<p>ರಾಜ್ಯದ ಬೊಕ್ಕಸಕ್ಕೆ ಇಲ್ಲಿನ ಗಣಿಗಾರಿಕೆಯಿಂದ ತೆರಿಗೆ ರೂಪದಲ್ಲಿ ಕೋಟಿಗಟ್ಟಲೆ ಆದಾಯ ನೀಡುವ ತಾಲ್ಲೂಕಿನ ಜನರು ಸರಿಯಾದ ರಸ್ತೆ ಹಾಗೂ ಶುದ್ಧ ಕುಡಿವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.<br /> <br /> ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಅವುಗಳ ಅಭಿವೃದ್ಧಿ ಪಡಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.<br /> <br /> ಅಬ್ಬರದ ಗಣಿಗಾರಿಕೆ ಇದ್ದ (2006ರಿಂದ 2011) ದಿನಗಳಲ್ಲಿ ಸಂಡೂರು-ಹೊಸಪೇಟೆ ರಸ್ತೆಯ ಸುಶೀಲಾನಗರ, ಜೈಸಿಂಗ್ಪುರ, ಸಿದ್ದಾಪುರ, ಕಲ್ಲಹಳ್ಳಿ ಮಾರ್ಗದ ಜನರು ಅಕ್ಷರಶಃ ಕೆಟ್ಟ ರಸ್ತೆಗಳಿಂದ ರೋಸಿ ಹೋಗಿದ್ದರು. <br /> <br /> ಮಳೆಗಾಲದಲ್ಲಂತೂ ಕೆಸರು, ಮೊಣಕಾಲೆತ್ತರದ ಗುಂಡಿ ಬಿದ್ದ ರಸ್ತೆಗಳಲ್ಲಿ ಜನರು ಓಡಾಡುವುದು ಕಷ್ಟಕರವಾಗಿತ್ತು. ಬಸಿರು ಹೆಂಗಸರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೂಸು ಸಮೇತ ಹಲವರು ಸಾವನ್ನಪ್ಪಿದ್ದ ಘಟನೆಗಳು ಜರುಗಿದ್ದವು.<br /> <br /> ಕಳೆದ ವರ್ಷದ ಜೂನ್ ತಿಂಗಳಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮತ್ತು ಅಂದಿನ ಜಿಲ್ಲಾ ಮಂತ್ರಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಸ್ಥಳೀಯ ಶಾಸಕ ಈ.ತುಕಾರಾಂ ಸಂಡೂರು- ಹೊಸಪೇಟೆ ಮತ್ತು ತೋರಣಗಲ್ಲು ಸಂಡೂರು ಕೂಡ್ಲಿಗಿ ರಸ್ತೆಗಳ ಅಭಿ ವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದರು.<br /> <br /> 90 ಕೋಟಿ ರೂಪಾಯಿಗಳ ಸಂಡೂರು- ಹೊಸಪೇಟೆ ಸಿಮೆಂಟ್ ರಸ್ತೆ ನಿರ್ಮಾಣದ ಕಾಮಗಾರಿ ಆಮೆ ವೇಗದಲ್ಲಿದೆ. ಜೊತೆಗೆ ನಿರೀಕ್ಷಿತ ಗುಣಮಟ್ಟದ ಕೆಲಸವಾಗುತ್ತಿಲ್ಲ ಎಂಬುದು ಸ್ಥಳೀಯರ ದೂರು. 120 ಕೋಟಿ ವೆಚ್ಚದ ತೋರಣಗಲ್ಲು ಕೂಡ್ಲಿಗಿ ರಸ್ತೆ ಕಾಮಗಾರಿ ಆರಂಭವಾಗಬೇಕಿದೆ.