<p>ವಿಜಾಪುರ: ಹೆತ್ತವರಿಗೆ ಬೇಡವಾಗಿ ತಿಪ್ಪೆಗುಂಡಿಯಲ್ಲಿ ಎಸೆಯಲಾಗಿದ್ದ ಈ ನವಜಾತ ಶಿಶುಗಳ ಭವಿಷ್ಯ ಗಟ್ಟಿ ಇತ್ತು. ಹಡೆದವ್ವ ಹೊರತಳ್ಳಿದ್ದ ಈ ಶಿಶುಗಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರದವರು ಈಗ ಅಪ್ಪಿಕೊಂಡಿದ್ದಾರೆ.<br /> <br /> ಮುದ್ದೇಬಿಹಾಳ ಹಾಗೂ ಚಡಚಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಈ ಎರಡು ನವಜಾತ ಗಂಡು ಶಿಶುಗಳು ದೊರೆತಿದ್ದವು.<br /> <br /> ಆಗತಾನೆ ಹುಟ್ಟಿದ್ದ ತಮ್ಮ ಕರುಳ ಕುಡಿಗಳನ್ನು ಆ ಮಹಾತಾಯಂದಿರು ದೂರ ಮಾಡಿದ್ದರು. ತಾಯಿಯ ಮಡಿಲಲ್ಲಿ ಕಣ್ಣರಳಿಸಿ, ಬೆಚ್ಚನೆಯ ಹಾಸಿಗೆಯಲ್ಲಿ ಮಲಗಿ ನಲಿಯಬೇಕಿದ್ದ ಈ ಕಂದಮ್ಮಗಳು ಹುಟ್ಟುತ್ತಲೇ ತಿಪ್ಪೆಗುಂಡಿ ಸೇರಿಬಿಟ್ಟಿದ್ದವು. ಯಾವ ತಪ್ಪು ಮಾಡದಿದ್ದರೂ ಹೊರ ಜಗತ್ತಿಗೆ ಬರುತ್ತಿದ್ದಂತೆಯೇ ಈ ಕಠೋರ ಶಿಕ್ಷೆಗೆ ಗುರಿಯಾಗಿದ್ದವು. <br /> <br /> ಪೋಷಕರು ದೂರ ಮಾಡಿದ ರೇನಂತೆ? ಆ ದೇವರು ಕೈ ಬಿಟ್ಟಿರಲಿಲ್ಲ. ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಈ ಮಕ್ಕಳು ಹಂದಿ-ನಾಯಿಗಳಿಗೆ ಆಹಾರವಾಗುವ ಅಪಾಯವೂ ಇತ್ತು. ಆಗಷ್ಟೇ ಕಣ್ಣು ಬಿಟ್ಟು, ಎಚ್ಚರಗೊಂಡು ಅಳುತ್ತಿದ್ದ ಈ ಹಸುಗೂಸುಗಳನ್ನು ಕಂಡ ದಾರಿ ಹೋಕರು ಮಮ್ಮಲ ಮರುಗಿದ್ದರು. ಮಾನವೀಯತೆ ಮೆರೆದ ಪೊಲೀಸರು ಈ ಕಂದಮ್ಮಗಳನ್ನು ಆಸ್ಪತ್ರೆ ಸೇರಿಸಿ, ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ವಹಿಸಿದ್ದರು.<br /> <br /> ಪಾಲಕರ ಪತ್ತೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಪುನರ್ವಸತಿಗಾಗಿ ತಮ್ಮಲ್ಲಿ ದಾಖಲಿಸಲ್ಪಟ್ಟಿದ್ದ ಈ ನವಜಾತ ಶಿಶುಗಳನ್ನು ಮಕ್ಕಳ ಕಲ್ಯಾಣ ಸಮಿತಿಯವರು ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಜಿಲ್ಲಾ ಆಸ್ಪತ್ರೆಯ ವೈದ್ಯರು, ದಾದಿಯರು ತಮ್ಮ ಮಕ್ಕಳಿಗಿಂತ ಮುದ್ದಾಗಿ ಈ ಅನಾಥ ನವಜಾತ ಗಂಡು ಶಿಶುಗಳನ್ನು ಸುಮಾರು ಎರಡು ತಿಂಗಳವರೆಗೆ ಪಾಲನೆ ಮಾಡಿದರು.