<p>ಹೋಮಿಯೋಪಥಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಶಾಖೆಯು, ಆಯುಷ್ ಇಲಾಖೆ, ರಾಜ್ಯ ಸರ್ಕಾರ ಹಾಗೂ ಹೋಮಿಯೋಪಥಿ ಮಂಡಳಿ ವತಿಯಿಂದ ಮಂಗಳವಾರ (ಏ.10) ಹೋಮಿಯೋಪಥಿ ಡೇ ರ್ಯಾಲಿ ಹಮ್ಮಿಕೊಂಡಿವೆ.<br /> <br /> ಹೋಮಿಯೋಪಥಿ ಪದ್ಧತಿಯನ್ನು ಕಾರ್ಯರೂಪಕ್ಕೆ ರೂಪಿಸಿದ ಪಿತಾಮಹ ಡಾ.ಸಾಮ್ಯುಯಲ್ ಹಾನಿಮನ್ರ 257ನೇ ಜನ್ಮದಿನದ ಪ್ರಯುಕ್ತ ಈ ರ್ಯಾಲಿ ಆಯೋಜಿಸಲಾಗಿದೆ. <br /> <br /> ಹೋಮಿಯೋಪಥಿ ಬಗ್ಗೆ ಜನರಲ್ಲಿ ತಿಳವಳಿಕೆ, ಅದರ ಉಪಯೋಗ ಪಡೆಯುವ ವಿಧಾನ ಹಾಗೂ ಜನಪ್ರಿಯತೆಗೊಳಿಸುವ ಉದ್ದೇಶವನ್ನು ಈ ರ್ಯಾಲಿ ಹೊಂದಿದೆ. ರ್ಯಾಲಿ ಬೆಳಿಗ್ಗೆ 8.30ಕ್ಕೆ ಜೆ.ಸಿ.ರಸ್ತೆಯಲ್ಲಿರುವ ಪುರಭವನದಿಂದ ಆರಂಭವಾಗಿ ಕಬ್ಬನ್ಪಾರ್ಕ್ ಬಳಿ ಅಂತ್ಯವಾಗಲಿದೆ.<br /> <br /> ಹದಿನೆಂಟನೇ ಶತಮಾನದಲ್ಲಿ ಜರ್ಮನಿಯ ವೈದ್ಯ ಡಾ.ಸಾಮ್ಯುಯಲ್ ಹಾನಿಮನ್ ಎಂಬಾತ ಮೊದಲ ಬಾರಿ ಹೋಮಿಯೋಪತಿ ವೈದ್ಯ ಪದ್ಧತಿಯನ್ನು ಪರಿಚಯಿಸಿದರು. ಇವರು 10 ಏಪ್ರಿಲ್ 1755ರಲ್ಲಿ ಜನಿಸಿದರು. ಅವರ ನೆನಪಿಗಾಗಿ ಜನಸಾಮಾನ್ಯರಲ್ಲಿ ಈ ಪದ್ಧತಿಯ ಮಹತ್ವ ತಿಳಿಸಲು ಈ ರ್ಯಾಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ವೀರಬ್ರಹ್ಮಚಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> <strong>ಹೋಮಿಯೋಪಥಿ ಡೇ ರ್ಯಾಲಿ: </strong>ಡಾ.ಚಂದ್ರಶೇಖರ ಕಂಬಾರ ಅವರು ರ್ಯಾಲಿಗೆ ಚಾಲನೆ ನೀಡಲಿದ್ದಾರೆ.<strong> <br /> <br /> ಅತಿಥಿಗಳು:</strong> ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಆಯುಷ್ ನಿರ್ದೇಶಕ ಜೆ.ಎನ್.ಶ್ರೀಕಂಠಯ್ಯ, ಆಯುಷ್ ಇಲಾಖೆ ಉಪನಿರ್ದೇಶಕಿ ಡಾ. ಶಾಂತಕುಮಾರಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೆನೆಟ್ ಸದಸ್ಯ ಡಾ.ಎಂ.