<br /> <br /> ಅಲ್ಲದೇ ತೋರಣಗಲ್ಲು, ತಾರಾನಗರ, ಬನ್ನಿಹಟ್ಟಿ, ಸಂಡೂರು, ಧರ್ಮಾಪುರ, ಯಶವಂತನಗರ, ಅಂತಾಪುರ, ಬಸಾಪುರ, ಮೆಟ್ರಿಕಿ, ಮೋತಲಕುಂಟ, ಯರಯ್ಯನಹಳ್ಳಿ ಗ್ರಾಮಗಳ ರಸ್ತೆಗಳು ಹಾಳಾಗಿವೆ. ತಾಲ್ಲೂಕಿನಲ್ಲಿರುವ ಮೇಲು ಸೇತುವೆಗಳು ದುರ್ಬಲವಾಗಿದ್ದು ತಡೆ ಗೋಡೆಗಳು ಸಂಪೂರ್ಣ ಜೀರ್ಣಾವಸ್ಥೆ ಯಲ್ಲಿವೆ.<br /> <br /> ಫ್ಲೋರೈಡ್ಯುಕ್ತ ನೀರು: ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ ಶೇ 70ರಷ್ಟು ಹಳ್ಳಿಗಳ ನೀರಿನಲ್ಲಿ ಅಧಿಕ ಫ್ಲೋರೈಡ್ ಅಂಶವಿರುವುದು ವೈಜ್ಞಾನಿಕ ವರದಿಯಿಂದ ದೃಢಪಟ್ಟಿದೆ.<br /> <br /> ಜನರಿಗೆ ದಂತ ಫ್ಲೋರೋಸಿಸ್ ಕಾಯಿಲೆ, ಮಕ್ಕಳಲ್ಲಿ ನೀಲಿಮಾ ಕಾಯಿಲೆ ಮತ್ತು ಅಂಗವಿಕಲತೆಯಿಂದ ಬಳಲುತ್ತಿ ರುವವರ ಸಂಖ್ಯೆ ಹೆಚ್ಚುತ್ತಿದೆ. ಫ್ಲೋರೈಡ್ ನೀರಿನ ಬದಲಾಗಿ ಜನರಿಗೆ ಶುದ್ಧ ಕುಡಿವ ನೀರನ್ನ ಮತ್ತು ಸಂಚಾರ ಯೋಗ್ಯ ರಸ್ತೆಗಳನ್ನು ನಿರ್ಮಿಸಿ ಕೊಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಜ್ಯದ ಬೊಕ್ಕಸಕ್ಕೆ ಇಲ್ಲಿನ ಗಣಿಗಾರಿಕೆಯಿಂದ ತೆರಿಗೆ ರೂಪದಲ್ಲಿ ಕೋಟಿಗಟ್ಟಲೆ ಆದಾಯ ನೀಡುವ ತಾಲ್ಲೂಕಿನ ಜನರು ಸರಿಯಾದ ರಸ್ತೆ ಹಾಗೂ ಶುದ್ಧ ಕುಡಿವ ನೀರಿನ ಕೊರತೆಯಿಂದ ಬಳಲುತ್ತಿದ್ದಾರೆ.<br /> <br /> ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಅವುಗಳ ಅಭಿವೃದ್ಧಿ ಪಡಿಸಬೇಕಾದ ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ದೂರುತ್ತಾರೆ.<br /> <br /> ಅಬ್ಬರದ ಗಣಿಗಾರಿಕೆ ಇದ್ದ (2006ರಿಂದ 2011) ದಿನಗಳಲ್ಲಿ ಸಂಡೂರು-ಹೊಸಪೇಟೆ ರಸ್ತೆಯ ಸುಶೀಲಾನಗರ, ಜೈಸಿಂಗ್ಪುರ, ಸಿದ್ದಾಪುರ, ಕಲ್ಲಹಳ್ಳಿ ಮಾರ್ಗದ ಜನರು ಅಕ್ಷರಶಃ ಕೆಟ್ಟ ರಸ್ತೆಗಳಿಂದ ರೋಸಿ ಹೋಗಿದ್ದರು. <br /> <br /> ಮಳೆಗಾಲದಲ್ಲಂತೂ ಕೆಸರು, ಮೊಣಕಾಲೆತ್ತರದ ಗುಂಡಿ ಬಿದ್ದ ರಸ್ತೆಗಳಲ್ಲಿ ಜನರು ಓಡಾಡುವುದು ಕಷ್ಟಕರವಾಗಿತ್ತು. ಬಸಿರು ಹೆಂಗಸರನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆಯೇ ಕೂಸು ಸಮೇತ ಹಲವರು ಸಾವನ್ನಪ್ಪಿದ್ದ ಘಟನೆಗಳು ಜರುಗಿದ್ದವು.