<p><strong>ಪಡುಬಿದ್ರಿ: </strong>ತ್ಯಾಜ್ಯಗಳಿಂದ ತುಂಬಿಕೊಂಡಿದ್ದ ಪಡುಬಿದ್ರಿ ಪ್ರವಾಸಿ ಮಂದಿರವನ್ನು ಸ್ವಚ್ಛಗೊಳಿಸಲಾಗಿದೆ.<br /> ಸರ್ಕಾರಿ ಅಧಿಕಾರಿಗಳಿಗೆ ವಿಶ್ರಾಂತಿ ಪಡೆಯಲು ನಿರ್ಮಿಸಿದ್ದ ಪಡುಬಿದ್ರಿಯ ಪ್ರವಾಸಿ ಮಂದಿರ ಆವರಣದಲ್ಲಿ ತ್ಯಾಜ್ಯ ರಾಶಿಯ ಬಗ್ಗೆ ಪ್ರಜಾವಾಣಿ ಜೂನ್ 16ರ ಸಂಚಿಕೆಯಲ್ಲಿ `ಅಂದು ಪ್ರವಾಸಿ ಮಂದಿರ; ಇಂದು ತ್ಯಾಜ್ಯ ಸಂಗ್ರಹಗಾರ~ ಎಂಬ ವರದಿ ಪ್ರಕಟಿಸಿತ್ತು.</p>.<p>ಈ ಬಗ್ಗೆ ಸ್ಪಂದಿಸಿದ ಪಡುಬಿದ್ರಿ ಗ್ರಾಪಂ ಪ್ರವಾಸಿ ಮಂದಿರದ ಆವರಣದಲ್ಲಿದ್ದ ತ್ಯಾಜ್ಯಗಳನ್ನು ಉಡುಪಿಯ ಕಸಸಂಗ್ರಹ ಗುತ್ತಿಗೆದಾರರೊಬ್ಬರನ್ನು ಕರೆಸಿ ಸ್ವಚ್ಚಗೊಳಿಸಲಾಯಿತು.</p>.<p><strong>ಸದ್ಯದಲ್ಲೇ ಸಭೆ:</strong> ಪ್ರವಾಸಿ ಮಂದಿರದ ಆವರಣದಲ್ಲಿ ಕಸ ಎಸೆಯದಿರಲು ಪಂಚಾಯಿತಿ ನಿರ್ಧರಿಸಿದ್ದು, ಪರಿಸರದ ವ್ಯಾಪಾರಸ್ಥರ ಸಭೆಯೊಂದನ್ನು ಕರೆದು ತ್ಯಾಜ್ಯ ಸಂಗ್ರಹ ಬಗ್ಗ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ತಿಪ್ಪೆಗುಂಡಿ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿದ್ದು, ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ತಿಪ್ಪೆಗುಂಡಿ ನಿರ್ಮಾಣ ಸಮಸ್ಯೆ ಪರಿಹಾರವಾಗಲಿದೆ ಎಂದು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪಡುಬಿದ್ರಿ: </strong>ತ್ಯಾಜ್ಯಗಳಿಂದ ತುಂಬಿಕೊಂಡಿದ್ದ ಪಡುಬಿದ್ರಿ ಪ್ರವಾಸಿ ಮಂದಿರವನ್ನು ಸ್ವಚ್ಛಗೊಳಿಸಲಾಗಿದೆ.<br /> ಸರ್ಕಾರಿ ಅಧಿಕಾರಿಗಳಿಗೆ ವಿಶ್ರಾಂತಿ ಪಡೆಯಲು ನಿರ್ಮಿಸಿದ್ದ ಪಡುಬಿದ್ರಿಯ ಪ್ರವಾಸಿ ಮಂದಿರ ಆವರಣದಲ್ಲಿ ತ್ಯಾಜ್ಯ ರಾಶಿಯ ಬಗ್ಗೆ ಪ್ರಜಾವಾಣಿ ಜೂನ್ 16ರ ಸಂಚಿಕೆಯಲ್ಲಿ `ಅಂದು ಪ್ರವಾಸಿ ಮಂದಿರ; ಇಂದು ತ್ಯಾಜ್ಯ ಸಂಗ್ರಹಗಾರ~ ಎಂಬ ವರದಿ ಪ್ರಕಟಿಸಿತ್ತು.</p>.<p>ಈ ಬಗ್ಗೆ ಸ್ಪಂದಿಸಿದ ಪಡುಬಿದ್ರಿ ಗ್ರಾಪಂ ಪ್ರವಾಸಿ ಮಂದಿರದ ಆವರಣದಲ್ಲಿದ್ದ ತ್ಯಾಜ್ಯಗಳನ್ನು ಉಡುಪಿಯ ಕಸಸಂಗ್ರಹ ಗುತ್ತಿಗೆದಾರರೊಬ್ಬರನ್ನು ಕರೆಸಿ ಸ್ವಚ್ಚಗೊಳಿಸಲಾಯಿತು.</p>.<p><strong>ಸದ್ಯದಲ್ಲೇ ಸಭೆ:</strong> ಪ್ರವಾಸಿ ಮಂದಿರದ ಆವರಣದಲ್ಲಿ ಕಸ ಎಸೆಯದಿರಲು ಪಂಚಾಯಿತಿ ನಿರ್ಧರಿಸಿದ್ದು, ಪರಿಸರದ ವ್ಯಾಪಾರಸ್ಥರ ಸಭೆಯೊಂದನ್ನು ಕರೆದು ತ್ಯಾಜ್ಯ ಸಂಗ್ರಹ ಬಗ್ಗ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ತಿಪ್ಪೆಗುಂಡಿ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿದ್ದು, ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ತಿಪ್ಪೆಗುಂಡಿ ನಿರ್ಮಾಣ ಸಮಸ್ಯೆ ಪರಿಹಾರವಾಗಲಿದೆ ಎಂದು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>