<p>ಮಂಡ್ಯ: ‘ಕಳೆದ ಮೂರು ವರ್ಷಗಳಿಂದ ಸಭೆಗೆ ಬರುತ್ತೇವೆ. ನಾವೂ ಸಮಸ್ಯೆಗಳ ಬಗೆಗೆ ಹೇಳುತ್ತೇವೆ. ನೀವೂ ಕೇಳುತ್ತೀರಿ. ಆದರೆ, ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ’<br /> ಹೀಗೆಂದು ಬಹುತೇಕ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.<br /> ಸದಸ್ಯರಾದ ವಸಂತಾ, ಶಿವಲಿಂಗಯ್ಯ ಮತ್ತಿತರರು ಮಾತನಾಡಿ, ಬರೀ ಸಭೆಯಲ್ಲಿ ಹೇಳುವುದಾಗಿದೆ. ಒಂದು ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.<br /> <br /> ಬಹಳಷ್ಟು ಅಧಿಕಾರಿಗಳನ್ನು ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಭೆಗೆ ಗೈರು ಹಾಜರಾಗಿದ್ದಾರೆ. ಅಂತಹ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಪರಮೇಶ್ ಆಗ್ರಹಿಸಿದರು.<br /> <br /> ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಸದಸ್ಯ ಮಂಜೇಗೌಡ ಮಾತನಾಡಿ, ಈ ಹಿಂದೆ ಯಾವುದಾದರೂ ಅಧಿಕಾರಿ ವಿರುದ್ಧ ಕ್ರಮಕೈಗೊಂಡ ಉದಾಹರಣೆ ಇದೆಯಾ? ಮೊದಲೇ ಸಭೆಯ ಬಗ್ಗೆ ತಿಳಿಸಿದ್ದರೂ ಯಾಕೆ ಗೈರು ಹಾಜರಾಗುತ್ತಾರೆ. ಇದು ಸಿಇಒ ಅವರ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇದಕ್ಕೆ ಶಿವಲಿಂಗಯ್ಯ, ಮರೀಗೌಡ ಧ್ವನಿಗೂಡಿಸಿದರು.<br /> <br /> ಸದಸ್ಯ ಶಂಕರಗೌಡ, ಮಾದಪ್ಪ ಮಾತನಾಡಿ, ಎರಡು ತಿಂಗಳಿಗೊಮ್ಮೆ ಸಭೆ ಕರೆಯಬೇಕು ಎಂದಿದೆ. ಯಾಕೆ ಕರೆಯುವುದಿಲ್ಲ ಎಂದು ಅಧ್ಯಕ್ಷರನ್ನೇ ತರಾಟೆ ತೆಗೆದುಕೊಂಡರು.<br /> <br /> ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಸಭೆ ನಡೆಸಲಾಗುವುದು ಎಂದರು.<br /> <br /> ಪ್ರತಿಪಕ್ಷ ನಾಯಕ ಬಸವರಾಜು ಮಾತನಾಡಿ, ಸರ್ಕಾರಕ್ಕೂ ಸಭೆಯ ನಡಾವಳಿಯನ್ನು ಕಳುಹಿಸಿಕೊಟ್ಟಿಲ್ಲ. ಸರ್ಕಾರವೂ ನಿಮಗೆ ಲೆಕ್ಕಕ್ಕೆ ಇಲ್ಲದಂತಾಗಿದೆ. ನಿರ್ಮಲ ಅಭಿಯಾನಕ್ಕೆ ಬಂದಿದ್ದ ಎಂಟು ಕೋಟಿ ರೂಪಾಯಿ ವಾಪಸ್ ಹೋಗಿದೆ ಎಂದರು.