<p><strong>ಮುಂಬೈ (ಪಿಟಿಐ):</strong> ಆದಾಯ ತೆರಿಗೆ ಹಾಗೂ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಸೋಮವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಲಾರಿಗಳನ್ನು ತಡೆದು ಕನಿಷ್ಠ ರೂ100 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.<br /> <br /> ದಕ್ಷಿಣ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಈ ಲಾರಿಗಳನ್ನು ತಪಾಸಣೆ ಮಾಡಿ, ಚಿನ್ನ, ವಜ್ರ ಹಾಗೂ ನಗದು ಹಣ ಇದ್ದ 102 ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.<br /> <br /> `ನಗದು ಹಾಗೂ ಆಭರಣಗಳನ್ನು ಖಾಸಗಿ ಕೊರಿಯರ್ ಮೂಲಕ ಗುಜರಾತ್ಗೆ ಸಾಗಣೆ ಮಾಡಲಾಗುತ್ತಿತ್ತು. ಈ ಲಾರಿಗಳಲ್ಲಿದ್ದ 45 ಮಂದಿಯನ್ನು ಪ್ರಶ್ನೆಗೊಳಪಡಿಸಲಾಗಿದೆ' ಎಂದು ಆದಾಯ ತೆರಿಗೆ ಮಹಾನಿರ್ದೇಶಕ ಸ್ವತಂತ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.<br /> <br /> ಮುಂಬೈನಿಂದ ಗುಜರಾತ್ಗೆ ಕಪ್ಪು ಹಣ ಸಾಗಿಸಲಾಗುತ್ತಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.<br /> <br /> ಈ ಲಾರಿಗಳಿಗೆ ಮುಂಬೈ ಪೊಲೀಸ್ ಸಿಬ್ಬಂದಿ ಬೆಂಗಾವಲಾಗಿದ್ದರು ಎನ್ನುವುದು ಮಹತ್ವದ ಸಂಗತಿ.<br /> <br /> `ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾಗಣೆ ಮಾಡುವ ಖಾಸಗಿ ಕೊರಿಯರ್ಗಳಿಗೆ ಬೆಂಗಾವಲು ನೀಡುವುದು ವಾಡಿಕೆ' ಎಂದು ಪೊಲೀಸರು ಹೇಳಿದ್ದಾರೆ.<br /> <br /> `ವಶಕ್ಕೆ ಪಡೆದುಕೊಂಡಿರುವ ನಗದು ಹಾಗೂ ಆಭರಣಗಳ ಮೌಲ್ಯವನ್ನು ಸುಮಾರು 50 ಅಧಿಕಾರಿಗಳು ಲೆಕ್ಕ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ನಂತರವೇ ಒಟ್ಟು ಅಂದಾಜು ಸಿಗುತ್ತದೆ' ಎಂದು ಕುಮಾರ್ ತಿಳಿಸಿದರು.<br /> <br /> `ಈ ಹಣದ ಮೂಲ ಯಾವುದು ಎಂದು ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಒಂದು ವೇಳೆ ಇದು ಉಗ್ರರಿಗೆ ಬಟವಾಡೆಯಾಗುತ್ತಿದ್ದ ಹಣ ಎಂದಾದರೆ ಆಗ ಪ್ರಕರಣವನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ' ಎಂದು ಗೃಹ ಸಚಿವ ಆರ್.ಆರ್. ಪಾಟೀಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಆದಾಯ ತೆರಿಗೆ ಹಾಗೂ ರಾಷ್ಟ್ರೀಯ ತನಿಖಾ ದಳದ ಸಿಬ್ಬಂದಿ ಸೋಮವಾರ ರಾತ್ರಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ನಾಲ್ಕು ಲಾರಿಗಳನ್ನು ತಡೆದು ಕನಿಷ್ಠ ರೂ100 ಕೋಟಿ ಮೌಲ್ಯದ ಬೆಲೆಬಾಳುವ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.<br /> <br /> ದಕ್ಷಿಣ ಮುಂಬೈ ರೈಲ್ವೆ ನಿಲ್ದಾಣದಲ್ಲಿ ಈ ಲಾರಿಗಳನ್ನು ತಪಾಸಣೆ ಮಾಡಿ, ಚಿನ್ನ, ವಜ್ರ ಹಾಗೂ ನಗದು ಹಣ ಇದ್ದ 102 ಚೀಲಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.<br /> <br /> `ನಗದು ಹಾಗೂ ಆಭರಣಗಳನ್ನು ಖಾಸಗಿ ಕೊರಿಯರ್ ಮೂಲಕ ಗುಜರಾತ್ಗೆ ಸಾಗಣೆ ಮಾಡಲಾಗುತ್ತಿತ್ತು. ಈ ಲಾರಿಗಳಲ್ಲಿದ್ದ 45 ಮಂದಿಯನ್ನು ಪ್ರಶ್ನೆಗೊಳಪಡಿಸಲಾಗಿದೆ' ಎಂದು ಆದಾಯ ತೆರಿಗೆ ಮಹಾನಿರ್ದೇಶಕ ಸ್ವತಂತ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು.<br /> <br /> ಮುಂಬೈನಿಂದ ಗುಜರಾತ್ಗೆ ಕಪ್ಪು ಹಣ ಸಾಗಿಸಲಾಗುತ್ತಿತ್ತು ಎನ್ನುವುದು ಮೇಲ್ನೋಟಕ್ಕೆ ಕಂಡುಬಂದಿದೆ.<br /> <br /> ಈ ಲಾರಿಗಳಿಗೆ ಮುಂಬೈ ಪೊಲೀಸ್ ಸಿಬ್ಬಂದಿ ಬೆಂಗಾವಲಾಗಿದ್ದರು ಎನ್ನುವುದು ಮಹತ್ವದ ಸಂಗತಿ.<br /> <br /> `ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಸಾಗಣೆ ಮಾಡುವ ಖಾಸಗಿ ಕೊರಿಯರ್ಗಳಿಗೆ ಬೆಂಗಾವಲು ನೀಡುವುದು ವಾಡಿಕೆ' ಎಂದು ಪೊಲೀಸರು ಹೇಳಿದ್ದಾರೆ.<br /> <br /> `ವಶಕ್ಕೆ ಪಡೆದುಕೊಂಡಿರುವ ನಗದು ಹಾಗೂ ಆಭರಣಗಳ ಮೌಲ್ಯವನ್ನು ಸುಮಾರು 50 ಅಧಿಕಾರಿಗಳು ಲೆಕ್ಕ ಮಾಡುತ್ತಿದ್ದಾರೆ. ಇದು ಪೂರ್ಣಗೊಂಡ ನಂತರವೇ ಒಟ್ಟು ಅಂದಾಜು ಸಿಗುತ್ತದೆ' ಎಂದು ಕುಮಾರ್ ತಿಳಿಸಿದರು.<br /> <br /> `ಈ ಹಣದ ಮೂಲ ಯಾವುದು ಎಂದು ಆದಾಯ ತೆರಿಗೆ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಒಂದು ವೇಳೆ ಇದು ಉಗ್ರರಿಗೆ ಬಟವಾಡೆಯಾಗುತ್ತಿದ್ದ ಹಣ ಎಂದಾದರೆ ಆಗ ಪ್ರಕರಣವನ್ನು ಮುಂಬೈ ಪೊಲೀಸರಿಗೆ ಹಸ್ತಾಂತರಿಸಲಾಗುತ್ತದೆ' ಎಂದು ಗೃಹ ಸಚಿವ ಆರ್.ಆರ್. ಪಾಟೀಲ್ ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>