<p>ಪೋಷಕ ಪಾತ್ರಗಳಿಂದ ಕನ್ನಡಿಗರ ಮನಸ್ಸು ತುಂಬಿಕೊಂಡಿರುವ ನಟ ಕೆ.ಎಸ್.ಅಶ್ವತ್ಥ್. ಅವರ ಮೊಮ್ಮಗ ಈ ಸ್ಕಂದ ಅಶ್ವತ್ಥ್. ಆಕರ್ಷಕ ಮೈಕಟ್ಟಿನ ಕಣ್ತುಂಬ ಕನಸು ಹೊತ್ತುಕೊಂಡಿರುವ ಸ್ಕಂದ ಮೂಲತಃ ಕ್ರೀಡಾಪಟು. <br /> <br /> ಈಜು, ಸೈಕ್ಲಿಂಗ್, ರನ್ನಿಂಗ್ ಮೂರನ್ನೂ ಮಾಡುವ ಟ್ರೈಟ್ಲಾನ್ ಹೆಸರಿನ ಕ್ರೀಡೆಯಲ್ಲಿ ಅವರು ರಾಷ್ಟ್ರೀಯ ಮಟ್ಟದ ಆಟಗಾರ. ಈಜಿನಲ್ಲಿ ಸಾಕಷ್ಟು ಚಿನ್ನದ ಪದಕಗಳನ್ನು ಪಡೆದಿದ್ದರೂ, ತಕ್ಕ ಪ್ರೋತ್ಸಾಹ ದೊರಕದೇ ಉತ್ಸಾಹ ಕಳೆದುಕೊಂಡವರು.<br /> <br /> ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶಗಳುಆರ್ಥಿಕ ಕೊರತೆಯಿಂದ ಕೈಗೂಡದ ಕಾರಣ ಸ್ಕಂದ ಬಣ್ಣದ ಬದುಕನ್ನು ಆರಿಸಿಕೊಳ್ಳಬೇಕಾಯಿತು. ತಂದೆ ಶಂಕರ್ ಅಶ್ವತ್ಥ್ ಅವರಲ್ಲಿ ತಮ್ಮ ಮನದಾಳವನ್ನು ಹೇಳಿಕೊಂಡು ನಟನಾ ತರಬೇತಿ ಸಂಸ್ಥೆ ಸೇರಿದರು.<br /> <br /> ನಂತರ `ಎಲ್ಲಿ ಜಾರಿತೋ ಮನವು~ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಕೆಲವು ದಿನಗಳು ಕಳೆದ ನಂತರ ಅದೇ ಧಾರಾವಾಹಿಯಲ್ಲಿ ಖಳನ ಪಾತ್ರ ನಿರ್ವಹಿಸಿದರು. ಅದು ಮುಗಿದ ಕೂಡಲೇ `ಮುತ್ತೈದೆ~ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶನದೊಂದಿಗೆ ಪಾತ್ರವೂ ಸಿಕ್ಕಿತು.<br /> <br /> ಒಂದು ದಿನ `ಯಾರೇ ನೀ ಮೋಹನಿಯಾ?~ ಸಿನಿಮಾದ ವಿಲನ್ ಪಾತ್ರಕ್ಕೆ ಅವಕಾಶ ಬಂತು. ಅದರ ನಂತರ ಆರ್. ಎಸ್.ಗೌಡ ನಿರ್ಮಾಣದ `ಸಂಕ್ರಾಂತಿ~ ಚಿತ್ರದಲ್ಲಿ ಎರಡನೇ ನಾಯಕನಾದರು.