<p><strong>ಜಕಾರ್ತ, (ಎಪಿ): </strong>ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, ಗಾಬರಿಗೊಂಡ ಹಲವರು ಸಮುದ್ರಕ್ಕೆ ಹಾರಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಸುಮಾರು 200 ಜನರಿಗೆ ಗಾಯಗಳಾಗಿವೆ. <br /> <br /> ಸಾರಿಗೆ ಸಚಿವಾಲಯದ ವಕ್ತಾರ ಬ್ಯಾಂಬಂಗ್ ಇರ್ವಾನ್ ಮಾತನಾಡಿ, ಬೆಳಗ್ಗಿನ ಜಾವ ಮೆರಾಕ್ ಬಂದರಿನಿಂದ ಸುಮಾತ್ರದೆಡೆಗೆ ಹೊರಟ 40 ನಿಮಿಷಗಳಲ್ಲೇ ಹಡಗಿನಲ್ಲಿ ಬೆಂಕಿ ತಗುಲಿತು ಎಂದು ತಿಳಿಸಿದರು.<br /> <br /> ಹಡಗು ಸುಮಾರು ಮೂರು ಕಿ.ಮೀ ದೂರ ಸಾಗಿತ್ತು. ದಡದಿಂದಲೇ ಹಡಗಿನಿಂದ ಕಪ್ಪು ಹೊಗೆ ಹೊರಬರುತ್ತಿರುವುದು ಕಾಣಿಸಿದ ಕೂಡಲೇ ಐದು ರಕ್ಷಣಾ ಹಡಗುಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ಹೇಳಿದರು. <br /> <br /> ಮುಂಜಾನೆ ವೇಳೆಗೆ ಅದರಲ್ಲಿದ್ದ ಸುಮಾರು 427 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಈ ಅನಾಹುತಕ್ಕೆ ಸ್ಪಷ್ಟ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಸಚಿವಾಲಯದ ಮತ್ತೊಬ್ಬ ಅಧಿಕಾರಿ ವಿರಾಟ್ನೊ ತಿಳಿಸಿದರು.<br /> <br /> ವ್ಯಕ್ತಿಯೊಬ್ಬ ಸಿಗರೇಟ್ ಸೇದಿ ಅದರ ತುಂಡನ್ನು ಹಡಗಿನಲ್ಲಿ ಎಸೆದಿದ್ದೇ ಈ ಅನಾಹುತಕ್ಕೆ ಕಾರಣವಿರಬಹುದು ಎಂದು ಈ ಅವಘಡದಲ್ಲಿ ಬದುಕುಳಿದ ಜನರು ತಿಳಿಸಿದ್ದಾರೆ.<br /> <br /> ಇಂಡೊನೇಷ್ಯಾದಲ್ಲಿ 17,000 ದ್ವೀಪಗಳಿದ್ದು ದೇಶದ 23.50 ಕೋಟಿ ಜನರು ಪ್ರಯಾಣಕ್ಕೆ ಹೆಚ್ಚಾಗಿ ದೋಣಿ, ಹಡಗುಗಳನ್ನೇ ಅವಲಂಬಿಸಿದ್ದಾರೆ. ಸಾಮಾನ್ಯವಾಗಿ ದೋಣಿಗಳು, ಹಡಗುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೇ ಸುರಕ್ಷತೆಗೆ ಹೆಚ್ಚು ಒತ್ತು