<p><strong>‘ಸಚಿನ್...’ ಪ್ರಥಮ ಹಂತ ಪೂರ್ಣ</strong><br /> ಬಿ.ಎನ್. ಗಂಗಾಧರ್ ನಿರ್ಮಿಸುತ್ತಿರುವ ‘ಸಚಿನ್... ತೆಂಡೂಲ್ಕರ್ ಅಲ್ಲ’ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಭಾಗದಲ್ಲಿ ಒಟ್ಟು ಹದಿನೇಳು ದಿನ ಚಿತ್ರೀಕರಣ ನಡೆಸಲಾಗಿದೆ. ಈ ತಿಂಗಳ ಇಪ್ಪತ್ತರಿಂದ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.<br /> <br /> ಎಸ್. ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಪ್ರಸಾದ್ಬಾಬು ಛಾಯಾಗ್ರಹಣವಿದೆ. ಶಿವು ಸಂಕಲನ, ರಾಜೇಶ್ರಾಮನಾಥ್ ಸಂಗೀತ ನೀಡಿದ್ದಾರೆ. ಸುಹಾಸಿನಿ, ಸುಧಾರಾಣಿ, ಪದ್ಮಾ ವಾಸಂತಿ, ಮಾಸ್ಟರ್ ಸ್ನೇಹಿತ್, ಶೈಲಜಾ ಜೋಶಿ, ಶ್ರೀನಿವಾಸ್ ಪ್ರಭು, ಕ್ರಿಕೆಟಿಗ ವೆಂಕಟೇಶ್ಪ್ರಸಾದ್ ಇತರರು ಅಭಿನಯಿಸುತ್ತಿದ್ದಾರೆ.<br /> <br /> <strong>ಕಳಸಾದಲ್ಲಿ ‘ಈ ದಿಲ್...’ </strong><br /> ಎಸ್. ಶ್ರೀಧರ್ ನಿರ್ಮಾಣದ ‘ಈ ದಿಲ್ ಹೇಳಿದೆ ನೀ ಬೇಕಂತ’ ಚಿತ್ರತಂಡ ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು ಮತ್ತು ಕೆಳಗೂರು ಎಸ್ಟೇಟ್ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ‘ಸಾವಿರ ಜನುಮ ಜೊತೆ ಇರುವೆ’ ಎಂಬ ಗೀತೆಯನ್ನು ಚಿತ್ರೀಕರಿಸಲಾಯಿತು. ಹಾಡಿನ ಸನ್ನಿವೇಶನಕ್ಕೆ ಅವಿನಾಶ್ ನರಸಿಂಹರಾಜು, ಶ್ರೀಶ್ರುತಿ ಹೆಜ್ಜೆಯಾಕಿದರು.<br /> <br /> ಕೆ.ಟಿ.ಎಂ. ಶ್ರೀನಿವಾಸ್ ಚಿತ್ರದ ನಿರ್ದೇಶಕರು. ಎಚ್.ಕೆ. ಚಿದಾನಂದ್ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತ, ಗಣೇಶನ್ ಸಂಕಲನ ಚಿತ್ರಕ್ಕಿದೆ. ಗೋಪಿ, ಸುರೇಶ್ ಮಂಗಳೂರು, ನಾಗೇಂದ್ರ ಶಾ, ವಿದ್ಯಾಮೂರ್ತಿ, ಕುಮುದಾ ಇತರರು ಚಿತ್ರದಲ್ಲಿ ನಟಿಸಿದ್ದಾರೆ.<br /> <br /> <strong>ಚಿತ್ರೀಕರಣದಲ್ಲಿ ‘ಪ್ರೇಮಾರ್ಪಣೆ’ </strong><br /> ಕೆ. ಕೃಷ್ಣಾರೆಡ್ಡಿ ನಿರ್ಮಾಣದ ಪ್ರೇಮಾರ್ಪಣೆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಥ್ರಿಲ್ಲರ್ ಮಂಜು, ಲಯೇಂದ್ರ ಮತ್ತಿತರ ಹಾಸ್ಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.<br /> <br /> ಈಗಾಗಲೇ ಬೆಂಗಳೂರು ಮಡಿಕೇರಿ, ಗೋಣಿಕೊಪ್ಪ ವೀರಾಜ್ಪೇಟೆ, ಸುಳ್ಯ, ಮಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಾಗಾರ್ಜುನ, ಸಂಜನಾ ನಾಯ್ಡು, ರಮೇಶ್ ಭಟ್, ಅಪೂರ್ವ, ಥ್ರಿಲ್ಲರ್ ಮಂಜು, ಮಿತ್ರ ಇತರರು ಅಭಿನಯಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>‘ಸಚಿನ್...’ ಪ್ರಥಮ ಹಂತ ಪೂರ್ಣ</strong><br /> ಬಿ.ಎನ್. ಗಂಗಾಧರ್ ನಿರ್ಮಿಸುತ್ತಿರುವ ‘ಸಚಿನ್... ತೆಂಡೂಲ್ಕರ್ ಅಲ್ಲ’ ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಈ ಭಾಗದಲ್ಲಿ ಒಟ್ಟು ಹದಿನೇಳು ದಿನ ಚಿತ್ರೀಕರಣ ನಡೆಸಲಾಗಿದೆ. ಈ ತಿಂಗಳ ಇಪ್ಪತ್ತರಿಂದ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ.<br /> <br /> ಎಸ್. ಮೋಹನ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಚಿತ್ರಕ್ಕೆ ಪ್ರಸಾದ್ಬಾಬು ಛಾಯಾಗ್ರಹಣವಿದೆ. ಶಿವು ಸಂಕಲನ, ರಾಜೇಶ್ರಾಮನಾಥ್ ಸಂಗೀತ ನೀಡಿದ್ದಾರೆ. ಸುಹಾಸಿನಿ, ಸುಧಾರಾಣಿ, ಪದ್ಮಾ ವಾಸಂತಿ, ಮಾಸ್ಟರ್ ಸ್ನೇಹಿತ್, ಶೈಲಜಾ ಜೋಶಿ, ಶ್ರೀನಿವಾಸ್ ಪ್ರಭು, ಕ್ರಿಕೆಟಿಗ ವೆಂಕಟೇಶ್ಪ್ರಸಾದ್ ಇತರರು ಅಭಿನಯಿಸುತ್ತಿದ್ದಾರೆ.<br /> <br /> <strong>ಕಳಸಾದಲ್ಲಿ ‘ಈ ದಿಲ್...’ </strong><br /> ಎಸ್. ಶ್ರೀಧರ್ ನಿರ್ಮಾಣದ ‘ಈ ದಿಲ್ ಹೇಳಿದೆ ನೀ ಬೇಕಂತ’ ಚಿತ್ರತಂಡ ಚಿಕ್ಕಮಗಳೂರು ಜಿಲ್ಲೆಯ ಕಳಸ, ಹೊರನಾಡು ಮತ್ತು ಕೆಳಗೂರು ಎಸ್ಟೇಟ್ನಲ್ಲಿ ಚಿತ್ರೀಕರಣ ನಡೆಸುತ್ತಿದೆ. ‘ಸಾವಿರ ಜನುಮ ಜೊತೆ ಇರುವೆ’ ಎಂಬ ಗೀತೆಯನ್ನು ಚಿತ್ರೀಕರಿಸಲಾಯಿತು. ಹಾಡಿನ ಸನ್ನಿವೇಶನಕ್ಕೆ ಅವಿನಾಶ್ ನರಸಿಂಹರಾಜು, ಶ್ರೀಶ್ರುತಿ ಹೆಜ್ಜೆಯಾಕಿದರು.<br /> <br /> ಕೆ.ಟಿ.ಎಂ. ಶ್ರೀನಿವಾಸ್ ಚಿತ್ರದ ನಿರ್ದೇಶಕರು. ಎಚ್.ಕೆ. ಚಿದಾನಂದ್ ಛಾಯಾಗ್ರಹಣ, ಸತೀಶ್ ಆರ್ಯನ್ ಸಂಗೀತ, ಗಣೇಶನ್ ಸಂಕಲನ ಚಿತ್ರಕ್ಕಿದೆ. ಗೋಪಿ, ಸುರೇಶ್ ಮಂಗಳೂರು, ನಾಗೇಂದ್ರ ಶಾ, ವಿದ್ಯಾಮೂರ್ತಿ, ಕುಮುದಾ ಇತರರು ಚಿತ್ರದಲ್ಲಿ ನಟಿಸಿದ್ದಾರೆ.<br /> <br /> <strong>ಚಿತ್ರೀಕರಣದಲ್ಲಿ ‘ಪ್ರೇಮಾರ್ಪಣೆ’ </strong><br /> ಕೆ. ಕೃಷ್ಣಾರೆಡ್ಡಿ ನಿರ್ಮಾಣದ ಪ್ರೇಮಾರ್ಪಣೆ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಥ್ರಿಲ್ಲರ್ ಮಂಜು, ಲಯೇಂದ್ರ ಮತ್ತಿತರ ಹಾಸ್ಯ ಕಲಾವಿದರು ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ.<br /> <br /> ಈಗಾಗಲೇ ಬೆಂಗಳೂರು ಮಡಿಕೇರಿ, ಗೋಣಿಕೊಪ್ಪ ವೀರಾಜ್ಪೇಟೆ, ಸುಳ್ಯ, ಮಂಗಳೂರು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ನಾಗಾರ್ಜುನ, ಸಂಜನಾ ನಾಯ್ಡು, ರಮೇಶ್ ಭಟ್, ಅಪೂರ್ವ, ಥ್ರಿಲ್ಲರ್ ಮಂಜು, ಮಿತ್ರ ಇತರರು ಅಭಿನಯಿಸುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>