<p>ರೋಮ್ (ಪಿಟಿಐ): 1993ರ ಮುಂಬೈ ಬಾಂಬ್ ದಾಳಿಗಳ ಮೆದುಳು ಎಂದೇ ಪರಿಗಣಿಸಲಾಗಿರುವ ದಾವೂದ್ ಇಬ್ರಾಹಿಂ ತನಗೆ ಇನ್ನೂ ದುರ್ಲಭನಾಗಿರುವ ಹಿನ್ನೆಲೆಯಲ್ಲಿ ~ನಂಬಲರ್ಹ ಸಾಕ್ಷ್ಯಧಾರಗಳನ್ನು ನೀಡಿದ್ದರೂ ಹೀನ ಸರಣಿ ಬಾಂಬ್ ಸ್ಫೋಟಗಳ ಸೂತ್ರಧಾರಿಗಳು ಪಾಕಿಸ್ತಾನದ ಸ್ವರ್ಗದಲ್ಲಿ ಸುರಕ್ಷಿತರಾಗಿದ್ದಾರೆ~ ಎಂದು ಭಾರತ ಮಂಗಳವಾರ ಆಪಾದಿಸಿತು.<br /> <br /> ಇಂಟರ್ ಪೋಲ್ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ಅವರು ~ಭಾರತವು ನಿರಂತರವಾಗಿ ಹಲವು ವಿಧದ ಭಯೋತ್ಪಾದಕ ಬೆದರಿಕೆಗಳನ್ನು, ನಿರ್ದಿಷ್ಟವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ~ ಎಂದು ಹೇಳಿದರು.<br /> <br /> ~ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯನ್ನು ಪರಿಣಾಮಕಾರಿ ಆಯಕಟ್ಟಿನ ಶಸ್ತ್ರವಾಗಿ ಬಳಸುವುದು ಹೆಚ್ಚುತ್ತಿದೆ~ ಎಂದು ಅವರು ನುಡಿದರು.<br /> <br /> ನೆರೆ ರಾಷ್ಟ್ರದ ಜೊತೆಗೆ ನಿರಂತರ ಮಾತುಕತೆ, ಕಳೆದ ಶತಮಾನ -1993ರ ಅತಿ ಹೀನ ಮುಂಬೈ ಬಾಂಬ್ ಸ್ಫೋಟ ಕೃತ್ಯಗಳಿಗೆ ಸಂಬಂಧಿಸಿದಂತೆ ನಂಬಲರ್ಹ ಸಾಕ್ಷ್ಯಧಾರಗಳನ್ನು ಒದಗಿಸಲಾಗಿದೆ. ಆದರೆ ದುಷ್ಕೃತ್ಯದ ಸೂತ್ರಧಾರಿ ಪಾಕಿಸ್ತಾನದ ಸ್ವರ್ಗದಲ್ಲಿ ಸುರಕ್ಷಿತನಾಗಿದ್ದಾನೆ. 257 ಜನರ ಹತ್ಯೆ, 713 ಜನ ಗಾಯಗೊಳ್ಳಲು ಕಾರಣನಾದ ಸೂತ್ರಧಾರಿಯನ್ನು ಕಟಕಟೆಗೆ ತರಲು ಇನ್ನೂ ಸಾಧ್ಯವಾಗಿಲ್ಲ~ ಎಂದು ಶಿಂಧೆ ಹೇಳಿದರು.<br /> <br /> ~ಅಪರಾಧಿಗಳು ನೆರೆಯ ರಾಷ್ಟ್ರದಲ್ಲೇ ಇದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಭಾರತದ ಪ್ರಜೆಗಳೇ ಆಗಿರುವ ಅವರ ವಿರುದ್ಧ ಹೊರಡಿಸಲಾದ ಇಂಟರ್ ಪೋಲ್ ಕೆಂಪು ನೋಟಿಸ್ ಗಳು 1993ರಿಂದ ನೆನೆಗುದಿಯಲ್ಲಿ ಬಿದ್ದಿವೆ~ ಎಂಬುದಾಗಿ ಪಾಕಿಸ್ತಾನವನ್ನು ಉದ್ದೇಶಿಸಿಯೇ ಶಿಂಧೆ ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರೋಮ್ (ಪಿಟಿಐ): 1993ರ ಮುಂಬೈ ಬಾಂಬ್ ದಾಳಿಗಳ ಮೆದುಳು ಎಂದೇ ಪರಿಗಣಿಸಲಾಗಿರುವ ದಾವೂದ್ ಇಬ್ರಾಹಿಂ ತನಗೆ ಇನ್ನೂ ದುರ್ಲಭನಾಗಿರುವ ಹಿನ್ನೆಲೆಯಲ್ಲಿ ~ನಂಬಲರ್ಹ ಸಾಕ್ಷ್ಯಧಾರಗಳನ್ನು ನೀಡಿದ್ದರೂ ಹೀನ ಸರಣಿ ಬಾಂಬ್ ಸ್ಫೋಟಗಳ ಸೂತ್ರಧಾರಿಗಳು ಪಾಕಿಸ್ತಾನದ ಸ್ವರ್ಗದಲ್ಲಿ ಸುರಕ್ಷಿತರಾಗಿದ್ದಾರೆ~ ಎಂದು ಭಾರತ ಮಂಗಳವಾರ ಆಪಾದಿಸಿತು.<br /> <br /> ಇಂಟರ್ ಪೋಲ್ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದ ಗೃಹ ಸಚಿವ ಸುಶೀಲ್ ಕುಮಾರ ಶಿಂಧೆ ಅವರು ~ಭಾರತವು ನಿರಂತರವಾಗಿ ಹಲವು ವಿಧದ ಭಯೋತ್ಪಾದಕ ಬೆದರಿಕೆಗಳನ್ನು, ನಿರ್ದಿಷ್ಟವಾಗಿ ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸುತ್ತಿದೆ~ ಎಂದು ಹೇಳಿದರು.<br /> <br /> ~ದಕ್ಷಿಣ ಏಷ್ಯಾದಲ್ಲಿ ಭಯೋತ್ಪಾದನೆಯನ್ನು ಪರಿಣಾಮಕಾರಿ ಆಯಕಟ್ಟಿನ ಶಸ್ತ್ರವಾಗಿ ಬಳಸುವುದು ಹೆಚ್ಚುತ್ತಿದೆ~ ಎಂದು ಅವರು ನುಡಿದರು.<br /> <br /> ನೆರೆ ರಾಷ್ಟ್ರದ ಜೊತೆಗೆ ನಿರಂತರ ಮಾತುಕತೆ, ಕಳೆದ ಶತಮಾನ -1993ರ ಅತಿ ಹೀನ ಮುಂಬೈ ಬಾಂಬ್ ಸ್ಫೋಟ ಕೃತ್ಯಗಳಿಗೆ ಸಂಬಂಧಿಸಿದಂತೆ ನಂಬಲರ್ಹ ಸಾಕ್ಷ್ಯಧಾರಗಳನ್ನು ಒದಗಿಸಲಾಗಿದೆ. ಆದರೆ ದುಷ್ಕೃತ್ಯದ ಸೂತ್ರಧಾರಿ ಪಾಕಿಸ್ತಾನದ ಸ್ವರ್ಗದಲ್ಲಿ ಸುರಕ್ಷಿತನಾಗಿದ್ದಾನೆ. 257 ಜನರ ಹತ್ಯೆ, 713 ಜನ ಗಾಯಗೊಳ್ಳಲು ಕಾರಣನಾದ ಸೂತ್ರಧಾರಿಯನ್ನು ಕಟಕಟೆಗೆ ತರಲು ಇನ್ನೂ ಸಾಧ್ಯವಾಗಿಲ್ಲ~ ಎಂದು ಶಿಂಧೆ ಹೇಳಿದರು.<br /> <br /> ~ಅಪರಾಧಿಗಳು ನೆರೆಯ ರಾಷ್ಟ್ರದಲ್ಲೇ ಇದ್ದಾರೆ ಎಂಬುದು ಸ್ಪಷ್ಟವಾಗಿ ತಿಳಿದಿದೆ. ಭಾರತದ ಪ್ರಜೆಗಳೇ ಆಗಿರುವ ಅವರ ವಿರುದ್ಧ ಹೊರಡಿಸಲಾದ ಇಂಟರ್ ಪೋಲ್ ಕೆಂಪು ನೋಟಿಸ್ ಗಳು 1993ರಿಂದ ನೆನೆಗುದಿಯಲ್ಲಿ ಬಿದ್ದಿವೆ~ ಎಂಬುದಾಗಿ ಪಾಕಿಸ್ತಾನವನ್ನು ಉದ್ದೇಶಿಸಿಯೇ ಶಿಂಧೆ ನುಡಿದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>