<p>ಖ್ಯಾತ ಕಲಾವಿದರಾದ ದಿಲೀಪ್ ಕುಮಾರ್ ಕಾಳೆ, ಮಾಧುರಿ ಕಾಳೆ, ಜಿ.ಎಸ್.ಸುಜಿತ್ ಕುಮಾರ್ ಮಂಡ್ಯ ಹಾಗೂ ಎಸ್.ಸತ್ಯನಾರಾಯಣ ಅವರ ಇತ್ತೀಚಿನ ಕಲಾಕೃತಿಗಳು ಚಿತ್ರಕಲಾ ಪರಿಷತ್ನಲ್ಲಿ ಮಾರ್ಚ್ 7ರವರೆಗೆ ಪ್ರದರ್ಶನಗೊಳ್ಳಲಿವೆ. <br /> <br /> ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ಹಾಲಕ್ಕಿ ಗೌಡರು ತುಂಬಾ ಅಪರೂಪದ ಜನಾಂಗ. ಇವರ ಜೀನವ ರೀತಿ, ಸಂಸ್ಕೃತಿ, ಕಸುಬುದಾರಿಕೆ ಇವೆಲ್ಲವೂ ಭಿನ್ನ. ಹಾಲಕ್ಕಿ ಮಹಿಳೆಯರ ಜೀವನ ಕ್ರಮ ಕೂಡ ವಿಶಿಷ್ಟವಾದುದು. <br /> <br /> ಗುಡ್ಡಗಾಡಿನಲ್ಲಿ ವಾಸ ಮಾಡುವ ಹಾಲಕ್ಕಿ ಗೌಡ ಜನಾಂಗ ಪ್ರಕೃತಿಯ ಮಕ್ಕಳು. ಇವರಿಗಗೆ ಇನ್ನೂ ನಗರದ ಆಮಿಷಗಳು ತಟ್ಟಿಲ್ಲ. ಹಾಗಾಗಿ ಈ ಜನರಲ್ಲಿ ಇಂದಿಗೂ ಮಾನವ ಸಹಜ ಸಂಬಂಧಗಳು ಗಟ್ಟಿಯಾಗಿ ಉಳಿದುಕೊಂಡಿವೆ. <br /> <br /> ತಮ್ಮ ಆಹಾರವನ್ನು ತಾವೇ ಸಂಪಾದಿಸಿ ಕೊಂಡು ಉಂಡು ಜೀವನ ನಡೆಸುತ್ತಾರೆ. ಹಣ್ಣು, ಕೋಳಿ, ಮೀನು ಮಾರಿಕೊಂಡು ಜೀವನ ಸಾಗಿಸುವ ಈ ಜನರದ್ದು ಸಂತೃಪ್ತ ಬದುಕು. ಕಲಾವಿದ ದಿಲೀಪ್ ಅವರು ಹಾಲಕ್ಕಿ ಗೌಡ ಮಹಿಳೆಯರ ಜೀವನಕ್ಕೆ ತಮ್ಮ ಕುಂಚದ ಮೂಲಕ ರಂಗು ತುಂಬಿದ್ದಾರೆ. <br /> <br /> ಹಾಲಕ್ಕಿ ಜನರ ಜೀವನ ಕ್ರಮದಂತೆ ಅವರ ವೇಷಭೂಷಣ ಕೂಡ ಆಕರ್ಷಕವಾದದ್ದು. ಬುಡಕಟ್ಟು ಸಂಪ್ರದಾಯವನ್ನು ಬಿಂಬಿಸುವ ಇವರ ವೇಷಗಳೆಲ್ಲವಕ್ಕೂ ನಿಸರ್ಗವೇ ವಸ್ತುಗಳನ್ನು ಪೂರೈಸುತ್ತದೆ. <br /> <br /> ಕಿವಿಯೋಲೆ, ಕುಚ್ಚು, ಮೂಗುನತ್ತು, ಆಭರಣಗಳೆಲ್ಲವೂ ಇಂದಿನ ವಸ್ತ್ರವಿನ್ಯಾಸಕರಿಗೆ ನೆಚ್ಚಿನ ಡಿಸೈನ್. ಹೀಗೆ ದಿಲೀಪ್ ಅವರು ಹಾಲಕ್ಕಿ ಗೌಡ ಜನಾಂಗದ ಮಹಿಳೆಯರನ್ನು ವಸ್ತುವಾಗಿಟ್ಟುಕೊಂಡು