<p><strong>ಆಲಮಟ್ಟಿ:</strong> ‘ಮಕ್ಕಳಿಗೆ ಕೇಳಿದ್ದನ್ನೆಲ್ಲ ಕೊಡಿಸುತ್ತ ಹೋಗಬೇಡಿ, ಅವರಿಗೆ ನಿಮ್ಮ ಮನೆಯ ಸಂಪೂರ್ಣ ವ್ಯವಹಾರ ಗೊತ್ತಾಗಲಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಂಗಮೇಶ ಹಳಿಂಗಳಿ ಪಾಲಕರಿಗೆ ಕಿವಿ ಮಾತು ಹೇಳಿದರು.</p>.<p>ಆಲಮಟ್ಟಿಯ ಮಂಜಪ್ಪ ಹರ್ಡೇಕರ ಸಭಾಭವನದಲ್ಲಿ ಈಚೆಗೆ ನಡೆದ ನಿಡಗುಂದಿ ವಲಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಾಲಕರ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>ಮಗು ಶಾಲೆಯಿಂದ ಬಂದ ತಕ್ಷಣ, ಶಾಲೆಯಲ್ಲಿ ನಡೆದ ಕಲಿಕೆಯ ಬಗ್ಗೆ ಸ್ವಲ್ಪವಾದರೂ ಕೇಳಿ, ಆ ವಿಷಯದ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೂ ಕೇಳಿ, ಇದರಿಂದ ಮಕ್ಕಳ ಮನಸ್ಸಿನಲ್ಲಿ ಬದಲಾವಣೆಯಾಗುತ್ತದೆ ಎಂದರು.</p>.<p>ಶಾಲೆಗೆ ಬಂದ ಪಾಲಕರಲ್ಲಿ ಶಿಕ್ಷಕರು ಮಕ್ಕಳ ಅವಗುಣವನ್ನು ಹೇಳದೇ, ಹೆಚ್ಚಾಗಿ ಒಳ್ಳೆಯ ಅಂಶಗಳನ್ನೇ ಹೇಳಿ ಎಂದರು. ತಮ್ಮ ಬಾಲ್ಯದ ಜೀವನದಲ್ಲಿ ಅನುಭವಿಸಿದ ಅಂಶಗಳನ್ನು ಹೇಳಿದ ಡಿಡಿಪಿಐ ಕೆಲ ಕಾಲ ಭಾವುಕರಾದರು. ಜಿಲ್ಲೆಯಾದ್ಯಂತ ಈ ವರ್ಷ ನಕಲು ಮುಕ್ತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುವುದು, ಅದರಲ್ಲಿಯೂ ಬಸವನಬಾಗೇವಾಡಿ ತಾಲ್ಲೂಕನ್ನು ಸಂಪೂರ್ಣ ನಕಲು ಮುಕ್ತ ಪರೀಕ್ಷೆ ನಡೆಸಲು ಮಾದರಿ ತಾಲ್ಲೂಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ ಬಸವರಾಜ ಲಕ್ಕಣ್ಣವರ ಮಾತನಾಡಿ, ಮಕ್ಕಳಲ್ಲಿನ ಋಣಾತ್ಮಕ ಅಂಶಗಳನ್ನು ಬಿಟ್ಟು, ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವ ವಾತಾವರಣ ನಿರ್ಮಿಸಿ ಎಂದರು.<br /> ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಮಾತನಾಡಿದರು. ಪಾಲಕ ರಾದ ಝಾಕೀರಹುಸೇನ ಶೇಖರ ಸೇರಿ ದಂತೆ ವಿವಿಧ ಪಾಲಕರು ಸಮಾವೇಶದ ಅಭಿಪ್ರಾಯವನ್ನು ಮಂಡಿಸಿದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಬರೆದ “ಯಾರು ಉತ್ತಮ ಪಾಲಕರು” ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಪತ್ರಿಕೆ ಯನ್ನು ಎಲ್ಲಾ ಪಾಲಕರಿಗೂ ನೀಡಲಾ ಯಿತು.</p>.<p>ಪ್ರಾಚಾರ್ಯ ಸುರೇಶಗೌಡ ಪಾಟೀಲ, ಮುಖ್ಯ ಶಿಕ್ಷಕ ಎಂ.ಬಿ. ಮಮ ದಾಪುರ ಮಾತನಾಡಿದರು. ವೇದಿಕೆಯ ಮೇಲೆ ನಿಡಗುಂದಿ ವಲಯ ವ್ಯಾಪ್ತಿಯ ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ದ ಬಿ.ಎನ್. ಗುಣದಾಳ, ಜಿ.ಆರ್. ದೊಡಮನಿ, ಎಲ್.ಬಿ. ಭಜಂತ್ರಿ, ರಮಣ ಚೌಧರಿ, ಎಂ.ಬಿ. ಮುಲ್ಲಾ, ಎಸ್.ಬಿ. ಹತ್ತರಕಿಹಾಳ, ಎನ್.ಎಸ್. ಬಿರಾದಾರ, ಉಮೇಶ ಹಿರೇಮಠ, ಜಿ.ಆರ್. ಜಾಲೋಜಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಆಲಮಟ್ಟಿ:</strong> ‘ಮಕ್ಕಳಿಗೆ ಕೇಳಿದ್ದನ್ನೆಲ್ಲ ಕೊಡಿಸುತ್ತ ಹೋಗಬೇಡಿ, ಅವರಿಗೆ ನಿಮ್ಮ ಮನೆಯ ಸಂಪೂರ್ಣ ವ್ಯವಹಾರ ಗೊತ್ತಾಗಲಿ, ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿಕೊಳ್ಳಿ’ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಂಗಮೇಶ ಹಳಿಂಗಳಿ ಪಾಲಕರಿಗೆ ಕಿವಿ ಮಾತು ಹೇಳಿದರು.</p>.<p>ಆಲಮಟ್ಟಿಯ ಮಂಜಪ್ಪ ಹರ್ಡೇಕರ ಸಭಾಭವನದಲ್ಲಿ ಈಚೆಗೆ ನಡೆದ ನಿಡಗುಂದಿ ವಲಯದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳ ಪಾಲಕರ ಸಮಾವೇಶದಲ್ಲಿ ಅವರು ಮಾತನಾಡಿದರು.</p>.<p>ಮಗು ಶಾಲೆಯಿಂದ ಬಂದ ತಕ್ಷಣ, ಶಾಲೆಯಲ್ಲಿ ನಡೆದ ಕಲಿಕೆಯ ಬಗ್ಗೆ ಸ್ವಲ್ಪವಾದರೂ ಕೇಳಿ, ಆ ವಿಷಯದ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೂ ಕೇಳಿ, ಇದರಿಂದ ಮಕ್ಕಳ ಮನಸ್ಸಿನಲ್ಲಿ ಬದಲಾವಣೆಯಾಗುತ್ತದೆ ಎಂದರು.</p>.<p>ಶಾಲೆಗೆ ಬಂದ ಪಾಲಕರಲ್ಲಿ ಶಿಕ್ಷಕರು ಮಕ್ಕಳ ಅವಗುಣವನ್ನು ಹೇಳದೇ, ಹೆಚ್ಚಾಗಿ ಒಳ್ಳೆಯ ಅಂಶಗಳನ್ನೇ ಹೇಳಿ ಎಂದರು. ತಮ್ಮ ಬಾಲ್ಯದ ಜೀವನದಲ್ಲಿ ಅನುಭವಿಸಿದ ಅಂಶಗಳನ್ನು ಹೇಳಿದ ಡಿಡಿಪಿಐ ಕೆಲ ಕಾಲ ಭಾವುಕರಾದರು. ಜಿಲ್ಲೆಯಾದ್ಯಂತ ಈ ವರ್ಷ ನಕಲು ಮುಕ್ತ ಎಸ್.ಎಸ್.ಎಲ್.ಸಿ. ಪರೀಕ್ಷೆ ನಡೆಸಲಾಗುವುದು, ಅದರಲ್ಲಿಯೂ ಬಸವನಬಾಗೇವಾಡಿ ತಾಲ್ಲೂಕನ್ನು ಸಂಪೂರ್ಣ ನಕಲು ಮುಕ್ತ ಪರೀಕ್ಷೆ ನಡೆಸಲು ಮಾದರಿ ತಾಲ್ಲೂಕಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಮಹಿಳಾ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ ಬಸವರಾಜ ಲಕ್ಕಣ್ಣವರ ಮಾತನಾಡಿ, ಮಕ್ಕಳಲ್ಲಿನ ಋಣಾತ್ಮಕ ಅಂಶಗಳನ್ನು ಬಿಟ್ಟು, ಧನಾತ್ಮಕ ಗುಣಗಳನ್ನು ಬೆಳೆಸಿಕೊಳ್ಳುವ ವಾತಾವರಣ ನಿರ್ಮಿಸಿ ಎಂದರು.<br /> ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಮಾತನಾಡಿದರು. ಪಾಲಕ ರಾದ ಝಾಕೀರಹುಸೇನ ಶೇಖರ ಸೇರಿ ದಂತೆ ವಿವಿಧ ಪಾಲಕರು ಸಮಾವೇಶದ ಅಭಿಪ್ರಾಯವನ್ನು ಮಂಡಿಸಿದರು.</p>.<p>ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಎಚ್. ನಾಗೂರ ಬರೆದ “ಯಾರು ಉತ್ತಮ ಪಾಲಕರು” ಎಂಬ ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ಈ ಪತ್ರಿಕೆ ಯನ್ನು ಎಲ್ಲಾ ಪಾಲಕರಿಗೂ ನೀಡಲಾ ಯಿತು.</p>.<p>ಪ್ರಾಚಾರ್ಯ ಸುರೇಶಗೌಡ ಪಾಟೀಲ, ಮುಖ್ಯ ಶಿಕ್ಷಕ ಎಂ.ಬಿ. ಮಮ ದಾಪುರ ಮಾತನಾಡಿದರು. ವೇದಿಕೆಯ ಮೇಲೆ ನಿಡಗುಂದಿ ವಲಯ ವ್ಯಾಪ್ತಿಯ ವಿವಿಧ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರಾದ ದ ಬಿ.ಎನ್. ಗುಣದಾಳ, ಜಿ.ಆರ್. ದೊಡಮನಿ, ಎಲ್.ಬಿ. ಭಜಂತ್ರಿ, ರಮಣ ಚೌಧರಿ, ಎಂ.ಬಿ. ಮುಲ್ಲಾ, ಎಸ್.ಬಿ. ಹತ್ತರಕಿಹಾಳ, ಎನ್.ಎಸ್. ಬಿರಾದಾರ, ಉಮೇಶ ಹಿರೇಮಠ, ಜಿ.ಆರ್. ಜಾಲೋಜಿ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>