<p><strong>ತುರುವನೂರು:</strong> ಧನಮೋಹಿಗಳಿಗೆ ಅಪವಾದ ಎಂಬಂತೆ ಇಲ್ಲೊಬ್ಬ ಮಹಿಳೆ ಹಣ ನೋಡಿದರೆ ಸಾಕು, ಗಾಬರಿಗೊಂಡು ವಿಚಿತ್ರವಾಗಿ ವರ್ತಿಸುತ್ತಾರೆ.<br /> ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಸುಮಾರು 30 ವರ್ಷದ ಸುವರ್ಣಮ್ಮ ಮುಕುಂದಪ್ಪ ಎಂಬ ಮಹಿಳೆ ಕಳೆದ ಮೂರು ವರ್ಷಗಳಿಂದ ತಾನು ದುಡಿದ ಹಣವನ್ನು ಕೂಡ ಮುಟ್ಟಲು ಹಿಂಜರಿಯುತ್ತಾರೆ, ಭಯದಿಂದ ಕಿರುಚಾಡುತ್ತಾರೆ.<br /> <br /> ಪದೇ ಪದೇ ಜ್ವರ ಬರುತ್ತಿತ್ತು ಎಂದು ಧಾರ್ಮಿಕ ಕ್ಷೇತ್ರವೊಂದಕ್ಕೆ ಕರೆದುಕೊಂಡು ಹೋಗಿ ಬಂದಾಗಿನಿಂದ ಹಣ ತೋರಿಸಿದರೆ ಈ ರೀತಿ ವಿಚಿತ್ರ ವರ್ತಿಸುತ್ತಿದ್ದಾರೆ. ದುಡ್ಡನ್ನು ಕಂಡರೆ ಜೋರಾಗಿ ಚೀರುತ್ತಾ ತಿಳಿಯದ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತಾರೆ. ಇದನ್ನು ಕಂಡರೆ ಅಕ್ಕಪಕ್ಕದಲ್ಲಿ ನಿಂತವರು ಭಯಭೀತರಾಗುತ್ತಾರೆ. ಇದಕ್ಕೆಲ್ಲಾ ಮಾಟ ಮಂತ್ರ ಕಾರಣ ಎನ್ನುವುದು ಸುವರ್ಣಮ್ಮ ಪತಿ ಮುರುಗೇಶಿ ನಂಬಿಕೆ.<br /> <br /> ಅನಾರೋಗ್ಯದಿಂದ ಈ ರೀತಿ ಮಾಡುತ್ತಿರಬಹುದು ಎಂದು ಭಾವಿಸಿ, ಸುವರ್ಣಮ್ಮ ಅವರನ್ನು ವೈದ್ಯರ ಬಳಿಗೆ ಕೂಡ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು, ಯಾವುದೇ ಕಾಯಿಲೆಯಿಲ್ಲ ಎಂದು ಹೇಳಿ, ಸಮಯಕ್ಕೆ ಸರಿಯಾಗಿ ಊಟ ಮಾಡಲು ಸಲಹೆ ನೀಡಿದರು. ಆದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಕುಟುಂಬದವರು.<br /> <br /> ಹಣ ಕಾಣದಿರುವಾಗ ಎಲ್ಲರಂತೆ ಸಾಮಾನ್ಯವಾಗಿ ಹೊಲ, ಮನೆ ಕೆಲಸದಲ್ಲಿ ನಿರತರಾಗುತ್ತಾರೆ. ಹಲವು ಬಾರಿ ಆಸ್ಪತ್ರೆಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಇಂದ್ರಮ್ಮ. ನಾಲ್ಕು ವರ್ಷದ ಹಿಂದೆ ಈ ಮಹಿಳೆ ಸ್ವ ಸಹಾಯ ಸಂಘದ ಪ್ರತಿನಿಧಿಯಾಗಿ ಎಲ್ಲರೊಡನೆ ಉತ್ತಮವಾಗಿ ಬೆರೆಯುತ್ತಿದ್ದರು. ಅಂತ್ಯಾಕ್ಷರಿ, ಹಾಡು, ಪದ ಹಾಡುವ ಮೂಲಕ ಸಂತೋಷದಿಂದ ಇರುತ್ತಿದ್ದರು. ಈ ಘಟನೆ ನಡೆದ ನಂತರ ಸಂಘಕ್ಕೆ ಬರುತ್ತಿಲ್ಲ ಎಂದು ಗ್ರಾಮದ ಇತರ ಕೆಲವು ಮಹಿಳೆಯರು ಬೇಸರದಿಂದ ಹೇಳಿದರು.