ಸುಮಾರು 60 ಕಲಾಕೃತಿಗಳನ್ನು ರಚಿಸಿದ್ದಾರೆ. <br /> <br /> ಇವರ ಕಲಾಕೃತಿಗಳಲ್ಲಿ ಹಾಲಕ್ಕಿ ಜನಾಂಗದ ವೈಶಿಷ್ಟ್ಯಗಳು ಝರಿಯಾಗಿ ಹರಿದಿವೆ. <br /> ಕಲಾವಿದೆ ಮಾಧುರಿ ಕಾಳೆ ಅವರು ಹೆಣ್ಣಿನ ಮುಗ್ಧ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು 20 ಕಲಾಕೃತಿಗಳನ್ನು ರಚಿಸಿದ್ದಾರೆ. <br /> <br /> ಇವರ ಎಲ್ಲ ಕಲಾಕೃತಿಗಳು ಹೆಣ್ಣಿನ ಆಂತರಿಕ ಭಾವಗಳಿಗೆ ಸಂಬಂಧಿಸಿದವು. ಇವರ ಕಲಾಕೃತಿಯಲ್ಲಿ ಹೆಣ್ಣಿನ ಮನಸ್ಸಿನಲ್ಲಿ ಮೂಡುವ ನವಿರು ಭಾವಗಳು, ಆಕೆಯ ಮುಗ್ಧತೆ, ವಾಂಛೆಗಳು ಕಲಾರಸಿಕರಿಗೆ ನೋಡಿದಾಕ್ಷಣ ಇಷ್ಟವಾಗುತ್ತವೆ. <br /> <br /> ಇವರ `ಎ ಗರ್ಲ್ ಇನ್ ಲಿಲ್ಲಿ ಪಾಂಡ್~ ಕಲಾಕೃತಿ ನೋಡಿದಾಕ್ಷಣ ಸೆಳೆವ ಗುಣ ಹೊಂದಿದೆ. ಹರೆಯಕ್ಕೆ ಬಂದ ಯುವತಿಯೊಬ್ಬಳು ತುಂಬಾ ಮುಗ್ಧೆ. ಆಕೆಗೆ ಕಮಲದ ಹೂಗಳೆಂದರೆ ಪಂಚಪ್ರಾಣ. <br /> <br /> ಕೊಳದಲ್ಲಿ ನಗು ನಗುತ್ತಾ ನಿಂತಿರುವ ಸಾವಿರಾರು ಹೂಗಳನ್ನು ನೋಡಿ ಆಕೆಯ ಬಯಕೆಯ ಕಟ್ಟೆ ಒಡೆಯುತ್ತದೆ. ಆಗ ಆಕೆ ಕೊಳಕ್ಕಿಳಿದು ಒಂದೊಂದೇ ಹೂವನ್ನು ಕಿತ್ತು ಕೈಯಲ್ಲಿಡಿದುಕೊಂಡ ಮತ್ತೆ ಹೂವಿನತ್ತ ಆಸೆಗಣ್ಣು ಬೀರುವ ಆಕೆಯ ನೋಟ, ನಿಲುವು ತುಂಬಾ ಆಕರ್ಷಕವಾಗಿ ಮೂಡಿಬಂದಿದೆ. <br /> <br /> ಕಲಾವಿದ ಎಸ್.ಸತ್ಯನಾರಾಯಣ ಅವರ ನಾಡಿನ ಜನಪ್ರಿಯ ದೇವಾಲಯಗಳನ್ನು ತಮ್ಮ ಕುಂಚದಲ್ಲಿ ನವಿರಾಗಿ ಮೂಡಿಸಿದ್ದಾರೆ. ತಲಕಾಡಿನಲ್ಲಿರುವ ಎಲ್ಲ ದೇವಾಲಯದಲ್ಲೂ ಕಲೆ ಇದೆ. ಈ ಕಲೆಯನ್ನು ತಮ್ಮ ಕಲಾಕೃತಿಯಲ್ಲಿ ಪಡಿಯಚ್ಚುಗೊಳಿಸಿರುವ ಅಗ್ಗಳಿಕೆ ಇವರಿಗೆ ಸಲ್ಲುತ್ತದೆ. <br /> <br /> ಹಾಗೆಯೇ ಟಿ.