲಾಖೆಯ ಅಂಗವಾಗಿ ಒಂದು ಮೊಳೆ ಕದಲಿಸಬೇಕಾದರೂ ಕಾಗದಗಳು ಓಡಾಡಬೇಕಾಗುವುದೆಂದೂ ಅದರಿಂದ ಆಗಬೇಕಾದ ಕೆಲಸ ಬೇಗನೆ ಆಗುವುದಕ್ಕೆ ಅಡ್ಡಿಯಾದೀತೆಂದು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜನತಾ ಕಾರು: ಕೇಂದ್ರ ನಿರ್ಧಾರ<br /> </strong>ಮದ್ರಾಸ್, ಜೂನ್ 17- ಸಣ್ಣ ಕಾರು ತಯಾರಿಕೆ ಯೋಜನೆ ಕೇಂದ್ರದ ಪರಿಶೀಲನೆಯಲ್ಲಿದೆ. ಸದ್ಯದ ಪರಿಸ್ಥಿತಿಯಲ್ಲಿ `ಜನತಾ ಕಾರು~ಗಳ ತಯಾರಿಬೇಕೆ, ಬೇಡವೆ ಎಂಬದು ಜಾಗ್ರತೆ ನಿರ್ಧರಿಸಲಾಗುವುದು ಎಂದು ಕೇಂದ್ರದ ಉಕ್ಕು ಮತ್ತು ಬೃಹತ್ ಕೈಗಾರಿಕೆಗಳ ಸಚಿವ ಸಿ. ಸುಬ್ರಮಣ್ಯಂ ಇಂದು ಇಲ್ಲಿ ತಿಳಿಸಿದರು.<br /> <br /> <strong>ಮಹಾರಾಜರಿಗೆ ಡಾಕ್ಟರೇಟ್ </strong><br /> ಮೈಸೂರು, ಜೂನ್ 17- ಜುಲೈ 12 ರಂದು ನಡೆಯುವ ಮೈಸೂರು ವಿವಿಯ ವಿಶೇಷ ಘಟಿಕೋತ್ಸವ ಸಮಾರಂಭವೊಂದರಲ್ಲಿ ಶ್ರೀ ಜಯಚಾಮರಾಜ ಒಡೆಯರ್ ಅವರಿಗೆ ವಿಶೇಷ ಗೌರವ ಡಾಕ್ಟರೇಟ್ ಪ್ರಶಸ್ತಿಯನ್ನು ನೀಡಲಾಗುವುದೆಂದು ಇಲ್ಲಿ ತಿಳಿದುಬಂದಿದೆ.<br /> <br /> <strong>ಸ್ಟುಡಿಯೋ ಸ್ಥಾಪನೆ: ಸಿಎಂ ಸಲಹೆ<br /> </strong>ಬೆಂಗಳೂರು, ಜೂನ್, 17- ನಗರದಲ್ಲಿ ಸ್ಟುಡಿಯೋ ಸ್ಥಾಪನೆ ಸರ್ಕಾರ ಮತ್ತು ಖಾಸಗಿಯವರ ಸಂಯುಕ್ತ ಯೋಜನೆಯಾಗಿ ರೂಪುಗೊಳ್ಳಲೆಂದು ಮುಖ್ಯಮಂತ್ರಿ ಶ್ರೀ ಎಸ್.ಆರ್. ಕಂಠಿಸಲಹೆ ಮಾಡಿದರು.<br /> <br /> ಅದು ಪೂರ್ಣವಾಗಿ ಸರ್ಕಾರದ ಸ್ಟುಡಿಯೋ ಆದಲ್ಲಿ ಒಂದು ಇಲಾಖೆಯ ಅಂಗವಾಗಿ ಒಂದು ಮೊಳೆ ಕದಲಿಸಬೇಕಾದರೂ ಕಾಗದಗಳು ಓಡಾಡಬೇಕಾಗುವುದೆಂದೂ ಅದರಿಂದ ಆಗಬೇಕಾದ ಕೆಲಸ ಬೇಗನೆ ಆಗುವುದಕ್ಕೆ ಅಡ್ಡಿಯಾದೀತೆಂದು ಎಚ್ಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>