<br /> <br /> `ಇದೀಗ ಸಂಕ್ರಾಂತಿ ಮುಗಿದು ಎರಡು ತಿಂಗಳು ಕಳೆದರೂ ಅವಕಾಶಗಳು ಬರುತ್ತಿಲ್ಲ~ ಎಂದು ನೊಂದುಕೊಳ್ಳುವ ಅವರಿಗೆ ಅಪ್ಪ ಶಂಕರ್ ಅಶ್ವತ್ಥ್ `ಸಿನಿಮಾ ಬಿಡುಗಡೆಯಾಗುವ ತನಕ ಕಾಯಬೇಕು~ ಎಂದು ಬುದ್ಧಿ ಮಾತು ಹೇಳಿದ್ದಾರೆ. <br /> <br /> `ಈ ಕ್ಷೇತ್ರದಲ್ಲಿ ನಾವು ಹೆಸರಿಗೆ ಮಾತ್ರ ಇದ್ದೇವೆ. ಯಾರ ಪರಿಚಯವೂ ಅಷ್ಟಾಗಿ ಇಲ್ಲ. ಹೇಗೆ ಅವಕಾಶ ಕೇಳಬೇಕು ಎಂಬುದೂ ಗೊತ್ತಿಲ್ಲ. ನಮ್ಮ ತಾತ ಕೂಡ ಹಾಗೆಯೇ ಇದ್ದರು. ನನಗೆ ಶಿಫಾರಸು ಮಾಡಲು ಯಾರೂ ಗೊತ್ತಿಲ್ಲ ಎನ್ನುತ್ತಿದ್ದರು~ ಎಂದು ನುಡಿಯುತ್ತಾರೆ ಸ್ಕಂದ.<br /> <br /> `ನನ್ನ ವಯಸ್ಸಿನ ಹುಡುಗರು ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ನಾನೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದೆ~ ಎನ್ನುವ ಸ್ಕಂದ ಅವರಿಗೆ- ನಾಯಕ, ವಿಲನ್, ಪೋಷಕ ಪಾತ್ರ ಎನ್ನುವುದಕ್ಕಿಂತ ಒಂದು ದೃಶ್ಯದಲ್ಲಿ ಬಂದು ಹೋದರೂ ನೆನಪಿನಲ್ಲಿ ಉಳಿಯುವ ಪಾತ್ರಗಳು ಬೇಕಿವೆ.<br /> <br /> ಎಂಥ ಪಾತ್ರ ಸಿಕ್ಕರೂ ಸಿದ್ಧವಾಗಿರಬೇಕು ಎಂದುಕೊಂಡು ಡಾನ್ಸ್, ಫೈಟ್ ತರಗತಿಗಳಿಗೂ ಹೋಗುತ್ತಿರುವ ಸ್ಕಂದ ಗಿಟಾರ್ ಕೂಡ ಕಲಿಯುತ್ತಿದ್ದಾರೆ.<br /> <br /> `ಕಲಾವಿದರಿಗೆ ರಿದಂ ಸೆನ್ಸ್ ಇರಬೇಕು ಎಂದು ತಾತ ಹೇಳುತ್ತಿದ್ದರು. ಯಾಕೆಂದರೆ ಯಾವಾಗ, ಹೇಗೆ ನಟಿಸಬೇಕು, ಮಾತನಾಡಬೇಕು ಎಂಬುದರ ಅರಿವು ಅದರಿಂದ ಬರುತ್ತದೆ~ ಎಂಬ ತಾತನ ಮಾತುಗಳನ್ನು ನೆನೆಯುವ ಅವರ ಕಿವಿಯಲ್ಲಿ `ಶ್ರದ್ಧೆ, ಭಕ್ತಿ, ಸಮಯಪಾಲನೆ ಮತ್ತು ನಿಷ್ಠೆಯಿಂದ ಕೆಲಸ ಮಾಡು ಶಾರದಾಂಬೆ ಕೈಹಿಡಿಯುವಳು~ ಎನ್ನುತ್ತಿದ್ದ ತಾತನ ಮಾತುಗಳು ಗುಯ್ಗುಡುತ್ತಿವೆಯಂತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪೋಷಕ ಪಾತ್ರಗಳಿಂದ ಕನ್ನಡಿಗರ ಮನಸ್ಸು ತುಂಬಿಕೊಂಡಿರುವ ನಟ ಕೆ.