<p><strong>ಮಂಡ್ಯ</strong>: ಜಾತಿ ಮತ್ತು ಧರ್ಮದ ವಿಷಯದಲ್ಲಿ ಭಾರತ ಇನ್ನೂ ಪ್ರಜ್ಞಾಶೂನ್ಯವಾಗಿದೆ ಎಂದು ಮೈಸೂರು ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಂ ಹೇಳಿದರು.<br /> <br /> ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಮದ್ದೂರಿನ ಸಂಜನಾ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕ ಜಿ.ಬಿ. ಮಾದೇಶ್ ಅವರ ‘ದಲಿತ ಗಾಂಧಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.<br /> <br /> ಭಾರತದ ಜನರಿಗೆ ಜಾತಿಯನ್ನು ಧಿಕ್ಕರಿಸಿ ಹೊರಬರುವ ನೈತಿಕ ಶಕ್ತಿ ಇಲ್ಲ. ದೇಶದ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಜಾತಿ ಮತ್ತು ಧರ್ಮವೇ ಮೂಲ ಕಾರಣ ಎಂದು ಭಾವಿಸಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಇಡೀ ಭಾರತವೇ ಜಾತಿ ವ್ಯವಸ್ಥೆಯಲ್ಲಿ ಮುಳುಗಿದೆ. ಮೇಲ್ನೋಟಕ್ಕೆ ಭಾರತ ಬದಲಾಗಿರುವಂತೆ ಕಂಡುಬಂದರೂ ಜಾತಿ ವ್ಯವಸ್ಥೆಯಲ್ಲಿ ಮಾತ್ರ ಜಡವಾಗಿದೆ. ಅಲ್ಲಲ್ಲಿ ಬದಲಾವಣೆ ಕಂಡರೂ ಸಹ, ಅದು ಬಹಿರಂಗ ಒತ್ತಡದಿಂದ ಆಗಿದೆಯೇ ವಿನಾ, ಅಂತರಂಗದಲ್ಲಿ ಕತ್ತಲು ಹಾಗೆಯೇ ಇದೆ ಎಂದು ವಿಷಾದಿಸಿದರು.<br /> <br /> ಮಹಾತ್ಮ ಗಾಂಧಿ, ಲೋಹಿಯಾ, ಅಂಬೇಡ್ಕರ್ ಈ ಮೂವರು ಕಂಡ ಸಮಾನತೆಯ ಸಮನ್ವಯತೆಯಲ್ಲಿ ಜನರು ಮಿಂದುವವರೆಗೆ ಜಾತಿಯ ಸಂಕೋಲೆಯಿಂದ ದೇಶಕ್ಕೆ ಬಿಡುಗಡೆ ಸಾಧ್ಯವಿಲ್ಲ. ಇವರೆಲ್ಲ ಎಲ್ಲರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ ಎಂದರು.<br /> <br /> ಇಂದಿನವರಿಗೆ ಈ ಮಹಾನೀಯರ ವಿಚಾರಧಾರೆಗಳು ಸುಲಭವಾಗಿ ಅರ್ಥವಾಗುವುದೂ ಇಲ್ಲ. ಅದನ್ನು ಅರ್ಥೈಸುವವರೂ ಇಲ್ಲ. ಜಾತಿಯನ್ನು ನಿರಾಕರಿಸಿ, ನೈತಿಕ ಸ್ಥೈರ್ಯವನ್ನು ಜನರು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದೇಶಕ್ಕೆ ಸಂಕಷ್ಟಗಳಿಂದ ಮುಕ್ತಿ ಸಿಗುವುದಿಲ್ಲ ಎಂದು ಎಚ್ಚರಿಸಿದರು.<br /> <br /> ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ಗೌಡ, ಡಾ.ಮ. ರಾಮಕೃಷ್ಣ, ವಿಚಾರವಾದಿ ಜಾಹೋ ನಾರಾಯಣಸ್ವಾಮಿ, ಲೇಖಕ ಜಿ.