<br /> <br /> ಕಳೆದ ವರ್ಷದ ಜೂನ್ ತಿಂಗಳಲ್ಲಿ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಮತ್ತು ಅಂದಿನ ಜಿಲ್ಲಾ ಮಂತ್ರಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಸಚಿವ ಬಿ.ಶ್ರೀರಾಮುಲು, ಸ್ಥಳೀಯ ಶಾಸಕ ಈ.ತುಕಾರಾಂ ಸಂಡೂರು- ಹೊಸಪೇಟೆ ಮತ್ತು ತೋರಣಗಲ್ಲು ಸಂಡೂರು ಕೂಡ್ಲಿಗಿ ರಸ್ತೆಗಳ ಅಭಿ ವೃದ್ಧಿಗೆ ಭೂಮಿ ಪೂಜೆ ನೆರವೇರಿಸಿದ್ದರು.<br /> <br /> 90 ಕೋಟಿ ರೂಪಾಯಿಗಳ ಸಂಡೂರು- ಹೊಸಪೇಟೆ ಸಿಮೆಂಟ್ ರಸ್ತೆ ನಿರ್ಮಾಣದ ಕಾಮಗಾರಿ ಆಮೆ ವೇಗದಲ್ಲಿದೆ. ಜೊತೆಗೆ ನಿರೀಕ್ಷಿತ ಗುಣಮಟ್ಟದ ಕೆಲಸವಾಗುತ್ತಿಲ್ಲ ಎಂಬುದು ಸ್ಥಳೀಯರ ದೂರು. 120 ಕೋಟಿ ವೆಚ್ಚದ ತೋರಣಗಲ್ಲು ಕೂಡ್ಲಿಗಿ ರಸ್ತೆ ಕಾಮಗಾರಿ ಆರಂಭವಾಗಬೇಕಿದೆ.<br /> <br /> ಅಲ್ಲದೇ ತೋರಣಗಲ್ಲು, ತಾರಾನಗರ, ಬನ್ನಿಹಟ್ಟಿ, ಸಂಡೂರು, ಧರ್ಮಾಪುರ, ಯಶವಂತನಗರ, ಅಂತಾಪುರ, ಬಸಾಪುರ, ಮೆಟ್ರಿಕಿ, ಮೋತಲಕುಂಟ, ಯರಯ್ಯನಹಳ್ಳಿ ಗ್ರಾಮಗಳ ರಸ್ತೆಗಳು ಹಾಳಾಗಿವೆ. ತಾಲ್ಲೂಕಿನಲ್ಲಿರುವ ಮೇಲು ಸೇತುವೆಗಳು ದುರ್ಬಲವಾಗಿದ್ದು ತಡೆ ಗೋಡೆಗಳು ಸಂಪೂರ್ಣ ಜೀರ್ಣಾವಸ್ಥೆ ಯಲ್ಲಿವೆ.<br /> <br /> ಫ್ಲೋರೈಡ್ಯುಕ್ತ ನೀರು: ತಾಲ್ಲೂಕಿನ 23 ಗ್ರಾಮ ಪಂಚಾಯಿತಿಗಳ ಶೇ 70ರಷ್ಟು ಹಳ್ಳಿಗಳ ನೀರಿನಲ್ಲಿ ಅಧಿಕ ಫ್ಲೋರೈಡ್ ಅಂಶವಿರುವುದು ವೈಜ್ಞಾನಿಕ ವರದಿಯಿಂದ ದೃಢಪಟ್ಟಿದೆ.<br /> <br /> ಜನರಿಗೆ ದಂತ ಫ್ಲೋರೋಸಿಸ್ ಕಾಯಿಲೆ, ಮಕ್ಕಳಲ್ಲಿ ನೀಲಿಮಾ ಕಾಯಿಲೆ ಮತ್ತು ಅಂಗವಿಕಲತೆಯಿಂದ ಬಳಲುತ್ತಿ ರುವವರ ಸಂಖ್ಯೆ ಹೆಚ್ಚುತ್ತಿದೆ. ಫ್ಲೋರೈಡ್ ನೀರಿನ ಬದಲಾಗಿ ಜನರಿಗೆ ಶುದ್ಧ ಕುಡಿವ ನೀರನ್ನ ಮತ್ತು ಸಂಚಾರ ಯೋಗ್ಯ ರಸ್ತೆಗಳನ್ನು ನಿರ್ಮಿಸಿ ಕೊಡುವಲ್ಲಿ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>