ಆರ್. ಶ್ರೀವತ್ಸನ್ ಪಾಲ್ಗೊಳ್ಳಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹೋಮಿಯೋಪಥಿಕ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಶಾಖೆಯು, ಆಯುಷ್ ಇಲಾಖೆ, ರಾಜ್ಯ ಸರ್ಕಾರ ಹಾಗೂ ಹೋಮಿಯೋಪಥಿ ಮಂಡಳಿ ವತಿಯಿಂದ ಮಂಗಳವಾರ (ಏ.10) ಹೋಮಿಯೋಪಥಿ ಡೇ ರ್ಯಾಲಿ ಹಮ್ಮಿಕೊಂಡಿವೆ.<br /> <br /> ಹೋಮಿಯೋಪಥಿ ಪದ್ಧತಿಯನ್ನು ಕಾರ್ಯರೂಪಕ್ಕೆ ರೂಪಿಸಿದ ಪಿತಾಮಹ ಡಾ.ಸಾಮ್ಯುಯಲ್ ಹಾನಿಮನ್ರ 257ನೇ ಜನ್ಮದಿನದ ಪ್ರಯುಕ್ತ ಈ ರ್ಯಾಲಿ ಆಯೋಜಿಸಲಾಗಿದೆ. <br /> <br /> ಹೋಮಿಯೋಪಥಿ ಬಗ್ಗೆ ಜನರಲ್ಲಿ ತಿಳವಳಿಕೆ, ಅದರ ಉಪಯೋಗ ಪಡೆಯುವ ವಿಧಾನ ಹಾಗೂ ಜನಪ್ರಿಯತೆಗೊಳಿಸುವ ಉದ್ದೇಶವನ್ನು ಈ ರ್ಯಾಲಿ ಹೊಂದಿದೆ. ರ್ಯಾಲಿ ಬೆಳಿಗ್ಗೆ 8.30ಕ್ಕೆ ಜೆ.ಸಿ.ರಸ್ತೆಯಲ್ಲಿರುವ ಪುರಭವನದಿಂದ ಆರಂಭವಾಗಿ ಕಬ್ಬನ್ಪಾರ್ಕ್ ಬಳಿ ಅಂತ್ಯವಾಗಲಿದೆ.<br /> <br /> ಹದಿನೆಂಟನೇ ಶತಮಾನದಲ್ಲಿ ಜರ್ಮನಿಯ ವೈದ್ಯ ಡಾ.ಸಾಮ್ಯುಯಲ್ ಹಾನಿಮನ್ ಎಂಬಾತ ಮೊದಲ ಬಾರಿ ಹೋಮಿಯೋಪತಿ ವೈದ್ಯ ಪದ್ಧತಿಯನ್ನು ಪರಿಚಯಿಸಿದರು. ಇವರು 10 ಏಪ್ರಿಲ್ 1755ರಲ್ಲಿ ಜನಿಸಿದರು. ಅವರ ನೆನಪಿಗಾಗಿ ಜನಸಾಮಾನ್ಯರಲ್ಲಿ ಈ ಪದ್ಧತಿಯ ಮಹತ್ವ ತಿಳಿಸಲು ಈ ರ್ಯಾಲಿ ಹಮ್ಮಿಕೊಂಡಿರುವುದಾಗಿ ಕರ್ನಾಟಕ ಹೋಮಿಯೋಪಥಿ ಮಂಡಳಿ ಅಧ್ಯಕ್ಷ ಡಾ.ವೀರಬ್ರಹ್ಮಚಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.<br /> <br /> <strong>ಹೋಮಿಯೋಪಥಿ ಡೇ ರ್ಯಾಲಿ: </strong>ಡಾ.ಚಂದ್ರಶೇಖರ ಕಂಬಾರ ಅವರು ರ್ಯಾಲಿಗೆ ಚಾಲನೆ ನೀಡಲಿದ್ದಾರೆ.<strong> <br /> <br /> ಅತಿಥಿಗಳು:</strong> ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್, ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಆಯುಷ್ ನಿರ್ದೇಶಕ ಜೆ.ಎನ್.ಶ್ರೀಕಂಠಯ್ಯ, ಆಯುಷ್ ಇಲಾಖೆ ಉಪನಿರ್ದೇಶಕಿ ಡಾ. ಶಾಂತಕುಮಾರಿ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಸೆನೆಟ್ ಸದಸ್ಯ ಡಾ.ಎಂ.ಆರ್. ಶ್ರೀವತ್ಸನ್ ಪಾಲ್ಗೊಳ್ಳಲಿದ್ದಾರೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>