ಬಿ. ಮಾದೇಶ್, ಅರ್ಜುನಪುರಿ ಅಪ್ಪಾಜಿಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಂಡ್ಯ</strong>: ಜಾತಿ ಮತ್ತು ಧರ್ಮದ ವಿಷಯದಲ್ಲಿ ಭಾರತ ಇನ್ನೂ ಪ್ರಜ್ಞಾಶೂನ್ಯವಾಗಿದೆ ಎಂದು ಮೈಸೂರು ಮಾನವ ಸಂಪನ್ಮೂಲ ಕೇಂದ್ರದ ನಿರ್ದೇಶಕ ಡಾ.ಎಸ್. ತುಕಾರಾಂ ಹೇಳಿದರು.<br /> <br /> ಇಲ್ಲಿನ ಗಾಂಧಿ ಭವನದಲ್ಲಿ ಭಾನುವಾರ ಮದ್ದೂರಿನ ಸಂಜನಾ ಪ್ರಕಾಶನ ಏರ್ಪಡಿಸಿದ್ದ ಸಮಾರಂಭದಲ್ಲಿ ಲೇಖಕ ಜಿ.ಬಿ. ಮಾದೇಶ್ ಅವರ ‘ದಲಿತ ಗಾಂಧಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.<br /> <br /> ಭಾರತದ ಜನರಿಗೆ ಜಾತಿಯನ್ನು ಧಿಕ್ಕರಿಸಿ ಹೊರಬರುವ ನೈತಿಕ ಶಕ್ತಿ ಇಲ್ಲ. ದೇಶದ ಅಭಿವೃದ್ಧಿ ಹಾಗೂ ವಿಕಾಸಕ್ಕೆ ಜಾತಿ ಮತ್ತು ಧರ್ಮವೇ ಮೂಲ ಕಾರಣ ಎಂದು ಭಾವಿಸಿರುವುದು ದೊಡ್ಡ ದುರಂತ ಎಂದು ಬೇಸರ ವ್ಯಕ್ತಪಡಿಸಿದರು.<br /> <br /> ಇಡೀ ಭಾರತವೇ ಜಾತಿ ವ್ಯವಸ್ಥೆಯಲ್ಲಿ ಮುಳುಗಿದೆ. ಮೇಲ್ನೋಟಕ್ಕೆ ಭಾರತ ಬದಲಾಗಿರುವಂತೆ ಕಂಡುಬಂದರೂ ಜಾತಿ ವ್ಯವಸ್ಥೆಯಲ್ಲಿ ಮಾತ್ರ ಜಡವಾಗಿದೆ. ಅಲ್ಲಲ್ಲಿ ಬದಲಾವಣೆ ಕಂಡರೂ ಸಹ, ಅದು ಬಹಿರಂಗ ಒತ್ತಡದಿಂದ ಆಗಿದೆಯೇ ವಿನಾ, ಅಂತರಂಗದಲ್ಲಿ ಕತ್ತಲು ಹಾಗೆಯೇ ಇದೆ ಎಂದು ವಿಷಾದಿಸಿದರು.<br /> <br /> ಮಹಾತ್ಮ ಗಾಂಧಿ, ಲೋಹಿಯಾ, ಅಂಬೇಡ್ಕರ್ ಈ ಮೂವರು ಕಂಡ ಸಮಾನತೆಯ ಸಮನ್ವಯತೆಯಲ್ಲಿ ಜನರು ಮಿಂದುವವರೆಗೆ ಜಾತಿಯ ಸಂಕೋಲೆಯಿಂದ ದೇಶಕ್ಕೆ ಬಿಡುಗಡೆ ಸಾಧ್ಯವಿಲ್ಲ. ಇವರೆಲ್ಲ ಎಲ್ಲರಿಗೂ ಅಷ್ಟು ಸುಲಭವಾಗಿ ದಕ್ಕುವುದಿಲ್ಲ ಎಂದರು.<br /> <br /> ಇಂದಿನವರಿಗೆ ಈ ಮಹಾನೀಯರ ವಿಚಾರಧಾರೆಗಳು ಸುಲಭವಾಗಿ ಅರ್ಥವಾಗುವುದೂ ಇಲ್ಲ. ಅದನ್ನು ಅರ್ಥೈಸುವವರೂ ಇಲ್ಲ. ಜಾತಿಯನ್ನು ನಿರಾಕರಿಸಿ, ನೈತಿಕ ಸ್ಥೈರ್ಯವನ್ನು ಜನರು ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಈ ದೇಶಕ್ಕೆ ಸಂಕಷ್ಟಗಳಿಂದ ಮುಕ್ತಿ ಸಿಗುವುದಿಲ್ಲ ಎಂದು ಎಚ್ಚರಿಸಿದರು.<br /> <br /> ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ಗೌಡ, ಡಾ.ಮ. ರಾಮಕೃಷ್ಣ, ವಿಚಾರವಾದಿ ಜಾಹೋ ನಾರಾಯಣಸ್ವಾಮಿ, ಲೇಖಕ ಜಿ.ಬಿ. ಮಾದೇಶ್, ಅರ್ಜುನಪುರಿ ಅಪ್ಪಾಜಿಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>