<br /> <br /> ಮಕ್ಕಳ ಕಲ್ಯಾಣ ಸಮಿತಿಯ ಆದೇಶ ದಂತೆ ಈ ಮಕ್ಕಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.<br /> <br /> ವಿಜಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಾಸುದೇವ ತೋಳಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಿ.ಪಿ. ವಸಂತ ಪ್ರೇಮಾ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎಚ್.ಎಸ್. ದಶರಥ ಅವರು ಈ ಮಕ್ಕಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರದವರಿಗೆ ಹಸ್ತಾಂತರಿಸಿದರು.<br /> ಬಾಗಲಕೋಟೆ ಕೇಂದ್ರದ ನಿರ್ದೇಶಕ ವೆಂಕಟೇಶ ಕುಲಕರ್ಣಿ ಸಿಬ್ಬಂದಿ ಯೊಂದಿಗೆ ವಿಜಾಪುರ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಈ ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಲಲಿತಾ ಶೆಟ್ಟರ, ಕಾರ್ಯದರ್ಶಿ ಜಿ.ಆರ್. ಕೋಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ವಿಜಾಪುರ: ಹೆತ್ತವರಿಗೆ ಬೇಡವಾಗಿ ತಿಪ್ಪೆಗುಂಡಿಯಲ್ಲಿ ಎಸೆಯಲಾಗಿದ್ದ ಈ ನವಜಾತ ಶಿಶುಗಳ ಭವಿಷ್ಯ ಗಟ್ಟಿ ಇತ್ತು. ಹಡೆದವ್ವ ಹೊರತಳ್ಳಿದ್ದ ಈ ಶಿಶುಗಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರದವರು ಈಗ ಅಪ್ಪಿಕೊಂಡಿದ್ದಾರೆ.<br /> <br /> ಮುದ್ದೇಬಿಹಾಳ ಹಾಗೂ ಚಡಚಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಕೆಲ ದಿನಗಳ ಹಿಂದೆ ಈ ಎರಡು ನವಜಾತ ಗಂಡು ಶಿಶುಗಳು ದೊರೆತಿದ್ದವು.<br /> <br /> ಆಗತಾನೆ ಹುಟ್ಟಿದ್ದ ತಮ್ಮ ಕರುಳ ಕುಡಿಗಳನ್ನು ಆ ಮಹಾತಾಯಂದಿರು ದೂರ ಮಾಡಿದ್ದರು. ತಾಯಿಯ ಮಡಿಲಲ್ಲಿ ಕಣ್ಣರಳಿಸಿ, ಬೆಚ್ಚನೆಯ ಹಾಸಿಗೆಯಲ್ಲಿ ಮಲಗಿ ನಲಿಯಬೇಕಿದ್ದ ಈ ಕಂದಮ್ಮಗಳು ಹುಟ್ಟುತ್ತಲೇ ತಿಪ್ಪೆಗುಂಡಿ ಸೇರಿಬಿಟ್ಟಿದ್ದವು. ಯಾವ ತಪ್ಪು ಮಾಡದಿದ್ದರೂ ಹೊರ ಜಗತ್ತಿಗೆ ಬರುತ್ತಿದ್ದಂತೆಯೇ ಈ ಕಠೋರ ಶಿಕ್ಷೆಗೆ ಗುರಿಯಾಗಿದ್ದವು. <br /> <br /> ಪೋಷಕರು ದೂರ ಮಾಡಿದ ರೇನಂತೆ? ಆ ದೇವರು ಕೈ ಬಿಟ್ಟಿರಲಿಲ್ಲ. ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಈ ಮಕ್ಕಳು ಹಂದಿ-ನಾಯಿಗಳಿಗೆ ಆಹಾರವಾಗುವ ಅಪಾಯವೂ ಇತ್ತು. ಆಗಷ್ಟೇ ಕಣ್ಣು ಬಿಟ್ಟು, ಎಚ್ಚರಗೊಂಡು ಅಳುತ್ತಿದ್ದ ಈ ಹಸುಗೂಸುಗಳನ್ನು ಕಂಡ ದಾರಿ ಹೋಕರು ಮಮ್ಮಲ ಮರುಗಿದ್ದರು. ಮಾನವೀಯತೆ ಮೆರೆದ ಪೊಲೀಸರು ಈ ಕಂದಮ್ಮಗಳನ್ನು ಆಸ್ಪತ್ರೆ ಸೇರಿಸಿ, ಮಕ್ಕಳ ಕಲ್ಯಾಣ ಸಮಿತಿಯ ಸುಪರ್ದಿಗೆ ವಹಿಸಿದ್ದರು.<br /> <br /> ಪಾಲಕರ ಪತ್ತೆಗಾಗಿ ಮಕ್ಕಳ ಕಲ್ಯಾಣ ಸಮಿತಿ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಪುನರ್ವಸತಿಗಾಗಿ ತಮ್ಮಲ್ಲಿ ದಾಖಲಿಸಲ್ಪಟ್ಟಿದ್ದ ಈ ನವಜಾತ ಶಿಶುಗಳನ್ನು ಮಕ್ಕಳ ಕಲ್ಯಾಣ ಸಮಿತಿಯವರು ಆರೈಕೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದರು. ಜಿಲ್ಲಾ ಆಸ್ಪತ್ರೆಯ ವೈದ್ಯರು, ದಾದಿಯರು ತಮ್ಮ ಮಕ್ಕಳಿಗಿಂತ ಮುದ್ದಾಗಿ ಈ ಅನಾಥ ನವಜಾತ ಗಂಡು ಶಿಶುಗಳನ್ನು ಸುಮಾರು ಎರಡು ತಿಂಗಳವರೆಗೆ ಪಾಲನೆ ಮಾಡಿದರು.<br /> <br /> ಮಕ್ಕಳ ಕಲ್ಯಾಣ ಸಮಿತಿಯ ಆದೇಶ ದಂತೆ ಈ ಮಕ್ಕಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.<br /> <br /> ವಿಜಾಪುರ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ವಾಸುದೇವ ತೋಳಬಂದಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಡಿ.ಪಿ. ವಸಂತ ಪ್ರೇಮಾ, ಜಿಲ್ಲಾ ಆಸ್ಪತ್ರೆಯ ಮಕ್ಕಳ ತಜ್ಞ ಡಾ.ಎಚ್.ಎಸ್. ದಶರಥ ಅವರು ಈ ಮಕ್ಕಳನ್ನು ಬಾಗಲಕೋಟೆಯ ಸ್ವದೇಶಿ ದತ್ತು ಸ್ವೀಕಾರ ಕೇಂದ್ರದವರಿಗೆ ಹಸ್ತಾಂತರಿಸಿದರು.<br /> ಬಾಗಲಕೋಟೆ ಕೇಂದ್ರದ ನಿರ್ದೇಶಕ ವೆಂಕಟೇಶ ಕುಲಕರ್ಣಿ ಸಿಬ್ಬಂದಿ ಯೊಂದಿಗೆ ವಿಜಾಪುರ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ ಈ ಮಕ್ಕಳನ್ನು ತಮ್ಮ ಸುಪರ್ದಿಗೆ ಪಡೆದುಕೊಂಡರು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯೆ ಲಲಿತಾ ಶೆಟ್ಟರ, ಕಾರ್ಯದರ್ಶಿ ಜಿ.ಆರ್. ಕೋಟಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>