<p>ವೇದಿಕೆಯಲ್ಲಿ ಭರ್ತಿ ಜನ. ತೆರೆಯ ಮೇಲೆ ಕಾಣಿಸಿಕೊಂಡವರು, ತೆರೆ ಹಿಂದೆ ಕೆಲಸ ಮಾಡಿದವರು, ಜೊತೆಗೆ ಅತಿಥಿಗಳು. ಅಲ್ಲಿ ಮಾತಿನದೇ ಮಳೆ. <br /> <br /> ಸ್ವರಗಳಿಗೆ ಪದ ಜೋಡಿಸುತ್ತಿದ್ದ ಸಿನಿ ಸಾಹಿತಿ ರಾಮ್ನಾರಾಯಣ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರ `ಸ್ನೇಹಿತರು~ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭವದು. ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರ ಮಗ ನಟ ಮಾಸ್ಟರ್ ಸ್ನೇಹಿತ್ರ ಜನ್ಮದಿನ ಕೂಡ.<br /> <br /> ಆಡಿಯೋ ಸೀಡಿ ಬಿಡುಗಡೆಯಾದ್ದರಿಂದ ಎಲ್ಲರ ಗಮನ ಇದ್ದದ್ದು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಮೇಲೆ. ಹೊಸ ಟ್ರೆಂಡ್ ಹುಟ್ಟುಹಾಕಿರುವ ಹರಿಕೃಷ್ಣರನ್ನು ಹಂಸಲೇಖಾರಿಗೆ ಹೋಲಿಸಿದರು ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಹರಿಕೃಷ್ಣ ಅವರ ಮಗ ಆದಿತ್ಯ ಹರಿಕೃಷ್ಣ ಮೊದಲ ಬಾರಿಗೆ ಹಾಡಿರುವುದು ಚಿತ್ರದ ವಿಶೇಷ. <br /> <br /> ಆರಂಭದಲ್ಲಿ ಆತ ಚೆನ್ನಾಗಿ ಹಾಡುತ್ತಾನೋ ಇಲ್ಲವೋ ಎಂಬ ಭಯ ಹರಿಕೃಷ್ಣರನ್ನು ಕಾಡಿತ್ತಂತೆ. ಆದರೆ ಅದು ಹಾಡು ಕೇಳಿದ ಬಳಿಕ ನಿವಾರಣೆಯಾಯಿತು ಎಂದರು.<br /> <br /> ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ನಿರ್ದೇಶಕ ರಾಮ್ನಾರಾಯಣ್. ಈ ಹಾಡುಗಳು ಹೊಸ ಅಲೆ ಸೃಷ್ಟಿಸಲಿವೆ. ಚಿತ್ರ ಗೆಲ್ಲಲು ಸಹ ಕಾರಣವಾಗಲಿವೆ ಎಂಬ ವಿಶ್ವಾಸ ಅವರದು. ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರ ಸಿನಿಮಾ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಅವರು ಮೆಲುಕು ಹಾಕಿದರು. <br /> <br /> ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ರವಿಶಂಕರ್ ಹಾಗೂ ತರುಣ್ ಚಿತ್ರದ ನಾಲ್ವರು ನಾಯಕರು. ನಾಯಕಿ ಪ್ರಣೀತಾ. ಚಿತ್ರದಲ್ಲಿ ಈ ನಾಲ್ವರಿಗೂ ನಾಯಕಿಯ ಪ್ರೀತಿ ಒಲಿಯದಂತೆ ಅಡ್ಡಬರುವುದು ಮಾಸ್ಟರ್ ಸ್ನೇಹಿತ್.<br /> <br /> ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕ- ಈ ನಾಲ್ವರು ಚಿತ್ರದ ನಿಜವಾದ ನಾಯಕರು ಎಂಬ ಬಣ್ಣನೆ ನಟ ಸೃಜನ್ ಲೋಕೇಶ್ರದ್ದು. ಗೆಲುವಿಗಾಗಿ ಎದುರು ನೋಡುತ್ತಿರುವ ನಾಯಕರುಗಳು ನಾವು ಎಂಬ ನೋವಿನ ನುಡಿ ರವಿಶಂಕರ್ರದ್ದು.