ನೀಡಿಲ್ಲದ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜಕಾರ್ತ, (ಎಪಿ): </strong>ಭಾರಿ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದ ಹಡಗಿಗೆ ಬೆಂಕಿ ತಗುಲಿದ ಪರಿಣಾಮ 11 ಮಂದಿ ಮೃತಪಟ್ಟಿದ್ದು, ಗಾಬರಿಗೊಂಡ ಹಲವರು ಸಮುದ್ರಕ್ಕೆ ಹಾರಿದ ಘಟನೆ ಶುಕ್ರವಾರ ನಡೆದಿದೆ. ಘಟನೆಯಲ್ಲಿ ಸುಮಾರು 200 ಜನರಿಗೆ ಗಾಯಗಳಾಗಿವೆ. <br /> <br /> ಸಾರಿಗೆ ಸಚಿವಾಲಯದ ವಕ್ತಾರ ಬ್ಯಾಂಬಂಗ್ ಇರ್ವಾನ್ ಮಾತನಾಡಿ, ಬೆಳಗ್ಗಿನ ಜಾವ ಮೆರಾಕ್ ಬಂದರಿನಿಂದ ಸುಮಾತ್ರದೆಡೆಗೆ ಹೊರಟ 40 ನಿಮಿಷಗಳಲ್ಲೇ ಹಡಗಿನಲ್ಲಿ ಬೆಂಕಿ ತಗುಲಿತು ಎಂದು ತಿಳಿಸಿದರು.<br /> <br /> ಹಡಗು ಸುಮಾರು ಮೂರು ಕಿ.ಮೀ ದೂರ ಸಾಗಿತ್ತು. ದಡದಿಂದಲೇ ಹಡಗಿನಿಂದ ಕಪ್ಪು ಹೊಗೆ ಹೊರಬರುತ್ತಿರುವುದು ಕಾಣಿಸಿದ ಕೂಡಲೇ ಐದು ರಕ್ಷಣಾ ಹಡಗುಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು ಎಂದು ಹೇಳಿದರು. <br /> <br /> ಮುಂಜಾನೆ ವೇಳೆಗೆ ಅದರಲ್ಲಿದ್ದ ಸುಮಾರು 427 ಜನರನ್ನು ಸುರಕ್ಷಿತವಾಗಿ ಹೊರಕ್ಕೆ ತರಲಾಗಿದೆ. ಈ ಅನಾಹುತಕ್ಕೆ ಸ್ಪಷ್ಟ ಕಾರಣ ತಕ್ಷಣಕ್ಕೆ ತಿಳಿದುಬಂದಿಲ್ಲ ಎಂದು ಸಚಿವಾಲಯದ ಮತ್ತೊಬ್ಬ ಅಧಿಕಾರಿ ವಿರಾಟ್ನೊ ತಿಳಿಸಿದರು.<br /> <br /> ವ್ಯಕ್ತಿಯೊಬ್ಬ ಸಿಗರೇಟ್ ಸೇದಿ ಅದರ ತುಂಡನ್ನು ಹಡಗಿನಲ್ಲಿ ಎಸೆದಿದ್ದೇ ಈ ಅನಾಹುತಕ್ಕೆ ಕಾರಣವಿರಬಹುದು ಎಂದು ಈ ಅವಘಡದಲ್ಲಿ ಬದುಕುಳಿದ ಜನರು ತಿಳಿಸಿದ್ದಾರೆ.<br /> <br /> ಇಂಡೊನೇಷ್ಯಾದಲ್ಲಿ 17,000 ದ್ವೀಪಗಳಿದ್ದು ದೇಶದ 23.50 ಕೋಟಿ ಜನರು ಪ್ರಯಾಣಕ್ಕೆ ಹೆಚ್ಚಾಗಿ ದೋಣಿ, ಹಡಗುಗಳನ್ನೇ ಅವಲಂಬಿಸಿದ್ದಾರೆ. ಸಾಮಾನ್ಯವಾಗಿ ದೋಣಿಗಳು, ಹಡಗುಗಳಲ್ಲಿ ಜನದಟ್ಟಣೆ ಹೆಚ್ಚಾಗಿರುತ್ತದೆ. ಅಲ್ಲದೇ ಸುರಕ್ಷತೆಗೆ ಹೆಚ್ಚು ಒತ್ತು ನೀಡಿಲ್ಲದ ಕಾರಣ ಪದೇ ಪದೇ ಅಪಘಾತಗಳು ಸಂಭವಿಸುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>