<p><strong>ಖಾನಾಪುರ: </strong>ತಾಲ್ಲೂಕಿನ ನಾಗರಗಾಳಿ ಗ್ರಾಮದಲ್ಲಿರುವ ಕೃಷಿ ಇಲಾಖೆಗೆ ಸೇರಿರುವ ವಸತಿ ಕಟ್ಟಡ ವಾಸ್ತವ್ಯ ನಿರ್ವಹಣೆ ಇಲ್ಲದೆ ಅನಾಥವಾಗಿದೆ. ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ ಕಟ್ಟಡದಲ್ಲಿ ಸಂಬಂಧಿಸಿದ ಅಧಿಕಾರಿಗಳು ವಾಸವಿರದ ಕಾರಣ ಕಟ್ಟಡ ಹಾಳು ಕೊಂಪೆಯಂತಾಗಿದೆ. <br /> <br /> ಕೃಷಿ ಇಲಾಖೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಾಮ ಸಹಾಯಕರ (ಈಗ ಸಹಾಯಕ ಕೃಷಿ ಅಧಿಕಾರಿ) ಕಚೇರಿ ಹಾಗೂ ನಿವಾಸಕ್ಕಾಗಿ ಈ ರೀತಿಯ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿದೆ. ಗ್ರಾಮ ಸಹಾಯಕರು ತಮ್ಮ ಅಧಿಕಾರ ವ್ಯಾಪ್ತಿಯ ಗ್ರಾಮದಲ್ಲೇ ವಾಸವಿದ್ದು, ರೈತರಿಗೆ ಕೃಷಿಯ ಬಗ್ಗೆ ಮಾರ್ಗದರ್ಶನ ಹಾಗೂ ಬೆಳೆಗಳ ಬಗ್ಗೆ ಮಾಹಿತಿ ನೀಡಬೇಕೆಂಬುದು ಇಲಾಖೆಯ ಉದ್ದೇಶ. <br /> <br /> ಸರ್ಕಾರದ ಸದುದ್ದೇಶ ಮಾತ್ರ ನಾಗರಗಾಳಿ ಕೃಷಿ ಇಲಾಖೆಯ ಕಟ್ಟಡದ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. `ಇಲಾಖೆಗೆ ಸಂಬಂಧಿಸಿದ ಯಾವ ಅಧಿಕಾರಿಯೂ ಇತ್ತ ಬರುವುದು ವಿರಳವಾದ ಕಾರಣ ಈ ಕಟ್ಟಡ ಅನಾಥವಾಗಿದೆ~ ಎಂದು ನಾಗರಗಾಳಿ ಗ್ರಾಮಸ್ಥರು ದೂರಿದ್ದಾರೆ.<br /> <br /> `ತಾಲ್ಲೂಕಿನಾದ್ಯಂತ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು, ನಾಗರಗಾಳಿ ವಿಭಾಗದ್ಲ್ಲಲೂ ಗ್ರಾಮ ಸಹಾಯಕ ಹುದ್ದೆ ಖಾಲಿ ಇದೆ. ಈಗ ಲೋಂಡಾದಲ್ಲಿರುವ ಗ್ರಾಮ ಸಹಾಯಕರೇ ನಾಗರಗಾಳಿಯನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕಟ್ಟಡದಲ್ಲಿ ಯಾರೂ ವಾಸವಾಗಿಲ್ಲ~ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ನಾರಾಯಣ ಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> `ನಾಗರಗಾಳಿಗೆ ಗ್ರಾಮ ಸಹಾಯಕರನ್ನು ನೇಮಕ ಮಾಡಿ ಆತ ಈ ಕಟ್ಟಡದಲ್ಲಿ ವಾಸವಾಗಿರುವಂತೆ ನೋಡಿಕೊಳ್ಳಲಿ ಅಥವಾ ನಿರ್ವಹಣೆಯಿಲ್ಲದ ಕಾರಣ ಹಾಳು ಕೊಂಪೆಯಾಗಿರುವ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸಲಿ~ ಎಂದು ನಾಗರಗಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ವಾಯ್ ದೇಸಾಯಿ ಆಗ್ರಹಿಸಿದ್ದಾರೆ. <br /> <br /> `ಕೃಷಿ ಇಲಾಖೆ ಈ ಕಟ್ಟಡವನ್ನು ಪಂಚಾಯಿತಿಗೆ ನೀಡಿದರೆ ಇದನ್ನು ಅಂಗನವಾಡಿ ಅಥವಾ ಗ್ರಂಥಾಲಯಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಿಂದ ಗ್ರಾಮಸ್ಥರಿಗೆ ಸಹಾಯವಾಗುತ್ತದೆ~ ಎಂದು ಪಿಡಿಒ ಬಾಲರಾಜ ಭಜಂತ್ರಿ ತಿಳಿಸಿದ್ದಾರೆ. ಕಾರಣ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಯೋಚಿಸಿ ಕೂಡಲೇ ಕೃಷಿ ಇಲಾಖೆಯ ಈ ಕಟ್ಟಡಕ್ಕೆ ಒಂದು ಕಾಯಕಲ್ಪ ನೀಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಖಾನಾಪುರ: </strong>ತಾಲ್ಲೂಕಿನ ನಾಗರಗಾಳಿ ಗ್ರಾಮದಲ್ಲಿರುವ ಕೃಷಿ ಇಲಾಖೆಗೆ ಸೇರಿರುವ ವಸತಿ ಕಟ್ಟಡ ವಾಸ್ತವ್ಯ ನಿರ್ವಹಣೆ ಇಲ್ಲದೆ ಅನಾಥವಾಗಿದೆ. ಸರ್ಕಾರ ಲಕ್ಷಾಂತರ ರೂಪಾಯಿಗಳನ್ನು ವ್ಯಯಿಸಿ ನಿರ್ಮಿಸಿದ ಕಟ್ಟಡದಲ್ಲಿ ಸಂಬಂಧಿಸಿದ ಅಧಿಕಾರಿಗಳು ವಾಸವಿರದ ಕಾರಣ ಕಟ್ಟಡ ಹಾಳು ಕೊಂಪೆಯಂತಾಗಿದೆ. <br /> <br /> ಕೃಷಿ ಇಲಾಖೆ ಪ್ರತಿ ಗ್ರಾಮ ಪಂಚಾಯಿತಿಗೆ ಒಂದರಂತೆ ಗ್ರಾಮ ಸಹಾಯಕರ (ಈಗ ಸಹಾಯಕ ಕೃಷಿ ಅಧಿಕಾರಿ) ಕಚೇರಿ ಹಾಗೂ ನಿವಾಸಕ್ಕಾಗಿ ಈ ರೀತಿಯ ಸುಸಜ್ಜಿತ ಕಟ್ಟಡಗಳನ್ನು ನಿರ್ಮಿಸಿದೆ. ಗ್ರಾಮ ಸಹಾಯಕರು ತಮ್ಮ ಅಧಿಕಾರ ವ್ಯಾಪ್ತಿಯ ಗ್ರಾಮದಲ್ಲೇ ವಾಸವಿದ್ದು, ರೈತರಿಗೆ ಕೃಷಿಯ ಬಗ್ಗೆ ಮಾರ್ಗದರ್ಶನ ಹಾಗೂ ಬೆಳೆಗಳ ಬಗ್ಗೆ ಮಾಹಿತಿ ನೀಡಬೇಕೆಂಬುದು ಇಲಾಖೆಯ ಉದ್ದೇಶ. <br /> <br /> ಸರ್ಕಾರದ ಸದುದ್ದೇಶ ಮಾತ್ರ ನಾಗರಗಾಳಿ ಕೃಷಿ ಇಲಾಖೆಯ ಕಟ್ಟಡದ ನಿರ್ವಹಣೆಯಲ್ಲಿ ಸಂಪೂರ್ಣ ವಿಫಲವಾಗಿದೆ. `ಇಲಾಖೆಗೆ ಸಂಬಂಧಿಸಿದ ಯಾವ ಅಧಿಕಾರಿಯೂ ಇತ್ತ ಬರುವುದು ವಿರಳವಾದ ಕಾರಣ ಈ ಕಟ್ಟಡ ಅನಾಥವಾಗಿದೆ~ ಎಂದು ನಾಗರಗಾಳಿ ಗ್ರಾಮಸ್ಥರು ದೂರಿದ್ದಾರೆ.