<br /> <br /> ಗಾಯಕಿ ವಾಣಿ ಹರಿಕೃಷ್ಣ, ವಿತರಕ ಪ್ರಸಾದ್, ಸಾಹಿತಿ ಕವಿರಾಜ್ ಮುಂತಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವೇದಿಕೆಯಲ್ಲಿ ಭರ್ತಿ ಜನ. ತೆರೆಯ ಮೇಲೆ ಕಾಣಿಸಿಕೊಂಡವರು, ತೆರೆ ಹಿಂದೆ ಕೆಲಸ ಮಾಡಿದವರು, ಜೊತೆಗೆ ಅತಿಥಿಗಳು. ಅಲ್ಲಿ ಮಾತಿನದೇ ಮಳೆ. <br /> <br /> ಸ್ವರಗಳಿಗೆ ಪದ ಜೋಡಿಸುತ್ತಿದ್ದ ಸಿನಿ ಸಾಹಿತಿ ರಾಮ್ನಾರಾಯಣ್ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅವರ `ಸ್ನೇಹಿತರು~ ಚಿತ್ರದ ಹಾಡುಗಳ ಸೀಡಿ ಬಿಡುಗಡೆ ಸಮಾರಂಭವದು. ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರ ಮಗ ನಟ ಮಾಸ್ಟರ್ ಸ್ನೇಹಿತ್ರ ಜನ್ಮದಿನ ಕೂಡ.<br /> <br /> ಆಡಿಯೋ ಸೀಡಿ ಬಿಡುಗಡೆಯಾದ್ದರಿಂದ ಎಲ್ಲರ ಗಮನ ಇದ್ದದ್ದು ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಅವರ ಮೇಲೆ. ಹೊಸ ಟ್ರೆಂಡ್ ಹುಟ್ಟುಹಾಕಿರುವ ಹರಿಕೃಷ್ಣರನ್ನು ಹಂಸಲೇಖಾರಿಗೆ ಹೋಲಿಸಿದರು ನಿರ್ಮಾಪಕ ರಾಕ್ಲೈನ್ ವೆಂಕಟೇಶ್. ಹರಿಕೃಷ್ಣ ಅವರ ಮಗ ಆದಿತ್ಯ ಹರಿಕೃಷ್ಣ ಮೊದಲ ಬಾರಿಗೆ ಹಾಡಿರುವುದು ಚಿತ್ರದ ವಿಶೇಷ. <br /> <br /> ಆರಂಭದಲ್ಲಿ ಆತ ಚೆನ್ನಾಗಿ ಹಾಡುತ್ತಾನೋ ಇಲ್ಲವೋ ಎಂಬ ಭಯ ಹರಿಕೃಷ್ಣರನ್ನು ಕಾಡಿತ್ತಂತೆ. ಆದರೆ ಅದು ಹಾಡು ಕೇಳಿದ ಬಳಿಕ ನಿವಾರಣೆಯಾಯಿತು ಎಂದರು.<br /> <br /> ಹಾಡುಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ನಿರ್ದೇಶಕ ರಾಮ್ನಾರಾಯಣ್. ಈ ಹಾಡುಗಳು ಹೊಸ ಅಲೆ ಸೃಷ್ಟಿಸಲಿವೆ. ಚಿತ್ರ ಗೆಲ್ಲಲು ಸಹ ಕಾರಣವಾಗಲಿವೆ ಎಂಬ ವಿಶ್ವಾಸ ಅವರದು. ನಿರ್ಮಾಪಕ ಸೌಂದರ್ಯಾ ಜಗದೀಶ್ ಅವರ ಸಿನಿಮಾ ಪ್ರೀತಿ ಹಾಗೂ ಪ್ರೋತ್ಸಾಹವನ್ನು ಅವರು ಮೆಲುಕು ಹಾಕಿದರು. <br /> <br /> ವಿಜಯ್ ರಾಘವೇಂದ್ರ, ಸೃಜನ್ ಲೋಕೇಶ್, ರವಿಶಂಕರ್ ಹಾಗೂ ತರುಣ್ ಚಿತ್ರದ ನಾಲ್ವರು ನಾಯಕರು. ನಾಯಕಿ ಪ್ರಣೀತಾ. ಚಿತ್ರದಲ್ಲಿ ಈ ನಾಲ್ವರಿಗೂ ನಾಯಕಿಯ ಪ್ರೀತಿ ಒಲಿಯದಂತೆ ಅಡ್ಡಬರುವುದು ಮಾಸ್ಟರ್ ಸ್ನೇಹಿತ್.<br /> <br /> ನಿರ್ದೇಶಕ, ನಿರ್ಮಾಪಕ, ಛಾಯಾಗ್ರಾಹಕ ಮತ್ತು ಸಂಗೀತ ನಿರ್ದೇಶಕ- ಈ ನಾಲ್ವರು ಚಿತ್ರದ ನಿಜವಾದ ನಾಯಕರು ಎಂಬ ಬಣ್ಣನೆ ನಟ ಸೃಜನ್ ಲೋಕೇಶ್ರದ್ದು. ಗೆಲುವಿಗಾಗಿ ಎದುರು ನೋಡುತ್ತಿರುವ ನಾಯಕರುಗಳು ನಾವು ಎಂಬ ನೋವಿನ ನುಡಿ ರವಿಶಂಕರ್ರದ್ದು.<br /> <br /> ಗಾಯಕಿ ವಾಣಿ ಹರಿಕೃಷ್ಣ, ವಿತರಕ ಪ್ರಸಾದ್, ಸಾಹಿತಿ ಕವಿರಾಜ್ ಮುಂತಾದವರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>