<p>ಬೆಂಗಳೂರು: `ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಕೋನ ಇಲ್ಲದ ಅಭಿವೃದ್ಧಿ ಪ್ರಗತಿಗೆ ಮಾರಕ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.<br /> <br /> ಪರಿಸರ ಸಮತೋಲನದೊಂದಿಗೆ ಸುಸ್ಥಿರ ಪ್ರಗತಿ ಸಾಧಿಸಬೇಕು. ಆದರೆ, ಪ್ರಗತಿಯ ಕೊಡಲಿಗೆ ಮರಗಳು ಬಲಿಯಾಗುತ್ತಿವೆ. 4 ಲಕ್ಷ ಜನಸಂಖ್ಯೆಯನ್ನು ಒಳಗೊಳ್ಳಬಹುದಾದ ಬೆಂಗಳೂರು ಸದ್ಯ 80 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವುದೇ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು. <br /> <br /> ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಂಗಸಂಸ್ಥೆ `ಭಾರತೀಯ ಹಸಿರು ಕಟ್ಟಡಗಳ ಮಂಡಳಿಯ (ಐಜಿಬಿಸಿ) ಕರ್ನಾಟಕ ಶಾಖೆಯು ಇಲ್ಲಿ `ವಿಶ್ವ ಹಸಿರು ಕಟ್ಟಡಗಳ ಸಪ್ತಾಹ~ದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> `ಐಜಿಬಿಸಿ~ ಮುಂದಿಟ್ಟಿರುವ ಹಸಿರು ಮನೆ ಯೋಜನೆ ಪ್ರಸ್ತುತವಾಗಿದೆ. ಹಸಿರು ಆಧಾರಿತ ಅಭಿವೃದ್ಧಿ ಈಗಿನ ಅಗತ್ಯ. ಆದರೆ, ಇದನ್ನು ಜಾರಿಗೊಳಿಸಲು ಕೆಲವು ನಿಯಮಗಳ ಅಗತ್ಯವಿದೆ. ಸರ್ಕಾರ ಆ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸಬೇಕು ಎಂದರು. <br /> <br /> ಸಾಲು ಮರದ ತಿಮ್ಮಕ್ಕ, ಡಾ.ಮೀನಾಕ್ಷಿ ಭರತ್, ಎನ್.ಎಸ್ ರಮಾಕಾಂತ್, ನಾಗೇಶ ಹೆಗಡೆ, ಪಾಪಮ್ಮ, ವಿ.ಎಸ್. ಶ್ರೀರಾಮ್, ಗಿರೀಶ್ ಭಾರದ್ವಾಜ್, ಅಹ್ಮದ್ಖಾನ್, ಡಾ. ಡಿ. ಚಂದ್ರಶೇಖರ ಚೌಟ, ಪಿ.ಬಿ ರಾಮಮೂರ್ತಿ ಸೇರಿದಂತೆ ಸಂಘ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ `ಐಜಿಬಿಸಿ~ ಗ್ರೀನ್ ಚಾಂಪಿಯನ್ಸ್ ಪ್ರಶಸ್ತಿಗಳನ್ನು ನೀಡಲಾಯಿತು. <br /> <br /> ಡಾ. ಚಂದ್ರಶೇಖರ್ ಹರಿಹರನ್, ಪರಿಸರವಾದಿ ಸುರೇಶ್ ಹೆಬ್ಳೀಕರ್ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಬೆಂಗಳೂರು: `ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಕೋನ ಇಲ್ಲದ ಅಭಿವೃದ್ಧಿ ಪ್ರಗತಿಗೆ ಮಾರಕ~ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ ಹೆಗ್ಡೆ ಅಭಿಪ್ರಾಯಪಟ್ಟರು.<br /> <br /> ಪರಿಸರ ಸಮತೋಲನದೊಂದಿಗೆ ಸುಸ್ಥಿರ ಪ್ರಗತಿ ಸಾಧಿಸಬೇಕು. ಆದರೆ, ಪ್ರಗತಿಯ ಕೊಡಲಿಗೆ ಮರಗಳು ಬಲಿಯಾಗುತ್ತಿವೆ. 4 ಲಕ್ಷ ಜನಸಂಖ್ಯೆಯನ್ನು ಒಳಗೊಳ್ಳಬಹುದಾದ ಬೆಂಗಳೂರು ಸದ್ಯ 80 ಲಕ್ಷಕ್ಕಿಂತಲೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವುದೇ ಇದಕ್ಕೆ ಅತ್ಯುತ್ತಮ ಉದಾಹರಣೆ ಎಂದರು. <br /> <br /> ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಅಂಗಸಂಸ್ಥೆ `ಭಾರತೀಯ ಹಸಿರು ಕಟ್ಟಡಗಳ ಮಂಡಳಿಯ (ಐಜಿಬಿಸಿ) ಕರ್ನಾಟಕ ಶಾಖೆಯು ಇಲ್ಲಿ `ವಿಶ್ವ ಹಸಿರು ಕಟ್ಟಡಗಳ ಸಪ್ತಾಹ~ದ ಅಂಗವಾಗಿ ಆಯೋಜಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು. <br /> <br /> `ಐಜಿಬಿಸಿ~ ಮುಂದಿಟ್ಟಿರುವ ಹಸಿರು ಮನೆ ಯೋಜನೆ ಪ್ರಸ್ತುತವಾಗಿದೆ. ಹಸಿರು ಆಧಾರಿತ ಅಭಿವೃದ್ಧಿ ಈಗಿನ ಅಗತ್ಯ. ಆದರೆ, ಇದನ್ನು ಜಾರಿಗೊಳಿಸಲು ಕೆಲವು ನಿಯಮಗಳ ಅಗತ್ಯವಿದೆ. ಸರ್ಕಾರ ಆ ನಿಟ್ಟಿನಲ್ಲಿ ಪರಿಣಾಮಕಾರಿ ಪ್ರಯತ್ನಗಳನ್ನು ನಡೆಸಬೇಕು ಎಂದರು. <br /> <br /> ಸಾಲು ಮರದ ತಿಮ್ಮಕ್ಕ, ಡಾ.ಮೀನಾಕ್ಷಿ ಭರತ್, ಎನ್.ಎಸ್ ರಮಾಕಾಂತ್, ನಾಗೇಶ ಹೆಗಡೆ, ಪಾಪಮ್ಮ, ವಿ.ಎಸ್. ಶ್ರೀರಾಮ್, ಗಿರೀಶ್ ಭಾರದ್ವಾಜ್, ಅಹ್ಮದ್ಖಾನ್, ಡಾ. ಡಿ. ಚಂದ್ರಶೇಖರ ಚೌಟ, ಪಿ.ಬಿ ರಾಮಮೂರ್ತಿ ಸೇರಿದಂತೆ ಸಂಘ ಸಂಸ್ಥೆಗಳಿಗೆ ಪ್ರಸಕ್ತ ಸಾಲಿನ `ಐಜಿಬಿಸಿ~ ಗ್ರೀನ್ ಚಾಂಪಿಯನ್ಸ್ ಪ್ರಶಸ್ತಿಗಳನ್ನು ನೀಡಲಾಯಿತು. <br /> <br /> ಡಾ. ಚಂದ್ರಶೇಖರ್ ಹರಿಹರನ್, ಪರಿಸರವಾದಿ ಸುರೇಶ್ ಹೆಬ್ಳೀಕರ್ ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>