ಎಸ್.ಅಶ್ವತ್ಥ್. ಅವರ ಮೊಮ್ಮಗ ಈ ಸ್ಕಂದ ಅಶ್ವತ್ಥ್. ಆಕರ್ಷಕ ಮೈಕಟ್ಟಿನ ಕಣ್ತುಂಬ ಕನಸು ಹೊತ್ತುಕೊಂಡಿರುವ ಸ್ಕಂದ ಮೂಲತಃ ಕ್ರೀಡಾಪಟು. <br /> <br /> ಈಜು, ಸೈಕ್ಲಿಂಗ್, ರನ್ನಿಂಗ್ ಮೂರನ್ನೂ ಮಾಡುವ ಟ್ರೈಟ್ಲಾನ್ ಹೆಸರಿನ ಕ್ರೀಡೆಯಲ್ಲಿ ಅವರು ರಾಷ್ಟ್ರೀಯ ಮಟ್ಟದ ಆಟಗಾರ. ಈಜಿನಲ್ಲಿ ಸಾಕಷ್ಟು ಚಿನ್ನದ ಪದಕಗಳನ್ನು ಪಡೆದಿದ್ದರೂ, ತಕ್ಕ ಪ್ರೋತ್ಸಾಹ ದೊರಕದೇ ಉತ್ಸಾಹ ಕಳೆದುಕೊಂಡವರು.<br /> <br /> ಅಂತರರಾಷ್ಟ್ರೀಯ ಮಟ್ಟದಲ್ಲಿ ಆಡುವ ಅವಕಾಶಗಳುಆರ್ಥಿಕ ಕೊರತೆಯಿಂದ ಕೈಗೂಡದ ಕಾರಣ ಸ್ಕಂದ ಬಣ್ಣದ ಬದುಕನ್ನು ಆರಿಸಿಕೊಳ್ಳಬೇಕಾಯಿತು. ತಂದೆ ಶಂಕರ್ ಅಶ್ವತ್ಥ್ ಅವರಲ್ಲಿ ತಮ್ಮ ಮನದಾಳವನ್ನು ಹೇಳಿಕೊಂಡು ನಟನಾ ತರಬೇತಿ ಸಂಸ್ಥೆ ಸೇರಿದರು.<br /> <br /> ನಂತರ `ಎಲ್ಲಿ ಜಾರಿತೋ ಮನವು~ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿದರು. ಕೆಲವು ದಿನಗಳು ಕಳೆದ ನಂತರ ಅದೇ ಧಾರಾವಾಹಿಯಲ್ಲಿ ಖಳನ ಪಾತ್ರ ನಿರ್ವಹಿಸಿದರು. ಅದು ಮುಗಿದ ಕೂಡಲೇ `ಮುತ್ತೈದೆ~ ಧಾರಾವಾಹಿಯಲ್ಲಿ ಸಹಾಯಕ ನಿರ್ದೇಶನದೊಂದಿಗೆ ಪಾತ್ರವೂ ಸಿಕ್ಕಿತು.<br /> <br /> ಒಂದು ದಿನ `ಯಾರೇ ನೀ ಮೋಹನಿಯಾ?~ ಸಿನಿಮಾದ ವಿಲನ್ ಪಾತ್ರಕ್ಕೆ ಅವಕಾಶ ಬಂತು. ಅದರ ನಂತರ ಆರ್. ಎಸ್.ಗೌಡ ನಿರ್ಮಾಣದ `ಸಂಕ್ರಾಂತಿ~ ಚಿತ್ರದಲ್ಲಿ ಎರಡನೇ ನಾಯಕನಾದರು.