<p><strong>ಗುಡಿಬಂಡೆ: </strong>ಇಲ್ಲಿನ ನರಸಿಂಹ ದೇವರ ಬೆಟ್ಟಕ್ಕೆ ಶಾಪ ತಟ್ಟಿದಂತಿದೆ. ಬೇಸಿಗೆ ಪ್ರಖರವಾಗುತ್ತಿದ್ದಂತೆ ಹನಿ ನೀರಿಗೂ ತತ್ವಾರವಾಗುತ್ತಿದೆ, ಬೆಟ್ಟವನ್ನೇ ಆಶ್ರಯಿಸಿದ ಜಿಂಕೆ, ಕೃಷ್ಣಮೃಗ, ನವಿಲು, ಮೊಲ, ನರಿ, ಕಾಡುಹಂದಿ, ಮುಂಗುಸಿ ಜತೆಗೆ ಅಪರೂಪ ಎರಲಡ್ಡು ಪಕ್ಷಿ ನೀರು, ಆಹಾರವಿಲ್ಲದೆ ಬಸವಳಿಯುತ್ತಿವೆ. ಕಾಡು ಬರಡಾಗುತ್ತಿದೆ.<br /> <br /> ಗುಡಿಬಂಡೆ ಪಟ್ಟಣದ ಉತ್ತರ ದಿಕ್ಕಿಗೆ 8 ಕಿಲೋ ಮೀಟರ್ ದೂರದಲ್ಲಿ ಇರುವ ನರಸಿಂಹದೇವರ ಬೆಟ್ಟ 5ನೇ ಬ್ಲಾಕ್, ಮೀಸಲು ಅರಣ್ಯ ಪ್ರದೇಶಕ್ಕೆ ಬೆಳಿಗ್ಗೆಯೇ ಹೊರಟರೆ ನವಿಲುಗಳು ಕೇಕೆ, ರಾತ್ರಿ ವೇಳೆ ನರಿಗಳು ಊಳಿಡುವುದು, ಚಂಗನೆ ನೆಗೆಯುವ ಜಿಂಕೆಗಳು ಕಾಣುತ್ತಿದ್ದವು, ಕೇಳುತ್ತಿದ್ದವು. ಈಗ ಅಲ್ಲಿನ ಪರಿಸ್ಥಿತಿಯೇ ಭಿನ್ನವಾಗಿದೆ.<br /> <br /> ಅಂದಹಾಗೆ, ಇಲ್ಲಿನ ಸಾವಿರಾರು ಎಕರೆ ಕಾಡಿನ ವ್ಯಾಪ್ತಿಯಲ್ಲಿ ಜಿಂಕೆಗಳು ವಾಸವಾಗಿವೆ. ಕಾಡಿನ ಸುತ್ತಲೂ ಕಂದಕ ಮಾಡಲಾಗಿದೆ. ಹೀಗಾಗಿ ಇಲ್ಲಿರುವ ವನ್ಯಜೀವಿಗಳು ಮೇವು, ನೀರು ಅರಸಿ ಕಾಡಿನ ಹೊರಗೆ ಹೋಗಲು ಸಾಧ್ಯವಿಲ್ಲ. ಇತ್ತೀಚೆಗೆ ಜಿಂಕೆಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಕೂಡ ವಿಫಲವಾಗಿದೆ. ಆದ್ದರಿಂದಲೇ ಆ ಪ್ರಾಣಿಗಳ ಸ್ಥಿತಿ ಬಗ್ಗೆ ಆತಂಕವಾಗುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ ಇಂದ್ರಕುಮಾರ್ ಸಿಂಗ್ .<br /> <br /> ‘ಆಹಾರದ ಕೊರತೆಯಿಂದಲೇ ಹಲವು ಜಿಂಕೆಗಳು ಸಾವನ್ನಪ್ಪಿವೆ’ ಎನ್ನುತ್ತಾರೆ ಇಲ್ಲಿನ ದನಗಾಹಿಗಳು.<br /> ‘ಕಳೆದ ತಿಂಗಳು ಕಾಡಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗರಿಕೆಯೂ ಚಿಗುರಿಲ್ಲ. ಇದರಿಂದ ಮೇವು ಇಲ್ಲವಾಗಿದೆ. ಇಲ್ಲಿದ್ದ ಸಾಕಷ್ಟು ನೀರಿನ ಹೊಂಡಗಳು ಒಣಗಿ ಹೋಗಿವೆ.<br /> <br /> ಇನ್ನು ಪ್ರಾಣಿ, ಪಕ್ಷಿಗಳು ಗತಿ ಏನು’ ಎಂದು ಪ್ರಾಣಿ ದಯಾ ಸಂಘದ ಹಾಗೂ ಪರಿಸರ ಸಂರಕ್ಷಣಾ ವೇದಿಕೆಯ ಗುಂಪುಮರದ ಆನಂದ್ ಆತಂಕ ವ್ಯಕ್ತಪಡಿಸುತ್ತಾರೆ.