<br /> <br /> ಈ ಮಹಿಳೆಯ ಪರಿಸ್ಥಿತಿ ಕಂಡು ಮನೆಯವರಿಗಲ್ಲದೆ, ನೆರೆಹೊರೆಯವರು ಕೂಡ ಮರುಕ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಮನೋರೋಗ ತಜ್ಞರಿಂದಲಾದರೂ ಗುಣಮುಖ ಆಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದಾಗಿ ಹೇಳುತ್ತಾರೆ ಗ್ರಾಮಸ್ಥರು.</p>.<p>ಇದು ಮಾನಸಿಕ ಕಾಯಿಲೆ. ಚಿಕ್ಕಂದಿನಲ್ಲಿ ಹಣದ ವಿಚಾರವಾಗಿ ಏಟು ತಿಂದು ಆಘಾತಕ್ಕೊಳಗಾಗಿದ್ದವರು ಹೀಗೆ ವರ್ತಿಸುತ್ತಾರೆ. ಇದು ಒಂದು ರೀತಿಯ ಡಿಸೋಸಿಯೇಟಿವ್ ಡಿಸ್ಆರ್ಡರ್. ಗುಣಪಡಿಸಬಹುದಾದ ಕಾಯಿಲೆ.<br /> <strong>ಡಾ.ಆರ್.ಎಸ್.ದೀಪಕ್, ಮನೋವೈದ್ಯ, ಚಿತ್ರದುರ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುರುವನೂರು:</strong> ಧನಮೋಹಿಗಳಿಗೆ ಅಪವಾದ ಎಂಬಂತೆ ಇಲ್ಲೊಬ್ಬ ಮಹಿಳೆ ಹಣ ನೋಡಿದರೆ ಸಾಕು, ಗಾಬರಿಗೊಂಡು ವಿಚಿತ್ರವಾಗಿ ವರ್ತಿಸುತ್ತಾರೆ.<br /> ಚಿತ್ರದುರ್ಗ ತಾಲ್ಲೂಕಿನ ತುರುವನೂರು ಹೋಬಳಿಯ ಕಡಬನಕಟ್ಟೆ ಗ್ರಾಮದ ಸುಮಾರು 30 ವರ್ಷದ ಸುವರ್ಣಮ್ಮ ಮುಕುಂದಪ್ಪ ಎಂಬ ಮಹಿಳೆ ಕಳೆದ ಮೂರು ವರ್ಷಗಳಿಂದ ತಾನು ದುಡಿದ ಹಣವನ್ನು ಕೂಡ ಮುಟ್ಟಲು ಹಿಂಜರಿಯುತ್ತಾರೆ, ಭಯದಿಂದ ಕಿರುಚಾಡುತ್ತಾರೆ.<br /> <br /> ಪದೇ ಪದೇ ಜ್ವರ ಬರುತ್ತಿತ್ತು ಎಂದು ಧಾರ್ಮಿಕ ಕ್ಷೇತ್ರವೊಂದಕ್ಕೆ ಕರೆದುಕೊಂಡು ಹೋಗಿ ಬಂದಾಗಿನಿಂದ ಹಣ ತೋರಿಸಿದರೆ ಈ ರೀತಿ ವಿಚಿತ್ರ ವರ್ತಿಸುತ್ತಿದ್ದಾರೆ. ದುಡ್ಡನ್ನು ಕಂಡರೆ ಜೋರಾಗಿ ಚೀರುತ್ತಾ ತಿಳಿಯದ ಭಾಷೆಯಲ್ಲಿ ಮಾತನಾಡಲು ಆರಂಭಿಸುತ್ತಾರೆ. ಇದನ್ನು ಕಂಡರೆ ಅಕ್ಕಪಕ್ಕದಲ್ಲಿ ನಿಂತವರು ಭಯಭೀತರಾಗುತ್ತಾರೆ. ಇದಕ್ಕೆಲ್ಲಾ ಮಾಟ ಮಂತ್ರ ಕಾರಣ ಎನ್ನುವುದು ಸುವರ್ಣಮ್ಮ ಪತಿ ಮುರುಗೇಶಿ ನಂಬಿಕೆ.