<p><strong>ವಡೋದರ(ಪಿಟಿಐ)</strong>: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ‘ಏಕತೆಯ ಮೂರ್ತಿ’ ಯೋಜನೆಯ ಬೆಂಬಲಕ್ಕಾಗಿ ಆಯೋಜಿಸಿದ್ದ ‘ಏಕತಾ ಓಟ’ ಅಭಿಯಾನಕ್ಕೆ ಭಾನುವಾರ ಬೆಳಿಗ್ಗೆ ಇಲ್ಲಿ ಚಾಲನೆ ನೀಡಿದರು.<br /> <br /> ಸರ್ದಾರ್ ವಲಭಭಾಯ್ ಪಟೇಲ್ ಅವರ 63ನೇ ಪುಣ್ಯತಿಥಿಯ ಸಂದರ್ಭದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿತ್ತು. ಈ ‘ಏಕತಾ ಓಟ’ ಭಾನುವಾರ ದೇಶದಾದ್ಯಂತ 1,100 ನಗರ, ಪಟ್ಟಣಗಳಲ್ಲಿ ಏಕಕಾಲಕ್ಕೆ ನಡೆದಿದೆ.<br /> <br /> ಸರ್ದಾರ್ ವಲ್ಲಭಬಾಯ್ ಪಟೇಲ್ರ ಬೃಹತ್ ಮೂರ್ತಿ ನಿರ್ಮಾಣಕ್ಕೆ ಹಳ್ಳಿ, ಹಳ್ಳಿಗಳಿಂದ ಕಬ್ಬಿಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.<br /> <br /> <strong>ದೊಡ್ಡ ಪ್ರತಿಮೆ:</strong> ‘ಗುಜರಾತ್ ಸರ್ಕಾರವು ನರ್ಮದಾ ನದಿಯ ಸಾಧುಬೆಟ್ ಎಂಬಲ್ಲಿ ‘ಏಕತೆಯ ಮೂರ್ತಿ’ ಎಂಬ ಹೆಸರಿನಲ್ಲಿ ಸರ್ದಾರ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಕಟ್ಟುತ್ತಿದ್ದು, ಇದು ಜಗತ್ತಿನ ಅತಿದೊಡ್ಡ ಪ್ರತಿಮೆಯಾಗಲಿದೆ’ ಎಂದು ಅವರು ಹೇಳಿದರು.<br /> <br /> ‘ಜನರನ್ನು, ಹಳ್ಳಿಗಳನ್ನು ಮತ್ತು ದೇಶವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. ಇದು ಭಾರತೀಯರೆಲ್ಲರ ಕನಸು ಮತ್ತು ಅಭಿಲಾಷೆಯನ್ನು ಸಾಕಾರಗೊಳಿಸುವ ಪ್ರಯತ್ನ. ದಯವಿಟ್ಟು ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಬೇಡ’ ಎಂದು ಅವರು ಹೇಳಿದರು.<br /> ಅಹಮದಾಬಾದ್ನಲ್ಲಿ ‘ಏಕತಾ ಓಟ’ಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ, ‘ಈ ಅಭಿಯಾನವು ಪಟೇಲ್ ಅವರಿಗೆ ಸಲ್ಲಿಸಿದ ಯೋಗ್ಯ ಗೌರವವಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ವಡೋದರ(ಪಿಟಿಐ)</strong>: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಮಹತ್ವಾಕಾಂಕ್ಷೆಯ ‘ಏಕತೆಯ ಮೂರ್ತಿ’ ಯೋಜನೆಯ ಬೆಂಬಲಕ್ಕಾಗಿ ಆಯೋಜಿಸಿದ್ದ ‘ಏಕತಾ ಓಟ’ ಅಭಿಯಾನಕ್ಕೆ ಭಾನುವಾರ ಬೆಳಿಗ್ಗೆ ಇಲ್ಲಿ ಚಾಲನೆ ನೀಡಿದರು.<br /> <br /> ಸರ್ದಾರ್ ವಲಭಭಾಯ್ ಪಟೇಲ್ ಅವರ 63ನೇ ಪುಣ್ಯತಿಥಿಯ ಸಂದರ್ಭದಲ್ಲಿ ‘ಏಕತಾ ಓಟ’ ಆಯೋಜಿಸಲಾಗಿತ್ತು. ಈ ‘ಏಕತಾ ಓಟ’ ಭಾನುವಾರ ದೇಶದಾದ್ಯಂತ 1,100 ನಗರ, ಪಟ್ಟಣಗಳಲ್ಲಿ ಏಕಕಾಲಕ್ಕೆ ನಡೆದಿದೆ.<br /> <br /> ಸರ್ದಾರ್ ವಲ್ಲಭಬಾಯ್ ಪಟೇಲ್ರ ಬೃಹತ್ ಮೂರ್ತಿ ನಿರ್ಮಾಣಕ್ಕೆ ಹಳ್ಳಿ, ಹಳ್ಳಿಗಳಿಂದ ಕಬ್ಬಿಣ ಸಂಗ್ರಹಿಸುವ ಕೆಲಸ ನಡೆಯುತ್ತಿದೆ.<br /> <br /> <strong>ದೊಡ್ಡ ಪ್ರತಿಮೆ:</strong> ‘ಗುಜರಾತ್ ಸರ್ಕಾರವು ನರ್ಮದಾ ನದಿಯ ಸಾಧುಬೆಟ್ ಎಂಬಲ್ಲಿ ‘ಏಕತೆಯ ಮೂರ್ತಿ’ ಎಂಬ ಹೆಸರಿನಲ್ಲಿ ಸರ್ದಾರ್ ಪಟೇಲ್ ಅವರ ಬೃಹತ್ ಪ್ರತಿಮೆಯನ್ನು ಕಟ್ಟುತ್ತಿದ್ದು, ಇದು ಜಗತ್ತಿನ ಅತಿದೊಡ್ಡ ಪ್ರತಿಮೆಯಾಗಲಿದೆ’ ಎಂದು ಅವರು ಹೇಳಿದರು.<br /> <br /> ‘ಜನರನ್ನು, ಹಳ್ಳಿಗಳನ್ನು ಮತ್ತು ದೇಶವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ರೂಪಿಸಲಾಗಿದೆ. ಇದು ಭಾರತೀಯರೆಲ್ಲರ ಕನಸು ಮತ್ತು ಅಭಿಲಾಷೆಯನ್ನು ಸಾಕಾರಗೊಳಿಸುವ ಪ್ರಯತ್ನ. ದಯವಿಟ್ಟು ಇದನ್ನು ರಾಜಕೀಯ ದೃಷ್ಟಿಕೋನದಿಂದ ನೋಡುವುದು ಬೇಡ’ ಎಂದು ಅವರು ಹೇಳಿದರು.<br /> ಅಹಮದಾಬಾದ್ನಲ್ಲಿ ‘ಏಕತಾ ಓಟ’ಕ್ಕೆ ಚಾಲನೆ ನೀಡಿದ ಬಿಜೆಪಿ ಮುಖಂಡ ಎಲ್ ಕೆ ಅಡ್ವಾಣಿ, ‘ಈ ಅಭಿಯಾನವು ಪಟೇಲ್ ಅವರಿಗೆ ಸಲ್ಲಿಸಿದ ಯೋಗ್ಯ ಗೌರವವಾಗಿದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>