ಸ್ವಚ್ಛಗೊಂಡ ಪಡುಬಿದ್ರಿ ಪ್ರವಾಸಿ ಮಂದಿರ

ಪಡುಬಿದ್ರಿ: ತ್ಯಾಜ್ಯಗಳಿಂದ ತುಂಬಿಕೊಂಡಿದ್ದ ಪಡುಬಿದ್ರಿ ಪ್ರವಾಸಿ ಮಂದಿರವನ್ನು ಸ್ವಚ್ಛಗೊಳಿಸಲಾಗಿದೆ.
ಸರ್ಕಾರಿ ಅಧಿಕಾರಿಗಳಿಗೆ ವಿಶ್ರಾಂತಿ ಪಡೆಯಲು ನಿರ್ಮಿಸಿದ್ದ ಪಡುಬಿದ್ರಿಯ ಪ್ರವಾಸಿ ಮಂದಿರ ಆವರಣದಲ್ಲಿ ತ್ಯಾಜ್ಯ ರಾಶಿಯ ಬಗ್ಗೆ ಪ್ರಜಾವಾಣಿ ಜೂನ್ 16ರ ಸಂಚಿಕೆಯಲ್ಲಿ `ಅಂದು ಪ್ರವಾಸಿ ಮಂದಿರ; ಇಂದು ತ್ಯಾಜ್ಯ ಸಂಗ್ರಹಗಾರ~ ಎಂಬ ವರದಿ ಪ್ರಕಟಿಸಿತ್ತು.
ಈ ಬಗ್ಗೆ ಸ್ಪಂದಿಸಿದ ಪಡುಬಿದ್ರಿ ಗ್ರಾಪಂ ಪ್ರವಾಸಿ ಮಂದಿರದ ಆವರಣದಲ್ಲಿದ್ದ ತ್ಯಾಜ್ಯಗಳನ್ನು ಉಡುಪಿಯ ಕಸಸಂಗ್ರಹ ಗುತ್ತಿಗೆದಾರರೊಬ್ಬರನ್ನು ಕರೆಸಿ ಸ್ವಚ್ಚಗೊಳಿಸಲಾಯಿತು.
ಸದ್ಯದಲ್ಲೇ ಸಭೆ: ಪ್ರವಾಸಿ ಮಂದಿರದ ಆವರಣದಲ್ಲಿ ಕಸ ಎಸೆಯದಿರಲು ಪಂಚಾಯಿತಿ ನಿರ್ಧರಿಸಿದ್ದು, ಪರಿಸರದ ವ್ಯಾಪಾರಸ್ಥರ ಸಭೆಯೊಂದನ್ನು ಕರೆದು ತ್ಯಾಜ್ಯ ಸಂಗ್ರಹ ಬಗ್ಗ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ತಿಪ್ಪೆಗುಂಡಿ ನಿರ್ಮಾಣಕ್ಕೆ ಈಗಾಗಲೇ ಜಾಗ ಗುರುತಿಸಿದ್ದು, ಜಿಲ್ಲಾಧಿಕಾರಿಯವರಿಗೆ ಈ ಬಗ್ಗೆ ಪ್ರಸ್ತಾಪ ಸಲ್ಲಿಸಲಾಗಿದೆ. ಅಲ್ಲಿಂದ ವರದಿ ಬಂದ ಕೂಡಲೇ ತಿಪ್ಪೆಗುಂಡಿ ನಿರ್ಮಾಣ ಸಮಸ್ಯೆ ಪರಿಹಾರವಾಗಲಿದೆ ಎಂದು ಗ್ರಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಆಚಾರ್ಯ ಹೇಳಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.