<p>ದಂಡೋತಿ (ಚಿತ್ತಾಪುರ ತಾ.): ಬ್ಯಾಂಕಿನಿಂದ ಪಡೆದ ಕೃಷಿಸಾಲವನ್ನು ಸ್ವಯಂಪ್ರೇರಿತರಾಗಿ ಮರುಪಾವತಿ ಮಾಡಲು ಮಂಗಳವಾರ ಇಲ್ಲಿ ನಡೆಸಿದ ಶಿಬಿರದಲ್ಲಿ ಒಟ್ಟು 3.55 ಕೋಟಿ ರೂಪಾಯಿ ಸಂಗ್ರಹವಾಗಿದೆ.<br /> <br /> ಭಾರತದ ಬ್ಯಾಂಕಿಂಗ್ ವಲಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಈ ಗ್ರಾಮದ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಕೆ.ಜಿ.ಬಿ) ಶಾಖೆಯು ಈ ಶಿಬಿರವನ್ನು ಪ್ರತಿ ವರ್ಷ ನಡೆಸುತ್ತಿದೆ. ಮಂಗಳವಾರ ನಡೆದ 18ನೇ ವರ್ಷದ ಶಿಬಿರದಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಇವಣಿ, ಬೆಳಗುಂಪ, ಮಾಡಬೂಳ, ಗುಂಡಗುರ್ತಿ, ಭಾಗೋಡಿ, ಮರಗೋಳ ಗ್ರಾಮಗಳ ರೈತರ ಸುಮಾರು 9 ಸಾವಿರಕ್ಕೂ ಖಾತೆಗಳನ್ನು ಬ್ಯಾಂಕಿನ ಈ ಶಾಖೆ ಹೊಂದಿದೆ. ನಿತ್ಯ ಬೆಳಿಗ್ಗೆ 10 ಗಂಟೆಗೆ ಅರಂಭವಾಗುವ ಬ್ಯಾಂಕಿನ ವಹಿವಾಟು, ಮಂಗಳವಾರ ಬೇಗನೇ ಆರಂಭವಾಯಿತು.<br /> <br /> ವಿವಿಧ ಗ್ರಾಮಗಳ ನೂರಾರು ರೈತರು ಸಾಲಿನಲ್ಲಿ ನಿಂತು ಸಾಲ ಮರುಪಾವತಿ ಮಾಡಿದರು. ಹೈ-ಕ ಪ್ರದೇಶದ ಪ್ರಮುಖ ಬ್ಯಾಂಕುಗಳಲ್ಲಿ ಕೆ.ಜಿ.ಬಿ. ಕೂಡ ಒಂದು. 1979ರಲ್ಲಿ ಈ ಬ್ಯಾಂಕಿನ ಖಾತೆ ದಂಡೋತಿಯಲ್ಲಿ ಆರಂಭವಾಯಿತು. <br /> <br /> ಆರಂಭದಲ್ಲಿ ಈ ಬ್ಯಾಂಕ್ ರೈತರಿಗೆ ಸಾಲ ಕೊಟ್ಟು, ವಸೂಲು ಮಾಡುತ್ತಿತ್ತು. 1992ರಲ್ಲಿ ರೈತರ ಮನವೊಲಿಸಿ ಮೊದಲ ಬಾರಿಗೆ ‘ಸಾಲ ಮರುಪಾವತಿ ಶಿಬಿರ’ ಆಯೋಜಿಸಿದಾಗ ರೈತರು ಒಟ್ಟು 3.5 ಲಕ್ಷ ರೂಪಾಯಿ ಪಾವತಿ ಮಾಡಿದರು.<br /> <br /> ಬ್ಯಾಂಕಿನ ಅಧ್ಯಕ್ಷ ವಿ.ಎಂ.ಹಾಗರಗಿ, ಜನರಲ್ ಮ್ಯಾನೇಜರ್ ಟಿ.ಇ.ನಾಗಪ್ಪ ಹಾಗೂ ಭಕ್ತವತ್ಸಲಂ, ಶಾಖಾ ವ್ಯವಸ್ಥಾಪಕ ಕೆ.ವೈ.ದೇವಿಕೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಂಡೋತಿ (ಚಿತ್ತಾಪುರ ತಾ.): ಬ್ಯಾಂಕಿನಿಂದ ಪಡೆದ ಕೃಷಿಸಾಲವನ್ನು ಸ್ವಯಂಪ್ರೇರಿತರಾಗಿ ಮರುಪಾವತಿ ಮಾಡಲು ಮಂಗಳವಾರ ಇಲ್ಲಿ ನಡೆಸಿದ ಶಿಬಿರದಲ್ಲಿ ಒಟ್ಟು 3.55 ಕೋಟಿ ರೂಪಾಯಿ ಸಂಗ್ರಹವಾಗಿದೆ.<br /> <br /> ಭಾರತದ ಬ್ಯಾಂಕಿಂಗ್ ವಲಯದಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ಈ ಗ್ರಾಮದ ಕೃಷ್ಣಾ ಗ್ರಾಮೀಣ ಬ್ಯಾಂಕ್ (ಕೆ.ಜಿ.ಬಿ) ಶಾಖೆಯು ಈ ಶಿಬಿರವನ್ನು ಪ್ರತಿ ವರ್ಷ ನಡೆಸುತ್ತಿದೆ. ಮಂಗಳವಾರ ನಡೆದ 18ನೇ ವರ್ಷದ ಶಿಬಿರದಲ್ಲಿ ದಾಖಲೆ ಪ್ರಮಾಣದ ಹಣ ಸಂಗ್ರಹವಾಗಿದೆ. ಇವಣಿ, ಬೆಳಗುಂಪ, ಮಾಡಬೂಳ, ಗುಂಡಗುರ್ತಿ, ಭಾಗೋಡಿ, ಮರಗೋಳ ಗ್ರಾಮಗಳ ರೈತರ ಸುಮಾರು 9 ಸಾವಿರಕ್ಕೂ ಖಾತೆಗಳನ್ನು ಬ್ಯಾಂಕಿನ ಈ ಶಾಖೆ ಹೊಂದಿದೆ. ನಿತ್ಯ ಬೆಳಿಗ್ಗೆ 10 ಗಂಟೆಗೆ ಅರಂಭವಾಗುವ ಬ್ಯಾಂಕಿನ ವಹಿವಾಟು, ಮಂಗಳವಾರ ಬೇಗನೇ ಆರಂಭವಾಯಿತು.<br /> <br /> ವಿವಿಧ ಗ್ರಾಮಗಳ ನೂರಾರು ರೈತರು ಸಾಲಿನಲ್ಲಿ ನಿಂತು ಸಾಲ ಮರುಪಾವತಿ ಮಾಡಿದರು. ಹೈ-ಕ ಪ್ರದೇಶದ ಪ್ರಮುಖ ಬ್ಯಾಂಕುಗಳಲ್ಲಿ ಕೆ.ಜಿ.ಬಿ. ಕೂಡ ಒಂದು. 1979ರಲ್ಲಿ ಈ ಬ್ಯಾಂಕಿನ ಖಾತೆ ದಂಡೋತಿಯಲ್ಲಿ ಆರಂಭವಾಯಿತು. <br /> <br /> ಆರಂಭದಲ್ಲಿ ಈ ಬ್ಯಾಂಕ್ ರೈತರಿಗೆ ಸಾಲ ಕೊಟ್ಟು, ವಸೂಲು ಮಾಡುತ್ತಿತ್ತು. 1992ರಲ್ಲಿ ರೈತರ ಮನವೊಲಿಸಿ ಮೊದಲ ಬಾರಿಗೆ ‘ಸಾಲ ಮರುಪಾವತಿ ಶಿಬಿರ’ ಆಯೋಜಿಸಿದಾಗ ರೈತರು ಒಟ್ಟು 3.5 ಲಕ್ಷ ರೂಪಾಯಿ ಪಾವತಿ ಮಾಡಿದರು.<br /> <br /> ಬ್ಯಾಂಕಿನ ಅಧ್ಯಕ್ಷ ವಿ.ಎಂ.ಹಾಗರಗಿ, ಜನರಲ್ ಮ್ಯಾನೇಜರ್ ಟಿ.ಇ.ನಾಗಪ್ಪ ಹಾಗೂ ಭಕ್ತವತ್ಸಲಂ, ಶಾಖಾ ವ್ಯವಸ್ಥಾಪಕ ಕೆ.ವೈ.ದೇವಿಕೇರಿ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>