ನರಸೀಪುರ ಬಳಿ ಇರುವ ಸಂಗಮ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಅಲಹಾಬಾದ್ನಲ್ಲಿ ನಡೆವ ಕುಂಭಮೇಳದಲ್ಲಿ ಕುಂಭಸ್ನಾನ ಮಾಡುವ ಸಲುವಾಗಿ ಲಕ್ಷಾಂತರ ಮಂದಿ ನಾಗಸಾಧು, ಸಂತರು, ಭಕ್ತರು ಬರುತ್ತಾರೆ.<br /> <br /> ಹಾಗೆಯೇ ಇಲ್ಲಿನ ಸಂಗಮಕ್ಕೂ ಕೂಡ ವಿಶೇಷ ಶಕ್ತಿಯಿದೆ. ಅಪಾರ ಜನರ ನಂಬಿಕೆ ಇದೆ. ಇಲ್ಲಿ ನಡೆವ ಉತ್ಸವದಲ್ಲಿ ಸಂಗಮ ಸ್ನಾನ ಮಾಡಲು ಸಾವಿರಾರು ಜನರು ಬರುತ್ತಾರೆ.<br /> <br /> ಇವರ `ಸಂಗಮ ಸ್ನಾನ~ ಕಲಾಕೃತಿ ಜನರ ದೈವೀಕ ನಂಬಿಕೆಗೆ ಕನ್ನಡಿ ಹಿಡಿಯುತ್ತದೆ. ಹೆಣ್ಣು ಮಕ್ಕಳು ಸಂಗಮದಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಸಹಜವಾಗಿ ಮೂಡಿ ಬಂದಿದೆ. ಕಲಾವಿದ ಸುಜಿತ್ ಕುಮಾರ್ ಅವರ ಕಲಾಕೃತಿಗಳು ಮನಸೆಳೆಯುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಖ್ಯಾತ ಕಲಾವಿದರಾದ ದಿಲೀಪ್ ಕುಮಾರ್ ಕಾಳೆ, ಮಾಧುರಿ ಕಾಳೆ, ಜಿ.ಎಸ್.ಸುಜಿತ್ ಕುಮಾರ್ ಮಂಡ್ಯ ಹಾಗೂ ಎಸ್.ಸತ್ಯನಾರಾಯಣ ಅವರ ಇತ್ತೀಚಿನ ಕಲಾಕೃತಿಗಳು ಚಿತ್ರಕಲಾ ಪರಿಷತ್ನಲ್ಲಿ ಮಾರ್ಚ್ 7ರವರೆಗೆ ಪ್ರದರ್ಶನಗೊಳ್ಳಲಿವೆ. <br /> <br /> ಉತ್ತರ ಕನ್ನಡ ಜಿಲ್ಲೆಯಲ್ಲಿ ಕಂಡು ಬರುವ ಹಾಲಕ್ಕಿ ಗೌಡರು ತುಂಬಾ ಅಪರೂಪದ ಜನಾಂಗ. ಇವರ ಜೀನವ ರೀತಿ, ಸಂಸ್ಕೃತಿ, ಕಸುಬುದಾರಿಕೆ ಇವೆಲ್ಲವೂ ಭಿನ್ನ. ಹಾಲಕ್ಕಿ ಮಹಿಳೆಯರ ಜೀವನ ಕ್ರಮ ಕೂಡ ವಿಶಿಷ್ಟವಾದುದು. <br /> <br /> ಗುಡ್ಡಗಾಡಿನಲ್ಲಿ ವಾಸ ಮಾಡುವ ಹಾಲಕ್ಕಿ ಗೌಡ ಜನಾಂಗ ಪ್ರಕೃತಿಯ ಮಕ್ಕಳು. ಇವರಿಗಗೆ ಇನ್ನೂ ನಗರದ ಆಮಿಷಗಳು ತಟ್ಟಿಲ್ಲ. ಹಾಗಾಗಿ ಈ ಜನರಲ್ಲಿ ಇಂದಿಗೂ ಮಾನವ ಸಹಜ ಸಂಬಂಧಗಳು ಗಟ್ಟಿಯಾಗಿ ಉಳಿದುಕೊಂಡಿವೆ. <br /> <br /> ತಮ್ಮ ಆಹಾರವನ್ನು ತಾವೇ ಸಂಪಾದಿಸಿ ಕೊಂಡು ಉಂಡು ಜೀವನ ನಡೆಸುತ್ತಾರೆ. ಹಣ್ಣು, ಕೋಳಿ, ಮೀನು ಮಾರಿಕೊಂಡು ಜೀವನ ಸಾಗಿಸುವ ಈ ಜನರದ್ದು ಸಂತೃಪ್ತ ಬದುಕು. ಕಲಾವಿದ ದಿಲೀಪ್ ಅವರು ಹಾಲಕ್ಕಿ ಗೌಡ ಮಹಿಳೆಯರ ಜೀವನಕ್ಕೆ ತಮ್ಮ ಕುಂಚದ ಮೂಲಕ ರಂಗು ತುಂಬಿದ್ದಾರೆ. <br /> <br /> ಹಾಲಕ್ಕಿ ಜನರ ಜೀವನ ಕ್ರಮದಂತೆ ಅವರ ವೇಷಭೂಷಣ ಕೂಡ ಆಕರ್ಷಕವಾದದ್ದು. ಬುಡಕಟ್ಟು ಸಂಪ್ರದಾಯವನ್ನು ಬಿಂಬಿಸುವ ಇವರ ವೇಷಗಳೆಲ್ಲವಕ್ಕೂ ನಿಸರ್ಗವೇ ವಸ್ತುಗಳನ್ನು ಪೂರೈಸುತ್ತದೆ. <br /> <br /> ಕಿವಿಯೋಲೆ, ಕುಚ್ಚು, ಮೂಗುನತ್ತು, ಆಭರಣಗಳೆಲ್ಲವೂ ಇಂದಿನ ವಸ್ತ್ರವಿನ್ಯಾಸಕರಿಗೆ ನೆಚ್ಚಿನ ಡಿಸೈನ್. ಹೀಗೆ ದಿಲೀಪ್ ಅವರು ಹಾಲಕ್ಕಿ ಗೌಡ ಜನಾಂಗದ ಮಹಿಳೆಯರನ್ನು ವಸ್ತುವಾಗಿಟ್ಟುಕೊಂಡು ಸುಮಾರು 60 ಕಲಾಕೃತಿಗಳನ್ನು ರಚಿಸಿದ್ದಾರೆ. <br /> <br /> ಇವರ ಕಲಾಕೃತಿಗಳಲ್ಲಿ ಹಾಲಕ್ಕಿ ಜನಾಂಗದ ವೈಶಿಷ್ಟ್ಯಗಳು ಝರಿಯಾಗಿ ಹರಿದಿವೆ. <br /> ಕಲಾವಿದೆ ಮಾಧುರಿ ಕಾಳೆ ಅವರು ಹೆಣ್ಣಿನ ಮುಗ್ಧ ಭಾವನೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು 20 ಕಲಾಕೃತಿಗಳನ್ನು ರಚಿಸಿದ್ದಾರೆ. <br /> <br /> ಇವರ ಎಲ್ಲ ಕಲಾಕೃತಿಗಳು ಹೆಣ್ಣಿನ ಆಂತರಿಕ ಭಾವಗಳಿಗೆ ಸಂಬಂಧಿಸಿದವು. ಇವರ ಕಲಾಕೃತಿಯಲ್ಲಿ ಹೆಣ್ಣಿನ ಮನಸ್ಸಿನಲ್ಲಿ ಮೂಡುವ ನವಿರು ಭಾವಗಳು, ಆಕೆಯ ಮುಗ್ಧತೆ, ವಾಂಛೆಗಳು ಕಲಾರಸಿಕರಿಗೆ ನೋಡಿದಾಕ್ಷಣ ಇಷ್ಟವಾಗುತ್ತವೆ. <br /> <br /> ಇವರ `ಎ ಗರ್ಲ್ ಇನ್ ಲಿಲ್ಲಿ ಪಾಂಡ್~ ಕಲಾಕೃತಿ ನೋಡಿದಾಕ್ಷಣ ಸೆಳೆವ ಗುಣ ಹೊಂದಿದೆ. ಹರೆಯಕ್ಕೆ ಬಂದ ಯುವತಿಯೊಬ್ಬಳು