<br /> ಕೆರೆ, -ಕಟ್ಟೆಗಳು ಅಭಿವೃದ್ಧಿ ಕಾಣುತ್ತಿಲ್ಲ. ಅಂತರ್ಜಲ ಮರುಪೂರಣ ಇಲ್ಲದೆ ಎಲ್ಲೆಂದರಲ್ಲಿ ಭೂಮಿ ಬಗೆದು ನೀರು ತೆಗೆದ ಪರಿಣಾಮ ಅಂರ್ತಜಲ ಕುಸಿದಿದೆ.<br /> <br /> ಬೇಸಿಗೆಯಲ್ಲಿ ಪ್ರಾಣಿಗಳಿಗೆ ಆಹಾರ ಹಾಗೂ ನೀರಿನ ಮೂಲವಾಗಿದ್ದ ತೋಟ ಪಟ್ಟಿಗಳು, ನದಿಗಳು, ಹಳ್ಳಕೊಳ್ಳಗಳಲ್ಲಿ ನೀರಿಲ್ಲದಿರುವುದು, ನಗರ ಪ್ರದೇಶದ ವಿಸ್ತರಣೆ, ಅರಣ್ಯ ಒತ್ತುವರಿ ಪ್ರಾಣಿಗಳ ಪಾಲಿಗೆ ಉರುಳಾಗಿವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.<br /> <br /> ಜಿಂಕೆ ಹಾಗೂ ಕಷ್ಣಮೃಗಳಿಗೆ ಸಜ್ಜೆ, ನವಣೆ, ಸಾಮೆ, ಜೋಳ, ರಾಗಿ, ಹಸಿರು ಹುಲ್ಲು ಮೂಲ ಆಹಾರ. ಇದಕ್ಕೆ ವ್ಯವಸ್ಥೆ ಆಗಬೇಕು. ಜತೆಗೆ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಂಡಿ ನಿರ್ಮಿಸಿ, ಪ್ರಾಣಿ, ಪಕ್ಷಿಗಳಿಗೆ ಸದಾ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗುಡಿಬಂಡೆ: </strong>ಇಲ್ಲಿನ ನರಸಿಂಹ ದೇವರ ಬೆಟ್ಟಕ್ಕೆ ಶಾಪ ತಟ್ಟಿದಂತಿದೆ. ಬೇಸಿಗೆ ಪ್ರಖರವಾಗುತ್ತಿದ್ದಂತೆ ಹನಿ ನೀರಿಗೂ ತತ್ವಾರವಾಗುತ್ತಿದೆ, ಬೆಟ್ಟವನ್ನೇ ಆಶ್ರಯಿಸಿದ ಜಿಂಕೆ, ಕೃಷ್ಣಮೃಗ, ನವಿಲು, ಮೊಲ, ನರಿ, ಕಾಡುಹಂದಿ, ಮುಂಗುಸಿ ಜತೆಗೆ ಅಪರೂಪ ಎರಲಡ್ಡು ಪಕ್ಷಿ ನೀರು, ಆಹಾರವಿಲ್ಲದೆ ಬಸವಳಿಯುತ್ತಿವೆ. ಕಾಡು ಬರಡಾಗುತ್ತಿದೆ.<br /> <br /> ಗುಡಿಬಂಡೆ ಪಟ್ಟಣದ ಉತ್ತರ ದಿಕ್ಕಿಗೆ 8 ಕಿಲೋ ಮೀಟರ್ ದೂರದಲ್ಲಿ ಇರುವ ನರಸಿಂಹದೇವರ ಬೆಟ್ಟ 5ನೇ ಬ್ಲಾಕ್, ಮೀಸಲು ಅರಣ್ಯ ಪ್ರದೇಶಕ್ಕೆ ಬೆಳಿಗ್ಗೆಯೇ ಹೊರಟರೆ ನವಿಲುಗಳು ಕೇಕೆ, ರಾತ್ರಿ ವೇಳೆ ನರಿಗಳು ಊಳಿಡುವುದು, ಚಂಗನೆ ನೆಗೆಯುವ ಜಿಂಕೆಗಳು ಕಾಣುತ್ತಿದ್ದವು, ಕೇಳುತ್ತಿದ್ದವು. ಈಗ ಅಲ್ಲಿನ ಪರಿಸ್ಥಿತಿಯೇ ಭಿನ್ನವಾಗಿದೆ.