<p><strong>ಚೀನಾ ಜತೆ ಮಾತುಕತೆ <br /> ನವದೆಹಲಿ (ಪಿಟಿಐ): </strong>ಭಾರತ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ಯಾಂಗ್ ಜೈಚಿ ಹಾಗೂ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ನಡುವೆ ಗುರುವಾರ ದೆಹಲಿಯಲ್ಲಿ ಮಾತುಕತೆ ನಡೆಯಿತು. <br /> <br /> ಅರುಣಾಚಲ ಪ್ರದೇಶ, ಟಿಬೆಟ್ ಹಾಗೂ ಭಾರತೀಯ ವರ್ತಕರಿಗೆ ಚೀನಾದ ಅಧಿಕಾರಿಗಳಿಂದಾದ ಕಿರುಕುಳದ ವಿಚಾರಗಳು ಈ ಮಾತುಕತೆಯಲ್ಲಿ ಪ್ರಸ್ತಾಪವಾದವು.ಇಬ್ಬರು ವಿದೇಶಾಂಗ ಸಚಿವರ ಸಭೆ ನಡೆಯುತ್ತಿದ್ದಾಗ ಕಟ್ಟಡದ ಹೊರಗೆ ಟಿಬೆಟ್ ಹೋರಾಟಗಾರರು ಪ್ರತಿಭಟನೆ ನಡೆಸಿದರು.<br /> <strong><br /> ದೆಹಲಿ ವಿಫಲ ಸ್ಫೋಟ: ಇನ್ನೊಬ್ಬನ ಬಂಧನ<br /> ನವದೆಹಲಿ/ರಾಂಚಿ (ಪಿಟಿಐ):</strong> ವಿಫಲಗೊಂಡ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆತೀವ್ರಗೊಳಿಸಿರುವ ಭದ್ರತಾಪಡೆಗಳು ತೌಸೀಫ್ ಅಹಮದ್ ಪೀರ್ (22) ಎಂಬಾತನನ್ನು ಜಾರ್ಖಂಡ್ನಲ್ಲಿ ಬಂಧಿಸಿದ್ದಾರೆ.<br /> <br /> ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸಂಖ್ಯೆ ಮೂರಕ್ಕೆ ಏರಿದೆ. ಪ್ರಕರಣದ ಪ್ರಮುಖ ಆರೋಪಿ ಅಥೇಶಮ್ ಮಲಿಕ್ ಸಂಬಂಧಿಯಾಗಿರುವ ತೌಸೀಫ್ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಎನ್ನಲಾಗಿದೆ. <br /> <br /> <strong>ಲಾಲು ವಿರುದ್ಧ ಸಿಬಿಐ ಆರೋಪ ಪಟ್ಟಿ<br /> ಪಟ್ನಾ (ಪಿಟಿಐ): </strong>ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಶುಕ್ರವಾರ ಆರ್ಜೆಡಿ ಸಂಸದ ಲಾಲು ಪ್ರಸಾದ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.`ಪ್ರಕರಣದಲ್ಲಿ ಸಿಬಿಐ ನನ್ನ ವಿರುದ್ಧ ತಪ್ಪಾಗಿ ಆರೋಪ ಹೊರಿಸಿದೆ~ ಎಂದು ಲಾಲು ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚೀನಾ ಜತೆ ಮಾತುಕತೆ <br /> ನವದೆಹಲಿ (ಪಿಟಿಐ): </strong>ಭಾರತ ಪ್ರವಾಸದಲ್ಲಿರುವ ಚೀನಾ ವಿದೇಶಾಂಗ ಸಚಿವ ಯಾಂಗ್ ಜೈಚಿ ಹಾಗೂ ವಿದೇಶಾಂಗ ಸಚಿವ ಎಸ್. ಎಂ. ಕೃಷ್ಣ ನಡುವೆ ಗುರುವಾರ ದೆಹಲಿಯಲ್ಲಿ ಮಾತುಕತೆ ನಡೆಯಿತು. <br /> <br /> ಅರುಣಾಚಲ ಪ್ರದೇಶ, ಟಿಬೆಟ್ ಹಾಗೂ ಭಾರತೀಯ ವರ್ತಕರಿಗೆ ಚೀನಾದ ಅಧಿಕಾರಿಗಳಿಂದಾದ ಕಿರುಕುಳದ ವಿಚಾರಗಳು ಈ ಮಾತುಕತೆಯಲ್ಲಿ ಪ್ರಸ್ತಾಪವಾದವು.ಇಬ್ಬರು ವಿದೇಶಾಂಗ ಸಚಿವರ ಸಭೆ ನಡೆಯುತ್ತಿದ್ದಾಗ ಕಟ್ಟಡದ ಹೊರಗೆ ಟಿಬೆಟ್ ಹೋರಾಟಗಾರರು ಪ್ರತಿಭಟನೆ ನಡೆಸಿದರು.<br /> <strong><br /> ದೆಹಲಿ ವಿಫಲ ಸ್ಫೋಟ: ಇನ್ನೊಬ್ಬನ ಬಂಧನ<br /> ನವದೆಹಲಿ/ರಾಂಚಿ (ಪಿಟಿಐ):</strong> ವಿಫಲಗೊಂಡ ದೆಹಲಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆತೀವ್ರಗೊಳಿಸಿರುವ ಭದ್ರತಾಪಡೆಗಳು ತೌಸೀಫ್ ಅಹಮದ್ ಪೀರ್ (22) ಎಂಬಾತನನ್ನು ಜಾರ್ಖಂಡ್ನಲ್ಲಿ ಬಂಧಿಸಿದ್ದಾರೆ.<br /> <br /> ಇದರೊಂದಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಸಂಖ್ಯೆ ಮೂರಕ್ಕೆ ಏರಿದೆ. ಪ್ರಕರಣದ ಪ್ರಮುಖ ಆರೋಪಿ ಅಥೇಶಮ್ ಮಲಿಕ್ ಸಂಬಂಧಿಯಾಗಿರುವ ತೌಸೀಫ್ ಪಾಕಿಸ್ತಾನದಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದಿದ್ದ ಎನ್ನಲಾಗಿದೆ. <br /> <br /> <strong>ಲಾಲು ವಿರುದ್ಧ ಸಿಬಿಐ ಆರೋಪ ಪಟ್ಟಿ<br /> ಪಟ್ನಾ (ಪಿಟಿಐ): </strong>ಬಹುಕೋಟಿ ಮೇವು ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಕೋರ್ಟ್ ಶುಕ್ರವಾರ ಆರ್ಜೆಡಿ ಸಂಸದ ಲಾಲು ಪ್ರಸಾದ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು.`ಪ್ರಕರಣದಲ್ಲಿ ಸಿಬಿಐ ನನ್ನ ವಿರುದ್ಧ ತಪ್ಪಾಗಿ ಆರೋಪ ಹೊರಿಸಿದೆ~ ಎಂದು ಲಾಲು ಹೇಳಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>