<p><strong>ಮಾಲೂರು: </strong>ಮೂರು ದಿನಗಳ ಒಳಗಾಗಿ ತಮ್ಮ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ತಿಳಿಸಿದರು.<br /> ಪಟ್ಟಣದಲ್ಲಿ ಮಂಗಳವಾರ ನಡೆದ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ 3 ದಿನಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.<br /> <br /> ಬಿಜೆಪಿ ಸೇರ್ಪಡೆ ಮುಗಿದ ಅಧ್ಯಾಯ. ಕಾಂಗ್ರೆಸ್ ವರಿಷ್ಠರು 3 ದಿನ ಅವಕಾಶ ಕೇಳಿದ್ದಾರೆ. ಅಧಿಕೃತ ಸೇರ್ಪಡೆಗೆ ಅವಕಾಶ ಸಿಗದಿದ್ದರೆ ಬೆಂಬಲಿಗರೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಲಾಗುವುದು ಎನ್ನುತ್ತಿದ್ದಂತೆ ಬೆಂಬಲಿಗರು ಸಹ ಮತ ವ್ಯಕ್ತ ಪಡಿಸಿದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ರಾಜಪ್ಪ, ಸದಸ್ಯರಾದ ಆನಂದ್, ಗೋಪಾಲಗೌಡ, ಚಂದ್ರಪ್ಪ, ಪುಟ್ಟಸ್ವಾಮಿ, ಎಸ್.ವಿ.ಲೋಕೇಶ್, ಅಮರಾವತಿ, ಕುಂತೂರು ಕೃಷ್ಣಪ್ಪ, ಪುರಸಭೆ ಸದಸ್ಯ ಎಚ್.ವಿ.ಲಿಂಗೇಶ್ವರಯ್ಯ, ನೊಸಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ಮುಖಂಡರಾದ ಸಿ.ಎಂ.ನಾರಾಯಣಗೌಡ, ಎ.ಜಿ.ಸುಬ್ರಮಣ್ಯರೆಡ್ಡಿ, ಸರ್ದಾರ್ ಬೇಗ್, ಎ.ಅಶ್ವಥರೆಡ್ಡಿ, ಎಂ.ಜಿ.ಮಧುಸೂಧನ್, ಮಿಂಡಹಳ್ಳಿ ಮುನಿರಾಜು, ದೊಡ್ಡಶಿವಾರ ಶಿವಣ್ಣ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾಲೂರು: </strong>ಮೂರು ದಿನಗಳ ಒಳಗಾಗಿ ತಮ್ಮ ರಾಜಕೀಯ ನಡೆಯನ್ನು ನಿರ್ಧರಿಸುವುದಾಗಿ ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ ತಿಳಿಸಿದರು.<br /> ಪಟ್ಟಣದಲ್ಲಿ ಮಂಗಳವಾರ ನಡೆದ ಬೆಂಬಲಿಗರ ಸಭೆಯಲ್ಲಿ ಚರ್ಚಿಸಿ 3 ದಿನಗಳಲ್ಲಿ ತಮ್ಮ ರಾಜಕೀಯ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದರು.<br /> <br /> ಬಿಜೆಪಿ ಸೇರ್ಪಡೆ ಮುಗಿದ ಅಧ್ಯಾಯ. ಕಾಂಗ್ರೆಸ್ ವರಿಷ್ಠರು 3 ದಿನ ಅವಕಾಶ ಕೇಳಿದ್ದಾರೆ. ಅಧಿಕೃತ ಸೇರ್ಪಡೆಗೆ ಅವಕಾಶ ಸಿಗದಿದ್ದರೆ ಬೆಂಬಲಿಗರೊಬ್ಬರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ತೀರ್ಮಾನಿಸಲಾಗುವುದು ಎನ್ನುತ್ತಿದ್ದಂತೆ ಬೆಂಬಲಿಗರು ಸಹ ಮತ ವ್ಯಕ್ತ ಪಡಿಸಿದರು.<br /> <br /> ಜಿಲ್ಲಾ ಪಂಚಾಯಿತಿ ಸದಸ್ಯರಾದ ಎ.ರಾಮಸ್ವಾಮಿರೆಡ್ಡಿ, ಯಲ್ಲಮ್ಮ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಆಶಾ ರಾಜಪ್ಪ, ಸದಸ್ಯರಾದ ಆನಂದ್, ಗೋಪಾಲಗೌಡ, ಚಂದ್ರಪ್ಪ, ಪುಟ್ಟಸ್ವಾಮಿ, ಎಸ್.ವಿ.ಲೋಕೇಶ್, ಅಮರಾವತಿ, ಕುಂತೂರು ಕೃಷ್ಣಪ್ಪ, ಪುರಸಭೆ ಸದಸ್ಯ ಎಚ್.ವಿ.ಲಿಂಗೇಶ್ವರಯ್ಯ, ನೊಸಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾಗ್ಯಮ್ಮ ಮುನಿರಾಜು, ಮುಖಂಡರಾದ ಸಿ.ಎಂ.ನಾರಾಯಣಗೌಡ, ಎ.ಜಿ.ಸುಬ್ರಮಣ್ಯರೆಡ್ಡಿ, ಸರ್ದಾರ್ ಬೇಗ್, ಎ.ಅಶ್ವಥರೆಡ್ಡಿ, ಎಂ.ಜಿ.ಮಧುಸೂಧನ್, ಮಿಂಡಹಳ್ಳಿ ಮುನಿರಾಜು, ದೊಡ್ಡಶಿವಾರ ಶಿವಣ್ಣ ಇತರರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>