ತುಂಬಾ ಮುಗ್ಧೆ. ಆಕೆಗೆ ಕಮಲದ ಹೂಗಳೆಂದರೆ ಪಂಚಪ್ರಾಣ. <br /> <br /> ಕೊಳದಲ್ಲಿ ನಗು ನಗುತ್ತಾ ನಿಂತಿರುವ ಸಾವಿರಾರು ಹೂಗಳನ್ನು ನೋಡಿ ಆಕೆಯ ಬಯಕೆಯ ಕಟ್ಟೆ ಒಡೆಯುತ್ತದೆ. ಆಗ ಆಕೆ ಕೊಳಕ್ಕಿಳಿದು ಒಂದೊಂದೇ ಹೂವನ್ನು ಕಿತ್ತು ಕೈಯಲ್ಲಿಡಿದುಕೊಂಡ ಮತ್ತೆ ಹೂವಿನತ್ತ ಆಸೆಗಣ್ಣು ಬೀರುವ ಆಕೆಯ ನೋಟ, ನಿಲುವು ತುಂಬಾ ಆಕರ್ಷಕವಾಗಿ ಮೂಡಿಬಂದಿದೆ. <br /> <br /> ಕಲಾವಿದ ಎಸ್.ಸತ್ಯನಾರಾಯಣ ಅವರ ನಾಡಿನ ಜನಪ್ರಿಯ ದೇವಾಲಯಗಳನ್ನು ತಮ್ಮ ಕುಂಚದಲ್ಲಿ ನವಿರಾಗಿ ಮೂಡಿಸಿದ್ದಾರೆ. ತಲಕಾಡಿನಲ್ಲಿರುವ ಎಲ್ಲ ದೇವಾಲಯದಲ್ಲೂ ಕಲೆ ಇದೆ. ಈ ಕಲೆಯನ್ನು ತಮ್ಮ ಕಲಾಕೃತಿಯಲ್ಲಿ ಪಡಿಯಚ್ಚುಗೊಳಿಸಿರುವ ಅಗ್ಗಳಿಕೆ ಇವರಿಗೆ ಸಲ್ಲುತ್ತದೆ. <br /> <br /> ಹಾಗೆಯೇ ಟಿ.ನರಸೀಪುರ ಬಳಿ ಇರುವ ಸಂಗಮ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಅಲಹಾಬಾದ್ನಲ್ಲಿ ನಡೆವ ಕುಂಭಮೇಳದಲ್ಲಿ ಕುಂಭಸ್ನಾನ ಮಾಡುವ ಸಲುವಾಗಿ ಲಕ್ಷಾಂತರ ಮಂದಿ ನಾಗಸಾಧು, ಸಂತರು, ಭಕ್ತರು ಬರುತ್ತಾರೆ.<br /> <br /> ಹಾಗೆಯೇ ಇಲ್ಲಿನ ಸಂಗಮಕ್ಕೂ ಕೂಡ ವಿಶೇಷ ಶಕ್ತಿಯಿದೆ. ಅಪಾರ ಜನರ ನಂಬಿಕೆ ಇದೆ. ಇಲ್ಲಿ ನಡೆವ ಉತ್ಸವದಲ್ಲಿ ಸಂಗಮ ಸ್ನಾನ ಮಾಡಲು ಸಾವಿರಾರು ಜನರು ಬರುತ್ತಾರೆ.<br /> <br /> ಇವರ `ಸಂಗಮ ಸ್ನಾನ~ ಕಲಾಕೃತಿ ಜನರ ದೈವೀಕ ನಂಬಿಕೆಗೆ ಕನ್ನಡಿ ಹಿಡಿಯುತ್ತದೆ. ಹೆಣ್ಣು ಮಕ್ಕಳು ಸಂಗಮದಲ್ಲಿ ಸ್ನಾನ ಮಾಡುತ್ತಿರುವ ದೃಶ್ಯ ಸಹಜವಾಗಿ ಮೂಡಿ ಬಂದಿದೆ. ಕಲಾವಿದ ಸುಜಿತ್ ಕುಮಾರ್ ಅವರ ಕಲಾಕೃತಿಗಳು ಮನಸೆಳೆಯುತ್ತವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>