<p><strong>ಯಾದಗಿರಿ: </strong>ಕಲ್ಯಾಣ ಕ್ರಾಂತಿಯ ಸಂದ ರ್ಭದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರು ಅಮೂಲ್ಯವಾದ ನಕ್ಷತ್ರರಂತೆ ಕಂಗೊಳಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.<br /> <br /> ನಗರದ ವಿದ್ಯಾಮಂಗಲ ಕಾರ್ಯಾಲ ಯದಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಅಂಗವಾಗಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.<br /> <br /> 12 ನೇ ಶತಮಾನ ಶರಣರ ಕಾಲ ಘಟ್ಟ. ಈ ಎಲ್ಲ ಶರಣರಲ್ಲಿ ಅಮೂಲ್ಯ ನಕ್ಷತ್ರದಂತೆ ಇದ್ದ ಅಂಬಿಗರ ಚೌಡಯ್ಯ ಅವರು, ತಮ್ಮ ಕಟುವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾ ರ್ಯ ಮಾಡಿದರು ಎಂದು ಹೇಳಿದರು. <br /> <br /> ಅಂಬಿಗರಾಗಿದ್ದ ಚೌಡಯ್ಯನವರ ಜನಾಂಗ ನಂಬಿಗಸ್ತರು. ಸುರಕ್ಷಿತವಾಗಿ ಹೊಳೆ ದಾಟಿಸುವ ಮೂಲಕ ಜನರನ್ನು ಸುರಕ್ಷಿತವಾಗಿ ಸ್ಥಳವನ್ನು ತಲುಪಿಸುವ ನಂಬಿಗಸ್ತ ಜನಾಂಗದವರು ಎಂದು ತಿಳಿಸಿದರು.<br /> <br /> ಉಪನ್ಯಾಸ ನೀಡಿದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚಂದ್ರಶೇಖರ ಹಿಳ್ಳಿ, ಕರ್ನಾಟಕ ಕಂಡ ಅಪ್ರತಿಮ ವಚನಕಾರ ಅಂಬಿಗರ ಚೌಡಯ್ಯ ಅವರು, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಿಜಶರಣ ರೆಂದೇ ಬಿರುದನ್ನು ಪಡೆದಿದ್ದರು.<br /> <br /> ನೇರ ವಿಚಾರ ಧಾರೆಯುಳ್ಳ ಹಾಗೂ ನಿರ್ಭೀತಿ ಯಿಂದ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಅವ್ಯವಸ್ಥೆಯ ನ್ನು ಟೀಕಿಸಿದರು. ಸಮಾನತೆಯನ್ನು ಸಾರಿದ ಅವರು, ಹಲವಾರು ವಚನಗಳ ಮೂಲಕ ಶರಣರ ಮನಗೆದ್ದಿದ್ದರು ಎಂದು ಹೇಳಿದರು.<br /> <br /> ಕಲಬುರ್ಗಿ ಕಾಡಾ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಕಂದಕೂರ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ಮಾಲಿ ಪಾಟೀಲ್, ನಗರಸಭೆ ಅಧ್ಯಕ್ಷ ಸುರೇಶ ಕೋಟಿಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ ರೆಡ್ಡಿ ನಜರಾಪೂರ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್,<br /> <br /> ಉಪವಿಭಾಗಾಧಿಕಾರಿ ದುರ್ಗೇಶ ರುದ್ರಾಕ್ಷಿ, ಡಿಎಸ್ಪಿ ಆರ್.ಬಿ. ಬಸರಗಿ, ಸಮಾಜದ ಮುಖಂಡರಾದ ಮೌಲಾಲಿ ಅನಪುರ, ಉಮೇಶ ಮುದ್ನಾಳ, ಹಣಮಂತ ಬಳಿಚಕ್ರ, ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು.<br /> <br /> ಇದಕ್ಕೂ ಮೊದಲು ಇಲ್ಲಿಯ ಸುಭಾಷ ವೃತ್ತದಿಂದ ವಿದ್ಯಾ ಮಂಗಲ ಕಾರ್ಯಾಲಯದವರೆಗೂ ಅಂಬಿಗರ ಚೌಡಯ್ಯನ ಭಾವಚಿತ್ರದ ಮೆರವಣಿಗೆ ನಡೆಯಿತು.<br /> <br /> <strong>***<br /> <em>ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.