<br /> ಸಿಇಒ ಜಯಣ್ಣ ಮಾತನಾಡಿ, ಹೆಚ್ಚುವರಿಯಾಗಿ ಹಣ ಬಿಡುಗಡೆಯಾಗಿತ್ತು ಎಂದರು.<br /> <br /> ಆಗ ಕೂಡಲೇ ಮಧ್ಯ ಪ್ರವೇಶಿಸಿದ ಸುರೇಶ್್ ಕಂಠಿ, ನಿರ್ಮಲ ಭಾರತ ಅಭಿಯಾನದ ಪ್ರಗತಿಯ ಬಗೆಗೆ ಸಭೆಗೆ ಮಾಹಿತಿ ನೀಡಿ. ನೈರ್ಮಲ್ಯ ಮಳಿಗೆಯನ್ನು ಯಾರು ನಿರ್ಮಿಸಿಕೊಂಡಿದ್ದಾರೆ ತಿಳಿಸಬೇಕು ಎಂದು ಆಗ್ರಹಿಸಿದರು.<br /> <br /> ಜಯಣ್ಣ ಮಾತನಾಡಿ, ಮುಂದಿನ ಸಭೆಯೊಳಗೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ಒದಗಿಸಲಾಗುವುದು ಎಂದರು.<br /> ಪ್ರತಿಪಕ್ಷ ನಾಯಕ ಬಸವರಾಜು, ಮಾದಪ್ಪ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.<br /> <br /> ಬೂಕನಕೆರೆಯಲ್ಲಿ ಪ್ರೌಢಶಾಲಾ ಕಟ್ಟಡವನ್ನು 2011ರಲ್ಲಿ ಆರಂಭಿ ಸಿದ್ದರೂ, ಇಂದಿಗೂ ಪೂರ್ಣಗೊಂಡಿಲ್ಲ. ಕಾಮಗಾರಿಯೂ ಕಳಪೆಯಾಗಿದೆ ಎಂದು ಮಹಿಳಾ ಸದಸ್ಯೆ ದೂರಿದರು.<br /> <br /> ಶಂಕರಗೌಡ ಮಾತನಾಡಿ, ಮರಳು ದೊರೆಯದ್ದರಿಂದ ಕಟ್ಟಡ ಕಾಮಗಾರಿಗೆ ಕಲ್ಲಿನ ವೇಸ್ಟ್ ಪುಡಿ (ರೊಬೊ ಸ್ಯಾಂಡ್) ಬಳಸಿಕೊಳ್ಳಲಾಗುತ್ತಿದೆ ಎಂದರು.<br /> <br /> ಅಂತಹ ಕಾಮಗಾರಿಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಸೂಚಿಸಿದರು.<br /> ಮಾಜಿ ಅಧ್ಯಕ್ಷ ಕುಮಾರ್ ಮಾತನಾಡಿ, ಅರಹಳ್ಳಿ ಹಾಗೂ ಸಿಂಧಘಟ್ಟದಲ್ಲಿ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿಲ್ಲ. ವಿದ್ಯುತ್ ಸಂಪರ್ಕ ನೀಡುವ ಕೆಲಸ ಆಗಿಲ್ಲ ಎಂದು ದೂರಿದರು.<br /> <br /> ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್್ ವಿಭಾಗದ ಚನ್ನಯ್ಯ ಮಾತನಾಡಿ, ಸಿವಿಲ್್ ಗುತ್ತಿಗೆದಾರರಿಗೇ ವಿದ್ಯುತ್ ಕಾಮಗಾರಿಯನ್ನೂ ಮಾಡಲು ನೀಡಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮಂಡ್ಯ: ‘ಕಳೆದ ಮೂರು ವರ್ಷಗಳಿಂದ ಸಭೆಗೆ ಬರುತ್ತೇವೆ. ನಾವೂ ಸಮಸ್ಯೆಗಳ ಬಗೆಗೆ ಹೇಳುತ್ತೇವೆ. ನೀವೂ ಕೇಳುತ್ತೀರಿ. ಆದರೆ, ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ’<br /> ಹೀಗೆಂದು ಬಹುತೇಕ ಸದಸ್ಯರು ಮಂಗಳವಾರ ಜಿಲ್ಲಾ ಪಂಚಾಯಿತಿ ಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.<br /> ಸದಸ್ಯರಾದ ವಸಂತಾ, ಶಿವಲಿಂಗಯ್ಯ ಮತ್ತಿತರರು ಮಾತನಾಡಿ, ಬರೀ ಸಭೆಯಲ್ಲಿ ಹೇಳುವುದಾಗಿದೆ. ಒಂದು ಕೆಲಸವನ್ನೂ ಮಾಡಿಲ್ಲ ಎಂದು ದೂರಿದರು.<br /> <br /> ಬಹಳಷ್ಟು ಅಧಿಕಾರಿಗಳನ್ನು ಸಭೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಸಭೆಗೆ ಗೈರು ಹಾಜರಾಗಿದ್ದಾರೆ. ಅಂತಹ ಸದಸ್ಯರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷೆ ಮಂಜುಳಾ ಪರಮೇಶ್ ಆಗ್ರಹಿಸಿದರು.<br /> <br /> ಮಾಜಿ ಅಧ್ಯಕ್ಷ ಸುರೇಶ್ ಕಂಠಿ, ಸದಸ್ಯ ಮಂಜೇಗೌಡ ಮಾತನಾಡಿ, ಈ ಹಿಂದೆ ಯಾವುದಾದರೂ ಅಧಿಕಾರಿ ವಿರುದ್ಧ ಕ್ರಮಕೈಗೊಂಡ ಉದಾಹರಣೆ ಇದೆಯಾ? ಮೊದಲೇ ಸಭೆಯ ಬಗ್ಗೆ ತಿಳಿಸಿದ್ದರೂ ಯಾಕೆ ಗೈರು ಹಾಜರಾಗುತ್ತಾರೆ. ಇದು ಸಿಇಒ ಅವರ ಆಡಳಿತ ವೈಖರಿಯನ್ನು ತೋರಿಸುತ್ತದೆ ಎಂದು ಟೀಕಿಸಿದರು. ಇದಕ್ಕೆ ಶಿವಲಿಂಗಯ್ಯ, ಮರೀಗೌಡ ಧ್ವನಿಗೂಡಿಸಿದರು.<br /> <br /> ಸದಸ್ಯ ಶಂಕರಗೌಡ, ಮಾದಪ್ಪ ಮಾತನಾಡಿ, ಎರಡು ತಿಂಗಳಿಗೊಮ್ಮೆ ಸಭೆ ಕರೆಯಬೇಕು ಎಂದಿದೆ. ಯಾಕೆ ಕರೆಯುವುದಿಲ್ಲ ಎಂದು ಅಧ್ಯಕ್ಷರನ್ನೇ ತರಾಟೆ ತೆಗೆದುಕೊಂಡರು.<br /> <br /> ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ಕೃಷ್ಣಮೂರ್ತಿ ಮಾತನಾಡಿ, ಮುಂದಿನ ದಿನಗಳಲ್ಲಿ ನಿಗದಿತ ಸಮಯಕ್ಕೆ ಸಭೆ ನಡೆಸಲಾಗುವುದು ಎಂದರು.<br /> <br /> ಪ್ರತಿಪಕ್ಷ ನಾಯಕ ಬಸವರಾಜು ಮಾತನಾಡಿ, ಸರ್ಕಾರಕ್ಕೂ ಸಭೆಯ ನಡಾವಳಿಯನ್ನು ಕಳುಹಿಸಿಕೊಟ್ಟಿಲ್ಲ. ಸರ್ಕಾರವೂ ನಿಮಗೆ ಲೆಕ್ಕಕ್ಕೆ ಇಲ್ಲದಂತಾಗಿದೆ. ನಿರ್ಮಲ ಅಭಿಯಾನಕ್ಕೆ ಬಂದಿದ್ದ ಎಂಟು ಕೋಟಿ ರೂಪಾಯಿ ವಾಪಸ್ ಹೋಗಿದೆ ಎಂದರು.