<br /> <br /> `ತಾಲ್ಲೂಕಿನಾದ್ಯಂತ ಕೃಷಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆಯಿದ್ದು, ನಾಗರಗಾಳಿ ವಿಭಾಗದ್ಲ್ಲಲೂ ಗ್ರಾಮ ಸಹಾಯಕ ಹುದ್ದೆ ಖಾಲಿ ಇದೆ. ಈಗ ಲೋಂಡಾದಲ್ಲಿರುವ ಗ್ರಾಮ ಸಹಾಯಕರೇ ನಾಗರಗಾಳಿಯನ್ನು ಹೆಚ್ಚುವರಿಯಾಗಿ ನೋಡಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ಕಟ್ಟಡದಲ್ಲಿ ಯಾರೂ ವಾಸವಾಗಿಲ್ಲ~ ಎಂದು ಸಹಾಯಕ ಕೃಷಿ ನಿರ್ದೇಶಕ ಆರ್.ನಾರಾಯಣ ಸ್ವಾಮಿ `ಪ್ರಜಾವಾಣಿ~ಗೆ ತಿಳಿಸಿದ್ದಾರೆ.<br /> <br /> `ನಾಗರಗಾಳಿಗೆ ಗ್ರಾಮ ಸಹಾಯಕರನ್ನು ನೇಮಕ ಮಾಡಿ ಆತ ಈ ಕಟ್ಟಡದಲ್ಲಿ ವಾಸವಾಗಿರುವಂತೆ ನೋಡಿಕೊಳ್ಳಲಿ ಅಥವಾ ನಿರ್ವಹಣೆಯಿಲ್ಲದ ಕಾರಣ ಹಾಳು ಕೊಂಪೆಯಾಗಿರುವ ಕಟ್ಟಡವನ್ನು ಪಂಚಾಯಿತಿಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ಯೋಚಿಸಲಿ~ ಎಂದು ನಾಗರಗಾಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ವಾಯ್ ದೇಸಾಯಿ ಆಗ್ರಹಿಸಿದ್ದಾರೆ. <br /> <br /> `ಕೃಷಿ ಇಲಾಖೆ ಈ ಕಟ್ಟಡವನ್ನು ಪಂಚಾಯಿತಿಗೆ ನೀಡಿದರೆ ಇದನ್ನು ಅಂಗನವಾಡಿ ಅಥವಾ ಗ್ರಂಥಾಲಯಕ್ಕೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಅದರಿಂದ ಗ್ರಾಮಸ್ಥರಿಗೆ ಸಹಾಯವಾಗುತ್ತದೆ~ ಎಂದು ಪಿಡಿಒ ಬಾಲರಾಜ ಭಜಂತ್ರಿ ತಿಳಿಸಿದ್ದಾರೆ. ಕಾರಣ ಸಂಬಂಧಪಟ್ಟವರು ಈ ನಿಟ್ಟಿನಲ್ಲಿ ಯೋಚಿಸಿ ಕೂಡಲೇ ಕೃಷಿ ಇಲಾಖೆಯ ಈ ಕಟ್ಟಡಕ್ಕೆ ಒಂದು ಕಾಯಕಲ್ಪ ನೀಡಬೇಕಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>