<br /> <br /> ಅನಾರೋಗ್ಯದಿಂದ ಈ ರೀತಿ ಮಾಡುತ್ತಿರಬಹುದು ಎಂದು ಭಾವಿಸಿ, ಸುವರ್ಣಮ್ಮ ಅವರನ್ನು ವೈದ್ಯರ ಬಳಿಗೆ ಕೂಡ ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ. ವೈದ್ಯರು, ಯಾವುದೇ ಕಾಯಿಲೆಯಿಲ್ಲ ಎಂದು ಹೇಳಿ, ಸಮಯಕ್ಕೆ ಸರಿಯಾಗಿ ಊಟ ಮಾಡಲು ಸಲಹೆ ನೀಡಿದರು. ಆದರೂ ಸಮಸ್ಯೆ ಬಗೆಹರಿದಿಲ್ಲ ಎನ್ನುತ್ತಾರೆ ಕುಟುಂಬದವರು.<br /> <br /> ಹಣ ಕಾಣದಿರುವಾಗ ಎಲ್ಲರಂತೆ ಸಾಮಾನ್ಯವಾಗಿ ಹೊಲ, ಮನೆ ಕೆಲಸದಲ್ಲಿ ನಿರತರಾಗುತ್ತಾರೆ. ಹಲವು ಬಾರಿ ಆಸ್ಪತ್ರೆಗೆ ತೋರಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಇಂದ್ರಮ್ಮ. ನಾಲ್ಕು ವರ್ಷದ ಹಿಂದೆ ಈ ಮಹಿಳೆ ಸ್ವ ಸಹಾಯ ಸಂಘದ ಪ್ರತಿನಿಧಿಯಾಗಿ ಎಲ್ಲರೊಡನೆ ಉತ್ತಮವಾಗಿ ಬೆರೆಯುತ್ತಿದ್ದರು. ಅಂತ್ಯಾಕ್ಷರಿ, ಹಾಡು, ಪದ ಹಾಡುವ ಮೂಲಕ ಸಂತೋಷದಿಂದ ಇರುತ್ತಿದ್ದರು. ಈ ಘಟನೆ ನಡೆದ ನಂತರ ಸಂಘಕ್ಕೆ ಬರುತ್ತಿಲ್ಲ ಎಂದು ಗ್ರಾಮದ ಇತರ ಕೆಲವು ಮಹಿಳೆಯರು ಬೇಸರದಿಂದ ಹೇಳಿದರು.<br /> <br /> ಈ ಮಹಿಳೆಯ ಪರಿಸ್ಥಿತಿ ಕಂಡು ಮನೆಯವರಿಗಲ್ಲದೆ, ನೆರೆಹೊರೆಯವರು ಕೂಡ ಮರುಕ ಪಡುವಂತ ಸ್ಥಿತಿ ನಿರ್ಮಾಣವಾಗಿದೆ. ಮನೋರೋಗ ತಜ್ಞರಿಂದಲಾದರೂ ಗುಣಮುಖ ಆಗಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ ಎಂಬುದಾಗಿ ಹೇಳುತ್ತಾರೆ ಗ್ರಾಮಸ್ಥರು.</p>.<p>ಇದು ಮಾನಸಿಕ ಕಾಯಿಲೆ. ಚಿಕ್ಕಂದಿನಲ್ಲಿ ಹಣದ ವಿಚಾರವಾಗಿ ಏಟು ತಿಂದು ಆಘಾತಕ್ಕೊಳಗಾಗಿದ್ದವರು ಹೀಗೆ ವರ್ತಿಸುತ್ತಾರೆ. ಇದು ಒಂದು ರೀತಿಯ ಡಿಸೋಸಿಯೇಟಿವ್ ಡಿಸ್ಆರ್ಡರ್. ಗುಣಪಡಿಸಬಹುದಾದ ಕಾಯಿಲೆ.<br /> <strong>ಡಾ.ಆರ್.ಎಸ್.ದೀಪಕ್, ಮನೋವೈದ್ಯ, ಚಿತ್ರದುರ್ಗ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>