<br /> ಸಿಇಒ ಜಯಣ್ಣ ಮಾತನಾಡಿ, ಹೆಚ್ಚುವರಿಯಾಗಿ ಹಣ ಬಿಡುಗಡೆಯಾಗಿತ್ತು ಎಂದರು.<br /> <br /> ಆಗ ಕೂಡಲೇ ಮಧ್ಯ ಪ್ರವೇಶಿಸಿದ ಸುರೇಶ್್ ಕಂಠಿ, ನಿರ್ಮಲ ಭಾರತ ಅಭಿಯಾನದ ಪ್ರಗತಿಯ ಬಗೆಗೆ ಸಭೆಗೆ ಮಾಹಿತಿ ನೀಡಿ. ನೈರ್ಮಲ್ಯ ಮಳಿಗೆಯನ್ನು ಯಾರು ನಿರ್ಮಿಸಿಕೊಂಡಿದ್ದಾರೆ ತಿಳಿಸಬೇಕು ಎಂದು ಆಗ್ರಹಿಸಿದರು.<br /> <br /> ಜಯಣ್ಣ ಮಾತನಾಡಿ, ಮುಂದಿನ ಸಭೆಯೊಳಗೆ ಸದಸ್ಯರಿಗೆ ಸಂಪೂರ್ಣ ಮಾಹಿತಿ ಒದಗಿಸಲಾಗುವುದು ಎಂದರು.<br /> ಪ್ರತಿಪಕ್ಷ ನಾಯಕ ಬಸವರಾಜು, ಮಾದಪ್ಪ ಮಾತನಾಡಿ, ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳುತ್ತಿಲ್ಲ. ಈ ಬಗ್ಗೆ ಗಮನ ಹರಿಸಬೇಕು ಎಂದು ಒತ್ತಾಯಿಸಿದರು.<br /> <br /> ಬೂಕನಕೆರೆಯಲ್ಲಿ ಪ್ರೌಢಶಾಲಾ ಕಟ್ಟಡವನ್ನು 2011ರಲ್ಲಿ ಆರಂಭಿ ಸಿದ್ದರೂ, ಇಂದಿಗೂ ಪೂರ್ಣಗೊಂಡಿಲ್ಲ. ಕಾಮಗಾರಿಯೂ ಕಳಪೆಯಾಗಿದೆ ಎಂದು ಮಹಿಳಾ ಸದಸ್ಯೆ ದೂರಿದರು.<br /> <br /> ಶಂಕರಗೌಡ ಮಾತನಾಡಿ, ಮರಳು ದೊರೆಯದ್ದರಿಂದ ಕಟ್ಟಡ ಕಾಮಗಾರಿಗೆ ಕಲ್ಲಿನ ವೇಸ್ಟ್ ಪುಡಿ (ರೊಬೊ ಸ್ಯಾಂಡ್) ಬಳಸಿಕೊಳ್ಳಲಾಗುತ್ತಿದೆ ಎಂದರು.<br /> <br /> ಅಂತಹ ಕಾಮಗಾರಿಗಳನ್ನು ತಡೆಯಲು ಕ್ರಮಕೈಗೊಳ್ಳಬೇಕು ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ಸತೀಶ್ ಸೂಚಿಸಿದರು.<br /> ಮಾಜಿ ಅಧ್ಯಕ್ಷ ಕುಮಾರ್ ಮಾತನಾಡಿ, ಅರಹಳ್ಳಿ ಹಾಗೂ ಸಿಂಧಘಟ್ಟದಲ್ಲಿ ಕುಡಿಯುವ ನೀರಿನ ಯೋಜನೆಗಳು ಪೂರ್ಣಗೊಂಡಿಲ್ಲ. ವಿದ್ಯುತ್ ಸಂಪರ್ಕ ನೀಡುವ ಕೆಲಸ ಆಗಿಲ್ಲ ಎಂದು ದೂರಿದರು.<br /> <br /> ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್್ ವಿಭಾಗದ ಚನ್ನಯ್ಯ ಮಾತನಾಡಿ, ಸಿವಿಲ್್ ಗುತ್ತಿಗೆದಾರರಿಗೇ ವಿದ್ಯುತ್ ಕಾಮಗಾರಿಯನ್ನೂ ಮಾಡಲು ನೀಡಲಾಗಿದೆ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>