</em><br /> -ಬಾಬುರಾವ ಚಿಂಚನಸೂರ,</strong> ಜಿಲ್ಲಾ ಉಸ್ತುವಾರಿ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಾದಗಿರಿ: </strong>ಕಲ್ಯಾಣ ಕ್ರಾಂತಿಯ ಸಂದ ರ್ಭದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಅವರು ಅಮೂಲ್ಯವಾದ ನಕ್ಷತ್ರರಂತೆ ಕಂಗೊಳಿಸುತ್ತಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಾಬುರಾವ ಚಿಂಚನಸೂರ ಹೇಳಿದರು.<br /> <br /> ನಗರದ ವಿದ್ಯಾಮಂಗಲ ಕಾರ್ಯಾಲ ಯದಲ್ಲಿ ಗುರುವಾರ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಅಂಗವಾಗಿ ಅಂಬಿಗರ ಚೌಡಯ್ಯ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.<br /> <br /> 12 ನೇ ಶತಮಾನ ಶರಣರ ಕಾಲ ಘಟ್ಟ. ಈ ಎಲ್ಲ ಶರಣರಲ್ಲಿ ಅಮೂಲ್ಯ ನಕ್ಷತ್ರದಂತೆ ಇದ್ದ ಅಂಬಿಗರ ಚೌಡಯ್ಯ ಅವರು, ತಮ್ಮ ಕಟುವಾದ ವಚನಗಳ ಮೂಲಕ ಸಮಾಜವನ್ನು ತಿದ್ದುವ ಕಾ ರ್ಯ ಮಾಡಿದರು ಎಂದು ಹೇಳಿದರು. <br /> <br /> ಅಂಬಿಗರಾಗಿದ್ದ ಚೌಡಯ್ಯನವರ ಜನಾಂಗ ನಂಬಿಗಸ್ತರು. ಸುರಕ್ಷಿತವಾಗಿ ಹೊಳೆ ದಾಟಿಸುವ ಮೂಲಕ ಜನರನ್ನು ಸುರಕ್ಷಿತವಾಗಿ ಸ್ಥಳವನ್ನು ತಲುಪಿಸುವ ನಂಬಿಗಸ್ತ ಜನಾಂಗದವರು ಎಂದು ತಿಳಿಸಿದರು.<br /> <br /> ಉಪನ್ಯಾಸ ನೀಡಿದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಚಂದ್ರಶೇಖರ ಹಿಳ್ಳಿ, ಕರ್ನಾಟಕ ಕಂಡ ಅಪ್ರತಿಮ ವಚನಕಾರ ಅಂಬಿಗರ ಚೌಡಯ್ಯ ಅವರು, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ನಿಜಶರಣ ರೆಂದೇ ಬಿರುದನ್ನು ಪಡೆದಿದ್ದರು.<br /> <br /> ನೇರ ವಿಚಾರ ಧಾರೆಯುಳ್ಳ ಹಾಗೂ ನಿರ್ಭೀತಿ ಯಿಂದ ವಚನಗಳನ್ನು ರಚಿಸುವ ಮೂಲಕ ಸಮಾಜದಲ್ಲಿನ ಅವ್ಯವಸ್ಥೆಯ ನ್ನು ಟೀಕಿಸಿದರು. ಸಮಾನತೆಯನ್ನು ಸಾರಿದ ಅವರು, ಹಲವಾರು ವಚನಗಳ ಮೂಲಕ ಶರಣರ ಮನಗೆದ್ದಿದ್ದರು ಎಂದು ಹೇಳಿದರು.<br /> <br /> ಕಲಬುರ್ಗಿ ಕಾಡಾ ಅಧ್ಯಕ್ಷ ಶ್ರೀನಿವಾಸ ರೆಡ್ಡಿ ಕಂದಕೂರ. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿ ಮಾಲಿ ಪಾಟೀಲ್, ನಗರಸಭೆ ಅಧ್ಯಕ್ಷ ಸುರೇಶ ಕೋಟಿಮನಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಪ್ರಕಾಶ ರೆಡ್ಡಿ ನಜರಾಪೂರ, ಜಿಲ್ಲಾಧಿಕಾರಿ ಮನೋಜ್ ಜೈನ್, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್,<br /> <br /> ಉಪವಿಭಾಗಾಧಿಕಾರಿ ದುರ್ಗೇಶ ರುದ್ರಾಕ್ಷಿ, ಡಿಎಸ್ಪಿ ಆರ್.ಬಿ. ಬಸರಗಿ, ಸಮಾಜದ ಮುಖಂಡರಾದ ಮೌಲಾಲಿ ಅನಪುರ, ಉಮೇಶ ಮುದ್ನಾಳ, ಹಣಮಂತ ಬಳಿಚಕ್ರ, ವೇದಿಕೆಯಲ್ಲಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದತ್ತಪ್ಪ ಸಾಗನೂರ ವಂದಿಸಿದರು.<br /> <br /> ಇದಕ್ಕೂ ಮೊದಲು ಇಲ್ಲಿಯ ಸುಭಾಷ ವೃತ್ತದಿಂದ ವಿದ್ಯಾ ಮಂಗಲ ಕಾರ್ಯಾಲಯದವರೆಗೂ ಅಂಬಿಗರ ಚೌಡಯ್ಯನ ಭಾವಚಿತ್ರದ ಮೆರವಣಿಗೆ ನಡೆಯಿತು.<br /> <br /> <strong>***<br /> <em>ಅಂಬಿಗರ ಚೌಡಯ್ಯನವರ ವಚನಗಳಲ್ಲಿನ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯವಾಗಿದೆ.</em><br /> -ಬಾಬುರಾವ ಚಿಂಚನಸೂರ,</strong> ಜಿಲ್ಲಾ ಉಸ್ತುವಾರಿ ಸಚಿವ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>