<p>ಭಾರತೀನಗರ: ಅಂಬೇಡ್ಕರ್ ವಿಚಾರಧಾರೆ ನಿಂತ ನೀರಲ್ಲ. ಅದು ಸದಾ ಹರಿಯುವ ವಾಹಿನಿ ಎಂದು ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ತಿಳಿಸಿದರು.<br /> <br /> ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಮತಾ ಸೈನಿಕ ದಳ ಹಾಗೂ ವಿಶ್ವಮಾನವ ಸೇವಾ ಸಮಿತಿ ಏರ್ಪಡಿಸಿದ್ದ ‘ರಾಜ್ಯಾಧಿಕಾರದತ್ತ ದಲಿತರ ಚಿತ್ತ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.<br /> <br /> ಮೀಸಲಾತಿ ಪಡೆದವರು ಜನಾಂಗ ಪ್ರತಿನಿಧಿಸದೇ ಆಳುವ ಪಕ್ಷಗಳ ಗುಲಾಮರಾಗಿದ್ದಾರೆ. ಹೀಗಾಗಿ ದಲಿತರು ಪರ್ಯಾಯವಾಗಿ ಚಿಂತಿಸಿ ಮುನ್ನೆಡೆಯುವುದು ಅತ್ಯಗತ್ಯ ಎಂದರು.<br /> <br /> ವಕೀಲ ಎಂ. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಪಿಐ ಗಂಗಾಧರಸ್ವಾಮಿ, ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್, ಗಾಯಕ ಅಂಬರಹಳ್ಳಿಸ್ವಾಮಿ, ಸಾಹಿತಿ ಕಾಳೇನಹಳ್ಳಿ ಮಹದೇವು, ಮಾಜಿ ಸೈನಿಕ ಎಚ್.ಎಂ. ನಾಗಯ್ಯ ಅವರನ್ನು ಸನ್ಮಾನಿಸಲಾಯಿತು.<br /> <br /> ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಭಾರತೀಯ ರಿಪಬ್ಲಿಕ್ ಪಕ್ಷದ ಜಿಲ್ಲಾಧ್ಯಕ್ಷ ಕೊಮ್ಮೆರಹಳ್ಳಿ ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಚಿದಂಬರಮೂರ್ತಿ, ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಬಿ.ಎ. ಮಧುಕುಮಾರ್, ಪವಿತ್ರಾ್ರ, ಅಮೃತಾ, ರಂಜಿತಾ, ಮುಖಂಡರಾದ ಕೆ.ಎಂ. ಪಂಚಲಿಂಗಯ್ಯ, ನಾಗರಾಜು, ಗುಡಿಗೆರೆ ಬಸವರಾಜು, ಹುಲಿಗೆರೆಪುರ ಮಹದೇವು, ಯಲಾದಹಳ್ಳಿ ಪುಟ್ಟಸ್ವಾಮಿ, ಮಾಜಿ ಸೈನಿಕ ಹಾಗಲಹಳ್ಳಿ ರಾಜಣ್ಣ, ಹನುಮೇಶ್, ಕೆ.ಸಿ. ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತೀನಗರ: ಅಂಬೇಡ್ಕರ್ ವಿಚಾರಧಾರೆ ನಿಂತ ನೀರಲ್ಲ. ಅದು ಸದಾ ಹರಿಯುವ ವಾಹಿನಿ ಎಂದು ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಎಂ. ವೆಂಕಟಸ್ವಾಮಿ ತಿಳಿಸಿದರು.<br /> <br /> ಅಂಬೇಡ್ಕರ್ ಭವನದಲ್ಲಿ ಭಾನುವಾರ ಸಮತಾ ಸೈನಿಕ ದಳ ಹಾಗೂ ವಿಶ್ವಮಾನವ ಸೇವಾ ಸಮಿತಿ ಏರ್ಪಡಿಸಿದ್ದ ‘ರಾಜ್ಯಾಧಿಕಾರದತ್ತ ದಲಿತರ ಚಿತ್ತ’ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.<br /> <br /> ಮೀಸಲಾತಿ ಪಡೆದವರು ಜನಾಂಗ ಪ್ರತಿನಿಧಿಸದೇ ಆಳುವ ಪಕ್ಷಗಳ ಗುಲಾಮರಾಗಿದ್ದಾರೆ. ಹೀಗಾಗಿ ದಲಿತರು ಪರ್ಯಾಯವಾಗಿ ಚಿಂತಿಸಿ ಮುನ್ನೆಡೆಯುವುದು ಅತ್ಯಗತ್ಯ ಎಂದರು.<br /> <br /> ವಕೀಲ ಎಂ. ಮಹೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಿಪಿಐ ಗಂಗಾಧರಸ್ವಾಮಿ, ಹಿರಿಯ ಪತ್ರಕರ್ತ ಅಣ್ಣೂರು ಲಕ್ಷ್ಮಣ್, ಗಾಯಕ ಅಂಬರಹಳ್ಳಿಸ್ವಾಮಿ, ಸಾಹಿತಿ ಕಾಳೇನಹಳ್ಳಿ ಮಹದೇವು, ಮಾಜಿ ಸೈನಿಕ ಎಚ್.ಎಂ. ನಾಗಯ್ಯ ಅವರನ್ನು ಸನ್ಮಾನಿಸಲಾಯಿತು.<br /> <br /> ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್, ಭಾರತೀಯ ರಿಪಬ್ಲಿಕ್ ಪಕ್ಷದ ಜಿಲ್ಲಾಧ್ಯಕ್ಷ ಕೊಮ್ಮೆರಹಳ್ಳಿ ಕೃಷ್ಣಮೂರ್ತಿ, ಕೆಪಿಸಿಸಿ ಸದಸ್ಯ ಚಿದಂಬರಮೂರ್ತಿ, ಎಸ್ಎಫ್ಐ ತಾಲ್ಲೂಕು ಅಧ್ಯಕ್ಷ ಬಿ.ಎ. ಮಧುಕುಮಾರ್, ಪವಿತ್ರಾ್ರ, ಅಮೃತಾ, ರಂಜಿತಾ, ಮುಖಂಡರಾದ ಕೆ.ಎಂ. ಪಂಚಲಿಂಗಯ್ಯ, ನಾಗರಾಜು, ಗುಡಿಗೆರೆ ಬಸವರಾಜು, ಹುಲಿಗೆರೆಪುರ ಮಹದೇವು, ಯಲಾದಹಳ್ಳಿ ಪುಟ್ಟಸ್ವಾಮಿ, ಮಾಜಿ ಸೈನಿಕ ಹಾಗಲಹಳ್ಳಿ ರಾಜಣ್ಣ, ಹನುಮೇಶ್, ಕೆ.ಸಿ. ಪ್ರಕಾಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>