<p><strong>ಪೀಣ್ಯ ದಾಸರಹಳ್ಳಿ:</strong> `ಹಕ್ಕುಗಳು ಯಾರೊಬ್ಬರ ಸ್ವತ್ತಲ್ಲ; ಶೋಷಿತರು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.<br /> ಪೀಣ್ಯದ ಆಶ್ರಯನಗರದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ 121ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> `ಹೋರಾಟಗಳನ್ನು ಮುಂದಿನ ರಾಜಕಾರಣದ ದೃಷ್ಟಿ ಇಟ್ಟುಕೊಂಡು ಮಾಡಬಾರದು. ದಲಿತ ಸಮಾಜದ ಏಳಿಗೆಗಾಗಿ ಹೋರಾಟಗಳನ್ನು ರೂಪಿಸಿ. ನಿಮ್ಮ ಕೂಗು ಸಂಸತ್, ವಿಧಾನ ಸೌಧ ಮುಟ್ಟುವಂತಾಗಲಿ~ ಎಂದು ಅವರು ಹೇಳಿದರು.<br /> <br /> ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ನರಸಿಂಹಯ್ಯ, ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು, ಮುಖಂಡರಾದ ದಾಸಪ್ಪ, ಗಂಗನರಸಣ್ಣ, ರಾಮಕೃಷ್ಣಯ್ಯ, ಲಿಂಗರಾಜು, ವೀರೇಶ್ ಬಳ್ಳಾರಿ, ಕೆ.ಬಾಲಕೃಷ್ಣ, ನಾಗರಾಜಣ್ಣ, ಪಿಳ್ಳಾರೆಡ್ಡಿ, ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷೆ ರತ್ನಮ್ಮ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪೀಣ್ಯ ದಾಸರಹಳ್ಳಿ:</strong> `ಹಕ್ಕುಗಳು ಯಾರೊಬ್ಬರ ಸ್ವತ್ತಲ್ಲ; ಶೋಷಿತರು ಹೋರಾಟದ ಮೂಲಕ ಹಕ್ಕುಗಳನ್ನು ಪಡೆಯಲು ಮುಂದಾಗಬೇಕು~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ಕರೆ ನೀಡಿದರು.<br /> ಪೀಣ್ಯದ ಆಶ್ರಯನಗರದಲ್ಲಿ ಆಯೋಜಿಸಿದ್ದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ರವರ 121ನೇ ಜನ್ಮ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.<br /> <br /> `ಹೋರಾಟಗಳನ್ನು ಮುಂದಿನ ರಾಜಕಾರಣದ ದೃಷ್ಟಿ ಇಟ್ಟುಕೊಂಡು ಮಾಡಬಾರದು. ದಲಿತ ಸಮಾಜದ ಏಳಿಗೆಗಾಗಿ ಹೋರಾಟಗಳನ್ನು ರೂಪಿಸಿ. ನಿಮ್ಮ ಕೂಗು ಸಂಸತ್, ವಿಧಾನ ಸೌಧ ಮುಟ್ಟುವಂತಾಗಲಿ~ ಎಂದು ಅವರು ಹೇಳಿದರು.<br /> <br /> ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಎಚ್.ನರಸಿಂಹಯ್ಯ, ದಲಿತ ಕ್ರಿಯಾ ಸಮಿತಿ ಅಧ್ಯಕ್ಷ ಚಿ.ನಾ.ರಾಮು, ಮುಖಂಡರಾದ ದಾಸಪ್ಪ, ಗಂಗನರಸಣ್ಣ, ರಾಮಕೃಷ್ಣಯ್ಯ, ಲಿಂಗರಾಜು, ವೀರೇಶ್ ಬಳ್ಳಾರಿ, ಕೆ.ಬಾಲಕೃಷ್ಣ, ನಾಗರಾಜಣ್ಣ, ಪಿಳ್ಳಾರೆಡ್ಡಿ, ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷೆ ರತ್ನಮ್ಮ ಇತರರು ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>