<br /> <br /> ಅಂದಹಾಗೆ, ಇಲ್ಲಿನ ಸಾವಿರಾರು ಎಕರೆ ಕಾಡಿನ ವ್ಯಾಪ್ತಿಯಲ್ಲಿ ಜಿಂಕೆಗಳು ವಾಸವಾಗಿವೆ. ಕಾಡಿನ ಸುತ್ತಲೂ ಕಂದಕ ಮಾಡಲಾಗಿದೆ. ಹೀಗಾಗಿ ಇಲ್ಲಿರುವ ವನ್ಯಜೀವಿಗಳು ಮೇವು, ನೀರು ಅರಸಿ ಕಾಡಿನ ಹೊರಗೆ ಹೋಗಲು ಸಾಧ್ಯವಿಲ್ಲ. ಇತ್ತೀಚೆಗೆ ಜಿಂಕೆಗಳಿಗೆ ನೀರು ಒದಗಿಸಲು ಅರಣ್ಯ ಇಲಾಖೆ ಕೂಡ ವಿಫಲವಾಗಿದೆ. ಆದ್ದರಿಂದಲೇ ಆ ಪ್ರಾಣಿಗಳ ಸ್ಥಿತಿ ಬಗ್ಗೆ ಆತಂಕವಾಗುತ್ತದೆ ಎನ್ನುತ್ತಾರೆ ಪರಿಸರ ಪ್ರೇಮಿ ಇಂದ್ರಕುಮಾರ್ ಸಿಂಗ್ .<br /> <br /> ‘ಆಹಾರದ ಕೊರತೆಯಿಂದಲೇ ಹಲವು ಜಿಂಕೆಗಳು ಸಾವನ್ನಪ್ಪಿವೆ’ ಎನ್ನುತ್ತಾರೆ ಇಲ್ಲಿನ ದನಗಾಹಿಗಳು.<br /> ‘ಕಳೆದ ತಿಂಗಳು ಕಾಡಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ ಗರಿಕೆಯೂ ಚಿಗುರಿಲ್ಲ. ಇದರಿಂದ ಮೇವು ಇಲ್ಲವಾಗಿದೆ. ಇಲ್ಲಿದ್ದ ಸಾಕಷ್ಟು ನೀರಿನ ಹೊಂಡಗಳು ಒಣಗಿ ಹೋಗಿವೆ.<br /> <br /> ಇನ್ನು ಪ್ರಾಣಿ, ಪಕ್ಷಿಗಳು ಗತಿ ಏನು’ ಎಂದು ಪ್ರಾಣಿ ದಯಾ ಸಂಘದ ಹಾಗೂ ಪರಿಸರ ಸಂರಕ್ಷಣಾ ವೇದಿಕೆಯ ಗುಂಪುಮರದ ಆನಂದ್ ಆತಂಕ ವ್ಯಕ್ತಪಡಿಸುತ್ತಾರೆ.<br /> ಕೆರೆ, -ಕಟ್ಟೆಗಳು ಅಭಿವೃದ್ಧಿ ಕಾಣುತ್ತಿಲ್ಲ. ಅಂತರ್ಜಲ ಮರುಪೂರಣ ಇಲ್ಲದೆ ಎಲ್ಲೆಂದರಲ್ಲಿ ಭೂಮಿ ಬಗೆದು ನೀರು ತೆಗೆದ ಪರಿಣಾಮ ಅಂರ್ತಜಲ ಕುಸಿದಿದೆ.<br /> <br /> ಬೇಸಿಗೆಯಲ್ಲಿ ಪ್ರಾಣಿಗಳಿಗೆ ಆಹಾರ ಹಾಗೂ ನೀರಿನ ಮೂಲವಾಗಿದ್ದ ತೋಟ ಪಟ್ಟಿಗಳು, ನದಿಗಳು, ಹಳ್ಳಕೊಳ್ಳಗಳಲ್ಲಿ ನೀರಿಲ್ಲದಿರುವುದು, ನಗರ ಪ್ರದೇಶದ ವಿಸ್ತರಣೆ, ಅರಣ್ಯ ಒತ್ತುವರಿ ಪ್ರಾಣಿಗಳ ಪಾಲಿಗೆ ಉರುಳಾಗಿವೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.<br /> <br /> ಜಿಂಕೆ ಹಾಗೂ ಕಷ್ಣಮೃಗಳಿಗೆ ಸಜ್ಜೆ, ನವಣೆ, ಸಾಮೆ, ಜೋಳ, ರಾಗಿ, ಹಸಿರು ಹುಲ್ಲು ಮೂಲ ಆಹಾರ. ಇದಕ್ಕೆ ವ್ಯವಸ್ಥೆ ಆಗಬೇಕು. ಜತೆಗೆ ಅರಣ್ಯ ಇಲಾಖೆ ಅರಣ್ಯ ಪ್ರದೇಶಗಳಲ್ಲಿ ಅಲ್ಲಲ್ಲಿ ಗುಂಡಿ ನಿರ್ಮಿಸಿ, ಪ್ರಾಣಿ, ಪಕ್ಷಿಗಳಿಗೆ ಸದಾ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕಿದೆ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>