<br /> <br /> `ಇದೀಗ ಸಂಕ್ರಾಂತಿ ಮುಗಿದು ಎರಡು ತಿಂಗಳು ಕಳೆದರೂ ಅವಕಾಶಗಳು ಬರುತ್ತಿಲ್ಲ~ ಎಂದು ನೊಂದುಕೊಳ್ಳುವ ಅವರಿಗೆ ಅಪ್ಪ ಶಂಕರ್ ಅಶ್ವತ್ಥ್ `ಸಿನಿಮಾ ಬಿಡುಗಡೆಯಾಗುವ ತನಕ ಕಾಯಬೇಕು~ ಎಂದು ಬುದ್ಧಿ ಮಾತು ಹೇಳಿದ್ದಾರೆ. <br /> <br /> `ಈ ಕ್ಷೇತ್ರದಲ್ಲಿ ನಾವು ಹೆಸರಿಗೆ ಮಾತ್ರ ಇದ್ದೇವೆ. ಯಾರ ಪರಿಚಯವೂ ಅಷ್ಟಾಗಿ ಇಲ್ಲ. ಹೇಗೆ ಅವಕಾಶ ಕೇಳಬೇಕು ಎಂಬುದೂ ಗೊತ್ತಿಲ್ಲ. ನಮ್ಮ ತಾತ ಕೂಡ ಹಾಗೆಯೇ ಇದ್ದರು. ನನಗೆ ಶಿಫಾರಸು ಮಾಡಲು ಯಾರೂ ಗೊತ್ತಿಲ್ಲ ಎನ್ನುತ್ತಿದ್ದರು~ ಎಂದು ನುಡಿಯುತ್ತಾರೆ ಸ್ಕಂದ.<br /> <br /> `ನನ್ನ ವಯಸ್ಸಿನ ಹುಡುಗರು ಅಪ್ಪ-ಅಮ್ಮನನ್ನು ನೋಡಿಕೊಳ್ಳುತ್ತಿದ್ದಾರೆ. ನಾನೂ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕಿದೆ~ ಎನ್ನುವ ಸ್ಕಂದ ಅವರಿಗೆ- ನಾಯಕ, ವಿಲನ್, ಪೋಷಕ ಪಾತ್ರ ಎನ್ನುವುದಕ್ಕಿಂತ ಒಂದು ದೃಶ್ಯದಲ್ಲಿ ಬಂದು ಹೋದರೂ ನೆನಪಿನಲ್ಲಿ ಉಳಿಯುವ ಪಾತ್ರಗಳು ಬೇಕಿವೆ.<br /> <br /> ಎಂಥ ಪಾತ್ರ ಸಿಕ್ಕರೂ ಸಿದ್ಧವಾಗಿರಬೇಕು ಎಂದುಕೊಂಡು ಡಾನ್ಸ್, ಫೈಟ್ ತರಗತಿಗಳಿಗೂ ಹೋಗುತ್ತಿರುವ ಸ್ಕಂದ ಗಿಟಾರ್ ಕೂಡ ಕಲಿಯುತ್ತಿದ್ದಾರೆ.<br /> <br /> `ಕಲಾವಿದರಿಗೆ ರಿದಂ ಸೆನ್ಸ್ ಇರಬೇಕು ಎಂದು ತಾತ ಹೇಳುತ್ತಿದ್ದರು. ಯಾಕೆಂದರೆ ಯಾವಾಗ, ಹೇಗೆ ನಟಿಸಬೇಕು, ಮಾತನಾಡಬೇಕು ಎಂಬುದರ ಅರಿವು ಅದರಿಂದ ಬರುತ್ತದೆ~ ಎಂಬ ತಾತನ ಮಾತುಗಳನ್ನು ನೆನೆಯುವ ಅವರ ಕಿವಿಯಲ್ಲಿ `ಶ್ರದ್ಧೆ, ಭಕ್ತಿ, ಸಮಯಪಾಲನೆ ಮತ್ತು ನಿಷ್ಠೆಯಿಂದ ಕೆಲಸ ಮಾಡು ಶಾರದಾಂಬೆ ಕೈಹಿಡಿಯುವಳು~ ಎನ್ನುತ್ತಿದ್ದ ತಾತನ ಮಾತುಗಳು ಗುಯ್ಗುಡುತ್ತಿವೆಯಂತೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>